/newsfirstlive-kannada/media/post_attachments/wp-content/uploads/2024/12/Rajat-Patidar_News.jpg)
ಇತ್ತೀಚೆಗೆ ನಡೆದ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ದೆಹಲಿ ತಂಡದ ವಿರುದ್ಧ ಮಧ್ಯಪ್ರದೇಶ ಗೆದ್ದು ಬೀಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ರಜತ್ ಪಾಟಿದಾರ್ ಸ್ಫೋಟಕ ಬ್ಯಾಟಿಂಗ್ ಫಲವಾಗಿ 7 ವಿಕೆಟ್ಗಳಿಂದ ಗೆಲುವು ಸಾಧಿಸಿರೋ ಮಧ್ಯಪ್ರದೇಶ ಫೈನಲ್ಸ್ಗೆ ಎಂಟ್ರಿ ನೀಡಿದೆ.
ಇನ್ನು, ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲಿ ನಡೆದ 2ನೇ ಸೆಮಿಫೈನಲ್ ಪಂದ್ಯದಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿದ ದೆಹಲಿ ಟೀಮ್ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 146 ರನ್ ಸೇರಿಸಿತು. ಈ ರನ್ಗಳ ಗುರಿ ಬೆನ್ನತ್ತಿದ ಮಧ್ಯಪ್ರದೇಶ ಕೇವಲ 15.4 ಓವರ್ಗಳಲ್ಲಿ 3 ವಿಕೆಟ್ಗೆ 152 ರನ್ ಸೇರಿಸಿ ಗೆಲುವು ಸಾಧಿಸಿದೆ.
ಕಳಪೆ ಆರಂಭ
ದೆಹಲಿ ತಂಡದ ಗುರಿ ಬೆನ್ನತ್ತಿದ ಮಧ್ಯಪ್ರದೇಶ ಕಳಪೆ ಆರಂಭ ಪಡೆದುಕೊಂಡಿತು. ಮಧ್ಯಪ್ರದೇಶದ ಪರ ಓಪನಿಂಗ್ ಮಾಡಿದ ಅರ್ಪಿತ್ ಗೌಡ , ಸುಭ್ರಾಂಶು ಸೇನಾಪತಿ ಸಿಂಗಲ್ ಡಿಜಿಟ್ಗೆ ಔಟಾದ್ರು. ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಮಧ್ಯಪ್ರದೇಶಕ್ಕೆ ಹರ್ಪ್ರಿತ್ ಸಿಂಗ್ ಹಾಗೂ ಆರ್ಸಿಬಿ ತಂಡದ ರಜತ್ ಪಾಟಿದಾರ್ ಶತಕದ ಜೊತೆಯಾಟವಾಡಿ ನೆರವಾದ್ರು. ಹರ್ಪ್ರಿತ್ 4 ಬೌಂಡರಿ, 2 ಸಿಕ್ಸರ್ ಸಹಾಯದಿಂದ 46 ರನ್ ಸಿಡಿಸಿದರು.
ರಜತ್ ಪಾಟಿದಾರ್ ಅಬ್ಬರದ ಬ್ಯಾಟಿಂಗ್
ಆರ್ಸಿಬಿಯ ಭರವಸೆಯ ಆಟಗಾರ ರಜತ್ ಪಾಟಿದಾರ್ ಅವರು ದೆಹಲಿ ಬೌಲರ್ಗಳ ಬೆಂಡೆತ್ತಿದ್ರು. ಬರೋಬ್ಬರಿ 227 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ರು. ತಾನು ಎದುರಿಸಿದ 29 ಎಸೆತಗಳಲ್ಲಿ ಸುಮಾರು 4 ಬೌಂಡರಿ ಮತ್ತು 6 ಸಿಕ್ಸರ್ಗಳ ಸಮೇತ 66 ರನ್ ಚಚ್ಚಿದ್ರು.
ಫೈನಲ್ನಲ್ಲಿ ಮುಂಬೈ, ಮಧ್ಯಪ್ರದೇಶ ಕಾದಾಟ
ರಜತ್ ಪಾಟಿದಾರ್ ನಾಯಕತ್ವದ ಮಧ್ಯಪ್ರದೇಶ ಈಗ ಫೈನಲ್ ಪ್ರವೇಶ ಮಾಡಿದೆ. ಇಂದು ನಡೆಯಲಿರೋ ಫೈನಲ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಮುಂಬೈ ವಿರುದ್ಧ ಮಧ್ಯಪ್ರದೇಶ ಸೆಣಸಾಡಲಿದೆ.
ಇದನ್ನೂ ಓದಿ:ರಿಷಬ್ ಪಂತ್ ಅಂದರೆ ಆಸ್ಟ್ರೇಲಿಯಾಗೆ ಭಯ.. ಅದರ ಹಿಂದಿನ ಕಾರಣ ರಿವೀಲ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್