/newsfirstlive-kannada/media/post_attachments/wp-content/uploads/2025/04/RCB-5.jpg)
ಕ್ವಾಲಿಫೈಯರ್-1ಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗುಡ್ನ್ಯೂಸ್ ಸಿಕ್ಕಿದೆ. ಗಾಯಗೊಂಡ ಪ್ರಮುಖ ಆಟಗಾರರು ಮಹತ್ವದ ಪಂದ್ಯಕ್ಕೂ ಮುನ್ನ ಫಿಟ್ ಅಂಡ್ ಫೈನ್ ಆಗಿದ್ದಾರೆ. ತಂಡಕ್ಕೆ ಎಂಟ್ರಿ ಕೊಡೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಫಾರ್ಮ್ ಕಳೆದುಕೊಂಡಿದ್ದ ಆಟಗಾರರು ಫಾರ್ಮ್ಗೆ ಮರಳಿದ್ದಾರೆ. ಆರ್ಸಿಬಿ ತಂಡವನ್ನ ಫೈನಲ್ಗೇರಿಸಲು ಕಾತರದಿಂದ ಕಾಯ್ತಿದ್ದಾರೆ.
ಐಪಿಎಲ್ ಸೀಸನ್-18ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ್ಫಾಮೆನ್ಸ್ಗೆ, ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ. ಹೋಂ ಗ್ರೌಂಡ್ ಚಿನ್ನಸ್ವಾಮಿಯಲ್ಲಿ ಆರ್ಸಿಬಿ, ಮೂರು ಪಂದ್ಯಗಳಲ್ಲಿ ಸೋಲು ಅಭವಿಸಿದೆ. ಆದ್ರೆ AWAY ಮ್ಯಾಚ್ಗಳಲ್ಲಿ ಬೆಂಗಳೂರು ತಂಡ, ಆಡಿರೋ 8 ಪಂದ್ಯಗಳಲ್ಲಿ 7ರಲ್ಲಿ ಗೆಲುವು ದಾಖಲಿಸಿದೆ. ಈ 7 ಗೆಲುವೇ, ಚಾಲೆಂಜರ್ಸ್ ತಂಡದ ಪ್ಲೇ ಆಫ್ ಎಂಟ್ರಿಗೆ ಕಾರಣ. ಆಟಗಾರರ ಸಾಂಘಿಕ ಪ್ರದರ್ಶನ ಆರ್ಸಿಬಿ ತಂಡವನ್ನ ಪಾಯಿಂಟ್ ಟೇಬಲ್ನಲ್ಲಿ 2ನೇ ಸ್ಥಾನಕ್ಕೇರಿಸಿದೆ.
ಕೊಹ್ಲಿ ಕನ್ಸಿಸ್ಟೆಂಟ್ ರನ್ ಸ್ಕೋರಿಂಗ್, ಆರ್ಸಿಬಿಗೆ ಬಲ
ವಿರಾಟ್ ಕೊಹ್ಲಿಯನ್ನ ಕಿಂಗ್ ಕೊಹ್ಲಿ ಅನ್ನೋದು ಇದೇ ಕಾರಣಕ್ಕೆ. ಟೂರ್ನಿಯುದ್ದಕ್ಕೂ ಅದ್ಭುತ ಬ್ಯಾಟಿಂಗ್ ನಡೆಸಿರುವ ಕೊಹ್ಲಿ ಪ್ರತಿ ಪಂದ್ಯದಲ್ಲೂ ರನ್ ಕಾಣಿಕೆ ನೀಡುತ್ತಿದ್ದಾರೆ. ಈಗಾಗಲೇ 600ಕ್ಕಿಂತ ಹೆಚ್ಚು ರನ್ಗಳಿಸಿರುವ ಕೊಹ್ಲಿ 8 ಅರ್ಧಶತಕಗಳನ್ನ ಸಿಡಿಸಿದ್ದಾರೆ. ಟಾಪ್ ಆರ್ಡರ್ನಲ್ಲಿ ವಿರಾಟ್, ಟಾಪ್ ಕ್ವಾಲಿಟಿ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ.
ಇದನ್ನೂ ಓದಿ: RCB vs PBKS; ಮಳೆ ಬಂದು ಪಂದ್ಯ ವಾಶ್ಔಟ್ ಆದರೆ ನೇರ ಫೈನಲ್ಗೆ ಹೋಗೋದು ಯಾರು..?
ಹೇಜಲ್ವುಡ್ ಕಮ್ಬ್ಯಾಕ್
ಶೋಲ್ಡರ್ ಇಂಜುರಿಯಿಂದ ಸಂಪೂರ್ಣ ಚೇತರಿಸಿಕೊಂಡಿರುವ ಅನುಭವಿ ವೇಗಿ ಜೋಷ್ ಹೇಜಲ್ವುಡ್, ಇಂದು ಕಣಕ್ಕಿಳಿಯೋದು ಬಹುತೇಕ ಖಚಿತ. ಹೇಜಲ್ವುಡ್ ಎಂಟ್ರಿಯಿಂದ ತಂಡದ ಬೌಲಿಂಗ್ ಅಟ್ಯಾಕ್ ಬಲ ಹೆಚ್ಚಿದೆ. ಈಗಾಗಲೇ ಟೂರ್ನಿಯಲ್ಲಿ 18 ವಿಕೆಟ್ಗಳನ್ನ ಪಡೆದಿರೋ ಜೋಷ್, AWAY ಮ್ಯಾಚ್ಗಳಲ್ಲಿ ಆರ್ಸಿಬಿಯ ಟ್ರಂಪ್ ಕಾರ್ಡ್ ಬೌಲರ್. ಹೇಜಲ್ವುಡ್ ತಂಡದಲ್ಲಿದ್ರೆ ಕ್ಯಾಪ್ಟನ್ ಟೆನ್ಶನ್ ಫ್ರೀ ಆಗಿರ್ತಾರೆ.
ಆಪತ್ಬಾಂಧವ ಟಿಮ್ ಫಿಟ್ ಌಂಡ್ ಫೈನ್
ಹ್ಯಾಮ್ಸ್ಟ್ರಿಂಗ್ ಇಂಜುರಿಯಿಂದ ಲಕ್ನೋ ವಿರುದ್ಧದ ಪಂದ್ಯವನ್ನ ಮಿಸ್ ಮಾಡಿಕೊಂಡಿದ್ದ ಪವರ್ಹಿಟ್ಟರ್ ಟಿಮ್ ಡೇವಿಡ್, ಕ್ವಾಲಿಫೈಯರ್-1 ಆಡಲಿದ್ದಾರೆ. ಟಿಮ್ ಡೇವಿಡ್ ಆಗಮನ, ಆರ್ಸಿಬಿ ಕೆಳಕ್ರಮಾಂಕದ ಬ್ಯಾಟಿಂಗ್ಗೆ ಶಕ್ತಿ ಬಂದಂತಾಗಿದೆ. ಈಗಾಗಲೇ ಸಾಕಷ್ಟು ಪಂದ್ಯಗಳಲ್ಲಿ ಗೇಮ್ಚೇಂಜರ್ ಇನ್ನಿಂಗ್ಸ್ ಆಡಿರುವ ಆಸಿಸ್ ಬ್ಯಾಟ್ಸ್ಮನ್, ಆರ್ಸಿಬಿಯ ಆಪತ್ಬಾಂಧವ ಎನಿಸಿಕೊಂಡಿದ್ದಾರೆ. ಈ ಆಪತ್ಬಾಂಧವನ ಬ್ಯಾಟ್ನಿಂದ, ಉಳಿದ ಪಂದ್ಯಗಳಲ್ಲೂ ರನ್ ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: RCB vs PBKS: ಇಂದು ಫೈನಲ್ಗೆ ಎಂಟ್ರಿ ನೀಡೋ ತಂಡ ಯಾವುದು..? ಹೇಗಿದೆ ಪಿಚ್..?
ಹೊಸ ರೋಲ್ನಲ್ಲಿ ಜಿತೇಶ್ ಶರ್ಮಾ ಸೂಪರ್ಹಿಟ್
ಮುಂಬೈ ಇಂಡಿಯನ್ಸ್ ವಿರುದ್ಧ 19 ಎಸೆತಗಳಲ್ಲಿ 40 ರನ್ಗಳಿಸಿದ್ದು ಬಿಟ್ರೆ ಹಂಗಾಮಿ ನಾಯಕ ಜಿತೇಶ್ ಶರ್ಮಾ ಬ್ಯಾಟ್ನಿಂದ ಹೇಳಿಕೊಳ್ಳುವಂತಹ ರನ್ ಬಂದಿಲ್ಲ. ಲಕ್ನೋ ಸೂಪರ್ಜೈಂಟ್ಸ್ ವಿರುದ್ಧ ಆಡಿದ ಆ ಒಂದು ಇನ್ನಿಂಗ್ಸ್, ಜಿತೇಶ್ ವೈಫಲ್ಯವನ್ನೆಲ್ಲಾ ಮರೆಮಾಚಿಸಿದೆ. ಮಹತ್ವದ ಹಂತದಲ್ಲಿ ಫಾರ್ಮ್ ಕಂಡುಕೊಂಡಿರುವ ಜಿತೇಶ್, ಆರ್ಸಿಬಿಯ ಆತ್ಮವಿಶ್ವಾಸ ಹೆಚ್ಚಿಸಿದ್ದಾರೆ.
ಪಡಿಕ್ಕಲ್ ಸ್ಥಾನಕ್ಕೆ ಮಯಾಂಕ್ ಪರ್ಫೆಕ್ಟ್ ರೀಪ್ಲೇಸ್
ಎಡಗೈ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್, ಟಾಪ್ ಆರ್ಡರ್ನಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿ ರನ್ ಸ್ಕೋರ್ ಮಾಡಿದ್ರು. ಪಡಿಕ್ಕಲ್ ಇಂಜುರಿಯಿಂದ ತಂಡದಿಂದ ಹೊರನಡೆಯುತ್ತಿದ್ದಂತೆ, ಇವರ ಸ್ಥಾನ ತುಂಬೋರು ಯಾರು ಅಂತ ಆರ್ಸಿಬಿ ಮ್ಯಾನೇಜ್ಮೆಂಟ್ ತಲೆಕೆಡಿಸಿಕೊಂಡಿತ್ತು. ಮಯಾಂಕ್ ಅಗರ್ವಾಲ್, ಪಡಿಕ್ಕಲ್ಗೆ ಬೆಸ್ಟ್ ರೀಪ್ಲೇಸ್ಮೆಂಟ್ ಅಂತ ತೋರಿಸಿಕೊಟ್ಟಿದ್ದಾರೆ. ಎಲ್ಎಸ್ಜಿ ವಿರುದ್ಧ ಆಡಿದ ಇನ್ನಿಂಗ್ಸ್, ಇದಕ್ಕೆ ಬೆಸ್ಟ್ ಎಕ್ಸಾಂಪಲ್.
ಲಕ್ನೋ ವಿರುದ್ಧದ ಗೆಲುವು ಆರ್ಸಿಬಿಗೆ ಬಿಗ್ಬೂಸ್ಟ್ ಸಿಕ್ಕಂತಾಗಿದೆ. ಹೀಗಾಗಿ ಇಂದು ಪಂಜಾಬ್ ಕಿಂಗ್ಸ್ ವಿರುದ್ಧವೂ ಗೆದ್ದು, ಡೈರೆಕ್ಟ್ ಫೈನಲ್ ಎಂಟ್ರಿ ಕೊಡೋಕೆ ಬೆಂಗಳೂರು ತಂಡ ರೆಡಿಯಾಗಿದೆ.
ಇದನ್ನೂ ಓದಿ: Qualifier-1: ಬೆಂಗಳೂರು ತಂಡ ಸಂಪೂರ್ಣ ಬದಲಾಗಲಿದೆಯೇ..? RCB ಸಂಭಾವ್ಯ ಪ್ಲೇಯಿಂಗ್ 11 ಪಟ್ಟಿ..!
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ