Advertisment

ಗೂಗಲ್ ಮ್ಯಾಪ್ ನೆಚ್ಚಿಕೊಂಡು ಪ್ರಯಾಣ ಮಾಡುವ ಮುನ್ನ ಎಚ್ಚರ.. ಹಾಗೆ ಹೋದವರ ಗತಿ ಏನಾಯ್ತು?

author-image
Gopal Kulkarni
Updated On
ಗೂಗಲ್ ಮ್ಯಾಪ್ ನೆಚ್ಚಿಕೊಂಡು ಪ್ರಯಾಣ ಮಾಡುವ ಮುನ್ನ ಎಚ್ಚರ.. ಹಾಗೆ ಹೋದವರ ಗತಿ ಏನಾಯ್ತು?
Advertisment
  • ಗೂಗಲ್ ಮ್ಯಾಪ್​ ಸಹಾಯದಿಂದ ಅಪರಿಚಿತ ಊರಲ್ಲಿ ಸುತ್ತುತ್ತಿದ್ದೀರಾ?
  • ಗೂಗಲ್ ಮ್ಯಾಪ್ ಸಹಾಯ ಪಡೆಯುವ ಮೊದಲು ಈ ಸ್ಟೋರಿ ಓದಿ?
  • ಹೆದ್ದಾರಿಯಲ್ಲಿಯೇ ಕಾದು ನಿಂತಿದ್ದ ಸಾವಿನಿಂದ ಪಾರಾಗಿದ್ದು ಹೇಗೆ ಸ್ನೇಹಿತರು?

ನಮಗೆ ಅಪರಿಚಿತ ಊರುಗಳಿಗೆ ನಮ್ಮದೇ ವಾಹನದೊಂದಿಗೆ ಹೋದಾಗ ಸಾಮಾನ್ಯವಾಗಿ ಗೂಗಲ್ ಮ್ಯಾಪ್​ನ ಸಹಾಯ ತೆಗೆದುಕೊಳ್ಳುವುತ್ತೇವೆ. ಇದು ಸಹಜ ಹಾಗೂ  ಅನಿವಾರ್ಯ ಎಂಬಂತಹ ಸ್ಥಿತಿ ಸದ್ಯಕ್ಕೆ ಇದೆ. ಆದ್ರೆ ಒಂದೊಂದು ಸಾರಿ ಗೂಗಲ್ ಮ್ಯಾಪ್​ ನಮ್ಮನ್ನು ಅಪಾಯದ ಅಂಚಿಗೆ ತಳ್ಳುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಅಂತಹ ಅನೇಕ ಘಟನೆಗಳು ಈಗಾಗಲೇ ನಡೆದಿವೆ. ಅದೇ ಮಾದರಿಯ ಘಟನೆ ಉತ್ತರಪ್ರದೇಶದ ಮಥುರಾ-ಬರೇಲಿ ಹೆದ್ದಾರಿಯಲ್ಲಿ ನಡೆದಿದೆ.

Advertisment

ಇದನ್ನೂ ಓದಿ:ಉತ್ತರ ಭಾರತದಲ್ಲಿ ಮಳೆಯ ಜೊತೆ ಕೊರೆಯುವ ಚಳಿ! ಶಾಲೆಗಳಿಗೆ ರಜೆ ಘೋಷಿಸಿದ ಸರ್ಕಾರಗಳು

ಮಥುರಾ-ಬರೇಲಿ ಹೆದ್ದಾರಿಯಲ್ಲಿ ಒಂದು ಶಾಕಿಂಗ್ ಘಟನೆ ನಡೆದಿದೆ. ಗೂಗಲ್ ಮ್ಯಾಪ್​ನ ಸಹಾಯ ಪಡೆದು ಪ್ರಯಾಣ ಮಾಡುತ್ತಿದ್ದ ಇಬ್ಬರು ಗೆಳೆಯರು ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾಗಿದ್ದಾರೆ. ಗೂಗಲ್ ಮ್ಯಾಪ್ ತೋರಿಸಿದ ರಸ್ತೆ ಇನ್ನೂ ಕೂಡ ಸಂಪೂರ್ಣವಾಗಿ ವಾಹನ ಸಂಚಾರಕ್ಕೆ ಅನುಕೂಲವಾಗುವ ರೀತಿ ಇರಲಿಲ್ಲ. ಆದ್ರೆ ಅಮಾಯಕರು ಅದನ್ನೇ ನಂಬಿಕೊಂಡು ಕಾರ್​ನಲ್ಲಿ ಹೋದಾಗ ಒಂದು ಕಡೆ ಕಾಮಗಾರಿ ಸಂಪೂರ್ಣವಾಗದ ಕಡೆ ಇವರ ಕಾರು ಮಣ್ಣಿನಲ್ಲಿ ಮುಗುಚಿಕೊಂಡಿದೆ. ಕಾರ್​ನಲ್ಲಿದ್ದ ಇಬ್ಬರಿಗೂ ಕೂಡ ಗಾಯಗಳಾಗಿವೆ.

ಇದನ್ನೂ ಓದಿ:ಸಂಜಯ್​ ದತ್ ವಿಸ್ಕಿಯಂತೆ ಈ ಖಳನಟನ ಬಿಯರ್​ ಕೂಡ ಫೇಮಸ್​; ಯಾರು ಆ ವಿಲನ್​?

Advertisment

ಹೀಗೆ ಗೂಗಲ್ ಮ್ಯಾಪ್ ನಂಬಿ ಅಪಾಯಕ್ಕೆ ಸಿಲುಕಿದವರನ್ನು ವಿಮಲೇಶ್ ಶ್ರೀವಾತ್ಸವ್ ಮತ್ತು ಕುಶಾಲ್ ಕುಮಾರ್ ಎಂದು ಗುರುತಿಸಲಾಗಿದೆ. ಈ ಇಬ್ಬರೂ ಮಥುರಾ ಕಡೆಗೆ ಪ್ರಯಾಣ ಬೆಳೆಸಿದಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಹತ್ರಾಸ್​ ಜಂಕ್ಷನ್ ಬಳಿ ಈ ಒಂದು ಅಪಘಾತ ನಡೆದಿದೆ. ರಸ್ತೆಯ ಕಾಮಗಾರಿ ಇನ್ನೂ ಕೂಡ ನಡೆಯುತ್ತಿದ್ದು. ಅದರ ಬಗ್ಗ ಎಚ್ಚರಿಕೆಯ ಫಲಕ ಅಥವಾ ಪರ್ಯಾಯ ರಸ್ತೆಯ ಬಗ್ಗೆ ಮಾಹಿತಿ ನೀಡುವ ಯಾವುದೇ ಬೋರ್ಡ್​ ಕೂಡ ಅಲ್ಲಿ ಕಂಡು ಬಂದಿಲ್ಲ. ಹೀಗಾಗಿ ಕಾರು ಅಪಘಾತಕ್ಕೀಡಾಯಿತು ಎಂದು ವಿಮಲೇಶ್ ಹಾಗೂ ಕುಶಾಲ್ ಹೇಳಿದ್ದಾರೆ. ಅಪಘಾತಕ್ಕೆ ಒಳಗಾದ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದ್ದು, ಇಬ್ಬರ ಆರೋಗ್ಯ ಚೆನ್ನಾಗಿದೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment