/newsfirstlive-kannada/media/post_attachments/wp-content/uploads/2025/01/bigg-boss32.jpg)
ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 ಗ್ರ್ಯಾಂಡ್ ಫಿನಾಲೆ ವಾರದಲ್ಲಿದೆ. ಇದೇ ಹೊತ್ತಲ್ಲಿ ಬಿಗ್​ಬಾಸ್​ ಮನೆಯಲ್ಲಿ 6 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈಗಾಗಲೇ ಸೋಷಿಯಲ್​ ಮೀಡಿಯಾದಲ್ಲಿ ಈ ಬಾರಿಯ ಬಿಗ್​ಬಾಸ್​ ಸೀಸನ್ 11ರ ವಿನ್ನರ್​ ಯಾರಾಗಲಿದ್ದಾರೆ ಎಂದು ಚರ್ಚೆ ಜೋರಾಗಿದೆ.
/newsfirstlive-kannada/media/post_attachments/wp-content/uploads/2025/01/BIGG-BOSS33.jpg)
ಮತ್ತೊಂದು ಕಡೆ ಬಿಗ್​ಬಾಸ್​ ಮನೆಯಲ್ಲಿದ್ದ ಸ್ಪರ್ಧಿಗಳ ಎದೆಯಲ್ಲಿ ನಡುಕ ಶುರುವಾಗಿದೆ. ಆದ್ರೆ ಗ್ರ್ಯಾಂಡ್ ಫಿನಾಲೆ ವಾರಕ್ಕೆ ಹೋಗದೇ ಬಿಗ್​ಬಾಸ್​ ಮನೆಯಿಂದ ಅಚ್ಚರಿಯ ರೀತಿಯಲ್ಲಿ ಆಚೆ ಬಂದ ಧನರಾಜ್​ ಆಚಾರ್ಯ ಹಾಗೂ ಗೌತಮಿ ಜಾಧವ್​ ನ್ಯೂಸ್ ಫಸ್ಟ್​ ಸಂದರ್ಶನದಲ್ಲಿ ಭಾಗಿಯಾಗಿದ್ದಾರೆ.
ಅದರಲ್ಲೂ ಈ ಬಾರಿಯ ಬಿಗ್​ಬಾಸ್​ ವಿನ್ನರ್​ ಯಾರಾಗಬಹುದು ಅಥವಾ ಯಾರು ಆಗಬೇಕು ಅಂತ ಹೇಳಿದ್ದಾರೆ. ನ್ಯೂಸ್​ ಫಸ್ಟ್​ ಸಂದರ್ಶನದಲ್ಲಿ ಭಾಗಿಯಾಗಿದ್ದ ಗೌತಮಿ ಅವರು, ನನಗೆ ಹನುಮಂತ ಗೆಲ್ಲಬೇಕು ಅನ್ನೋದು ಇದೆ. ಒಳ್ಳೆಯ ವ್ಯಕ್ತಿತ್ವ ಗೆದ್ದರೇ ಫುಲ್ ಖುಷ್ ಆಗುತ್ತೆ. ಫಿನಾಲೆ ಟು ಟಿಕೆಟ್​ ಟಾಸ್ಕ್​ಗೆ ನನ್ನ ಏಕೆ ಆಯ್ಕೆ ಮಾಡಿದ್ರು ಅಂತ ಗೊತ್ತಾಗಲಿಲ್ಲ. ಆದ್ರೆ ಆಗ ನಾನು ಮನಸ್ಸಿನಿಂದ ದೇವರಿಗೆ ಬೇಡಿಕೊಂಡೆ. ಹೀಗಾಗಿ ಒಳ್ಳೆಯ ವ್ಯಕ್ತಿತ್ವ ಇರೋ ಹನುಮನ ಗೆಲ್ಲಬೇಕು.
ಇನ್ನೂ, ಈ ಬಗ್ಗೆ ಮಾತಾಡಿದ ಧನರಾಜ್​, ಹನುಮಂತನೇ ಗೆಲ್ಲಬೇಕು. ಅವರ ಅಕ್ಕ ಪಕ್ಕ ತಂಗಿ ಜಿಂಕೆ ಭವ್ಯಾ ಇರಬೇಕು, ಇಲ್ಲವಾದರೇ ರಜತ್​ ಇರಬೇಕು. ಗೆದ್ದರೆ ದೋಸ್ತಾ ಹನುಮಂತನೇ ಗೆಲ್ಲಬೇಕು ಅಂತ ಹೇಳಿದ್ದಾರೆ. ಇನ್ನೂ ಒಂದೇ ವಾರದಲ್ಲಿ ಬಿಗ್​ಬಾಸ್​ ವಿನ್ನರ್​ ಯಾರು ಆಗಲಿದ್ದಾರೆ ಅಂತ ಗೊತ್ತಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us