/newsfirstlive-kannada/media/post_attachments/wp-content/uploads/2025/02/gouthami5.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಮೂಲಕ ಸಖತ್ ಫೇಮಸ್ ಆಗಿದ್ದಾರೆ ಗೌತಮಿ ಜಾಧವ್. ಬಿಗ್ಬಾಸ್ನಿಂದ ಆಚೆ ಬರುತ್ತಿದ್ದಂತೆ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ ಸತ್ಯ ಸೀರಿಯಲ್ ನಟಿ ಗೌತಮಿ ಜಾಧವ್.
ಇದನ್ನೂ ಓದಿ:BBK11: ಸತ್ಯ ಸೀರಿಯಲ್ ನಟಿ ಗೌತಮಿ ಜಾಧವ್ ಅಷ್ಟೂ ಸ್ಟ್ರಾಂಗ್ ಆಗಿ ಇರಲು ಕಾರಣ ಏನು?
ಬಿಗ್ಬಾಸ್ ಮನೆಯಲ್ಲಿದ್ದಾಗ ಒಂದು ರೇಂಜ್ಗೆ ಸೌಂಡ್ ಮಾಡುತ್ತಿದ್ದರು. ಇನ್ನೂ ಈ ಹಿಂದೆ ಗೌತಮಿ ಅವರ ಪರ್ಫಾಮನ್ಸ್ ಖಡಕ್ ಆಗಿ ಇರಬೇಕು ಅಂತ ವೀಕ್ಷಕರು ಕೂಡ ನಿರೀಕ್ಷಿಸುತ್ತಿದ್ದರು. ಅದರಂತೆ ದಿನ ಕಳೆದಂತೆ ಬಿಗ್ಬಾಸ್ ಮನೆಯಲ್ಲಿ ಆಡುತ್ತಿದ್ದ ಟಾಸ್ಕ್ ನೋಡಿ ಅಭಿಮಾನಿಗಳು ಫುಲ್ ಖುಷಿ ಆಗಿದ್ದಾರೆ. ಟಾಸ್ಕ್ ಅಂತ ಬಂದರೆ ಅವರು ಎಷ್ಟು ಸ್ಟ್ರಾಂಗ್ ಆಗಿ ಆಡುತ್ತಾರೆ? ಯಾವ ತರ ಸ್ಟಾಟರ್ಜಿ ಯೂಸ್ ಮಾಡ್ತಾರೆ ಅಂತ ಗೊತ್ತಾಗಿತ್ತು. ಹೀಗೆ ಇಷ್ಟೆಲ್ಲಾ ಗಮನಕೊಟ್ಟು ಆಡುವ ಆಟದ ಹಿಂದೆ ಒಂದು ಶಕ್ತಿ ಇದೆ. ಅದುವೆ ಧ್ಯಾನ.
ಹೌದು, ಸದಾ ಪಾಸಿಟಿವ್ ಆಗಿ ಆಲೋಚನೆ ಮಾಡುವ ಗೌತಮಿ ಬಾಯಲ್ಲಿ ವನದುರ್ಗೆ, ವನದುರ್ಗಮ್ಮ ಎನ್ನುವ ಹೆಸರನ್ನು ನೀವು ಕೇಳ್ತಿರುತ್ತೀರಿ. ಬಿಗ್ ಬಾಸ್ ಮನೆಯಲ್ಲಿ ವನದುರ್ಗೆ ಪೂಜೆ ಹಾಗೂ ಜಪವನ್ನು ಗೌತಮಿ ಮಾಡ್ತಿದ್ದರು. ಆಟವಾಡುವಾಗೆಲ್ಲ ಗೌತಮಿ ಬಾಯಿಂದ ವನದುರ್ಗೆ ಹೆಸರು ಕೇಳ್ತಾನೆ ಇತ್ತು. ಅಷ್ಟೇ ಅಲ್ಲ ಮಂಜು ಕ್ಯಾಪ್ಟನ್ ಆಗ್ಬೇಕು, ಹನುಮಂತು ಕ್ಯಾಪ್ಟನ್ ಆಗ್ಬೇಕು ಎನ್ನುವ ಸಮಯದಲ್ಲೂ ಗೌತಮಿ ವನದುರ್ಗೆ ಮಂತ್ರವನ್ನು ಜಪಿಸುತ್ತಿದ್ದರು. ಬಿಗ್ಬಾಸ್ನಿಂದ ಆಚೆ ಬಂದ ಕೂಡಲೇ ಗೌತಮಿ ಅವರು ವನದುರ್ಗಾ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದರು.
ಇದೀಗ ಎರಡನೇ ಬಾರಿಗೆ ನೆಚ್ಚಿನ ವನದುರ್ಗಾ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ ಗೌತಮಿ ಜಾಧವ್. ವಿಶೇಷ ಎಂದರೆ ಗೆಳಯ ಉಗ್ರಂ ಮಂಜು ಅವರಿಗೂ ವನದುರ್ಗಾ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲದೇ ಗೌತಮಿ ಅವರ ಜೊತೆಗೆ ಪತಿಯೂ ದೇವಸ್ಥಾನಕ್ಕೆ ಹೋಗಿದ್ದಾರೆ. ಇದೇ ಫೋಟೋವನ್ನು ಗೌತಮಿ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು, ಗೌತಮಿಯನ್ನು ಮೆಚ್ಚಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ