Advertisment

4 ದಿನಗಳ ಹಿಂದೆ ನಾಪತ್ತೆಯಾಗಿದ್ದ ಸರಕಾರಿ ವೈದ್ಯನ ಶವ ಬಾವಿಯಲ್ಲಿ ಪತ್ತೆ

author-image
Harshith AS
Updated On
4 ದಿನಗಳ ಹಿಂದೆ ನಾಪತ್ತೆಯಾಗಿದ್ದ ಸರಕಾರಿ ವೈದ್ಯನ ಶವ ಬಾವಿಯಲ್ಲಿ ಪತ್ತೆ
Advertisment
  • ಬಾವಿಯಲ್ಲಿ ತಡರಾತ್ರಿ ಸಿಕ್ತು ಸರ್ಕಾರಿ ವೈದ್ಯನ ಶವ
  • ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯನ ಸಾವಿಗೆ ಕಾರಣ?
  • ಮನನೊಂದು ಇಂಥಾ ನಿರ್ಧಾರ ಕೈಗೊಂಡರೇ ಸರ್ಕಾರಿ ವೈದ್ಯ

ಗದಗ: ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ಸರಕಾರಿ ವೈದ್ಯ ತಡರಾತ್ರಿ ತಮ್ಮ ಸ್ವಂತ ಜಮೀನಿನ ಬಾವಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ನಡೆದಿದೆ. ಕುಮಾರ್ ಸ್ವಾಮಿ ಚಿದಾನಂದಯ್ಯ ಬರದೂರಮಠ (45) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

Advertisment

ಹಿರಿಯ ಆರೋಗ್ಯ ನಿರೀಕ್ಷಣಾ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಸ್ವಾಮಿ ಚಿದಾನಂದಯ್ಯನವರು ಗಜೇಂದ್ರಗಡ ತಾಲೂಕಿನ ನಿಡಗುಂದಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಂದಹಾಗೆಯೇ ಅವರು ಪಾರ್ಸಿ ರೋಗದಿಂದ ಬಳಲುತ್ತಿದ್ದರು.

ಪಾರ್ಸಿ ರೋಗದಿಂದ ಮಾನಸಿಕವಾಗಿ ನೊಂದು ಸ್ವಾಮಿ ಚಿದಾನಂದಯ್ಯನವರು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment