/newsfirstlive-kannada/media/post_attachments/wp-content/uploads/2025/02/MIRCRO-FINANCE.jpg)
ರಾಜ್ಯದಲ್ಲಿ ಗವರ್ನಮೆಂಟ್ ವರ್ಸಸ್ ಗವರ್ನರ್ ಸ್ಥಿತಿ. ಮುಡಾದಿಂದ ಶುರುವಾದ ಈ ವಾರ್, ಮೈಕ್ರೋ ಫೈನಾನ್ಸ್ಗೆ ಬಂದು ತಟ್ಟಿದೆ. ಸುಗ್ರೀವಾಜ್ಞೆಗೆ ಮುಂದಾಗಿದ್ದ ಸರ್ಕಾರಕ್ಕೆ ರಾಜ್ಯಪಾಲರು ಶಾಕ್ ಕೊಟ್ಟಿದ್ದಾರೆ.. ಈ ಬೆಳವಣಿಗೆ ಕಾಂಗ್ರೆಸ್ ನಾಯಕರನ್ನ ಮತ್ತಷ್ಟು ಕೆರಳುವಂತೆ ಮಾಡಿದೆ..
ಸಾಲ ಯಾರಿಗಿಲ್ಲ ಹೇಳಿ, ಅವರವರ ಸಾಮರ್ಥ್ಯ. ಹಾಗಂತ ಸಾಲವೇ ಶೂಲವಾಗಬಾರದು. ಆದ್ರೆ ರಾಜ್ಯದಲ್ಲಿ ಏನಾಗ್ತಿದೆ. ಸಾಲವೇ ಸಾವಿನ ಮನೆಗೆ ಸಾಗಿಸ್ತಿದೆ. ಸತ್ತವರ ಸಂಖ್ಯೆ ಹಾಫ್ ಸೆಂಚ್ಯೂರಿ ಹತ್ತಿರ ಇದೆ. ರಾಜ್ಯ ಸರ್ಕಾರ ಏನೋ ಕಂಟ್ರೋಲ್ ಮಾಡೋಕೆ ಸುಗ್ರೀವಾಜ್ಞೆ ಅನ್ನೋ ಬ್ರಹ್ಮಾಸ್ತ್ರ ಪ್ರಯೋಗಿಸ್ತು. ಅದು ಹೋದಷ್ಟೇ ವೇಗ ವಾಪಸ್ಸು ಬಂತು ಇತ್ತ ಕಿರುಕುಳ ಏನಾದ್ರೂ ನಿಂತಿದ್ಯಾ? ಅದು ಇಲ್ಲ..
ರಾಜ್ಯಪಾಲರ ನಿಲುವಿನಿಂದ ಕೆರಳಿದ ಕಾಂಗ್ರೆಸ್ ಪಡೆ!
ಮುಡಾ ಸೇರಿ ಹಲವು ಪ್ರಕರಣದಿಂದ ಗವರ್ನರ್ ವರ್ಸಸ್ ಸರ್ಕಾರ ಅಂತ ಬಿಂಬಿತವಾಗಿದೆ.. ಈ ಹೊತ್ತಲ್ಲಿ ಸುಗ್ರೀವಾಜ್ಞೆಯನ್ನ ರಾಜ್ಯಪಾಲರು ವಾಪಸ್ ಕಳಿಸಿದ್ದೆ ತಡ, ಸರ್ಕಾರದ ಕಪಾಳಕ್ಕೆ ಬಾರಿಸಿದಂತಿದೆ. ಇದರಿಂದ ಕೆರಳಿರುವ ಸಚಿವರು, ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ. ಕೇವಲ ಕಾಂಗ್ರೆಸ್ ನಾಯಕರಷ್ಟೇ ಅಲ್ಲ, ಜೆಡಿಎಸ್ ಶಾಸಕ ಎಂ.ಟಿ ಕೃಷ್ಣಪ್ಪ ಸಹ ಗರಂ ಆಗಿದ್ದಾರೆ
ಗದಗ ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ನಿಲ್ತಾನೆ ಇಲ್ಲ.. ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಾಟಕ್ಕೆ ಬೇಸತ್ತು ಮಹಿಳೆಯರು ಡಿಸಿ ಕಚೇರಿಗೆ ಆಗಮಿಸಿದ್ದಾರೆ.. ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ನೂರಾರು ಮಹಿಳೆಯರು ಕಿರುಕುಳ ಬಗ್ಗೆ ಕಂಪ್ಲೇಂಟ್ ಮಾಡಿದ್ದಾರೆ.. ಬಡ್ಡಿಗೆ ಚಕ್ರಬಡ್ಡಿ ಹಾಕಿ ಕಿರುಕುಳ ನೀಡ್ತಿದ್ದಾರೆ ಅಂತ ಕಿಡಿಕಾರಿದ್ದಾರೆ... ಮಾಂಗಲ್ಯ ಮಾರಿ ಸಾಲ ಕಟ್ಟಿ ಅಂತ ಕೊಟ್ಟಿದ್ದಾರೆ ಂತ ಆರೋಪಿಸಿದ್ದಾರೆ..
ಮಾರ್ಚ್ 3 ರಿಂದ ಬಜೆಟ್ ಅಧಿವೇಶನ ಆರಂಭ ಆಗ್ತಿದ್ದು, ಸದನದಲ್ಲೇ ಮಸೂದೆ ಮಂಡನೆ ಆಗುವ ಸಾಧ್ಯತೆ ಇದೆ.. ಉಭಯ ಸದನಗಳಲ್ಲಿ ಮಸೂದೆ ಪಾಸ್ ಆದ ಬಳಿಕವಾದ್ರೂ ರಾಜ್ಯಪಾಲರು ಅಂಕಿತ ಹಾಕ್ತಾರೋ ಇಲ್ವೋ ನೋಡಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ