Advertisment

Breaking: ನಟ ಗೋವಿಂದ ಕಾಲಿಗೆ ಗುಂಡೇಟು! ಐಸಿಯುವಿನಲ್ಲಿ ಚಿಕಿತ್ಸೆ

author-image
AS Harshith
Updated On
ಬೆಳ್ಳಂಬೆಳಗ್ಗೆ ಬಾಲಿವುಡ್ ನಟ ಗೋವಿಂದ ಕಾಲಿಗೆ ಗುಂಡೇಟು.. ಅಸಲಿಗೆ ಆಗಿದ್ದೇನು?
Advertisment
  • ನಸೀಮ್​, ರಾಜಾ ಬಾಬು​ ಸಿನಿಮಾ ಖ್ಯಾತಿಯ ನಟ
  • ಬೆಳಗ್ಗೆ ಕೋಲ್ಕತ್ತಾಗೆ ತೆರಳುತ್ತಿದ್ದಾಗ ನಡೆದ ಅವಘಡ
  • ಐಸಿಯುನಲ್ಲಿ ಇರುವ ನಟನ ಪರಿಸ್ಥಿತಿ ಹೇಗಿದೆ? ಅಂಥಾದೇನಾಯ್ತು?

ಬಾಲಿವುಡ್ ನಟ ಗೋವಿಂದ ಕಾಲಿಗೆ ಗುಂಡು ತಗುಲಿದೆ. ಬೆಳಗಿನ ಜಾವ 5 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ.

Advertisment

ನಸೀಮ್​, ರಾಜಾ ಬಾಬು, ಪಾಟ್ನರ್​ ಸಿನಿಮಾ ಖ್ಯಾತಿಯ ನಟ ಗೋವಿಂದ ಅವರು ಬೆಳಗ್ಗೆ ಕೋಲ್ಕತ್ತಾಗೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ತಮ್ಮ ಪರವಾನಗಿ ಹೊಂದಿರುವ ರಿವಾಲ್ವರ್ ಅನ್ನು ಸ್ವಚ್ಛಗೊಳಿಸುತ್ತಿದ್ದಾಗ ಅದು ಮಿಸ್ ಫೈರ್ ಆಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: BBK11 ಸ್ಪರ್ಧಿಯ ಜೊತೆ ಹುಲಿ ಉಗುರಿ ಪೆಂಡೆಂಟ್​​ ಅರೆಸ್ಟ್​ ಆಗ್ತಾರಾ ಗೋಲ್ಡ್​​ ಸುರೇಶ್​?

ಇದೀಗ ನಟನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ನಟನ ಸ್ಥಿತಿ ಸ್ಥಿರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.

Advertisment

ಗೋವಿಂದ ಅವರು ನಟ ಮಾತ್ರವಲ್ಲ ಶಿವಸೇನೆ ನಾಯಕರಾಗಿಯು ಗುರುತಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಅವರು ತಮ್ಮ ಪರವಾನಗಿ ಪಡೆದ ರಿವಾಲ್ವರ್ ಅನ್ನು ಇಟ್ಟುಕೊಂಡಿದ್ದರು, ಆಗ ಅವರ ಕೈಯಿಂದ ರಿವಾಲ್ವರ್ ಜಾರಿಬಿದ್ದಿದೆ ಎನ್ನಲಾಗುತ್ತಿದೆ. ಜಾರಿ ಬಿದ್ದ ರಿವಾಲ್ವರ್​ನಿಂದ ಗುಂಡು ಹಾರಿ ಕಾಲಿಗೆ ತಗುಲಿದೆ. ವೈದ್ಯರು ಗುಂಡನ್ನು ಹೊರತೆಗೆದಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: BBK11: ಬಿಗ್​ ಬಾಸ್​​ ಮನೆಯಲ್ಲಿ ತಪ್ಪು ಮಾಡಿದ ಜಗದೀಶ್​​​.. ಸ್ವರ್ಗದ ನಿವಾಸಿಗಳ ಕೆಂಗಣ್ಣಿಗೆ ಗುರಿಯಾದ್ರಾ?

ಗೋವಿಂದ ಅವರಿಗೆ ಗುಂಡು ತಗುಲಿದ ವಿಚಾರ ತಿಳಿದು ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಆದೆ ನಟನ ಅವರ ಸ್ಥಿತಿ ಉತ್ತಮವಾಗಿದ್ದು, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment