ಅತ್ತಿಗೆ ಕಡೆಯವರಿಗೆ ಮದುವೆ ಮಾಡಿಸಲು ನಿರ್ಧರಿಸಿದ್ದ ತಂದೆ
40 ಎಕರೆ ಜಮೀನಿದೆ, ಮಗಳು ಚೆನ್ನಾರ್ಗಿತಾಳೆ ಎಂದಿದ್ದ ಅತ್ತಿಗೆ
ಕೋಪಗೊಂಡು ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಪತಿ
ಸಾಮಾನ್ಯವಾಗಿ ಎಲ್ಲಾ ತಂದೆ ತಾಯಿಗೂ ಒಂದು ಆಸೆ ಇರುತ್ತೆ. ನಮ್ಮ ಮಕ್ಕಳು ಒಳ್ಳೆ ಶಿಕ್ಷಣ ಪಡೆದು ವಿದ್ಯಾವಂತರಾಗ್ಬೇಕು ಅಂತಾ. ಆದ್ರೆ, ಇಲ್ಲೊಬ್ಬ ಪಾಪಿ ತಂದೆ ಆಸ್ತಿ ಆಸೆಗೆ ಬಿದ್ದು ಹೆತ್ತ ಮಗಳ ಭವಿಷ್ಯಕ್ಕೆ ಕೊಳ್ಳಿ ಇಡೋಕೆ ಮುಂದಾಗಿದ್ದಾನೆ. ಅತ್ತ ಇದು ಸರಿಯಲ್ಲ ಎಂದಿದ್ದಕ್ಕೆ ಪತ್ನಿಯ ಕಾಲು ಮುರಿದಿದ್ದಾನೆ ಈ ಕರಿಮಣಿ ಮಾಲೀಕ.
ಆಕೆಗಿನ್ನು ಆಡೋ ವಯಸ್ಸು. ಆಟ ಪಾಠ ಅಂತಾ ದಿನ ಕಳೆಯಬೇಕಿದ್ದ ಹುಡುಗಿ. ಆದ್ರೆ, ಆಡೋ ಹುಡುಗಿಗೆ ಮದುವೆಯಂತೆ. ಆ ಮದುವೆ ಮಾಡಿಸೋಕೆ ಮುಂದಾಗಿರೋದು ಬೇರೆ ಯಾರೋ ಅಲ್ಲಾ. ಹೆತ್ತಪ್ಪ.
ಬಾಲ್ಯವಿವಾಹ ಬೇಡ ಅಂದಿದ್ದಕ್ಕೆ ಪತ್ನಿ ಕೈ ಕಾಲು ಮುರಿದ ಪಾಪಿ!
ಇಂಥಹ ಅಮಾನವೀಯ ಘಟನೆ ನಡೆದಿರೋದು ಗಡಿಜಿಲ್ಲೆ ಬೆಳಗಾವಿಯ ಬೈಲಹೊಂಗಲ ತಾಲೂಕಿನ ಹಾರುಗೊಪ್ಪ ಗ್ರಾಮದಲ್ಲಿ. ಭೀರಪ್ಪ ಹಾಗೂ ಮಾಯವ್ವ ಅನ್ನೋ ದಂಪತಿಗೆ ಒಂದು ಹೆಣ್ಣು ಮಗಳಿದ್ದಾಳೆ. ಆಕೆಗಿನ್ನು 13 ವರ್ಷ ವಯಸ್ಸು. ಆದ್ರೆ, ಆಸ್ತಿ ಆಸೆಗೆ ಬಿದ್ದ ಪಾಪಿ ತಂದೆ ಭೀರಪ್ಪ ಮಗಳ ಮದುವೆಗೆ ಮುಂದಾಗಿದ್ದಾನೆ.
ಬಾಲ್ಯ ‘ವಿವಾಹ’ದ ಕಥೆ!
ಭೀರಪ್ಪ ಅಣ್ಣನ ಹೆಂಡತಿ ಮನೆಯ ಹುಡುಗನಿಗೆ ತನ್ನ ಮಗಳನ್ನ ಕೊಟ್ಟು ಮದುವೆ ಮಾಡಿಸೋಕೆ ನಿರ್ಧಾರ ಮಾಡಿದ್ದಾನೆ. 40 ಎಕರೆ ಜಮೀನಿದೆ. ನಿಮ್ಮ ಮಗಳು ಚೆನ್ನಾರ್ಗಿತಾಳೆ ಎಂದು ಭೀರಪ್ಪನಿಗೆ ಆತನ ಅತ್ತಿಗೆ ಹೇಳಿದ್ರಂತೆ. ಹೀಗಾಗಿ, ಆಸ್ತಿ ಆಸೆಗೆ ಬಿದ್ದ ಭೀರಪ್ಪ ಮಗಳ ಮದುವೆ ಮಾಡಿಸಲು ಹಠಕ್ಕೆ ಬಿದಿದ್ದ. ಆದ್ರೆ, ಮದುವೆ ಬೇಡ. ಮಗಳಿಗೆ ಮಯಸ್ಸಾದ ಮೇಲೆ ನೋಡೋಣ ಎಂದು ಪತ್ನಿ ಮಾಯಾವ್ವ ಬುದ್ಧಿ ಹೇಳಿದ್ದಾಳೆ. ಇಷ್ಟಕ್ಕೆ ಕೋಪಗೊಂಡ ಗಂಡ ಭೀರಪ್ಪ, ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕೈ ಕಾಲು ಮುರಿದಾಕಿದ್ದಾನೆ.
ಇನ್ನು, ಹಲ್ಲೆಗೊಳಗಾದ ಮಾಯವ್ವ ಬೈಲಹೊಂಗಲ ತಾಲೂಕಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.. ಈ ಘಟನೆಗೆ ಮೂಲ ಸೂತ್ರಧಾರಿ ಭೀರಪ್ಪನ ಅಣ್ಣ ಹಾಗೂ ಅತ್ತಿಗೆ ಅನ್ನೋದು ಮಾಯವ್ವನ ಆರೋಪ.
ಒಟ್ಟಾರೆ. ಮಗಳು ಚೆನ್ನಾರ್ಗಿಲಿ. ಶಿಕ್ಷಣ ಪಡೆದು ಒಳ್ಳೆ ಉದ್ಯೋಗ ಸಿಗ್ಲಿ ಅಂತಾ ಬಯಸಬೇಕಿದ್ದ ತಂದೆಯೇ ಆಸ್ತಿ ಮೋಹಕ್ಕೆ ಬಿದ್ದು ಮಗಳ ಬಾಲ್ಯವಿವಾಹ ಮಾಡಿ ಆಕೆಯ ಭವಿಷ್ಯಕ್ಕೆ ಕೊಳ್ಳಿ ಇಡೋಕೆ ಮುಂದಾಗಿದ್ದು ವಿಪರ್ಯಾಸ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಅತ್ತಿಗೆ ಕಡೆಯವರಿಗೆ ಮದುವೆ ಮಾಡಿಸಲು ನಿರ್ಧರಿಸಿದ್ದ ತಂದೆ
40 ಎಕರೆ ಜಮೀನಿದೆ, ಮಗಳು ಚೆನ್ನಾರ್ಗಿತಾಳೆ ಎಂದಿದ್ದ ಅತ್ತಿಗೆ
ಕೋಪಗೊಂಡು ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಪತಿ
ಸಾಮಾನ್ಯವಾಗಿ ಎಲ್ಲಾ ತಂದೆ ತಾಯಿಗೂ ಒಂದು ಆಸೆ ಇರುತ್ತೆ. ನಮ್ಮ ಮಕ್ಕಳು ಒಳ್ಳೆ ಶಿಕ್ಷಣ ಪಡೆದು ವಿದ್ಯಾವಂತರಾಗ್ಬೇಕು ಅಂತಾ. ಆದ್ರೆ, ಇಲ್ಲೊಬ್ಬ ಪಾಪಿ ತಂದೆ ಆಸ್ತಿ ಆಸೆಗೆ ಬಿದ್ದು ಹೆತ್ತ ಮಗಳ ಭವಿಷ್ಯಕ್ಕೆ ಕೊಳ್ಳಿ ಇಡೋಕೆ ಮುಂದಾಗಿದ್ದಾನೆ. ಅತ್ತ ಇದು ಸರಿಯಲ್ಲ ಎಂದಿದ್ದಕ್ಕೆ ಪತ್ನಿಯ ಕಾಲು ಮುರಿದಿದ್ದಾನೆ ಈ ಕರಿಮಣಿ ಮಾಲೀಕ.
ಆಕೆಗಿನ್ನು ಆಡೋ ವಯಸ್ಸು. ಆಟ ಪಾಠ ಅಂತಾ ದಿನ ಕಳೆಯಬೇಕಿದ್ದ ಹುಡುಗಿ. ಆದ್ರೆ, ಆಡೋ ಹುಡುಗಿಗೆ ಮದುವೆಯಂತೆ. ಆ ಮದುವೆ ಮಾಡಿಸೋಕೆ ಮುಂದಾಗಿರೋದು ಬೇರೆ ಯಾರೋ ಅಲ್ಲಾ. ಹೆತ್ತಪ್ಪ.
ಬಾಲ್ಯವಿವಾಹ ಬೇಡ ಅಂದಿದ್ದಕ್ಕೆ ಪತ್ನಿ ಕೈ ಕಾಲು ಮುರಿದ ಪಾಪಿ!
ಇಂಥಹ ಅಮಾನವೀಯ ಘಟನೆ ನಡೆದಿರೋದು ಗಡಿಜಿಲ್ಲೆ ಬೆಳಗಾವಿಯ ಬೈಲಹೊಂಗಲ ತಾಲೂಕಿನ ಹಾರುಗೊಪ್ಪ ಗ್ರಾಮದಲ್ಲಿ. ಭೀರಪ್ಪ ಹಾಗೂ ಮಾಯವ್ವ ಅನ್ನೋ ದಂಪತಿಗೆ ಒಂದು ಹೆಣ್ಣು ಮಗಳಿದ್ದಾಳೆ. ಆಕೆಗಿನ್ನು 13 ವರ್ಷ ವಯಸ್ಸು. ಆದ್ರೆ, ಆಸ್ತಿ ಆಸೆಗೆ ಬಿದ್ದ ಪಾಪಿ ತಂದೆ ಭೀರಪ್ಪ ಮಗಳ ಮದುವೆಗೆ ಮುಂದಾಗಿದ್ದಾನೆ.
ಬಾಲ್ಯ ‘ವಿವಾಹ’ದ ಕಥೆ!
ಭೀರಪ್ಪ ಅಣ್ಣನ ಹೆಂಡತಿ ಮನೆಯ ಹುಡುಗನಿಗೆ ತನ್ನ ಮಗಳನ್ನ ಕೊಟ್ಟು ಮದುವೆ ಮಾಡಿಸೋಕೆ ನಿರ್ಧಾರ ಮಾಡಿದ್ದಾನೆ. 40 ಎಕರೆ ಜಮೀನಿದೆ. ನಿಮ್ಮ ಮಗಳು ಚೆನ್ನಾರ್ಗಿತಾಳೆ ಎಂದು ಭೀರಪ್ಪನಿಗೆ ಆತನ ಅತ್ತಿಗೆ ಹೇಳಿದ್ರಂತೆ. ಹೀಗಾಗಿ, ಆಸ್ತಿ ಆಸೆಗೆ ಬಿದ್ದ ಭೀರಪ್ಪ ಮಗಳ ಮದುವೆ ಮಾಡಿಸಲು ಹಠಕ್ಕೆ ಬಿದಿದ್ದ. ಆದ್ರೆ, ಮದುವೆ ಬೇಡ. ಮಗಳಿಗೆ ಮಯಸ್ಸಾದ ಮೇಲೆ ನೋಡೋಣ ಎಂದು ಪತ್ನಿ ಮಾಯಾವ್ವ ಬುದ್ಧಿ ಹೇಳಿದ್ದಾಳೆ. ಇಷ್ಟಕ್ಕೆ ಕೋಪಗೊಂಡ ಗಂಡ ಭೀರಪ್ಪ, ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕೈ ಕಾಲು ಮುರಿದಾಕಿದ್ದಾನೆ.
ಇನ್ನು, ಹಲ್ಲೆಗೊಳಗಾದ ಮಾಯವ್ವ ಬೈಲಹೊಂಗಲ ತಾಲೂಕಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.. ಈ ಘಟನೆಗೆ ಮೂಲ ಸೂತ್ರಧಾರಿ ಭೀರಪ್ಪನ ಅಣ್ಣ ಹಾಗೂ ಅತ್ತಿಗೆ ಅನ್ನೋದು ಮಾಯವ್ವನ ಆರೋಪ.
ಒಟ್ಟಾರೆ. ಮಗಳು ಚೆನ್ನಾರ್ಗಿಲಿ. ಶಿಕ್ಷಣ ಪಡೆದು ಒಳ್ಳೆ ಉದ್ಯೋಗ ಸಿಗ್ಲಿ ಅಂತಾ ಬಯಸಬೇಕಿದ್ದ ತಂದೆಯೇ ಆಸ್ತಿ ಮೋಹಕ್ಕೆ ಬಿದ್ದು ಮಗಳ ಬಾಲ್ಯವಿವಾಹ ಮಾಡಿ ಆಕೆಯ ಭವಿಷ್ಯಕ್ಕೆ ಕೊಳ್ಳಿ ಇಡೋಕೆ ಮುಂದಾಗಿದ್ದು ವಿಪರ್ಯಾಸ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ