ತಪ್ಪು ಮಾಡಿಲ್ಲ ಅಂತ ವಾದ ಮಾಡಲ್ಲ ಎಂದ ಜಿ.ಟಿ.ದೇವೇಗೌಡ
ಮುಚ್ಚು ಹಾಕುವ ಪ್ರಯತ್ನ ಮಾಡಲ್ಲ ಎಂದ ಕೋರ್ ಕಮಿಟಿ ಅಧ್ಯಕ್ಷ
ಪ್ರಜ್ವಲ್ರನ್ನ ಪಕ್ಷದಿಂದ ಉಚ್ಚಾಟನೆ ಮಾಡೋ ವಿಚಾರವಾಗಿ ಚರ್ಚೆ ಮಾಡ್ತೀವಿ
ಹಾಸನ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ, ಯಾರೇ ತಪ್ಪು ಮಾಡಿದ್ದರು ತಪ್ಪೇ. ನನ್ನ ಮಗ ಆಗಲಿ, ಅಣ್ಣ ತಮ್ಮ ಮಾಡಿದ್ದರು ತಪ್ಪು ತಪ್ಪೇ ಎಂದು ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಹೇಳಿದ್ದಾರೆ.
ಬಳಿಕ ಮಾತನಾಡಿದ ಅವರು, ತಪ್ಪು ಮಾಡಿಲ್ಲ ಅಂತ ವಾದ ಮಾಡಲ್ಲ. ಮುಚ್ಚು ಹಾಕುವ ಪ್ರಯತ್ನ ಮಾಡಲ್ಲ ವೆಂದು ಸ್ಪಷ್ಟನೆ ನೀಡಿದ್ದಾರೆ.
ಪ್ರಜ್ವಲ್ ರೇವಣ್ಣರನ್ನ ಪಕ್ಷದಿಂದ ಉಚ್ಚಾಟನೆ ವಿಚಾರವಾಗಿ ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡ್ತೀನಿ. ಎಲ್ಲವನ್ನೂ ನಮ್ಮ ಪಕ್ಷದಲ್ಲಿ ಹೈಕಮಾಂಡ್ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡ್ತೀವಿ ಎಂದು ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಹೇಳಿದ್ದಾರೆ.
ಇದನ್ನೂ ಓದಿ: ಇದು ದೇಶದ ಇತಿಹಾಸದಲ್ಲೇ ದೊಡ್ಡ ಲೈಂಗಿಕ ಹಗರಣ; ಹಾಸನ ಅಶ್ಲೀಲ ವಿಡಿಯೋ ಪ್ರಕರಣ ಖಂಡಿಸಿದ ಕೃಷ್ಣ ಬೈರೇಗೌಡ
ಹೆಚ್ಡಿಕೆ ಪ್ರೆನ್ ಡ್ರೈವ್ ನಲ್ಲಿ ಏನಿದೆ ಎಂಬ ವಿಚಾರ ಈಗ ಗೊತ್ತಾಯಿತು ಎಂಬ ಡಿಕೆಶಿ ವ್ಯಂಗ್ಯ ವಿಚಾರವಾಗಿಯೂ ಜಿ.ಟಿ.ದೇವೇಗೌಡ ಮಾತನಾಡಿದ್ದು, ವಿರೋಧ ಪಕ್ಷವಾಗಿ ಬೇರೆ ಏನು ಹೇಳೋಕೆ ಆಗಲ್ಲ, ಅದಕ್ಕೆ ಹೇಳ್ತಿದ್ದಾರೆ. ನಾನು ಹೇಳ್ದೆ ಅಲ್ವ, ಕೂತು ಮಾಡಬೇಕು ಅದು. ತೀರ್ಮಾನ ಮಾಡ್ತೀವಿ. ತಪ್ಪು ಮಾಡಿದ್ರೆ ಕ್ರಮ ತೆಗೆದುಕೊಳ್ತಾರೆ. ತಪ್ಪು ಮಾಡಿದರೆ ಶಿಕ್ಷೆ ಒಳಪಡಿಸ್ತಾರೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ತಪ್ಪು ಮಾಡಿಲ್ಲ ಅಂತ ವಾದ ಮಾಡಲ್ಲ ಎಂದ ಜಿ.ಟಿ.ದೇವೇಗೌಡ
ಮುಚ್ಚು ಹಾಕುವ ಪ್ರಯತ್ನ ಮಾಡಲ್ಲ ಎಂದ ಕೋರ್ ಕಮಿಟಿ ಅಧ್ಯಕ್ಷ
ಪ್ರಜ್ವಲ್ರನ್ನ ಪಕ್ಷದಿಂದ ಉಚ್ಚಾಟನೆ ಮಾಡೋ ವಿಚಾರವಾಗಿ ಚರ್ಚೆ ಮಾಡ್ತೀವಿ
ಹಾಸನ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ, ಯಾರೇ ತಪ್ಪು ಮಾಡಿದ್ದರು ತಪ್ಪೇ. ನನ್ನ ಮಗ ಆಗಲಿ, ಅಣ್ಣ ತಮ್ಮ ಮಾಡಿದ್ದರು ತಪ್ಪು ತಪ್ಪೇ ಎಂದು ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಹೇಳಿದ್ದಾರೆ.
ಬಳಿಕ ಮಾತನಾಡಿದ ಅವರು, ತಪ್ಪು ಮಾಡಿಲ್ಲ ಅಂತ ವಾದ ಮಾಡಲ್ಲ. ಮುಚ್ಚು ಹಾಕುವ ಪ್ರಯತ್ನ ಮಾಡಲ್ಲ ವೆಂದು ಸ್ಪಷ್ಟನೆ ನೀಡಿದ್ದಾರೆ.
ಪ್ರಜ್ವಲ್ ರೇವಣ್ಣರನ್ನ ಪಕ್ಷದಿಂದ ಉಚ್ಚಾಟನೆ ವಿಚಾರವಾಗಿ ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡ್ತೀನಿ. ಎಲ್ಲವನ್ನೂ ನಮ್ಮ ಪಕ್ಷದಲ್ಲಿ ಹೈಕಮಾಂಡ್ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡ್ತೀವಿ ಎಂದು ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಹೇಳಿದ್ದಾರೆ.
ಇದನ್ನೂ ಓದಿ: ಇದು ದೇಶದ ಇತಿಹಾಸದಲ್ಲೇ ದೊಡ್ಡ ಲೈಂಗಿಕ ಹಗರಣ; ಹಾಸನ ಅಶ್ಲೀಲ ವಿಡಿಯೋ ಪ್ರಕರಣ ಖಂಡಿಸಿದ ಕೃಷ್ಣ ಬೈರೇಗೌಡ
ಹೆಚ್ಡಿಕೆ ಪ್ರೆನ್ ಡ್ರೈವ್ ನಲ್ಲಿ ಏನಿದೆ ಎಂಬ ವಿಚಾರ ಈಗ ಗೊತ್ತಾಯಿತು ಎಂಬ ಡಿಕೆಶಿ ವ್ಯಂಗ್ಯ ವಿಚಾರವಾಗಿಯೂ ಜಿ.ಟಿ.ದೇವೇಗೌಡ ಮಾತನಾಡಿದ್ದು, ವಿರೋಧ ಪಕ್ಷವಾಗಿ ಬೇರೆ ಏನು ಹೇಳೋಕೆ ಆಗಲ್ಲ, ಅದಕ್ಕೆ ಹೇಳ್ತಿದ್ದಾರೆ. ನಾನು ಹೇಳ್ದೆ ಅಲ್ವ, ಕೂತು ಮಾಡಬೇಕು ಅದು. ತೀರ್ಮಾನ ಮಾಡ್ತೀವಿ. ತಪ್ಪು ಮಾಡಿದ್ರೆ ಕ್ರಮ ತೆಗೆದುಕೊಳ್ತಾರೆ. ತಪ್ಪು ಮಾಡಿದರೆ ಶಿಕ್ಷೆ ಒಳಪಡಿಸ್ತಾರೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ