/newsfirstlive-kannada/media/post_attachments/wp-content/uploads/2025/04/SIRAJ.jpg)
ನಾಳೆ ಗುಜರಾತ್ ಟೈಟನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಹೈ-ವೋಲ್ಟೇಜ್ ಪಂದ್ಯ ನಡೆಯಲಿದೆ. ಸತತ ಎರಡು ಪಂದ್ಯಗಳನ್ನು ಗೆದ್ದುಕೊಂಡಿರುವ, ಆರ್ಸಿಬಿ ಗುಜರಾತ್ ಮಣಿಸಿ ಹ್ಯಾಟ್ರಿಕ್ ಗೆಲುವಿನ ಕನಸು ಕಾಣ್ತಿದೆ.
ಇತ್ತ, ಎರಡು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದುಕೊಂಡಿರುವ ಗಿಲ್ ಪಡೆ, ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಇದರ ಮಧ್ಯೆ, ಗುಜರಾತ್ ಟೈಟನ್ಸ್ ತಂಡದ ಸ್ಟಾರ್ ವೇಗಿ ಮೊಹ್ಮದ್ ಸಿರಾಜ್ಗೆ ಪ್ರತಿಷ್ಠೆಯ ಪಂದ್ಯವಾಗಿದೆ. ಆರ್ಸಿಬಿ ವಿರುದ್ಧ ಸೇಡು ತೀರಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.
ಇದನ್ನೂ ಓದಿ:‘ನೀವು ಬ್ಯಾಟ್ ಮಾಡಿ, ಬೌಲಿಂಗ್ ಮಾಡ್ತೇನೆ’ ಎಂದ ಪಡಿಕ್ಕಲ್ -ಸವಾಲ್ ಹಾಕಿದ್ದು ಯಾರಿಗೆ..? VIDEO
2017ರಿಂದ ಐಪಿಎಲ್ ಆಡ್ತಿರುವ ಸಿರಾಜ್, 2018ರಲ್ಲಿ ಆರ್ಸಿಬಿ ಫ್ರಾಂಚೈಸಿ ಸೇರಿದ್ದರು. ಅಲ್ಲಿಂದ 7 ಸೀಸನ್ಗಳನ್ನು ಆರ್ಸಿಬಿಗಾಗಿ ಆಡಿದ್ದರು. 2025ರಲ್ಲಿ ಸಿರಾಜ್ ಅವರನ್ನು ಫ್ರಾಂಚೈಸಿ ಕೈಬಿಟ್ಟಿತು. ನಂತರ ನಡೆದ ಮೆಗಾ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್, 12.5 ಕೋಟಿ ರೂಪಾಯಿ ನೀಡಿ ಸಿರಾಜ್ರನ್ನ ಖರೀದಿಸಿದೆ.
ಇನ್ನು ಸಿರಾಜ್ ಆರ್ಸಿಬಿಯಲ್ಲಿದ್ದಾಗ 87 ಪಂದ್ಯಗಳನ್ನು ಆಡಿ 83 ವಿಕೆಟ್ ಕಿತ್ತಿದ್ದರು. ಆರ್ಸಿಬಿಯ ಬೌಲಿಂಗ್ ವಿಭಾಗದ ಶಕ್ತಿಯಾಗಿದ್ದ ಸಿರಾಜ್ರನ್ನು ಕೈಬಿಟ್ಟಿರೋದು ಭಾರೀ ಚರ್ಚೆಯಾಗಿತ್ತು. ಹೀಗಾಗಿ ನಾಳೆ ನಡೆಯುವ ಪಂದ್ಯ ಮೊಹ್ಮದ್ ಸಿರಾಜ್ಗೆ ಪ್ರತಿಷ್ಠೆಯಾಗಿದೆ. ಕೈಬಿಟ್ಟಿದ ತಪ್ಪಿಗೆ ಜಬರ್ದಸ್ತ್ ಪ್ರದರ್ಶನ ನೀಡುವ ಮೂಲಕ ಆರ್ಸಿಬಿ ಮೇಲೆ ಸೇಡು ತೀರಿಸಿಕೊಳ್ಳಲು ಕಾದು ಕೂತಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ನಾಳೆಯೇ RCB ಪಂದ್ಯ; ಟಿಕೆಟ್ ಬೇಕು ಅಂದ್ರೆ ಏನು ಮಾಡಬೇಕು..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್