Advertisment

ಹಾರ್ದಿಕ್ ಪಾಂಡ್ಯ ತಂಡಕ್ಕೆ ಸತತ ಎರಡನೇ ಸೋಲು.. ಅಹ್ಮದಾಬಾದ್​​ನಲ್ಲಿ ಮುಂಬೈಗೆ ಮಣ್ಣು ಮುಕ್ಕಿಸಿದ GT

author-image
Gopal Kulkarni
Updated On
ಹಾರ್ದಿಕ್ ಪಾಂಡ್ಯ ತಂಡಕ್ಕೆ ಸತತ ಎರಡನೇ ಸೋಲು.. ಅಹ್ಮದಾಬಾದ್​​ನಲ್ಲಿ ಮುಂಬೈಗೆ ಮಣ್ಣು ಮುಕ್ಕಿಸಿದ GT
Advertisment
  • ಸತತ ಎರಡನೇ ಸೋಲಿಗೆ ಶರಣಾದ ಮುಂಬೈ ಇಂಡಿಯನ್ಸ್ ತಂಡ
  • ಗುಜರಾತ್ ಟೈಟನ್ಸ್ ಎದುರು ಹೀನಾಯ ಸೋಲು ಕಂಡ ಹಾರ್ದಿಕ್ ಪಡೆ
  • ವ್ಯರ್ಥವಾಯ್ತು ಸೂರ್ಯಕುಮಾರ್ ಯಾದವ್ ಏಕಾಂಗಿ ಹೋರಾಟ

ಅತಿಹೆಚ್ಚು ಐಪಿಎಲ್ ಟ್ರೋಫಿ ಗೆದ್ದುಕೊಂಡ ತಂಡ ಎಂದು ಹೆಮ್ಮೆಯಿಂದ ಬೀಗುತ್ತಿದ್ದ ಮುಂಬೈ ಇಂಡಿಯನ್ಸ್​, ಸತತ ಸೋಲಿನಿಂದ ಕಂಗಾಲಾಗಿದೆ. ಈ ಮೊದಲು ಚೆನ್ನೈ ವಿರುದ್ಧ ಹೀನಾಯವಾಗಿ ಸೋತಿದ್ದ ಹಾರ್ದಿಕ್ ಪಡೆ ಈಗ, ಗುಜರಾತ್ ಟೈಟನ್ಸ್ ವಿರುದ್ಧವು ನೆಲಕಚ್ಚಿದೆ.

Advertisment

ಅಹ್ಮದಾಬದಾದ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಬಾಲಿಂಗ್ ಆಯ್ದುಕೊಂಡು ಮುಂಬೈ ತಂಡ ಆರಂಭದಲ್ಲಿಯೇ ಎಡವಿತು. ಮೊದಲ ವಿಕೆಟ್ ಕೀಳಲು ಅದು ತೆಗೆದುಕೊಂಡಿದ್ದು ಬರೋಬ್ಬರಿ 8.3 ಓವರ್​ಗಳು. ಅಷ್ಟರಲ್ಲಿ ಆರಂಭಿಕರಾದ ಸಾಯಿ ಸುದರ್ಶನ್ ಹಾಗೂ ಶುಭಮನ್ ಗಿಲ್ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದರು. ನಂತರ ಬಂದ ಜೊಸ್ ಬಟ್ಲರ್​ 24 ಬೌಲ್​ಗಲಿಗೆ 39 ರನ್ ಸಿಡಿಸುವ ಮೂಲಕ ಮುಂಬೈ ಪಡೆಗೆ ಮಾರಕಾವಾದರು. ಶೆರ್ಫೇನ್ ರುದರ್ಫೋರ್ಡ್ ಸಾಯಿ ಸುದರ್ಶನ್ ಅರ್ಧಶತಕ ಹಾಗೂ ಶುಭಮನ್ ಗಿಲ್​, ಬಟ್ಲರ್​​ ಅದ್ಭುತ ಬ್ಯಾಟಿಂಗ್​​ನಿಂದಾಗಿ ಗುಜರಾತ್​ ಟೈಟನ್ಸ್ ತಂಡ 20 ಓವರ್​ಗಳಿಗೆ 196 ರನ್​ ಗಳಿಸಿತ್ತು.

publive-image

ಆರಂಭದಲ್ಲಿ ಮತ್ತೆ ಎಡವಿದ ಮುಂಬೈ ತಂಡ
ಇನ್ನು ಬೃಹತ್ ಮೊತ್ತ ಬೆನ್ನಟ್ಟಿದ ಮುಂಬೈ ತಂಡ ಆರಂಭದಲ್ಲಿಯೇ ಎಡವಿತು. ಮೊದಲ ಓವರ್​ನಲ್ಲಿ ಸಿರಾಜ್​ ಬೌಲ್​ಗೆ ಸತತ ಎರಡು ಫೋರ್ ಸಿಡಿಸಿದ ರೋಹಿತ್ ಶರ್ಮಾ ಗುಜರಾತ್​ಗೆ ಅಪಾಯಾಗುವ ಸೂಚನೆ ನೀಡಿದರು. ಆದರೆ ನಂತರದ ಎಸೆತದಲ್ಲಿಯೇ ಸಿರಾಜ್​ಗೆ ಬೋಲ್ಡ್ ಆಗುವ ಮೂಲಕ ಮುಂಬೈಗೆ ಮತ್ತೆ ನಿರಾಸೆಯಾಗುವಂತೆ ಮಾಡಿದರು. ಅವರೊಂದಿಗೆ ಕಣಕ್ಕಿಳಿದಿದ್ದ ರಯಾನ್ ರಿಕೆಲ್ಟನ್ ಕೂಡ ಸಿರಾಜ್​ಗೆ ವಿಕೆಟ್ ಒಪ್ಪಿಸಿ ಮುಂಬೈ ತಂಡವನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದರು

publive-image

ಬಳಿಕ ಸ್ಕ್ರೀಜ್​ಗೆ ಇಳಿದ ತಿಲಕ್ ವರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅರ್ಧಶತಕದ ಜೊತೆಯಾಟ ಗೆಲುವಿನ ಭರವಸೆ ಮೂಡಿಸಿತು. ಆದ್ರೆ ತಿಲಕ್ ವರ್ಮಾ ಬೃಹತ್ ಮೊತ್ತ ಬೆನ್ನಟ್ಟುವಾಗ ತಕ್ಕ ಆಟವಾಡದೆ ತಂಡವನ್ನು ಒತ್ತಡಕ್ಕೆ ಸಿಲುಕಿಸಿದರು. ಮತ್ತೊಂದು ಕಡೆ ಸೂರ್ಯಕುಮಾರ್ ಆಕ್ರಮಣಕಾರಿ ಆಟಕ್ಕೆ ನಿಂತಿದ್ದರು. ಕೊನೆಗೆ, ತಿಲಕ್ ವರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಇಬ್ಬರು ಪ್ರಸೀದ್​ಗೆ ವಿಕೆಟ್ ಒಪ್ಪಿಸುವ ಮೂಲಕ ಮುಂಬೈ ವಿಜಯದ ಆಸೆಗೆ ಕೊನೆಯ ಮೊಳೆ ಹೊಡೆದರು. 28 ಬೌಲ್​ಗೆ 4 ಸಿಕ್ಸರ್ ಹಾಗೂ 1 ಬೌಂಡರಿ ಮೂಲಕ 48 ರನ್ ಗಳಿಸಿದ ಸೂರ್ಯಕುಮಾರ್ ಯಾದವ್ ಏಕಾಂಗಿ ಹೋರಾಟಕ್ಕೆ ಫಲ ಸಿಗಲಿಲ್ಲ

Advertisment

ಇನ್ನು ನಾಯಕನಿಗೆ ತಕ್ಕ ಆಟವಾಡದ ಹಾರ್ದಿಕ್ ಪಾಂಡ್ಯ 17 ಬಾಲ್ ನುಂಗಿ ಕೇವಲ 11 ರನ್​ ಗಳಿಸಿ ಔಟಾದರು. ಕೊನೆಗೆ 20 ಓವರ್​ಗೆ 160 ರನ್ ಗಳಿಸಿದ ಮುಂಬೈ ಇಂಡಿಯನ್ಸ್ 36 ರನ್​ಗಳಿಂದ ಸೋಲನ್ನೊಪ್ಪಿತು. ಸಿರಾಜ್ ಮತ್ತು ಪ್ರಸೀದ್ ಕೃಷ್ಣ ತಲಾ ಎರಡು ವಿಕೆಟ್ ಕಿತ್ತು ಯಶಸ್ವಿ ಬೌಲರ್ ಎನಿಸಿದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment