/newsfirstlive-kannada/media/post_attachments/wp-content/uploads/2024/11/Guruprasad-SMALL-SCREEN.jpg)
ಬೆಳ್ಳಿ ತೆರೆಯ ಮೇಲೆ ಮಠ ಸಿನಿಮಾ ಮೂಲಕ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ್ದ ಗುರುಪ್ರಸಾದ್​, ಅದೇ ರೀತಿಯ ಘಮಲು ಇರುವ ಎದ್ದೇಳು ಮಂಜುನಾಥ ಸಿನಿಮಾ ಮಾಡಿಯೂ ಕೂಡ ಗೆದ್ದಿದ್ದರು. ಬೆಳ್ಳಿ ತೆರೆಯ ಮೇಲೆ ಗುರುತಿಸಿಕೊಂಡಷ್ಟೇ ನಿರ್ದೇಶಕ ಗುರುಪ್ರಸಾದ್​ ಕಿರು ತೆರೆಯಲ್ಲಿಯೂ ಕೂಡ ಗುರುತಿಸಿಕೊಂಡಿದ್ದರು.
ಇದನ್ನೂ ಓದಿ:ಗುರುಪ್ರಸಾದ್​ ಆತ್ಮ*ಹತ್ಯೆ ಹಿನ್ನೆಲೆ; ಅಪಾರ್ಟ್​ಮೆಂಟ್ ಸೀಜ್ ಮಾಡಿದ ಪೊಲೀಸರು
ಕಿರುತೆರೆಯ ಒಟ್ಟು ನಾಲ್ಕು ಕಾರ್ಯಕ್ರಮಗಳಲ್ಲಿ ಜಡ್ಜ್ ಆಗಿ ಗುರುತಿಸಿಕೊಂಡಿದ್ದರು ಗುರುಪ್ರಸಾದ್​, ಬಿಗ್​ಬಾಸ್​ ಸ್ಪರ್ಧಿ ಕೂಡ ಆಗಿದ್ರು. ತಕಧಿಮಿಥಾ ಡ್ಯಾನ್ಸಿಂಗ್ ಸ್ಟಾರ್, ಪುಟಾಣಿ ಪಂಟ್ರು ಸೀಸನ್ 2 ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಭರ್ಜರಿ ಕಾಮಿಡಿ ಶೋಗಳಿಗೆ ಗುರುಪ್ರಸಾದ್​ ತೀರ್ಪುಗಾರರ ಕುರ್ಚಿಯಲ್ಲಿ ಕುಳಿತುಕೊಂಡಿದ್ದರು.
ಇನ್ನು 2010ರಲ್ಲಿ ಎದ್ದೇಳು ಮಂಜುನಾಥ ಸಿನಿಮಾಗೆ ಬೆಸ್ಟ್ ಡೈರೆಕ್ಟರ್ ಫಿಲ್ಮಫೇರ್​ ಗೌರವ ಕೂಡ ಗುರುಪ್ರಸಾದ್​ರನ್ನ ಅರಸಿ ಬಂದಿತ್ತು. ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲೂ ಗುರುಪ್ರಸಾದ್​ ತೆರೆಯ ಹಿಂದೆ ಕೆಲಸ ಮಾಡಿದ್ದರು. ಪುನೀತ್ ರಾಜ್​ಕುಮಾರ್ ಅವರಿಗೆ ಟಾಕ್ ಬ್ಯಾಕ್ ನೀಡುತ್ತಿದ್ದರು ಗುರುಪ್ರಸಾದ್​
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us