/newsfirstlive-kannada/media/post_attachments/wp-content/uploads/2024/09/DARSHAN_PHOTO.jpg)
ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ನನ್ನು ಹುಡುಕಿಕೊಂಡು ಸಂಕಷ್ಟಹರ ಹನುಮಾನ ಚಾಲಿಸ್ ಪುಸ್ತಕವೊಂದು ಬಂದಿದೆ. ಅಪರಿಚಿತ ವ್ಯಕ್ತಿಯೋರ್ವ ಈ ಪುಸ್ತಕವನ್ನು ಕಳುಹಿಸಿದ್ದಾನೆ ಎಂದು ತಿಳಿದುಬಂದಿದೆ.
ವ್ಯಕ್ತಿಯೋರ್ವ ದರ್ಶನ್​​ಗೆ ಪಾರ್ಸೆಲ್ ಮೂಲಕ ಹನುಮಾನ್ ಚಾಲಿಸ್ ಪುಸ್ತಕ ಕಳುಹಿಸಿದ್ದಾನೆ. ದರ್ಶನ್ ಜೈಲಿನಲ್ಲಾದ್ರು ಈ ಪುಸ್ತಕ ಓದಿ ಮನಪರಿವರ್ತನೆಯಾಗಲಿ ಅಂತ ಪುಸ್ತಕ ಕಳುಹಿಸಿದ್ದಾನೆ.
/newsfirstlive-kannada/media/post_attachments/wp-content/uploads/2024/09/Darshan-Bellary-Jail-2.jpg)
ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ದಿನ ಕಳೆಯುತ್ತಿರುವ ದರ್ಶನ್​ಗೆ ಅಪರಿಚಿತ ವ್ಯಕ್ತಿ ಹನುಮಾನ್ ಚಾಲಿಸ್ ಪುಸ್ತಕ ಕಳುಹಿಸಿದ್ದಾನೆ. ಪಾರ್ಸಲ್ ಮೂಲಕ ಬಂದ ಪುಸ್ತಕವನ್ನ ಪರಿಶೀಲನೆ ಮಾಡಿದ ಸಿಬ್ಬಂದಿ ದರ್ಶನ್ಗೆ ತಲುಪಿಸಿದ್ದಾರೆ. ಹನುಮನ ಆರ್ಶೀವಾದ ನಿಮ್ಮ ಮೇಲಿರಲು ಪುಸ್ತಕ ಓದಿರಿ ಒಳ್ಳೆದಾಗುತ್ತೆ ಅಂತಾ ಬರೆದು ಕಳುಹಿಸಲಾಗಿದೆ.
ಇದನ್ನೂ ಓದಿ: ಗರ್ಭಿಣಿ ಸುದ್ದಿ ಬೆನ್ನಲ್ಲೇ ಹೊಸ ಫೋಟೋ ಶೇರ್ ಮಾಡಿದ ಸಮಲತಾ ಅಂಬರೀಶ್ ಸೊಸೆ; ‘ಗ್ಲೋ’ ನೋಡ್ರೋ ಎಂದ ಫ್ಯಾನ್ಸ್
ಸದ್ಯ ದರ್ಶನ್​​ ಬಳ್ಳಾರಿ ಜೈಲಿಗೆ ಬಂದು 16 ದಿನಗಳನ್ನು ಕಳೆದಿದ್ದಾರೆ. ಒಂದರ ಮೇಲೊಂದರಂತೆ ಬೇಡಿಕೆ ಇಡುತ್ತಿದ್ದಾರೆ. ಮಾತ್ರವಲ್ಲದೆ ಮನೆಯೂಟಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದಲ್ಲದೆ, ಕೇಂದ್ರ ಕಾರಾಗೃಹದಿಂದ ಜಿಲ್ಲಾ ಕಾರಾಗೃಹಕ್ಕೆ ಶಿಫ್ಟ್​ ಮಾಡುವಂತೆ ಕುಟುಂಬಸ್ಥರ ಬಳಿನ ಹೇಳಿದ್ದಾರಂತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us