‘ಟೀಮ್​​ ಇಂಡಿಯಾದ ಸೋಲಿಗೆ ಇವರೇ ಕಾರಣ’- ಕ್ರಿಕೆಟ್​​ ದಿಗ್ಗಜ ಬಿಚ್ಚಿಟ್ಟ ಸ್ಫೋಟಕ ಸತ್ಯ

author-image
Ganesh Nachikethu
Updated On
ಟೀಮ್​ ಇಂಡಿಯಾಗೆ ಮತ್ತೊಂದು ಶಾಕ್​​; ಮೊದಲ ಟೆಸ್ಟ್​ ಮಧ್ಯೆಯೇ ಕೈ ಕೊಟ್ಟ ಸ್ಟಾರ್​ ಪ್ಲೇಯರ್​​
Advertisment
  • ತವರಿನಲ್ಲೇ ಟೀಮ್​ ಇಂಡಿಯಾಗೆ ಹೀನಾಯ ಸೋಲು!
  • 3-0 ಅಂತರದಲ್ಲಿ ಟೆಸ್ಟ್​ ಸೀರೀಸ್​ ಗೆದ್ದ ನ್ಯೂಜಿಲೆಂಡ್​​​ ತಂಡ
  • 24 ವರ್ಷಗಳ ಬಳಿಕ ಮೊದಲ ಬಾರಿಗೆ ಸೀರೀಸ್​ ವೈಟ್​ವಾಶ್​​

ಟೀಮ್​​ ಇಂಡಿಯಾ, ನ್ಯೂಜಿಲೆಂಡ್​​ ನಡುವಿನ 3ನೇ ಟೆಸ್ಟ್​​​ ಪಂದ್ಯ ಮುಗಿದಿದೆ. ಮಹತ್ವದ ಟೆಸ್ಟ್​​ ಸರಣಿಯಲ್ಲಿ ನ್ಯೂಜಿಲೆಂಡ್​ ವಿರುದ್ಧ ಟೀಮ್​ ಇಂಡಿಯಾ ಹೀನಾಯ ಸೋಲು ಕಂಡಿದೆ. ನ್ಯೂಜಿಲೆಂಡ್​​ ಬೌಲರ್​​ಗಳ ಎದುರಿಸುವಲ್ಲಿ ಎಡವಿದ ಟೀಮ್​ ಇಂಡಿಯಾಗೆ ತವರಿನಲ್ಲೇ ಕ್ಲೀನ್ ಸ್ವೀಪ್‌ ಸೋಲಾಗಿದೆ.

ಇನ್ನು, ಟೆಸ್ಟ್​ ಸರಣಿ ಆರಂಭಕ್ಕೂ ಮುನ್ನ ನ್ಯೂಜಿಲೆಂಡ್​ ತಂಡದ ವಿರುದ್ಧ ಟೀಮ್​​​ ಇಂಡಿಯಾ ಕ್ಲೀನ್​ ಸ್ವೀಪ್​ ಮಾಡಲಿದೆ ಅನ್ನೋ ಭರವಸೆ ಇತ್ತು. ಭಾರತ ಕ್ರಿಕೆಟ್​​ ತಂಡಕ್ಕೆ ಅತಿಯಾದ ಆತ್ಮವಿಶ್ವಾಸದಿಂದಲೇ ಸೋಲಾಗಿದೆ. ಕ್ಯಾಪ್ಟನ್​ ರೋಹಿತ್​ ಶರ್ಮಾ ವೈಫಲ್ಯವೂ ಇದಕ್ಕೆ ಕಾರಣ ಎಂಬ ಟೀಕೆಗಳು ಕೇಳಿ ಬಂದಿವೆ. ಈ ಬಗ್ಗೆ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟರ್​​ ಹರ್ಭಜನ್ ಸಿಂಗ್ ಮಾತಾಡಿದ್ದಾರೆ.

ಸೋಲಿಗೆ ಇದುವೇ ಕಾರಣ ಎಂದ ಭಜ್ಜಿ

ಟೀಮ್ ಇಂಡಿಯಾದ ಹೀನಾಯ ಸೋಲಿಗೆ ಪ್ರಮುಖ ಕಾರಣವೇನು? ಎಂದು ಮಾಜಿ ಕ್ರಿಕೆಟರ್​ ಹರ್ಭಜನ್​ ಸಿಂಗ್​​ ಬಿಚ್ಚಿಟ್ಟಿದ್ದಾರೆ. ಭಾರತದ ಪಿಚ್‌ಗಳು ಸ್ಪಿನ್ ಬೌಲರ್‌ಗಳಿಗೆ ತುಂಬಾ ಅನುಕೂಲಕರ. ಒಂದು ಪಂದ್ಯ ಕೇವಲ ಮೂರು ದಿನದಲ್ಲಿ ಮುಗಿಯೋದು ಟೆಸ್ಟ್​ ಕ್ರಿಕೆಟ್​​ಗೆ ಒಳ್ಳೆಯದಲ್ಲ ಎಂದರು.

ಟೆಸ್ಟ್ ಪಂದ್ಯ ಎಂದಮೇಲೆ 5 ದಿನಗಳ ಕಾಲ ನಡೆಯಬೇಕು. ಇದರಿಂದ 2 ತಂಡಗಳಿಗೂ ಉತ್ತಮ ಅವಕಾಶ ಸಿಗಲಿದೆ. ಐದು ದಿನಗಳು ಆಡೋ ರೀತಿ ಪಿಚ್ ತಯಾರಿಸಬೇಕು. ಭಾರತದ ಪಿಚ್‌ಗಳು ಯಾವಾಗಲೂ ಸ್ಪಿನ್ ಬೌಲರ್‌ಗಳಿಗೆ ತುಂಬಾ ಅನುಕೂಲಕರ. ನೀವು ಸರಿಯಾಗಿ ಪಿಚ್​​ ನಿರ್ಮಿಸದ ಕಾರಣ ಟೀಮ್​ ಇಂಡಿಯಾ ಬ್ಯಾಟರ್​​ಗಳು ಕಳಪೆ ಪ್ರದರ್ಶನ ನೀಡಿದ್ರು. ಇದುವೇ ಸೋಲಿಗೆ ಕಾರಣ ಎಂದರು.

ಟೀಮ್​ ಇಂಡಿಯಾವನ್ನು ನ್ಯೂಜಿಲೆಂಡ್​​ ತಂಡ 3-0 ಅಂತರದಲ್ಲಿ ಸೋಲಿಸಿ ಗೆದ್ದು ಬೀಗಿದೆ. ಬರೋಬ್ಬರಿ 24 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭಾರತದಲ್ಲಿ ಟೀಮ್​ ಇಂಡಿಯಾವನ್ನು ಸೋಲಿಸಿ ನ್ಯೂಜಿಲೆಂಡ್​​ ತಂಡ ವೈಟ್​ವಾಶ್​ ಮಾಡಿದೆ.

ಇದನ್ನೂ ಓದಿ: ಟೀಮ್​​ ಇಂಡಿಯಾಗೆ ಬಿಗ್​ ಶಾಕ್​​; ದಿಢೀರ್​​ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ ಸ್ಟಾರ್​ ಕ್ರಿಕೆಟರ್​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment