/newsfirstlive-kannada/media/post_attachments/wp-content/uploads/2024/02/Rohit_Hardik_Test.jpg)
ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಿಂದ ಕ್ಯಾಪ್ಟನ್ ರೋಹಿತ್ ಶರ್ಮಾರನ್ನು ಕೈಬಿಡಲಾಗಿದೆ. ಬೆನ್ನಲ್ಲೇ ಶರ್ಮಾರ ರೆಡ್​ಬಾಲ್ ಕ್ರಿಕೆಟ್ ಜರ್ನಿ ಅಂತ್ಯಗೊಂಡಿದೆ ಎಂಬ ಚರ್ಚೆ ಮುನ್ನಲೆಗೆ ಬಂದಿದೆ. ಈ ನಡುವೆ ಕ್ಯಾಪ್ಟನ್ ರೋಹಿತ್​​ಗೆ ಮತ್ತೊಂದು ಆಘಾತಕಾರಿ ಸುದ್ದಿ ಸಿಕ್ಕಿದೆ.
ಮುಂದಿನ ದಿನಗಳಲ್ಲಿ ಚಾಂಪಿಯನ್ಸ್ ಟ್ರೋಫಿ ಬರಲಿದೆ. ಈ ಟೂರ್ನಿಯಲ್ಲಿ ಭಾರತ ತಂಡವನ್ನು ಹೊಸ ನಾಯಕನೊಂದಿಗೆ ಕಣಕ್ಕಿಳಿಸಲು ಬಿಸಿಸಿಐ ನಿರ್ಧರಿಸಿದೆ. ಆ ಮೂಲಕ ಶರ್ಮಾಗೆ ಏಕದಿನ ಕ್ರಿಕೆಟ್ ಕ್ಯಾಪ್ಟನ್ಸಿಯಿಂದಲೂ ಗೇಟ್​ಪಾಸ್ ನೀಡಲಾಗುತ್ತಿದೆ. ಈಗಾಗಲೇ ಟಿ20ಯಿಂದ ನಿವೃತ್ತಿಯಾಗಿರುವ ರೋಹಿತ್ ಸಿಡ್ನಿ ಟೆಸ್ಟ್ನಿಂದ ಹಿಂದೆ ಸರಿದಿದ್ದಾರೆ. ಟೆಸ್ಟ್ ವೃತ್ತಿಜೀವನ ಅಂತ್ಯಗೊಳ್ಳುವ ಸೂಚನೆಯೊಂದಿಗೆ ತಂಡವು ಹಲವು ಬದಲಾವಣೆಗಳತ್ತ ಹೆಜ್ಜೆ ಹಾಕುತ್ತಿದೆ. ಪ್ರಸ್ತುತ ಪಾಂಡ್ಯ ODI ಪಂದ್ಯಗಳನ್ನು ಮುನ್ನಡೆಸುವ ಪ್ರಮುಖ ಸಾರಥಿ ಆಗಲಿದ್ದಾರೆ ಎಂದು ಹೇಳಲಾಗಿದೆ.
/newsfirstlive-kannada/media/post_attachments/wp-content/uploads/2025/01/Rohit-14.jpg)
ವೈಟ್-ಬಾಲ್ ಕ್ರಿಕೆಟ್ನಲ್ಲಿ ಹಾರ್ದಿಕ್ ಪಾಂಡ್ಯಗೆ ಒಳ್ಳೆಯ ಅನುಭವ ಇದೆ. ಒತ್ತಡದ ಸಂದರ್ಭದಲ್ಲಿ ತಂಡವನ್ನು ನಿಭಾಯಿಸುವ ಸ್ಕಿಲ್ ಇದೆ. ಸೂರ್ಯಕುಮಾರ್ ಯಾದವ್ ODIನಲ್ಲಿ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗದ ಕಾರಣ, ಹಾರ್ದಿಕ್​ರನ್ನು ನಾಯಕರನ್ನಾಗಿ ಮಾಡಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗಿದೆ. ಏಕದಿನ ಕ್ರಿಕೆಟ್​ ಕ್ಯಾಪ್ಟನ್ಸಿ ಮೇಲೆ ಕಣ್ಣಿಟ್ಟಿದ್ದ ಯುವ ಆಟಗಾರ ಗಿಲ್​ಗೂ ಕೊಕ್ ನೀಡಲು ಬಿಸಿಸಿಐ ಮುಂದಾಗಿದೆ.
ರೋಹಿತ್ಗೆ ಮುಂದಿನ ಕೆಲವು ತಿಂಗಳುಗಳು ತುಂಬಾನೇ ನಿರ್ಣಾಯಕ. ODIಗಳಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಫಾರ್ಮ್​​ಗೆ ಮರಳಬೇಕಿದೆ. ಜೊತೆಗೆ ಕಿರಿಯ ಆಟಗಾರರೊಂದಿಗೆ ಸ್ಪರ್ಧಿಸಲು ಸಿದ್ಧರಾಗಿರಬೇಕು. ಜೈಸ್ವಾಲ್ ಅವರಂತಹ ಆಟಗಾರರು ತಂಡದಲ್ಲಿರುವಾಗ ಟೀಂ ಇಂಡಿಯಾ ಬದಲಾವಣೆಗೆ ಸಜ್ಜಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us