/newsfirstlive-kannada/media/post_attachments/wp-content/uploads/2024/04/Hardik_IPL.jpg)
ಇಂದು ವಾಂಖೆಡೆ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಇಂಡಿಯನ್​​ ಪ್ರೀಮಿಯರ್​​ ಲೀಗ್​ ಹೈವೋಲ್ಟೇಜ್​ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ತಾನ್​ ರಾಯಲ್ಸ್​ ಗೆದ್ದು ಬೀಗಿದೆ.
ಇನ್ನು, ಹೀನಾಯ ಸೋಲಿನ ಬಳಿಕ ಮುಂಬೈ ಇಂಡಿಯನ್ಸ್​ ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯ ಮಾತಾಡಿದ್ದಾರೆ. ನಮಗೆ ಉತ್ತಮ ಆರಂಭ ಸಿಗಲಿಲ್ಲ. ಬ್ಯಾಕ್​ ಟು ಬ್ಯಾಕ್​ ವಿಕೆಟ್​ ಕಳೆದುಕೊಂಡ ಕಾರಣ ಸಂಕಷ್ಟಕ್ಕೆ ಸಿಲುಕಿದೆವು. ಇದೊಂದು ಕೆಟ್ಟ ಗಳಿಗೆ ಎಂದರು.
ನಾನು ಕೌಂಟರ್​ ಮಾಡಬೇಕು ಎಂದಿದ್ದೆ. ನನ್ನ ಟಾರ್ಗೆಟ್​​ ಕನಿಷ್ಠ 160 ರನ್​ ಕಲೆ ಹಾಕಬೇಕು ಎಂದಿತ್ತು. ಆದರೆ, ದುರದೃಷ್ಟವಶಾತ್​​ ನಾನು ಔಟ್​ ಆದೆ. ನನ್ನ ವಿಕೆಟ್​ ಬಿದ್ದ ಮೇಲೆ ತಂಡದ ಮೇಲೆ ಇನ್ನಷ್ಟು ಪ್ರೆಶರ್​ ಬಿತ್ತು. ಯಾವಾಗಲೂ ನಾವು ಅಂದುಕೊಂಡ ರೀತಿಯಲ್ಲೇ ಫಲಿತಾಂಶ ಬರಲ್ಲ. ಹಾಗಾಗಿ ನನ್ನ ತಂಡದ ಮೇಲೆ ನನಗೆ ನಂಬಿಕೆ ಇದೆ, ಬೌನ್ಸ್​ ಬ್ಯಾಕ್​ ಮಾಡುತ್ತೇವೆ ಎಂದು ಹೇಳಿದ್ರು.
ಇದನ್ನೂ ಓದಿ:ಮುಂಬೈ ಇಂಡಿಯನ್ಸ್​ಗೆ ಸತತ 3ನೇ ಸೋಲು; ಹಾರ್ದಿಕ್​ ಪಾಂಡ್ಯಗೆ ಭಾರೀ ಮುಖಭಂಗ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us