newsfirstkannada.com

ಸುಖ ಸಂಸಾರದಲ್ಲಿ ಅಲ್ಲೋಲ ಕಲ್ಲೋಲ..? ಪಾಂಡ್ಯ-ನಟಾಶಾ ನಡುವೆ ಇತ್ತೀಚೆಗೆ ಏನೆಲ್ಲ ಆಯ್ತು.. ಇಲ್ಲಿದೆ ಅಪ್​ಡೇಟ್ಸ್..!

Share :

Published May 25, 2024 at 12:06pm

    ಆಲ್​​ರೌಂಡರ್​ ಹಾರ್ದಿಕ್​ ಬೆನ್ನು ಬಿತ್ತಾ ದುರಾದೃಷ್ಟ?

    ಮನೆ ತೊರೆದ ಪತ್ನಿ ನತಾಶಾ, ಎಲ್ಲಿಗೆ ಹೋದರು?

    ಸ್ಟೇಡಿಯಂಗೂ ಬರಲಿಲ್ಲ, ಬೆಂಬಲ ನಿಲ್ಲದ ಪತ್ನಿ..!

ದುರಾದೃಷ್ಟವೋ, ಬ್ಯಾಡ್​​ಲಕ್ಕೋ ಟೀಮ್​ ಇಂಡಿಯಾ ಆಲ್​​ರೌಂಡರ್​ ಹಾರ್ದಿಕ್​ ಬೆನ್ನುಬಿದ್ದಂತಿದೆ. ಮುಂಬೈ ನಾಯಕತ್ವದ ವಿವಾದ ಐಪಿಎಲ್​ ಅಂತ್ಯದ ಬಳಿಕ ತಣ್ಣಗಾಗಿತ್ತು. ಇದೀಗ ವೈಯಕ್ತಿಕ ಜೀವನದಲ್ಲೇ ಬಿರುಗಾಳಿ ಎದ್ದಿದೆ. ಮನೆಯಲ್ಲಿ ಹಾರ್ದಿಕ್​​ ಪಾಂಡ್ಯಾ ಈಗ ಏಕಾಂಗಿ. ಜೀವನಪೂರ್ತಿ ಜೊತೆಗಿರೋ ಮಾತು ಕೊಟ್ಟಿದ್ದ ಮಡದಿ ನತಾಶಾ ಇದೀಗ ಮನೆ ತೊರೆದಿದ್ದಾರಂತೆ!

ಈ ಬಾರಿಯ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ಹೀನಾಯ ನಿರ್ಗಮನ ಕಂಡಿದ್ದು ಒಂದು ಕಥೆಯಾದ್ರೆ, ತಂಡದ ಸಾರಥ್ಯವಹಿಸಿಕೊಂಡ ಹಾರ್ದಿಕ್​ ಪಾಡ್ಯ ಅನುಭವಿಸಿ ಅವಮಾನದ್ದು ಇನ್ನೊಂದು ಕಥೆ. ಹೋಮ್​​​ಗ್ರೌಂಡ್​​ ವಾಂಖೆಡೆಯಲ್ಲೇ ಮುಂಬೈ ನಾಯಕನಿಗೆ ಅಭಿಮಾನಿಗಳ ಬೆಂಬಲ ಸಿಗಲಿಲ್ಲ. ಹೋದಲ್ಲಿ, ಬಂದಲ್ಲಿ ಹಾರ್ದಿಕ್​ ಎದುರಿಸಿದ್ದು, ಟೀಕೆ-ಟಿಪ್ಪಣಿ, ನಿಂದನೆಗಳನ್ನು. ಅವಮಾನ, ಮಾನಸಿಕ ಒತ್ತಡದಲ್ಲೇ ಹಾರ್ದಿಕ್​ ಸೀಸನ್​ನ ಮುಗಿಸಿದ್ರು. ಎಲ್ಲಾ ಮುಗೀತಪ್ಪಾ ಎಂದು ನಿಟ್ಟುಸಿರು ಬಿಡುವಷ್ಟರಲ್ಲೇ​ ವೈಯಕ್ತಿಕ ಜೀವನದಲ್ಲಿ ಬಿರುಗಾಳಿಯೇ ಎದ್ದಿದೆ ಎನ್ನಲಾಗಿದೆ.

ಇದನ್ನೂ ಓದಿ:ಮಹಿಳೆಯನ್ನು ನೀಲಗಿರಿ ತೋಪಿಗೆ ಎತ್ಕೊಂಡು ಹೋಗಿ ಅತ್ಯಾಚಾರ, ಕೊಲೆ.. 11 ವರ್ಷಗಳ ಕೇಸ್​ಗೆ ಬಿಗ್ ಟ್ವಿಸ್ಟ್..!

ಹಾರ್ದಿಕ್​ ಪಾಂಡ್ಯ ಬಾಳಲ್ಲಿ ಬಿರುಗಾಳಿ.?
ಐಪಿಎಲ್​​ ಸೀಸನ್​ 17 ಅಂತ್ಯ ಕಂಡ ಬೆನ್ನಲ್ಲೇ ಹಾರ್ದಿಕ್​ ಪಾಂಡ್ಯ ಬಾಳಲ್ಲಿ ಬಿರುಗಾಳಿ ಎದ್ದಿದೆ. ಸುಖ ಸಂಸಾರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾದ ಬೇಸರದ ಸುದ್ದಿ ಹೊರಬಿದ್ದಿದೆ. ಪತ್ನಿ ನಟಾಶಾ ಸ್ಟಾನ್ಕೋವಿಕ್​​, ಹಾರ್ದಿಕ್ ಪಾಂಡ್ಯ ನಡುವೆ ವೈಮನಸ್ಸು ಶುರುವಾಗಿದ್ದು, ಇಬ್ಬರೂ ಪರಸ್ಪರ ದೂರ ಉಳಿದಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ. ಇಷ್ಟೇ ಅಲ್ಲ.. ಹಾರ್ದಿಕ್​ ಮನೆ ತೊರೆದಿರುವ ನಟಾಶಾ, ಪ್ರತ್ಯೇಕವಾಗಿ ವಾಸಿಸ್ತಿದ್ದಾರೆ ಎಂದ ರೂಮರ್ಸ್​​ ಕೂಡ ಹಬ್ಬಿದೆ. ನಟಾಶಾ ಸ್ಟಾನ್ಕೋವಿಕ್​​ ಇತ್ತೀಚಿನ ನಡೆಗಳು ಕೂಡ ಈ ರೂಮರ್ಸ್​ ನಿಜ ಎಂಬ ಅರ್ಥವನ್ನ ಕೊಡ್ತಿವೆ.

ನಿಂದನೆ, ಅವಮಾನ.. ಕುಸಿದು ಹೋದ ಪಾಂಡ್ಯ..!
ಈ ಐಪಿಎಲ್​ನಲ್ಲಿ ಹಾರ್ದಿಕ್​ ಪಾಂಡ್ಯ ಅನುಭವಿಸಿದ ಯಾತನೆ ಅಷ್ಟಿಷ್ಟಲ್ಲ. ಕ್ರಿಕೆಟ್​ ವಲಯದಲ್ಲಿ ಟೀಕೆ, ನಿಂದನೆಯನ್ನು ಯಥೇಚ್ಚವಾಗಿ ಎದುರಿಸಿದ್ರು. ಇದೆಲ್ಲಾ ಸೋಷಿಯಲ್​ ಮೀಡಿಯಾದಲ್ಲಿ ಆ್ಯಕ್ಟಿವ್​ ಆಗಿರೋ ಹಾರ್ದಿಕ್​​ ಪತ್ನಿ ನಟಾಶಾಗೆ ಗೊತ್ತಿರದೇ ಏನಿಲ್ಲ. ಹಾರ್ದಿಕ್​​ ಬೆಂಬಲಿಸಿ ಮಾತಾಡೋದಿರಲಿ, ಸೋಷಿಯಲ್​ ಮೀಡಿಯಾದಲ್ಲಿ ಸಿಂಗಲ್​​​​ ಪೋಸ್ಟ್​ ಕೂಡ ಮಾಡಲಿಲ್ಲ. ತಮ್ಮ ಫೋಟೋಗಳನ್ನ ಮಾತ್ರ ಯಥೇಚ್ಚವಾಗಿ ಶೇರ್​​ ಮಾಡಿದ್ದಾರೆ. ಒಂದೂವರೆ ತಿಂಗಳು ಟೂರ್ನಿಯ ಅವಧಿಯಲ್ಲಿ ಹಾರ್ದಿಕ್​ ವಿಚಾರದಲ್ಲಿ ಮಾತ್ರ ಮೌನಕ್ಕೆ ಶರಣಾಗಿದ್ದಾರೆ.

ಇದನ್ನೂ ಓದಿ:ಮತ್ತೆ ಬಿರುಗಾಳಿ ಎಬ್ಬಿಸಿದೆ ಕೊಹ್ಲಿ ನಿವೃತ್ತಿ ಸುದ್ದಿ.. ವಿರಾಟ್ ವಿದಾಯಕ್ಕೆ ಇದೆ 2 ಬಲವಾದ ಕಾರಣ..!

ಖುಷಿಗೂ ಇಲ್ಲ.. ದುಖಃಕ್ಕೂ ಇಲ್ಲ.. ನಟಾಶ ಮೌನಿ
ಪ್ರತಿ ಬಾರಿ ಐಪಿಎಲ್​ ಟೂರ್ನಿಯ ವೇಳೆಯೂ ಮೈದಾನಕ್ಕೆ ಬಂತು ಹಾರ್ದಿಕ್​ಗೆ ನತಾಶಾ ಬೆಂಬಲ ಸೂಚಿಸ್ತಾ ಇದ್ದರು. ಈ ಬಾರಿ ಹಾರ್ದಿಕ್​ ಪತ್ನಿ, ಸ್ಟೇಡಿಯಂ ಕಡೆ ಸುಳಿಯಲೇ ಇಲ್ಲ. ಸೋಲಿನ ಮೇಲೆ ಸೋಲು ಕಂಡಾಗಲೂ ಹಾರ್ದಿಕ್​ಗೆ ಬೆಂಬಲ ಸಿಗಲಿಲ್ಲ. ಟೂರ್ನಿ ಆರಂಭವಾದ ಬಳಿಕ ಮಾತ್ರವಲ್ಲ.. ಅದಕ್ಕೂ ಮುನ್ನವೂ ನಟಾಶಾ ಮೌನಿಯಾಗಿದ್ರು. ಪತಿ ಐಪಿಎಲ್​ನ​​ ಮೋಸ್ಟ್​ ಸಕ್ಸಸ್​ಫುಲ್​ ತಂಡದ ಕ್ಯಾಪ್ಟನ್​ ಆದಾಗಲೂ ನಟಾಶಾ, ಆ ಬಗ್ಗೆ ಖುಷಿ ವ್ಯಕ್ತಪಡಿಸಲಿಲ್ಲ.

ಪತ್ನಿ ಹುಟ್ಟುಹಬ್ಬಕ್ಕೂ ಶುಭಕೋರದ ಹಾರ್ದಿಕ್​
ನಟಾಶಾ ನಡೆಯ ಜೊತೆಗೆ, ಹಾರ್ದಿಕ್​ ಪಾಂಡ್ಯಾರ ಮೌನವೂ ಗಾಳಿ ಸುದ್ದಿಗೆ ಬಲ ತುಂಬಿದೆ. ಪತ್ನಿಯನ್ನ ಸದಾ ಕೊಂಡಾಡ್ತಾ ಇದ್ದ ಹಾರ್ದಿಕ್, ಸೋಷಿಯಲ್​ ಮೀಡಿಯಾಗಳಲ್ಲಿ ಆಗಾಗ ಫೋಟೋಗಳನ್ನ ಶೇರ್​ ಮಾಡ್ತಾ ಪ್ರೀತಿಯನ್ನ ವ್ಯಕ್ತಪಡಿಸುತ್ತಿದ್ದರು. ಇಂತಹ ಹಾರ್ದಿಕ್​, ಈ ಬಾರಿ ನಟಾಶಾರ ಹುಟ್ಟು ಹಬ್ಬದ ದಿನ ಮಾರ್ಚ್​ 4ರಂದು ಸೈಲೆಂಟ್​ ಮೂಡ್​ಗೆ ಜಾರಿದ್ರು. ಸೋಷಿಯಲ್​ ಮೀಡಿಯಾದಲ್ಲಿ ವಿಷ್​ ಪೋಸ್ಟ್​ನ ಹಾಕಲಿಲ್ಲ.

ಇದನ್ನೂ ಓದಿ:ಡಿವೋರ್ಸ್ ವದಂತಿ ಬೆನ್ನಲ್ಲೇ ಇನ್​ಸ್ಟಾದಲ್ಲಿ ಪೋಸ್ಟ್​ ಮಾಡಿದ ಹಾರ್ದಿಕ್ ಪತ್ನಿ ನಟಾಶಾ.. ಭಾರೀ ವೈರಲ್

ಸುದೀರ್ಘ ಕಾಲ ಡೇಟಿಂಗ್​, ಮಗನ ಎದುರು ಮದುವೆ
ಟೀಮ್​ ಇಂಡಿಯಾ ಸೂಪರ್​ ಸ್ಟಾರ್​ ಹಾರ್ದಿಕ್​, ಸರ್ಬಿಯಾದ ಮಾಡೆಲ್​ ನಟಾಶಾ, ಬಹುಕಾಲ ಡೇಟಿಂಗ್​ ನಡೆಸಿದ್ರು. ಆ ಬಳಿಕ ಮೇ 2020ರಲ್ಲಿ ಸರಳವಾಗಿ ವಿವಾಹವಾಗಿದ್ರು. ಅದೇ ವರ್ಷ ಈ ಜೋಡಿ ಅಗಸ್ತ್ಯ ಎಂಬ ಮಗ ಹುಟ್ಟಿದ. ಆದಾದ ಬಳಿಕ ಫೆಬ್ರವರಿ 2023ರಲ್ಲಿ ಅಧಿಕೃತವಾಗಿ ಮದುವೆಯಾಗಿದ್ರು. ರಾಜಸ್ಥಾನದಲ್ಲಿ ನಡೆದ ಅದ್ಧೂರಿ ವಿವಾಹಕ್ಕೆ ಮಗ ಅಗಸ್ತ್ಯ, ಕ್ರಿಕೆಟಿಗರು, ಬಾಲಿವುಡ್​ ಸ್ಟಾರ್​​ಗಳು ಸಾಕ್ಷಿಯಾಗಿದ್ರು.

ಈ ಐಪಿಎಲ್​ನೂದ್ದಕ್ಕೂ ನಟಾಶಾ ಸ್ಟಾನ್ಕೋವಿಕ್​​ ಮೌನಿಯಾಗಿದ್ದಿದ್ದು, ಒಂದು ಚಿಕ್ಕ ಅನುಮಾನವನ್ನ ಹುಟ್ಟು ಹಾಕಿತ್ತು. ಹಾರ್ದಿಕ್​ ನಡೆ ಇದಕ್ಕೆ ಪುಷ್ಟಿ ಕೊಟ್ಟಿತ್ತು. ಇದೀಗ ಇಬ್ಬರೂ ನಡುವೆ ಸರಿಯಿಲ್ಲ ಎಂಬ ರೂಮರ್ಸ್​ ಬಿರುಗಾಳಿಯಂತೆ ಹಬ್ಬಿದೆ. ಗಾಳಿ ಸುದ್ದಿ ಕಳೆದ ಒಂದು ದಿನದಿಂದ ಎಲ್ಲೆಡೆ ಸೆನ್ಸೇಷನ್​ ಸೃಷ್ಟಿಸಿದ್ರೂ, ಇಬ್ಬರೂ ಮೌನಕ್ಕೆ ಜಾರಿದ್ದಾರೆ. ಈ ಹಿಂದಿದ್ದ ಅನುಮಾನಕ್ಕೂ, ಈಗ ಹುಟ್ಟಿರುವ ಸಂದೇಹಕ್ಕೂ ಒಂದಕ್ಕೊಂದು ತಾಳೆಯಾಗ್ತಿದೆ. ಅಷ್ಟಕ್ಕೆ, ಇದನ್ನೇ ನಿಜ ಅನ್ನುವಂತೆಯೂ ಇಲ್ಲ, ಸುಳ್ಳು ಎಂದು ತಳ್ಳಿಹಾಕುವಂತೂ ಇಲ್ಲ. ಮೌನಕ್ಕೆ ಜಾರಿರುವ ಹಾರ್ದಿಕ್​ ದಂಪತಿಗಳು ಮೌನ ಮುರಿದ್ರೆ, ಮಾತ್ರ ಸತ್ಯಾಂಶ ತಿಳಿಯಲಿದೆ.

ಇದನ್ನೂ ಓದಿ:ಕೊಹ್ಲಿಗೆ 10/10, ಮ್ಯಾಕ್ಸಿಗೆ 2/10 ; RCB ರಿಪೋರ್ಟ್ ಕಾರ್ಡ್​.. ಯಾರಿಗೆ ಎಷ್ಟು ಮಾರ್ಕ್ಸ್..

ಇದನ್ನೂ ಓದಿ:RCB Retention List: ಈ ನಾಲ್ಕು ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲು ಆರ್​ಸಿಬಿ ಪ್ಲಾನ್

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಸುಖ ಸಂಸಾರದಲ್ಲಿ ಅಲ್ಲೋಲ ಕಲ್ಲೋಲ..? ಪಾಂಡ್ಯ-ನಟಾಶಾ ನಡುವೆ ಇತ್ತೀಚೆಗೆ ಏನೆಲ್ಲ ಆಯ್ತು.. ಇಲ್ಲಿದೆ ಅಪ್​ಡೇಟ್ಸ್..!

https://newsfirstlive.com/wp-content/uploads/2024/05/HARDIK-PANDYA-5.jpg

    ಆಲ್​​ರೌಂಡರ್​ ಹಾರ್ದಿಕ್​ ಬೆನ್ನು ಬಿತ್ತಾ ದುರಾದೃಷ್ಟ?

    ಮನೆ ತೊರೆದ ಪತ್ನಿ ನತಾಶಾ, ಎಲ್ಲಿಗೆ ಹೋದರು?

    ಸ್ಟೇಡಿಯಂಗೂ ಬರಲಿಲ್ಲ, ಬೆಂಬಲ ನಿಲ್ಲದ ಪತ್ನಿ..!

ದುರಾದೃಷ್ಟವೋ, ಬ್ಯಾಡ್​​ಲಕ್ಕೋ ಟೀಮ್​ ಇಂಡಿಯಾ ಆಲ್​​ರೌಂಡರ್​ ಹಾರ್ದಿಕ್​ ಬೆನ್ನುಬಿದ್ದಂತಿದೆ. ಮುಂಬೈ ನಾಯಕತ್ವದ ವಿವಾದ ಐಪಿಎಲ್​ ಅಂತ್ಯದ ಬಳಿಕ ತಣ್ಣಗಾಗಿತ್ತು. ಇದೀಗ ವೈಯಕ್ತಿಕ ಜೀವನದಲ್ಲೇ ಬಿರುಗಾಳಿ ಎದ್ದಿದೆ. ಮನೆಯಲ್ಲಿ ಹಾರ್ದಿಕ್​​ ಪಾಂಡ್ಯಾ ಈಗ ಏಕಾಂಗಿ. ಜೀವನಪೂರ್ತಿ ಜೊತೆಗಿರೋ ಮಾತು ಕೊಟ್ಟಿದ್ದ ಮಡದಿ ನತಾಶಾ ಇದೀಗ ಮನೆ ತೊರೆದಿದ್ದಾರಂತೆ!

ಈ ಬಾರಿಯ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ಹೀನಾಯ ನಿರ್ಗಮನ ಕಂಡಿದ್ದು ಒಂದು ಕಥೆಯಾದ್ರೆ, ತಂಡದ ಸಾರಥ್ಯವಹಿಸಿಕೊಂಡ ಹಾರ್ದಿಕ್​ ಪಾಡ್ಯ ಅನುಭವಿಸಿ ಅವಮಾನದ್ದು ಇನ್ನೊಂದು ಕಥೆ. ಹೋಮ್​​​ಗ್ರೌಂಡ್​​ ವಾಂಖೆಡೆಯಲ್ಲೇ ಮುಂಬೈ ನಾಯಕನಿಗೆ ಅಭಿಮಾನಿಗಳ ಬೆಂಬಲ ಸಿಗಲಿಲ್ಲ. ಹೋದಲ್ಲಿ, ಬಂದಲ್ಲಿ ಹಾರ್ದಿಕ್​ ಎದುರಿಸಿದ್ದು, ಟೀಕೆ-ಟಿಪ್ಪಣಿ, ನಿಂದನೆಗಳನ್ನು. ಅವಮಾನ, ಮಾನಸಿಕ ಒತ್ತಡದಲ್ಲೇ ಹಾರ್ದಿಕ್​ ಸೀಸನ್​ನ ಮುಗಿಸಿದ್ರು. ಎಲ್ಲಾ ಮುಗೀತಪ್ಪಾ ಎಂದು ನಿಟ್ಟುಸಿರು ಬಿಡುವಷ್ಟರಲ್ಲೇ​ ವೈಯಕ್ತಿಕ ಜೀವನದಲ್ಲಿ ಬಿರುಗಾಳಿಯೇ ಎದ್ದಿದೆ ಎನ್ನಲಾಗಿದೆ.

ಇದನ್ನೂ ಓದಿ:ಮಹಿಳೆಯನ್ನು ನೀಲಗಿರಿ ತೋಪಿಗೆ ಎತ್ಕೊಂಡು ಹೋಗಿ ಅತ್ಯಾಚಾರ, ಕೊಲೆ.. 11 ವರ್ಷಗಳ ಕೇಸ್​ಗೆ ಬಿಗ್ ಟ್ವಿಸ್ಟ್..!

ಹಾರ್ದಿಕ್​ ಪಾಂಡ್ಯ ಬಾಳಲ್ಲಿ ಬಿರುಗಾಳಿ.?
ಐಪಿಎಲ್​​ ಸೀಸನ್​ 17 ಅಂತ್ಯ ಕಂಡ ಬೆನ್ನಲ್ಲೇ ಹಾರ್ದಿಕ್​ ಪಾಂಡ್ಯ ಬಾಳಲ್ಲಿ ಬಿರುಗಾಳಿ ಎದ್ದಿದೆ. ಸುಖ ಸಂಸಾರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾದ ಬೇಸರದ ಸುದ್ದಿ ಹೊರಬಿದ್ದಿದೆ. ಪತ್ನಿ ನಟಾಶಾ ಸ್ಟಾನ್ಕೋವಿಕ್​​, ಹಾರ್ದಿಕ್ ಪಾಂಡ್ಯ ನಡುವೆ ವೈಮನಸ್ಸು ಶುರುವಾಗಿದ್ದು, ಇಬ್ಬರೂ ಪರಸ್ಪರ ದೂರ ಉಳಿದಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ. ಇಷ್ಟೇ ಅಲ್ಲ.. ಹಾರ್ದಿಕ್​ ಮನೆ ತೊರೆದಿರುವ ನಟಾಶಾ, ಪ್ರತ್ಯೇಕವಾಗಿ ವಾಸಿಸ್ತಿದ್ದಾರೆ ಎಂದ ರೂಮರ್ಸ್​​ ಕೂಡ ಹಬ್ಬಿದೆ. ನಟಾಶಾ ಸ್ಟಾನ್ಕೋವಿಕ್​​ ಇತ್ತೀಚಿನ ನಡೆಗಳು ಕೂಡ ಈ ರೂಮರ್ಸ್​ ನಿಜ ಎಂಬ ಅರ್ಥವನ್ನ ಕೊಡ್ತಿವೆ.

ನಿಂದನೆ, ಅವಮಾನ.. ಕುಸಿದು ಹೋದ ಪಾಂಡ್ಯ..!
ಈ ಐಪಿಎಲ್​ನಲ್ಲಿ ಹಾರ್ದಿಕ್​ ಪಾಂಡ್ಯ ಅನುಭವಿಸಿದ ಯಾತನೆ ಅಷ್ಟಿಷ್ಟಲ್ಲ. ಕ್ರಿಕೆಟ್​ ವಲಯದಲ್ಲಿ ಟೀಕೆ, ನಿಂದನೆಯನ್ನು ಯಥೇಚ್ಚವಾಗಿ ಎದುರಿಸಿದ್ರು. ಇದೆಲ್ಲಾ ಸೋಷಿಯಲ್​ ಮೀಡಿಯಾದಲ್ಲಿ ಆ್ಯಕ್ಟಿವ್​ ಆಗಿರೋ ಹಾರ್ದಿಕ್​​ ಪತ್ನಿ ನಟಾಶಾಗೆ ಗೊತ್ತಿರದೇ ಏನಿಲ್ಲ. ಹಾರ್ದಿಕ್​​ ಬೆಂಬಲಿಸಿ ಮಾತಾಡೋದಿರಲಿ, ಸೋಷಿಯಲ್​ ಮೀಡಿಯಾದಲ್ಲಿ ಸಿಂಗಲ್​​​​ ಪೋಸ್ಟ್​ ಕೂಡ ಮಾಡಲಿಲ್ಲ. ತಮ್ಮ ಫೋಟೋಗಳನ್ನ ಮಾತ್ರ ಯಥೇಚ್ಚವಾಗಿ ಶೇರ್​​ ಮಾಡಿದ್ದಾರೆ. ಒಂದೂವರೆ ತಿಂಗಳು ಟೂರ್ನಿಯ ಅವಧಿಯಲ್ಲಿ ಹಾರ್ದಿಕ್​ ವಿಚಾರದಲ್ಲಿ ಮಾತ್ರ ಮೌನಕ್ಕೆ ಶರಣಾಗಿದ್ದಾರೆ.

ಇದನ್ನೂ ಓದಿ:ಮತ್ತೆ ಬಿರುಗಾಳಿ ಎಬ್ಬಿಸಿದೆ ಕೊಹ್ಲಿ ನಿವೃತ್ತಿ ಸುದ್ದಿ.. ವಿರಾಟ್ ವಿದಾಯಕ್ಕೆ ಇದೆ 2 ಬಲವಾದ ಕಾರಣ..!

ಖುಷಿಗೂ ಇಲ್ಲ.. ದುಖಃಕ್ಕೂ ಇಲ್ಲ.. ನಟಾಶ ಮೌನಿ
ಪ್ರತಿ ಬಾರಿ ಐಪಿಎಲ್​ ಟೂರ್ನಿಯ ವೇಳೆಯೂ ಮೈದಾನಕ್ಕೆ ಬಂತು ಹಾರ್ದಿಕ್​ಗೆ ನತಾಶಾ ಬೆಂಬಲ ಸೂಚಿಸ್ತಾ ಇದ್ದರು. ಈ ಬಾರಿ ಹಾರ್ದಿಕ್​ ಪತ್ನಿ, ಸ್ಟೇಡಿಯಂ ಕಡೆ ಸುಳಿಯಲೇ ಇಲ್ಲ. ಸೋಲಿನ ಮೇಲೆ ಸೋಲು ಕಂಡಾಗಲೂ ಹಾರ್ದಿಕ್​ಗೆ ಬೆಂಬಲ ಸಿಗಲಿಲ್ಲ. ಟೂರ್ನಿ ಆರಂಭವಾದ ಬಳಿಕ ಮಾತ್ರವಲ್ಲ.. ಅದಕ್ಕೂ ಮುನ್ನವೂ ನಟಾಶಾ ಮೌನಿಯಾಗಿದ್ರು. ಪತಿ ಐಪಿಎಲ್​ನ​​ ಮೋಸ್ಟ್​ ಸಕ್ಸಸ್​ಫುಲ್​ ತಂಡದ ಕ್ಯಾಪ್ಟನ್​ ಆದಾಗಲೂ ನಟಾಶಾ, ಆ ಬಗ್ಗೆ ಖುಷಿ ವ್ಯಕ್ತಪಡಿಸಲಿಲ್ಲ.

ಪತ್ನಿ ಹುಟ್ಟುಹಬ್ಬಕ್ಕೂ ಶುಭಕೋರದ ಹಾರ್ದಿಕ್​
ನಟಾಶಾ ನಡೆಯ ಜೊತೆಗೆ, ಹಾರ್ದಿಕ್​ ಪಾಂಡ್ಯಾರ ಮೌನವೂ ಗಾಳಿ ಸುದ್ದಿಗೆ ಬಲ ತುಂಬಿದೆ. ಪತ್ನಿಯನ್ನ ಸದಾ ಕೊಂಡಾಡ್ತಾ ಇದ್ದ ಹಾರ್ದಿಕ್, ಸೋಷಿಯಲ್​ ಮೀಡಿಯಾಗಳಲ್ಲಿ ಆಗಾಗ ಫೋಟೋಗಳನ್ನ ಶೇರ್​ ಮಾಡ್ತಾ ಪ್ರೀತಿಯನ್ನ ವ್ಯಕ್ತಪಡಿಸುತ್ತಿದ್ದರು. ಇಂತಹ ಹಾರ್ದಿಕ್​, ಈ ಬಾರಿ ನಟಾಶಾರ ಹುಟ್ಟು ಹಬ್ಬದ ದಿನ ಮಾರ್ಚ್​ 4ರಂದು ಸೈಲೆಂಟ್​ ಮೂಡ್​ಗೆ ಜಾರಿದ್ರು. ಸೋಷಿಯಲ್​ ಮೀಡಿಯಾದಲ್ಲಿ ವಿಷ್​ ಪೋಸ್ಟ್​ನ ಹಾಕಲಿಲ್ಲ.

ಇದನ್ನೂ ಓದಿ:ಡಿವೋರ್ಸ್ ವದಂತಿ ಬೆನ್ನಲ್ಲೇ ಇನ್​ಸ್ಟಾದಲ್ಲಿ ಪೋಸ್ಟ್​ ಮಾಡಿದ ಹಾರ್ದಿಕ್ ಪತ್ನಿ ನಟಾಶಾ.. ಭಾರೀ ವೈರಲ್

ಸುದೀರ್ಘ ಕಾಲ ಡೇಟಿಂಗ್​, ಮಗನ ಎದುರು ಮದುವೆ
ಟೀಮ್​ ಇಂಡಿಯಾ ಸೂಪರ್​ ಸ್ಟಾರ್​ ಹಾರ್ದಿಕ್​, ಸರ್ಬಿಯಾದ ಮಾಡೆಲ್​ ನಟಾಶಾ, ಬಹುಕಾಲ ಡೇಟಿಂಗ್​ ನಡೆಸಿದ್ರು. ಆ ಬಳಿಕ ಮೇ 2020ರಲ್ಲಿ ಸರಳವಾಗಿ ವಿವಾಹವಾಗಿದ್ರು. ಅದೇ ವರ್ಷ ಈ ಜೋಡಿ ಅಗಸ್ತ್ಯ ಎಂಬ ಮಗ ಹುಟ್ಟಿದ. ಆದಾದ ಬಳಿಕ ಫೆಬ್ರವರಿ 2023ರಲ್ಲಿ ಅಧಿಕೃತವಾಗಿ ಮದುವೆಯಾಗಿದ್ರು. ರಾಜಸ್ಥಾನದಲ್ಲಿ ನಡೆದ ಅದ್ಧೂರಿ ವಿವಾಹಕ್ಕೆ ಮಗ ಅಗಸ್ತ್ಯ, ಕ್ರಿಕೆಟಿಗರು, ಬಾಲಿವುಡ್​ ಸ್ಟಾರ್​​ಗಳು ಸಾಕ್ಷಿಯಾಗಿದ್ರು.

ಈ ಐಪಿಎಲ್​ನೂದ್ದಕ್ಕೂ ನಟಾಶಾ ಸ್ಟಾನ್ಕೋವಿಕ್​​ ಮೌನಿಯಾಗಿದ್ದಿದ್ದು, ಒಂದು ಚಿಕ್ಕ ಅನುಮಾನವನ್ನ ಹುಟ್ಟು ಹಾಕಿತ್ತು. ಹಾರ್ದಿಕ್​ ನಡೆ ಇದಕ್ಕೆ ಪುಷ್ಟಿ ಕೊಟ್ಟಿತ್ತು. ಇದೀಗ ಇಬ್ಬರೂ ನಡುವೆ ಸರಿಯಿಲ್ಲ ಎಂಬ ರೂಮರ್ಸ್​ ಬಿರುಗಾಳಿಯಂತೆ ಹಬ್ಬಿದೆ. ಗಾಳಿ ಸುದ್ದಿ ಕಳೆದ ಒಂದು ದಿನದಿಂದ ಎಲ್ಲೆಡೆ ಸೆನ್ಸೇಷನ್​ ಸೃಷ್ಟಿಸಿದ್ರೂ, ಇಬ್ಬರೂ ಮೌನಕ್ಕೆ ಜಾರಿದ್ದಾರೆ. ಈ ಹಿಂದಿದ್ದ ಅನುಮಾನಕ್ಕೂ, ಈಗ ಹುಟ್ಟಿರುವ ಸಂದೇಹಕ್ಕೂ ಒಂದಕ್ಕೊಂದು ತಾಳೆಯಾಗ್ತಿದೆ. ಅಷ್ಟಕ್ಕೆ, ಇದನ್ನೇ ನಿಜ ಅನ್ನುವಂತೆಯೂ ಇಲ್ಲ, ಸುಳ್ಳು ಎಂದು ತಳ್ಳಿಹಾಕುವಂತೂ ಇಲ್ಲ. ಮೌನಕ್ಕೆ ಜಾರಿರುವ ಹಾರ್ದಿಕ್​ ದಂಪತಿಗಳು ಮೌನ ಮುರಿದ್ರೆ, ಮಾತ್ರ ಸತ್ಯಾಂಶ ತಿಳಿಯಲಿದೆ.

ಇದನ್ನೂ ಓದಿ:ಕೊಹ್ಲಿಗೆ 10/10, ಮ್ಯಾಕ್ಸಿಗೆ 2/10 ; RCB ರಿಪೋರ್ಟ್ ಕಾರ್ಡ್​.. ಯಾರಿಗೆ ಎಷ್ಟು ಮಾರ್ಕ್ಸ್..

ಇದನ್ನೂ ಓದಿ:RCB Retention List: ಈ ನಾಲ್ಕು ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲು ಆರ್​ಸಿಬಿ ಪ್ಲಾನ್

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Load More