ಸೂರ್ಯ, ಹಾರ್ದಿಕ್​ ಪಾಂಡ್ಯ ಸಿಡಿಲಬ್ಬರದ ಬ್ಯಾಟಿಂಗ್​​; ಭಾರತಕ್ಕೆ ರೋಚಕ ಗೆಲುವು

author-image
Ganesh Nachikethu
Updated On
ಪಾಂಡ್ಯ ಬದುಕು ಬದಲಿಸಿದ ಆ ಘಟನೆಯಾದ್ರೂ ಏನು.. ಸ್ಟಾರ್ ಆಲ್​ರೌಂಡರ್​ನ ಸಖತ್ ಸ್ಟೋರಿ!
Advertisment
  • ಟೀಮ್​ ಇಂಡಿಯಾ ಮತ್ತು ಬಾಂಗ್ಲಾದೇಶ ನಡುವೆ ಮೊದಲ ಟಿ20 ಪಂದ್ಯ!
  • ಬಾಂಗ್ಲಾದೇಶ ತಂಡದಿಂದ ಟೀಮ್​ ಇಂಡಿಯಾಗೆ ಸಾಧಾರಣ ಮೊತ್ತದ ಗುರಿ
  • ಮೊದಲ ಪಂದ್ಯದಲ್ಲೇ ಬಾಂಗ್ಲಾದೇಶವನ್ನು ಬಗ್ಗು ಬಡಿದ ಭಾರತಕ್ಕೆ ಗೆಲುವು

ಇಂದು ಗ್ವಾಲಿಯರ್​ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​​ನಲ್ಲಿ ನಡೆದ ಮಹತ್ವದ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಟೀಮ್​ ಇಂಡಿಯಾ ಗೆದ್ದು ಬೀಗಿದೆ. ಬರೋಬ್ಬರಿ 7 ವಿಕೆಟ್​ಗಳ ಗೆಲುವು ಸಾಧಿಸಿದೆ.

ಬಾಂಗ್ಲಾದೇಶ ನೀಡಿದ ಸಾಧಾರಣ ಮೊತ್ತದ ಗುರಿಯನ್ನು ಬೆನ್ನತ್ತಿದ ಟೀಮ್​ ಇಂಡಿಯಾ ಪರ ಓಪನರ್ಸ್​ ಆಗಿ ಬಂದ ಸಂಜು ಸ್ಯಾಮ್ಸನ್​​, ಅಭಿಷೇಕ್​ ಶರ್ಮಾ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ ಮಾಡಿದ್ರು. ಸಂಜು ಸ್ಯಾಮ್ಸನ್​ ತಾನು ಎದುರಿಸಿದ 19 ಬಾಲ್​​ನಲ್ಲಿ 6 ಫೋರ್​ ಸಮೇತ 29 ರನ್​ ಚಚ್ಚಿದ್ರು. ಇವರಿಗೆ ಸಾಥ್​ ಕೊಟ್ಟ ಅಭಿಷೇಕ್​ ಕೇವಲ 7 ಬಾಲ್​ನಲ್ಲಿ 1 ಸಿಕ್ಸರ್​​, 2 ಫೋರ್​ ಸಮೇತ 16 ರನ್​​ ಸಿಡಿಸಿದ್ರು.

ಬಳಿಕ ಬಂದ ಕ್ಯಾಪ್ಟನ್​ ಸೂರ್ಯಕುಮಾರ್​ ಯಾದವ್​​ ಕೂಡ ಅಬ್ಬರಿಸಿದ್ರು. 14 ಬಾಲ್​ನಲ್ಲಿ 3 ಸಿಕ್ಸರ್​​, 2 ಫೋರ್​​ ಸಮೇತ 29 ರನ್​ ಚಚ್ಚಿದ್ರು. ನಿತೀಶ್​ ರೆಡ್ಡಿ 15 ರನ್​​ ಕಲೆ ಹಾಕಿದ್ರು. ಬಿರುಸಿನ ಬ್ಯಾಟಿಂಗ್​ ಮಾಡಿದ ಹಾರ್ದಿಕ್​ ಪಾಂಡ್ಯ 16 ಬಾಲ್​ನಲ್ಲಿ 2 ಸಿಕ್ಸರ್​​, 5 ಫೋರ್​ನೊಂದಿಗೆ 39 ರನ್​​ ಬಾರಿಸಿದ್ರು.

ಟಾಸ್​ ಸೋತ್ರೂ ಫಸ್ಟ್​ ಬ್ಯಾಟಿಂಗ್​ ಮಾಡಿದ ಬಾಂಗ್ಲಾದೇಶ 19.5 ಓವರ್​​ನಲ್ಲಿ ಕೇವಲ 127 ರನ್​ಗೆ ಆಲೌಟ್​ ಆಗಿದೆ. ಈ ಮೂಲಕ ಟೀಮ್​ ಇಂಡಿಯಾ ಸಾಧಾರಣ ಮೊತ್ತದ ಗುರಿಯನ್ನು ನೀಡಿದೆ. ಬಾಂಗ್ಲಾದೇಶದ ತಂಡವನ್ನು ಟೀಮ್​ ಇಂಡಿಯಾದ ಬೌಲರ್ಸ್​​​ ಕಟ್ಟಿ ಹಾಕಿದ್ರು.

ಇದನ್ನೂ ಓದಿ: ಟೀಮ್​ ಇಂಡಿಯಾ ಬೌಲಿಂಗ್​ಗೆ ಬೆಚ್ಚಿಬಿದ್ದ ಬಾಂಗ್ಲಾದೇಶ ಬ್ಯಾಟರ್ಸ್​​; 127 ರನ್​ಗೆ ಆಲೌಟ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment