/newsfirstlive-kannada/media/post_attachments/wp-content/uploads/2024/10/Hardik-Pandya_News.jpg)
ಇಂದು ಗ್ವಾಲಿಯರ್ ಇಂಟರ್ ನ್ಯಾಷನಲ್ ಸ್ಟೇಡಿಯಮ್ನಲ್ಲಿ ನಡೆದ ಮಹತ್ವದ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಟೀಮ್ ಇಂಡಿಯಾ ಗೆದ್ದು ಬೀಗಿದೆ. ಬರೋಬ್ಬರಿ 7 ವಿಕೆಟ್ಗಳ ಗೆಲುವು ಸಾಧಿಸಿದೆ.
ಬಾಂಗ್ಲಾದೇಶ ನೀಡಿದ ಸಾಧಾರಣ ಮೊತ್ತದ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ಓಪನರ್ಸ್ ಆಗಿ ಬಂದ ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಮಾಡಿದ್ರು. ಸಂಜು ಸ್ಯಾಮ್ಸನ್ ತಾನು ಎದುರಿಸಿದ 19 ಬಾಲ್ನಲ್ಲಿ 6 ಫೋರ್ ಸಮೇತ 29 ರನ್ ಚಚ್ಚಿದ್ರು. ಇವರಿಗೆ ಸಾಥ್ ಕೊಟ್ಟ ಅಭಿಷೇಕ್ ಕೇವಲ 7 ಬಾಲ್ನಲ್ಲಿ 1 ಸಿಕ್ಸರ್, 2 ಫೋರ್ ಸಮೇತ 16 ರನ್ ಸಿಡಿಸಿದ್ರು.
ಬಳಿಕ ಬಂದ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಕೂಡ ಅಬ್ಬರಿಸಿದ್ರು. 14 ಬಾಲ್ನಲ್ಲಿ 3 ಸಿಕ್ಸರ್, 2 ಫೋರ್ ಸಮೇತ 29 ರನ್ ಚಚ್ಚಿದ್ರು. ನಿತೀಶ್ ರೆಡ್ಡಿ 15 ರನ್ ಕಲೆ ಹಾಕಿದ್ರು. ಬಿರುಸಿನ ಬ್ಯಾಟಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ 16 ಬಾಲ್ನಲ್ಲಿ 2 ಸಿಕ್ಸರ್, 5 ಫೋರ್ನೊಂದಿಗೆ 39 ರನ್ ಬಾರಿಸಿದ್ರು.
ಟಾಸ್ ಸೋತ್ರೂ ಫಸ್ಟ್ ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 19.5 ಓವರ್ನಲ್ಲಿ ಕೇವಲ 127 ರನ್ಗೆ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ ಸಾಧಾರಣ ಮೊತ್ತದ ಗುರಿಯನ್ನು ನೀಡಿದೆ. ಬಾಂಗ್ಲಾದೇಶದ ತಂಡವನ್ನು ಟೀಮ್ ಇಂಡಿಯಾದ ಬೌಲರ್ಸ್ ಕಟ್ಟಿ ಹಾಕಿದ್ರು.
ಇದನ್ನೂ ಓದಿ: ಟೀಮ್ ಇಂಡಿಯಾ ಬೌಲಿಂಗ್ಗೆ ಬೆಚ್ಚಿಬಿದ್ದ ಬಾಂಗ್ಲಾದೇಶ ಬ್ಯಾಟರ್ಸ್; 127 ರನ್ಗೆ ಆಲೌಟ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ