/newsfirstlive-kannada/media/post_attachments/wp-content/uploads/2024/10/Hardik-Pandya_News.jpg)
ಇಂದು ಗ್ವಾಲಿಯರ್​ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​​ನಲ್ಲಿ ನಡೆದ ಮಹತ್ವದ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಟೀಮ್​ ಇಂಡಿಯಾ ಗೆದ್ದು ಬೀಗಿದೆ. ಬರೋಬ್ಬರಿ 7 ವಿಕೆಟ್​ಗಳ ಗೆಲುವು ಸಾಧಿಸಿದೆ.
ಬಾಂಗ್ಲಾದೇಶ ನೀಡಿದ ಸಾಧಾರಣ ಮೊತ್ತದ ಗುರಿಯನ್ನು ಬೆನ್ನತ್ತಿದ ಟೀಮ್​ ಇಂಡಿಯಾ ಪರ ಓಪನರ್ಸ್​ ಆಗಿ ಬಂದ ಸಂಜು ಸ್ಯಾಮ್ಸನ್​​, ಅಭಿಷೇಕ್​ ಶರ್ಮಾ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ ಮಾಡಿದ್ರು. ಸಂಜು ಸ್ಯಾಮ್ಸನ್​ ತಾನು ಎದುರಿಸಿದ 19 ಬಾಲ್​​ನಲ್ಲಿ 6 ಫೋರ್​ ಸಮೇತ 29 ರನ್​ ಚಚ್ಚಿದ್ರು. ಇವರಿಗೆ ಸಾಥ್​ ಕೊಟ್ಟ ಅಭಿಷೇಕ್​ ಕೇವಲ 7 ಬಾಲ್​ನಲ್ಲಿ 1 ಸಿಕ್ಸರ್​​, 2 ಫೋರ್​ ಸಮೇತ 16 ರನ್​​ ಸಿಡಿಸಿದ್ರು.
ಬಳಿಕ ಬಂದ ಕ್ಯಾಪ್ಟನ್​ ಸೂರ್ಯಕುಮಾರ್​ ಯಾದವ್​​ ಕೂಡ ಅಬ್ಬರಿಸಿದ್ರು. 14 ಬಾಲ್​ನಲ್ಲಿ 3 ಸಿಕ್ಸರ್​​, 2 ಫೋರ್​​ ಸಮೇತ 29 ರನ್​ ಚಚ್ಚಿದ್ರು. ನಿತೀಶ್​ ರೆಡ್ಡಿ 15 ರನ್​​ ಕಲೆ ಹಾಕಿದ್ರು. ಬಿರುಸಿನ ಬ್ಯಾಟಿಂಗ್​ ಮಾಡಿದ ಹಾರ್ದಿಕ್​ ಪಾಂಡ್ಯ 16 ಬಾಲ್​ನಲ್ಲಿ 2 ಸಿಕ್ಸರ್​​, 5 ಫೋರ್​ನೊಂದಿಗೆ 39 ರನ್​​ ಬಾರಿಸಿದ್ರು.
ಟಾಸ್​ ಸೋತ್ರೂ ಫಸ್ಟ್​ ಬ್ಯಾಟಿಂಗ್​ ಮಾಡಿದ ಬಾಂಗ್ಲಾದೇಶ 19.5 ಓವರ್​​ನಲ್ಲಿ ಕೇವಲ 127 ರನ್​ಗೆ ಆಲೌಟ್​ ಆಗಿದೆ. ಈ ಮೂಲಕ ಟೀಮ್​ ಇಂಡಿಯಾ ಸಾಧಾರಣ ಮೊತ್ತದ ಗುರಿಯನ್ನು ನೀಡಿದೆ. ಬಾಂಗ್ಲಾದೇಶದ ತಂಡವನ್ನು ಟೀಮ್​ ಇಂಡಿಯಾದ ಬೌಲರ್ಸ್​​​ ಕಟ್ಟಿ ಹಾಕಿದ್ರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ