/newsfirstlive-kannada/media/post_attachments/wp-content/uploads/2024/10/Hardik-Pandya_RCB.jpg)
ಕಳೆದ 17 ವರ್ಷಗಳಿಂದ ಇಂಡಿಯನ್​ ಪ್ರೀಮಿಯರ್​​ ಲೀಗ್​ ಕಪ್​ ಗೆದ್ದಿಲ್ಲ ಅನ್ನೋ ಕೊರಗು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಕಾಡುತ್ತಲೇ ಇದೆ. ಈ ಬಾರಿ ಆಕ್ಷನ್​​ನಲ್ಲಿ ಸ್ಟಾರ್ ಆಟಗಾರರನ್ನು ಖರೀದಿ ಮಾಡಿ ಕಪ್​ ಗೆಲ್ಲೋ ಯೋಚನೆಯಲ್ಲಿ ಆರ್​​ಸಿಬಿ ಇದೆ. ಹಾಗಾಗಿ ಆರ್​​ಸಿಬಿ ತಂಡಕ್ಕೆ ಒಬ್ಬ ಸ್ಟಾರ್​ ಆಲ್​ರೌಂಡರ್​ ಬೇಕಿದೆ. ಅದರಲ್ಲೂ ಸ್ಟಾರ್​ ಆಲ್​ರೌಂಡರ್​ ತಂಡದ ಕ್ಯಾಪ್ಟನ್​ ಆಗಿದ್ರೆ ಇನ್ನೂ ಒಳ್ಳೆಯದು ಎಂಬುದು ಆರ್​​ಸಿಬಿ ಪ್ಲಾನ್​. ಇದೇ ಕಾರಣಕ್ಕೆ ಮುಂಬೈ ಇಂಡಿಯನ್ಸ್​ ತಂಡದ ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯಗೆ ಗಾಳ ಹಾಕಲು ಪ್ಲ್ಯಾನ್ ಮಾಡಿಕೊಂಡಿದೆ.
ಆರ್ಸಿಬಿಗೆ ಹಾರ್ದಿಕ್ ಏಕೆ ಬೇಕು?
ಹಾರ್ದಿಕ್​ ಪಾಂಡ್ಯ ಆರ್​​ಸಿಬಿಗೆ ಬೇಕೇ ಬೇಕು. ಇದಕ್ಕೆ ಕಾರಣ ಪಾಂಡ್ಯ ಅನುಭವ ಆರ್​​ಸಿಬಿ ತಂಡಕ್ಕೆ ಪ್ಲಸ್​ ಆಗಲಿದೆ. ಮೊದಲ ಸೀಸನ್​​ಗೆ ಗುಜರಾತ್​ ಟೈಟನ್ಸ್​ ತಂಡವನ್ನು ಚಾಂಪಿಯನ್​​ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರ ನಾಯಕತ್ವದ ಗುಣಗಳು ಎಲ್ಲರ ಗಮನ ಸೆಳೆದಿವೆ. ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್​ ಮಾಡಬಲ್ಲ ಸಾಮರ್ಥ್ಯ ಇರೋ ಹಾರ್ದಿಕ್​​​ ಆರ್​​ಸಿಬಿಗೆ ಕ್ಯಾಪ್ಟನ್​ ಆದ್ರೆ ಒಳ್ಳೆಯದು.
ಬ್ಯಾಟಿಂಗ್​​ ಮತ್ತು ಬೌಲಿಂಗ್​ನಲ್ಲೂ ಮೋಡಿ!
ಕೇವಲ ಕ್ಯಾಪ್ಟನ್ಸಿ ಮಾತ್ರವಲ್ಲ ಬ್ಯಾಟಿಂಗ್​ ಮತ್ತು ಬೌಲಿಂಗ್​ ವಿಭಾಗದಲ್ಲೂ ಮೋಡಿ ಮಾಡಬಲ್ಲ ಆಟಗಾರ ಹಾರ್ದಿಕ್​ ಪಾಂಡ್ಯ. ಒತ್ತಡದ ಸನ್ನಿವೇಶದಲ್ಲಿ ಬೌಲಿಂಗ್ ಮಾಡುವ ಕಲೆ ಇವರಿಗಿದೆ. ಕೆಲವು ವರ್ಷಗಳಿಂದ ಆರ್​​ಸಿಬಿ ಎದುರಿಸುತ್ತಿರೋ ಬೌಲಿಂಗ್​ಗೆ ಹಾರ್ದಿಕ್​ ಮದ್ದು ಆಗಬಹುದು. ಜತೆಗೆ ಒಳ್ಳೆಯ ಫಿನಿಶರ್​ ಕೂಡ ಹೌದು.
ಹಾರ್ದಿಕ್​​ಗೆ ಮುಂಬೈನಿಂದ ಕೊಕ್​​
ಮುಂದಿನ ಸೀಸನ್​ಗೆ ಹಾರ್ದಿಕ್​ ಪಾಂಡ್ಯಗೆ ಮುಂಬೈ ಇಂಡಿಯನ್ಸ್​ ತಂಡದಿಂದ ಕೊಕ್​ ನೀಡುವ ಸಾಧ್ಯತೆ ಇದೆ. ಇವರ ಬದಲಿಗೆ ಮತ್ತೆ ರೋಹಿತ್​ ಶರ್ಮಾ ಅಥವಾ ಸೂರ್ಯಕುಮಾರ್​ ಯಾದವ್​ಗೆ ಕ್ಯಾಪ್ಟನ್ಸಿ ಪಟ್ಟ ಕಟ್ಟಬಹುದು. ಈಗಾಗಲೇ ಮುಂಬೈ ಇಂಡಿಯನ್ಸ್​ ತಂಡದಲ್ಲಿ ಹಲವು ಬದಲಾವಣೆಗಳು ಶುರುವಾಗಿವೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us