/newsfirstlive-kannada/media/post_attachments/wp-content/uploads/2024/10/New-Project-3.jpg)
ಹಾಸನಾಂಬೆ ದೇವಸ್ಥಾನದ ಬಾಗಿಲು ತೆರೆದಿದ್ದು, ರಾಜಕಾರಣಿಗಳು, ಭಕ್ತರು, ಸಿನಿ ತಾರೆಯರು ತಾಯಿಯ ದರ್ಶನ ಪಡೆಯುತ್ತಿದ್ದಾರೆ. ಅದರಂತೆಯೇ ನಿನ್ನೆ ನಿರ್ದೇಶಕ ತರುಣ್​ ಸುಧೀರ್​ ಮತ್ತು ಪತ್ನಿ ಸೋನಲ್​ ಮೊಂತೆರೋ ಕೂಡ ದೇವರ ದರ್ಶನ ಪಡೆದಿದ್ದರು.
ದೇವಿಯ ದರ್ಶನ ಪಡೆದ ಬಳಿಕ ಮಾಧ್ಯಮದ ಮುಂದೆ ಮಾತನಾಡಿದ ತರುಣ್​​ ಸುಧೀರ್, ದೇವರ ಬಳಿ ದರ್ಶನ್​ ಆದಷ್ಟು ಬೇಗ ರಿಲೀಸ್​ ಆಗಲಿ ಎಂದು ಬೇಡಿಕೊಂಡಿದ್ದೆ ಎಂದು ಹೇಳಿದ್ದರು. ಆದರೀಗ ಅವರ ಬೇಡಿಕೆಯಂತೆಯೇ ದರ್ಶನ್​ ರಿಲೀಸ್​ ಆಗಿದ್ದಾರೆ.
ಇದನ್ನೂ ಓದಿ: ದರ್ಶನ್​ಗೆ ತಾತ್ಕಾಲಿಕ ರಿಲೀಫ್; ಕೋರ್ಟ್​​ ವಿಧಿಸಿದ 8 ಷರತ್ತುಗಳೇನು..?
ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್​ಗೆ ಬೆನ್ನು ನೋವು ಕಾಣಿಸಿಕೊಂಡಿದ್ದು, ಇದರ ಪರಿಣಾಮ ಹೈಕೋರ್ಟ್​​​ ಮೆಡಿಕಲ್​ ಬೇಲ್​ ನೀಡಿದೆ. 6 ವಾರಗಳ ಕಾಲಾವಧಿ ನೀಡಿದ್ದು, ಅದರ ಒಳಗೆ ದರ್ಶನ್​ ಚಿಕಿತ್ಸೆ ಪಡೆಯಬೇಕಿದೆ.
ಇದನ್ನೂ ಓದಿ: ಮಾಸದ ಮಗನ ನೆನಪು.. ಮನೆ ದೇವರ ಮೊರೆ ಹೋದ ರೇಣುಕಾಸ್ವಾಮಿ ಕುಟುಂಬ
ಸದ್ಯ ದರ್ಶನ್​ ರಿಲೀಸ್​​ಗೂ ಸ್ನೇಹಿತ ತರುಣ್​ ಸುಧೀರ್​ ಹೇಳಿಕೆಗೂ ಹಾಸನಾಂಬೆ ವರ ನೀಡಿದಂತಾಗಿದೆ. ದೀಪಾವಳಿ ಸಮಯದಲ್ಲಿ ಕೊನೆಗೂ ಆರೋಪಿ ದಾಸ ಬಳ್ಳಾರಿ ಜೈಲಿನಿಂದ ಹೊರಬಂದಿದ್ದು, ಅಭಿಮಾನಿಗಳಿಗೂ ಸಂತಸ ಸಿಕ್ಕತಾಂಗಿದೆ. ಈಗಾಗಲೇ ಕೆಲವು ಫ್ಯಾನ್ಸ್​ ಪಟಾಕಿ ಹಚ್ಚಿ ಸಂಭ್ರಮಿಸಿದ್ದು ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us