newsfirstkannada.com

ಬೆಳ್ಳಂ ಬೆಳಗ್ಗೆ ಕಾರು-ಟ್ರಕ್​ ಭೀಕರ ಅಪಘಾತ.. ಮಗು ಸೇರಿ ಆರು ಜನರ ದೇಹ ಛಿದ್ರ ಛಿದ್ರ

Share :

Published May 26, 2024 at 9:07am

Update May 26, 2024 at 9:13am

    ಟ್ರಕ್​ ಗುದ್ದಿದ ರಭಸಕ್ಕೆ ನಜ್ಜುಗುಜ್ಜಾದ ಕಾರು

    ಇಬ್ಬರು ಮಹಿಳೆಯರು, ಮೂವರು ಪುರುಷರು, ಓರ್ವ ಮಗು ಸಾವು

    ಕಾರಿನೊಳಕ್ಕೆ ಸಿಲುಕಿ ಅಲ್ಲೇ ಪ್ರಾಣಬಿಟ್ಟ ಆರು ಜನರು.. ಎಲ್ಲಿಯವರು ಗೊತ್ತಾ?

ಹಾಸನ: ಕಾರು ಹಾಗೂ ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಹಾಸನ ಹೊರವಲಯದ ಈಚನಹಳ್ಳಿ ಬಳಿ ನಡೆದಿದೆ. ಪರಿಣಾಮ ಸ್ಥಳದಲ್ಲೇ ಆರು ಜನರು ಸಾವನ್ನಪ್ಪಿದ್ದಾರೆ.

ಟ್ರಕ್​ ಗುದ್ದಿದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಹಾಗೂ ಮೂವರು ಪುರುಷರು, ಒಂದು ಮಗು ಸೇರಿದಂತೆ ಅಲ್ಲೇ ಸಿಲುಕಿ ಸಾವನ್ನಪ್ಪಿದ್ದಾರೆ. ಪೊಲೀಸರು ನಜ್ಜುಗುಜ್ಜಾದ ಮೃತದೇಹಗಳನ್ನು ಹೊರಗೆ ತೆಗೆಯಲು ಹರಸಾಹಸ ಪಡುತ್ತಿದ್ದಾರೆ. 

ಇದನ್ನೂ ಓದಿ: 9 ಮಕ್ಕಳು ಸೇರಿ 27 ಜನ ಬೆಂಕಿಯಲ್ಲಿ ಸಜೀವ ದಹನ.. ಮೃತದೇಹಗಳನ್ನು ಮೂಟೆಯಲ್ಲಿ ಕಟ್ಟಿ ತಂದ ಸಿಬ್ಬಂದಿ

ಕಾರಿನಲ್ಲಿದ್ದ ಮೃತರು ಚಿಕ್ಕಬಳ್ಳಾಪುರ ಮೂಲದವರು ಎಂದು ಗುರುತಿಸಲಾಗಿದೆ. ಹಾಸನ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

ಬೆಳ್ಳಂ ಬೆಳಗ್ಗೆ ಕಾರು-ಟ್ರಕ್​ ಭೀಕರ ಅಪಘಾತ.. ಮಗು ಸೇರಿ ಆರು ಜನರ ದೇಹ ಛಿದ್ರ ಛಿದ್ರ

https://newsfirstlive.com/wp-content/uploads/2024/05/Accident-12.jpg

    ಟ್ರಕ್​ ಗುದ್ದಿದ ರಭಸಕ್ಕೆ ನಜ್ಜುಗುಜ್ಜಾದ ಕಾರು

    ಇಬ್ಬರು ಮಹಿಳೆಯರು, ಮೂವರು ಪುರುಷರು, ಓರ್ವ ಮಗು ಸಾವು

    ಕಾರಿನೊಳಕ್ಕೆ ಸಿಲುಕಿ ಅಲ್ಲೇ ಪ್ರಾಣಬಿಟ್ಟ ಆರು ಜನರು.. ಎಲ್ಲಿಯವರು ಗೊತ್ತಾ?

ಹಾಸನ: ಕಾರು ಹಾಗೂ ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಹಾಸನ ಹೊರವಲಯದ ಈಚನಹಳ್ಳಿ ಬಳಿ ನಡೆದಿದೆ. ಪರಿಣಾಮ ಸ್ಥಳದಲ್ಲೇ ಆರು ಜನರು ಸಾವನ್ನಪ್ಪಿದ್ದಾರೆ.

ಟ್ರಕ್​ ಗುದ್ದಿದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಹಾಗೂ ಮೂವರು ಪುರುಷರು, ಒಂದು ಮಗು ಸೇರಿದಂತೆ ಅಲ್ಲೇ ಸಿಲುಕಿ ಸಾವನ್ನಪ್ಪಿದ್ದಾರೆ. ಪೊಲೀಸರು ನಜ್ಜುಗುಜ್ಜಾದ ಮೃತದೇಹಗಳನ್ನು ಹೊರಗೆ ತೆಗೆಯಲು ಹರಸಾಹಸ ಪಡುತ್ತಿದ್ದಾರೆ. 

ಇದನ್ನೂ ಓದಿ: 9 ಮಕ್ಕಳು ಸೇರಿ 27 ಜನ ಬೆಂಕಿಯಲ್ಲಿ ಸಜೀವ ದಹನ.. ಮೃತದೇಹಗಳನ್ನು ಮೂಟೆಯಲ್ಲಿ ಕಟ್ಟಿ ತಂದ ಸಿಬ್ಬಂದಿ

ಕಾರಿನಲ್ಲಿದ್ದ ಮೃತರು ಚಿಕ್ಕಬಳ್ಳಾಪುರ ಮೂಲದವರು ಎಂದು ಗುರುತಿಸಲಾಗಿದೆ. ಹಾಸನ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

Load More