Advertisment

ಮನೆ ದೇವರ ಪೂಜೆಗೆ ಹೊರಟಿದ್ದ 13 ಮಂದಿ ದಾರುಣ ಸಾವು.. ಕರುಳು ಚುರ್ ಎನ್ನುತ್ತೆ ಈ ಘೋರ ದುರಂತ

author-image
Ganesh
Updated On
ಸಂಬಂಧಿಕರ ಹೆಸರಲ್ಲಿ ಟಿಟಿ ಖರೀದಿ.. 13 ಜನರ ಸಾವಿಗೆ ಕಾರಣವಾಯ್ತ ಫಾಸ್ಟ್​ ಡ್ರೈವಿಂಗ್​​?
Advertisment
  • ಹೃದಯ ವಿದ್ರಾವಕ ಘಳಿಗೆಗೆ ಸಾಕ್ಷಿಯಾದ ಎಮ್ಮೆಹಟ್ಟಿ ಇಡೀ ಗ್ರಾಮ
  • ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನಲ್ಲಿ ನಡೆದ ಭೀಕರ ಅಪಘಾತ
  • ಮೃತ ವ್ಯಕ್ತಿಗಳ ಫೋಟೋ ರಿವೀಲ್ ಆಗಿದೆ, ಕರುಳು ಹಿಂಡುವಂತಿದೆ

ಶಿವಮೊಗ್ಗ: ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನ ಹಳ್ಳಿಯಲ್ಲಿ ಟಿಟಿ ಮತ್ತು ಲಾರಿ ಅಪಘಾತದ ಪ್ರಕರಣದಲ್ಲಿ ಒಟ್ಟು 13 ಮಂದಿ ಸಾವನ್ನಪ್ಪಿದ್ದಾರೆ. ಮೃತರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಮ್ಮಿಹಟ್ಟಿ ಗ್ರಾಮದವರು. ಇದೀಗ ಮೃತ ವ್ಯಕ್ತಿಗಳ ಫೋಟೋ ರಿವೀಲ್ ಆಗಿದೆ.

Advertisment

ಮೃತರು..

  • ಸುಭದ್ರಬಾಯಿ (65)
  • ಮಾನಸ (29)
  • ಮಂಜುಳಾ (50)
  • ಆದರ್ಶ (21)
  • ಆರ್ಯ (4)
  • ವಿಶಾಲಾಕ್ಷಿ (50)
  • ರೂಪಾ ಬಾಯಿ 35)
  • ನಂದನ (3)
  • ಅಂಜಲಿ (30)
  • ನಾಗೇಶ ರಾವ್ (51)
  • ಅರುಣಕುಮಾರ (27)
  • ಮಂಜುಳಾ ಬಾಯಿ (55)
  • ಭ್ಮಾಗ್ಯಾ ಬಾಯಿ (45)

ಮೃತರು ಕಳೆದ ಮೂರು ದಿನಗಳ ಹಿಂದೆ ಕುಟುಂಬಸ್ಥರೆಲ್ಲ ಸೇರಿ ಮನೆದೇವರ ಪೂಜೆಗೆ ಹೋಗಿದ್ದರು. ಆದರೆ ಇಂದು ಬೆಳಗ್ಗೆ 4 ಗಂಟೆ ಸುಮಾರಿಗೆ ನಡೆದ ಅಪಘಾತದಲ್ಲಿ 11 ಮಂದಿ ಸ್ಥಳದಲ್ಲೇ ಸಾವನ್ನಪ್ಪಿ ಒಟ್ಟು 13 ಪ್ರಯಾಣಿಕರು ಮೃತಪಟ್ಟಿದ್ದಾರೆ. ಟಿಟಿ ಮಾಲಿಕ ನಾಗೇಶ ರಾವ್ ಕುಟುಂಬದಲ್ಲಿ ಒಟ್ಟು ನಾಲ್ಕು ಜನ ಸೇರಿದಂತೆ ಅವರ ಮನೆಯ ಇತರೆ ಸಂಬಂಧಿಕರು ಸಾವನ್ನಪ್ಪಿದ್ದಾರೆ. ಟಿಟಿ ವಾಹನದ ಮಾಲೀಕ ನಾಗೇಶ್ ತಾಯಿ ವಿಶಾಲಾಕ್ಷಿ. ಇವರು ಆಶಾ ಕಾರ್ಯಕರ್ತೆ. ವಿಶಾಲಾಕ್ಷಿ ಮನೆಯ ಅಷ್ಟೂ ಕುಟುಂಬಸ್ಥರು ಪ್ರವಾಸಕ್ಕೆ ತೆರಳಿದ್ದರು.

ಇದನ್ನೂ ಓದಿ:ಅಪಘಾತದಲ್ಲಿ 13 ಮಂದಿ ದಾರುಣ ಸಾವು.. ಹೃದಯ ವಿದ್ರಾವಕ ಘಳಿಗೆಗೆ ಸಾಕ್ಷಿಯಾದ ಎಮ್ಮೆಹಟ್ಟಿ ಇಡೀ ಗ್ರಾಮ..

Advertisment

publive-image

ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ
ಇದೀಗ ಎಮ್ಮೆಹಟ್ಟಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಮೃತರ ಸ್ವಂತ ಗ್ರಾಮವಾದ ಹೊಳೆಹೊನ್ನೂರು ಬಳಿಯ ಎಮ್ಮೆಹಟ್ಟಿಗೆ ಸಂಬಂಧಿಕರು ದೌಡಾಯಿಸಿದ್ದು, ಇಡೀ ಗ್ರಾಮ ಶೋಕಸಾಗರದಲ್ಲಿ ಮುಳುಗಿದೆ. ಸಂಬಂಧಿಕರನ್ನು ನೆನೆದು ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ. ಎಮ್ಮೆಹಟ್ಟಿ ಗ್ರಾಮದ ಶಾಲಾ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಎಮ್ಮೆಹಟ್ಟಿ ಗ್ರಾಮದ ಹಿಂದೂ ರುದ್ರಭೂಮಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆದಿದೆ.

ಇದನ್ನೂ ಓದಿ:ದೇವರ ದರ್ಶನ ಬಳಿಕ ಸೆಲ್ಫಿ ಫೋಟೋ ಹಾಕಿದ್ದ.. ಕರುಣಾಜನಕ ಕತೆ ಹೇಳ್ತಿದೆ 13 ಜನರ ಬಲಿ ಪಡೆದ ಅಪಘಾತ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment