ಮುಜುಗರದಿಂದ ಪಾರಾಗಲು ಹೆಚ್ಡಿಕೆ ಮೂರು ದಿನ ಟ್ರಿಪ್
ಹೆಚ್ಡಿಕೆ ಫ್ಯಾಮಿಲಿ ದಿಢೀರ್ ಟ್ರಿಪ್ ಹೋಗಲು ಕಾರಣವೇನು?
ಕಾಂಗ್ರೆಸ್ ಸಚಿವರು, ನಾಯಕರು ವಾಗ್ದಾಳಿ ನಡೆಸುವ ಭೀತಿ..!
ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ತಮ್ಮಿಡೀ ಕುಟುಂಬ ಸಮೇತ ರೆಸಾರ್ಟ್ ಒಂದಕ್ಕೆ ಪ್ರಯಾಣ ಬೆಳೆಸಿದ್ದಾರೆ. ಪ್ರಜ್ವಲ್ ಆಗಮನ ಮತ್ತು ಆ ಬಳಿಕ ನಡೆಯುವ ರಾಜಕೀಯ ಹೀಟ್ನಿಂದ ತಪ್ಪಿಸಿಕೊಳ್ಳಲು, ಮುಜುಗರದಿಂದ ಪಾರಾಗಲು ಕುಟುಂಬ ಸಮೇತ ಪ್ರವಾಸ ಹೋಗಿದೆ. ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್, ಸೊಸೆ ರೇವತಿ ಸೇರಿ ಇಡೀ ಕುಟುಂಬವೇ ಪ್ರವಾಸಕ್ಕೆ ತೆರಳಿದೆ ಅನ್ನೋ ಮಾಹಿತಿ ಸಿಕ್ಕಿದೆ.
ತಿಂಗಳು ಕಳೆದ್ರೂ ಪ್ರಜ್ವಲ್ ಪೆನ್ಡ್ರೈವ್ ಪ್ರಕರಣಕ್ಕೆ ಮುಕ್ತಿನೇ ಸಿಗಲಿಲ್ಲ. ಹಾಸನದಲ್ಲಿ ಅಶ್ಲೀಲ ಎಬ್ಬಿಸಿ ಜರ್ಮನಿಯಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ಕೇಸ್, ರಾಜ್ಯದಲ್ಲಿ ತಲೆ ಎತ್ತಿ ಮೆರೆದಿದ್ದ ಗೌಡರ ಕುಟುಂಬವನ್ನ ತಲೆತಗ್ಗಿಸುವಂತೆ ಮಾಡಿದೆ. ರೇವಣ್ಣ ಜೈಲು ಪರೇಡ್ ಮುಗಿಸಿ ದೇಗುಲ ಪ್ರದಕ್ಷಿಣೆಯಲ್ಲಿ ಮುಳುಗಿದ್ದಾರೆ. ಬೇಲ್ಗೆ ಅರ್ಜಿ ಸಲ್ಲಿಸಿ ಭವಾನಿ ಸಹ ಕಾಣಿಸಿಲ್ಲ. ಸಹೋದರ ಸೂರಜ್ ಅದೆಲ್ಲಿದ್ದಾರೆ ಅನ್ನೋದು ಕುಟುಂಬಕ್ಕಷ್ಟೇ ಗೊತ್ತು.
ಪ್ರವಾಸದಲ್ಲಿ ಹೆಚ್ಡಿಕೆ ಫ್ಯಾಮಿಲಿ!
ದಳ ಸಾರಥ್ಯ ಹೊತ್ತಿರುವ ಕುಮಾರಸ್ವಾಮಿಗೆ ಈ ಪ್ರಕರಣ ಇನ್ನಿಲ್ಲದಂತೆ ಕಾಡಿದ್ದು ಸುಳ್ಳಲ್ಲ. ನಿತ್ಯವೂ ವಿರೋಧಿಗಳಿಗೆ ಪ್ರತ್ಯುತ್ತರ ಕೊಡುವ ಜವಾಬ್ದಾರಿ ನಿಭಾಯಿಸಿದ್ರು. ಹಿಯಾಳಿಕೆ, ಅವಮಾನ, ಅಸಮಾಧಾನಗಳಿಂದ ಬೆಂಡಾಡ ಹೆಚ್ಡಿಕೆ, 2ನೇ ಹಂತದ ಎಲೆಕ್ಷನ್ ಪ್ರಚಾರದಲ್ಲಿ ಕಾಣಿಸಿಕೊಂಡಿದ್ದೆ ಇಲ್ಲ. ಸದ್ಯ ಪರಿಸ್ಥಿತಿ ಕಾರ್ಮೋಡಕ್ಕೆ ಸರಿಯುತ್ತಿದ್ದು, ರಾಜಕೀಯ ಹವಾಮಾನ ಮತ್ತಷ್ಟು ಹೀಟ್ ಆಗಲಿದೆ. ಈ ಹೀಟ್ನಿಂದ ಬಚಾವ್ ಆಗಲು ಕುಮಾರಸ್ವಾಮಿ, ಪ್ರವಾಸ ಮಾರ್ಗ ತುಳಿದಿದ್ದಾರೆ.
ಮಾಜಿ ಸಿಎಂ ಹೆಚ್ಡಿಕೆ ಕುಟುಂಬ ಸಮೇತ ಪ್ರವಾಸ ಹೊಸದೇನಲ್ಲ. ಈ ಹಿಂದೆ ಯುರೋಪ್, ಅರಬ್ ಕಂಟ್ರಿಗಳಿಗೆ ಫ್ಯಾಮಿಲಿ ಟ್ರಿಪ್ ಮಾಡಿದ್ರು. ಆದ್ರೆ, ಆಗಿನ ಪರಿಸ್ಥಿತಿ, ಈಗಿನ ಪರಿಸ್ಥಿತಿ ಭಿನ್ನ. ಈಗ ಪೆನ್ಡ್ರೈವ್ ಪ್ರಕರಣ, ಮಾಜಿ ಸಿಎಂ ಹೆಚ್ಡಿಕೆಯನ್ನ ಸಿಕ್ಕಾಪಟ್ಟೆ ಬೇಸರ ತರಿಸಿದೆ. ಸದ್ಯ ಪ್ರಜ್ವಲ್ ಆಗಮನದ ಹಿನ್ನೆಲೆ, ತಮ್ಮ ಮುಖ ದರ್ಶನಕ್ಕೂ ಅವಕಾಶ ಸಿಗದಂತೆ ದೂರ ತೆರಳ್ತಿದ್ದಾರೆ.
ಪ್ರಜ್ವಲ್ ಬಂಧನವಾದ್ರೆ ಮತ್ತೊಮ್ಮೆ ಕುಟುಂಬಕ್ಕೆ ಮುಜುಗರ ತರಲಿದೆ. ಕಾಂಗ್ರೆಸ್ ಸಚಿವರು, ನಾಯಕರ ವಾಗ್ದಾಳಿಗಳನ್ನ ಎದುರಿಸೋದು ಕಷ್ಟ. ಅಲ್ಲದೆ, ಲೈಂಗಿಕ ಕೇಸ್ನಲ್ಲಿ ನಾಯಕರ ಆರೋಪಗಳಿಗೆ ಉತ್ತರ ನೀಡೋದು ಅಸಾಧ್ಯ. ಜೊತೆಗೆ ಪ್ರಜ್ವಲ್ ಬಂಧಿಸಿದ್ರೆ ಕುಟುಂಬಸ್ಥರು ಬೇಸರ ಆಗಲಿದ್ದು ಅದು ಸಹ ಆತಂಕ ಇದೆ. ಇದೇ ಕಾರಣಕ್ಕೆ ಕುಟುಂಬಸ್ಥರ ಹಿತ ಕಾಪಾಡಲು ಟೂರ್ ಹೊರಟಿರುವ ಸಾಧ್ಯತೆ ಇದೆ.
ಇದನ್ನೂ ಓದಿ: 2024ರ ಟಿ20 ವಿಶ್ವಕಪ್.. ಟೀಮ್ ಇಂಡಿಯಾಗೆ ಬಂತು ಆನೆಬಲ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮುಜುಗರದಿಂದ ಪಾರಾಗಲು ಹೆಚ್ಡಿಕೆ ಮೂರು ದಿನ ಟ್ರಿಪ್
ಹೆಚ್ಡಿಕೆ ಫ್ಯಾಮಿಲಿ ದಿಢೀರ್ ಟ್ರಿಪ್ ಹೋಗಲು ಕಾರಣವೇನು?
ಕಾಂಗ್ರೆಸ್ ಸಚಿವರು, ನಾಯಕರು ವಾಗ್ದಾಳಿ ನಡೆಸುವ ಭೀತಿ..!
ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ತಮ್ಮಿಡೀ ಕುಟುಂಬ ಸಮೇತ ರೆಸಾರ್ಟ್ ಒಂದಕ್ಕೆ ಪ್ರಯಾಣ ಬೆಳೆಸಿದ್ದಾರೆ. ಪ್ರಜ್ವಲ್ ಆಗಮನ ಮತ್ತು ಆ ಬಳಿಕ ನಡೆಯುವ ರಾಜಕೀಯ ಹೀಟ್ನಿಂದ ತಪ್ಪಿಸಿಕೊಳ್ಳಲು, ಮುಜುಗರದಿಂದ ಪಾರಾಗಲು ಕುಟುಂಬ ಸಮೇತ ಪ್ರವಾಸ ಹೋಗಿದೆ. ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್, ಸೊಸೆ ರೇವತಿ ಸೇರಿ ಇಡೀ ಕುಟುಂಬವೇ ಪ್ರವಾಸಕ್ಕೆ ತೆರಳಿದೆ ಅನ್ನೋ ಮಾಹಿತಿ ಸಿಕ್ಕಿದೆ.
ತಿಂಗಳು ಕಳೆದ್ರೂ ಪ್ರಜ್ವಲ್ ಪೆನ್ಡ್ರೈವ್ ಪ್ರಕರಣಕ್ಕೆ ಮುಕ್ತಿನೇ ಸಿಗಲಿಲ್ಲ. ಹಾಸನದಲ್ಲಿ ಅಶ್ಲೀಲ ಎಬ್ಬಿಸಿ ಜರ್ಮನಿಯಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ಕೇಸ್, ರಾಜ್ಯದಲ್ಲಿ ತಲೆ ಎತ್ತಿ ಮೆರೆದಿದ್ದ ಗೌಡರ ಕುಟುಂಬವನ್ನ ತಲೆತಗ್ಗಿಸುವಂತೆ ಮಾಡಿದೆ. ರೇವಣ್ಣ ಜೈಲು ಪರೇಡ್ ಮುಗಿಸಿ ದೇಗುಲ ಪ್ರದಕ್ಷಿಣೆಯಲ್ಲಿ ಮುಳುಗಿದ್ದಾರೆ. ಬೇಲ್ಗೆ ಅರ್ಜಿ ಸಲ್ಲಿಸಿ ಭವಾನಿ ಸಹ ಕಾಣಿಸಿಲ್ಲ. ಸಹೋದರ ಸೂರಜ್ ಅದೆಲ್ಲಿದ್ದಾರೆ ಅನ್ನೋದು ಕುಟುಂಬಕ್ಕಷ್ಟೇ ಗೊತ್ತು.
ಪ್ರವಾಸದಲ್ಲಿ ಹೆಚ್ಡಿಕೆ ಫ್ಯಾಮಿಲಿ!
ದಳ ಸಾರಥ್ಯ ಹೊತ್ತಿರುವ ಕುಮಾರಸ್ವಾಮಿಗೆ ಈ ಪ್ರಕರಣ ಇನ್ನಿಲ್ಲದಂತೆ ಕಾಡಿದ್ದು ಸುಳ್ಳಲ್ಲ. ನಿತ್ಯವೂ ವಿರೋಧಿಗಳಿಗೆ ಪ್ರತ್ಯುತ್ತರ ಕೊಡುವ ಜವಾಬ್ದಾರಿ ನಿಭಾಯಿಸಿದ್ರು. ಹಿಯಾಳಿಕೆ, ಅವಮಾನ, ಅಸಮಾಧಾನಗಳಿಂದ ಬೆಂಡಾಡ ಹೆಚ್ಡಿಕೆ, 2ನೇ ಹಂತದ ಎಲೆಕ್ಷನ್ ಪ್ರಚಾರದಲ್ಲಿ ಕಾಣಿಸಿಕೊಂಡಿದ್ದೆ ಇಲ್ಲ. ಸದ್ಯ ಪರಿಸ್ಥಿತಿ ಕಾರ್ಮೋಡಕ್ಕೆ ಸರಿಯುತ್ತಿದ್ದು, ರಾಜಕೀಯ ಹವಾಮಾನ ಮತ್ತಷ್ಟು ಹೀಟ್ ಆಗಲಿದೆ. ಈ ಹೀಟ್ನಿಂದ ಬಚಾವ್ ಆಗಲು ಕುಮಾರಸ್ವಾಮಿ, ಪ್ರವಾಸ ಮಾರ್ಗ ತುಳಿದಿದ್ದಾರೆ.
ಮಾಜಿ ಸಿಎಂ ಹೆಚ್ಡಿಕೆ ಕುಟುಂಬ ಸಮೇತ ಪ್ರವಾಸ ಹೊಸದೇನಲ್ಲ. ಈ ಹಿಂದೆ ಯುರೋಪ್, ಅರಬ್ ಕಂಟ್ರಿಗಳಿಗೆ ಫ್ಯಾಮಿಲಿ ಟ್ರಿಪ್ ಮಾಡಿದ್ರು. ಆದ್ರೆ, ಆಗಿನ ಪರಿಸ್ಥಿತಿ, ಈಗಿನ ಪರಿಸ್ಥಿತಿ ಭಿನ್ನ. ಈಗ ಪೆನ್ಡ್ರೈವ್ ಪ್ರಕರಣ, ಮಾಜಿ ಸಿಎಂ ಹೆಚ್ಡಿಕೆಯನ್ನ ಸಿಕ್ಕಾಪಟ್ಟೆ ಬೇಸರ ತರಿಸಿದೆ. ಸದ್ಯ ಪ್ರಜ್ವಲ್ ಆಗಮನದ ಹಿನ್ನೆಲೆ, ತಮ್ಮ ಮುಖ ದರ್ಶನಕ್ಕೂ ಅವಕಾಶ ಸಿಗದಂತೆ ದೂರ ತೆರಳ್ತಿದ್ದಾರೆ.
ಪ್ರಜ್ವಲ್ ಬಂಧನವಾದ್ರೆ ಮತ್ತೊಮ್ಮೆ ಕುಟುಂಬಕ್ಕೆ ಮುಜುಗರ ತರಲಿದೆ. ಕಾಂಗ್ರೆಸ್ ಸಚಿವರು, ನಾಯಕರ ವಾಗ್ದಾಳಿಗಳನ್ನ ಎದುರಿಸೋದು ಕಷ್ಟ. ಅಲ್ಲದೆ, ಲೈಂಗಿಕ ಕೇಸ್ನಲ್ಲಿ ನಾಯಕರ ಆರೋಪಗಳಿಗೆ ಉತ್ತರ ನೀಡೋದು ಅಸಾಧ್ಯ. ಜೊತೆಗೆ ಪ್ರಜ್ವಲ್ ಬಂಧಿಸಿದ್ರೆ ಕುಟುಂಬಸ್ಥರು ಬೇಸರ ಆಗಲಿದ್ದು ಅದು ಸಹ ಆತಂಕ ಇದೆ. ಇದೇ ಕಾರಣಕ್ಕೆ ಕುಟುಂಬಸ್ಥರ ಹಿತ ಕಾಪಾಡಲು ಟೂರ್ ಹೊರಟಿರುವ ಸಾಧ್ಯತೆ ಇದೆ.
ಇದನ್ನೂ ಓದಿ: 2024ರ ಟಿ20 ವಿಶ್ವಕಪ್.. ಟೀಮ್ ಇಂಡಿಯಾಗೆ ಬಂತು ಆನೆಬಲ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ