ಹಾಸನ ಅಶ್ಲೀಲ ವಿಡಿಯೋ ಪ್ರಕರಣದ ಬಗ್ಗೆ ಹೆಚ್ಡಿಕೆ ಮಾತು
ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ
ತಪ್ಪು ಮಾಡಿದ್ರೆ ತಪ್ಪಿಗೆ ತಲೆ ಬಾಗಲೇಬೇಕು ಎಂದ ಕುಮಾರಸ್ವಾಮಿ
ಪ್ರಜ್ವಲ್ ರೇವಣ್ಣರದ್ದು ತಪ್ಪಿದ್ದರೆ ಹ್ಯಾಂಗ್ ಮಾಡಿ. ತಪ್ಪು ಕೆಲಸಗಳಿಗೆ ನಾನು ಯಾವತ್ತೂ ಬೆಂಬಲ ನೀಡೋದಿಲ್ಲ. ಅವರನ್ನು ವಹಿಸಿಕೊಂಡು ಬರುವಂತಹ ಪ್ರಶ್ನೆಯೇ ಇಲ್ಲ. ಅವರು ತಪ್ಪು ಮಾಡಿದ್ರೆ ಆ ತಪ್ಪಿಗೆ ತಲೆ ಬಾಗಲೇಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಹಾಸನ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ನಿಮ್ಮ ಎಸ್ಐಟಿ ತನಿಖೆ ಏನೆಂದು ನನಗೆ ಗೊತ್ತು. ಈ ಹಿಂದೆ ಡ್ರಗ್ ಪ್ರಕರಣವನ್ನು ನೋಡಿದ್ದೇವೆ. ಒಂದು ಎರಡು ತಿಂಗಳ ಕಾಲ ನಟಿಯರ ಬಗ್ಗೆ ಸುದ್ದಿ ಆಯಿತು.
ಇದನ್ನೂ ಓದಿ: ಅಭಿಮಾನಿಗಳಿಗೆ ಬಿಗ್ ಶಾಕ್.. ಪೊಲೀಸರ ಮುಂದೆ ಹಾಜರಾದ ರಶ್ಮಿಕಾ ಮಂದಣ್ಣ.. ಏನಾಯ್ತು..
ಈಗ ಆ ಪ್ರಕರಣ ಏನಾಯಿತು? ಸತ್ಯಾಂಶ ಏನು ಹೊರಬಂತು ಎಂದು ಪ್ರಶ್ನಿಸಿದ ಅವರು, ನ್ಯಾಯದ ವಿಚಾರದಲ್ಲಿ ನನ್ನ ತಕರಾರು ಇಲ್ಲ ಎಂದರು. ಈ ಪ್ರಕರಣವನ್ನು ಇಟ್ಕೊಂಡು ಹಲವಾರು ಕುಟುಂಬಗಳ ಮಾನ ಹರಾಜು ಹಾಕುತ್ತಿದ್ದೀರಿ. ಹೆಣ್ಣು ಮಕ್ಕಳ ಮುಖವನ್ನು ಬ್ಲರ್ ಮಾಡದೇ ಎಲ್ಲಾ ಕಡೆ ಇಟ್ಟಿದ್ದೀರಿ. ಅವರ ಕುಟುಂಬದ ಬದುಕು ಏನಾಗಬೇಕು? ನಿಮ್ಮ ಕುಟುಂಬದಲ್ಲೇ ಯಾವುದಾದರು ಹಣ್ಮಕ್ಕಳು ಸಿಕ್ಕಿಕೊಂಡಿದ್ದರೆ ಏನಾಗಬೇಕು ಡಿ.ಕೆ.ಶಿವಕುಮಾರ್ ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಬಿಗ್ ಶಾಕ್.. ನೀವು ಓದಲೇಬೇಕಾದ ಶಾಕಿಂಗ್ ನ್ಯೂಸ್..!
ಇವತ್ತು ಹೆಣ್ಮಕ್ಕಳನ್ನು ಬೀದಿಗೆ ತಂದು ನಿಲ್ಲಿಸಿದ್ದೀರಿ. ಭಗವಂತ ನಿಮಗೆ ಒಳ್ಳೆಯದು ಮಾಡ್ತಾನಾ? ಪ್ರಜ್ವಲ್ ರೇವಣ್ಣರದ್ದು ತಪ್ಪಿದ್ದರೆ ಹ್ಯಾಂಗ್ ಮಾಡಿ. ಅದಕ್ಕೆಲ್ಲ ನಾನು ಬೆಂಬಲ ಕೊಡೋದಿಲ್ಲ. ನಮ್ಮ ಕುಟುಂಬದ ವರ್ಚಸ್ಸನ್ನು ಹಾಳು ಮಾಡಿದ್ದೀರಿ. ಲಕ್ಷಾಂತರ ಕುಟುಂಬಗಳಿಗೆ ಅನ್ನ ಕೊಟ್ಟಿದ್ದೇವೆ. ದೇವೇಗೌಡ ಹೆಸರಲ್ಲಿ ಲಕ್ಷಾಂತರ ಕುಟುಂಬಗಳು ಬದುಕುತ್ತಿವೆ. ನಿಮ್ಮಿಂದ ಕಲಿಯಬೇಕಿಲ್ಲ. ನಿಮ್ಮ ದುರಂಹಕಾರ ಭಾರೀ ದಿನ ಇರೋದಿಲ್ಲ. ಚಕ್ರ ಸುತ್ತುತ್ತ ಇರುತ್ತದೆ. ಸತ್ಯಾಂಶವನ್ನು ಹೊರ ತನ್ನಿ. ಆದರೆ ಅಧಿಕಾರ ದುರುಪಯೋಗ ಪಡಿಸಿಕೊಳ್ಳಬೇಡಿ. ಎಸ್ಐಟಿ ರಚಿಸಿಕೊಂಡು ನಿಮಗೆ ಬೇಕಾದ ವರದಿ ತರೋದಲ್ಲ ಎಂದು ಟಾಂಗ್ ನೀಡಿದ್ದಾರೆ.
ಇದನ್ನೂ ಓದಿ: ಖರ್ಚಿಗಾಗಿ ಅಮ್ಮನಿಗೆ 200 ರೂಪಾಯಿ ಕೊಟ್ಟ ಮಗ.. ಇಬ್ಬರು ಮಕ್ಕಳ ಜೊತೆ ಹಾಳು ಬಾವಿಗೆ ಹಾರಿದ ಪತ್ನಿ..
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಹಾಸನ ಅಶ್ಲೀಲ ವಿಡಿಯೋ ಪ್ರಕರಣದ ಬಗ್ಗೆ ಹೆಚ್ಡಿಕೆ ಮಾತು
ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ
ತಪ್ಪು ಮಾಡಿದ್ರೆ ತಪ್ಪಿಗೆ ತಲೆ ಬಾಗಲೇಬೇಕು ಎಂದ ಕುಮಾರಸ್ವಾಮಿ
ಪ್ರಜ್ವಲ್ ರೇವಣ್ಣರದ್ದು ತಪ್ಪಿದ್ದರೆ ಹ್ಯಾಂಗ್ ಮಾಡಿ. ತಪ್ಪು ಕೆಲಸಗಳಿಗೆ ನಾನು ಯಾವತ್ತೂ ಬೆಂಬಲ ನೀಡೋದಿಲ್ಲ. ಅವರನ್ನು ವಹಿಸಿಕೊಂಡು ಬರುವಂತಹ ಪ್ರಶ್ನೆಯೇ ಇಲ್ಲ. ಅವರು ತಪ್ಪು ಮಾಡಿದ್ರೆ ಆ ತಪ್ಪಿಗೆ ತಲೆ ಬಾಗಲೇಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಹಾಸನ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ನಿಮ್ಮ ಎಸ್ಐಟಿ ತನಿಖೆ ಏನೆಂದು ನನಗೆ ಗೊತ್ತು. ಈ ಹಿಂದೆ ಡ್ರಗ್ ಪ್ರಕರಣವನ್ನು ನೋಡಿದ್ದೇವೆ. ಒಂದು ಎರಡು ತಿಂಗಳ ಕಾಲ ನಟಿಯರ ಬಗ್ಗೆ ಸುದ್ದಿ ಆಯಿತು.
ಇದನ್ನೂ ಓದಿ: ಅಭಿಮಾನಿಗಳಿಗೆ ಬಿಗ್ ಶಾಕ್.. ಪೊಲೀಸರ ಮುಂದೆ ಹಾಜರಾದ ರಶ್ಮಿಕಾ ಮಂದಣ್ಣ.. ಏನಾಯ್ತು..
ಈಗ ಆ ಪ್ರಕರಣ ಏನಾಯಿತು? ಸತ್ಯಾಂಶ ಏನು ಹೊರಬಂತು ಎಂದು ಪ್ರಶ್ನಿಸಿದ ಅವರು, ನ್ಯಾಯದ ವಿಚಾರದಲ್ಲಿ ನನ್ನ ತಕರಾರು ಇಲ್ಲ ಎಂದರು. ಈ ಪ್ರಕರಣವನ್ನು ಇಟ್ಕೊಂಡು ಹಲವಾರು ಕುಟುಂಬಗಳ ಮಾನ ಹರಾಜು ಹಾಕುತ್ತಿದ್ದೀರಿ. ಹೆಣ್ಣು ಮಕ್ಕಳ ಮುಖವನ್ನು ಬ್ಲರ್ ಮಾಡದೇ ಎಲ್ಲಾ ಕಡೆ ಇಟ್ಟಿದ್ದೀರಿ. ಅವರ ಕುಟುಂಬದ ಬದುಕು ಏನಾಗಬೇಕು? ನಿಮ್ಮ ಕುಟುಂಬದಲ್ಲೇ ಯಾವುದಾದರು ಹಣ್ಮಕ್ಕಳು ಸಿಕ್ಕಿಕೊಂಡಿದ್ದರೆ ಏನಾಗಬೇಕು ಡಿ.ಕೆ.ಶಿವಕುಮಾರ್ ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಬಿಗ್ ಶಾಕ್.. ನೀವು ಓದಲೇಬೇಕಾದ ಶಾಕಿಂಗ್ ನ್ಯೂಸ್..!
ಇವತ್ತು ಹೆಣ್ಮಕ್ಕಳನ್ನು ಬೀದಿಗೆ ತಂದು ನಿಲ್ಲಿಸಿದ್ದೀರಿ. ಭಗವಂತ ನಿಮಗೆ ಒಳ್ಳೆಯದು ಮಾಡ್ತಾನಾ? ಪ್ರಜ್ವಲ್ ರೇವಣ್ಣರದ್ದು ತಪ್ಪಿದ್ದರೆ ಹ್ಯಾಂಗ್ ಮಾಡಿ. ಅದಕ್ಕೆಲ್ಲ ನಾನು ಬೆಂಬಲ ಕೊಡೋದಿಲ್ಲ. ನಮ್ಮ ಕುಟುಂಬದ ವರ್ಚಸ್ಸನ್ನು ಹಾಳು ಮಾಡಿದ್ದೀರಿ. ಲಕ್ಷಾಂತರ ಕುಟುಂಬಗಳಿಗೆ ಅನ್ನ ಕೊಟ್ಟಿದ್ದೇವೆ. ದೇವೇಗೌಡ ಹೆಸರಲ್ಲಿ ಲಕ್ಷಾಂತರ ಕುಟುಂಬಗಳು ಬದುಕುತ್ತಿವೆ. ನಿಮ್ಮಿಂದ ಕಲಿಯಬೇಕಿಲ್ಲ. ನಿಮ್ಮ ದುರಂಹಕಾರ ಭಾರೀ ದಿನ ಇರೋದಿಲ್ಲ. ಚಕ್ರ ಸುತ್ತುತ್ತ ಇರುತ್ತದೆ. ಸತ್ಯಾಂಶವನ್ನು ಹೊರ ತನ್ನಿ. ಆದರೆ ಅಧಿಕಾರ ದುರುಪಯೋಗ ಪಡಿಸಿಕೊಳ್ಳಬೇಡಿ. ಎಸ್ಐಟಿ ರಚಿಸಿಕೊಂಡು ನಿಮಗೆ ಬೇಕಾದ ವರದಿ ತರೋದಲ್ಲ ಎಂದು ಟಾಂಗ್ ನೀಡಿದ್ದಾರೆ.
ಇದನ್ನೂ ಓದಿ: ಖರ್ಚಿಗಾಗಿ ಅಮ್ಮನಿಗೆ 200 ರೂಪಾಯಿ ಕೊಟ್ಟ ಮಗ.. ಇಬ್ಬರು ಮಕ್ಕಳ ಜೊತೆ ಹಾಳು ಬಾವಿಗೆ ಹಾರಿದ ಪತ್ನಿ..
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್