newsfirstkannada.com

ಕೇಂದ್ರಕ್ಕೆ ಕುಮಾರಣ್ಣ ಬೇಕು, ಸಚಿವ ಸ್ಥಾನ ಗ್ಯಾರಂಟಿ -ಭವಿಷ್ಯ ನುಡಿದ ಪ್ರತಾಪ್ ಸಿಂಹ

Share :

Published March 30, 2024 at 2:40pm

Update March 30, 2024 at 2:43pm

    ಅಂಬರೀಶ್ ಅಣ್ಣನ ನಂತರ ಕೇಂದ್ರ ಸಚಿವ ಸ್ಥಾನ ಮಂಡ್ಯಕ್ಕೆ ಸಿಕ್ಕಿಲ್ಲ

    ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ನ್ಯಾಯ ಕೊಟ್ಟಿದ್ದು ದೇವೇಗೌಡ್ರು

    ಕೇಂದ್ರಕ್ಕೆ ಒಳ್ಳೆಯ ನಾಯಕತ್ವ ಬೇಕು ಎಂದ ಹಾಲಿ ಸಂಸದ ಪ್ರತಾಪ್ ಸಿಂಹ

ಮಂಡ್ಯ: ಕೇಂದ್ರಕ್ಕೆ ಕುಮಾರಣ್ಣ ಬೇಕು, ಮಂಡ್ಯ ಜನ ಕುಮಾರಣ್ಣನ್ನ ಕೈ ಹಿಡಿಯುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಮಂಡ್ಯದ ನಾಗಮಂಗಲದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರತಾಪ್ ಸಿಂಹ.. ಇನ್ನೊಬ್ಬರನ್ನ ಹಿಯಾಳಿಸುವ ಗುಣ ಕಾಂಗ್ರೆಸ್ ನಾಯಕರ DNAಯಲ್ಲಿಯೇ ಇದೆ! ಚಾಮರಾಜನಗರ, ಮೈಸೂರಲ್ಲೂ ಕಾಂಗ್ರೆಸ್​ಗೆ ಹೀನಾಯವಾಗಿ ಸೋಲಾಗುತ್ತೆ.

ಮಾಜಿ ಸಿಎಂ ಕುಮಾರಸ್ವಾಮಿ ಮಂಡ್ಯ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದಿದ್ದೇನೆ. ನಾಗಮಂಗಲದಲ್ಲಿ ಪ್ರಚಾರ ಸಭೆ ನಡೆಯುತ್ತಿದೆ. ನಿಶ್ಚಿತವಾಗಿ ಮಂಡ್ಯ ಕ್ಷೇತ್ರದಲ್ಲಿ ಕುಮಾರಣ್ಣ ಗೆದ್ದು ಕೇಂದ್ರದಲ್ಲಿ ಒಳ್ಳೆಯ ಖಾತೆ ಪಡೆದು ಸಚಿವರಾಗುತ್ತಾರೆ. ರಾಜ್ಯಕ್ಕೆ ಹಲವಾರು ವಿಚಾರಗಳಲ್ಲಿ ಕೇಂದ್ರದಿಂದ ಸ್ಪಂದನೆ ಸಿಗುತ್ತದೆ. ಮಂಡ್ಯ ಜನರು ಕೂಡ ಉತ್ಸಕರಾಗಿದ್ದಾರೆ. ಅಂಬರೀಶ್ ಅಣ್ಣನ ನಂತರ ಕೇಂದ್ರ ಸಚಿವ ಸ್ಥಾನ ಮಂಡ್ಯಕ್ಕೆ ಸಿಕ್ಕಿಲ್ಲ. ಈ ಬಾರಿ ನಿಶ್ಚಿತವಾಗಿ ಕೇಂದ್ರ ಸಚಿವ ಸ್ಥಾನ ಸಿಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 28 ಲೋಕಸಭಾ ಕ್ಷೇತ್ರದ ಕಾಂಗ್ರೆಸ್, BJP-JDS ಅಭ್ಯರ್ಥಿಗಳು ಯಾರು? ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ!

ಮಂಡ್ಯ ಜನ ಕುಮಾರಣ್ಣ ಅವರನ್ನ ಕೈ ಹಿಡಿಯುತ್ತಾರೆ ವಿಶ್ವಾಸ ಇದೆ. ದೇಶಕ್ಕೆ ಒಂದು ಒಳ್ಳೆಯ ನಾಯಕತ್ವ ಕೊಡುವ ಚುನಾವಣೆ. 2004 ನಂತರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ ಜನರು ಕೊಟ್ಟಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. 28ಕ್ಕೆ 28 ಸ್ಥಾನ ಗೆಲ್ಲುವ ಗುರಿ ಇಟ್ಟಿಕೊಂಡಿದ್ದೇವೆ. ಕುಮಾರಸ್ವಾಮಿ ಕೇಂದ್ರಕ್ಕೆ ಹೋಗಿ ಒಳ್ಳೆಯ ಖಾತೆ ಪಡೆದು ಕರ್ನಾಟಕಕ್ಕೆ ನ್ಯಾಯ ಕೊಡಬೇಕು. ಕೇಂದ್ರಕ್ಕೆ ಒಳ್ಳೆಯ ನಾಯಕತ್ವ ಬೇಕು. ಕುಮಾರಣ್ಣ ಕೇಂದ್ರಕ್ಕೆ ಹೋಗಬೇಕು ಅಷ್ಟೇ. ಕುಮಾರಣ್ಣ ಜನರ ಮೇಲೆ ಕಾಳಜಿ ಇಟ್ಟುಕೊಂಡು ಬಂದಿದ್ದಾರೆ. ಕುಮಾರಣ್ಣ ಹೊರಗಿನವರಲ್ಲ, ದೇವೇಗೌಡ್ರು ಹೊರಗಿನವರಲ್ಲ. ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ನ್ಯಾಯ ಕೊಟ್ಟಿದ್ದು ದೇವೇಗೌಡ್ರು. ನಾನು ಬಿಜೆಪಿಗನಾಗಿ ಈ ವಿಷಯ ಹೇಳ್ತೇನೆ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೇಂದ್ರಕ್ಕೆ ಕುಮಾರಣ್ಣ ಬೇಕು, ಸಚಿವ ಸ್ಥಾನ ಗ್ಯಾರಂಟಿ -ಭವಿಷ್ಯ ನುಡಿದ ಪ್ರತಾಪ್ ಸಿಂಹ

https://newsfirstlive.com/wp-content/uploads/2024/03/HDK-5.jpg

    ಅಂಬರೀಶ್ ಅಣ್ಣನ ನಂತರ ಕೇಂದ್ರ ಸಚಿವ ಸ್ಥಾನ ಮಂಡ್ಯಕ್ಕೆ ಸಿಕ್ಕಿಲ್ಲ

    ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ನ್ಯಾಯ ಕೊಟ್ಟಿದ್ದು ದೇವೇಗೌಡ್ರು

    ಕೇಂದ್ರಕ್ಕೆ ಒಳ್ಳೆಯ ನಾಯಕತ್ವ ಬೇಕು ಎಂದ ಹಾಲಿ ಸಂಸದ ಪ್ರತಾಪ್ ಸಿಂಹ

ಮಂಡ್ಯ: ಕೇಂದ್ರಕ್ಕೆ ಕುಮಾರಣ್ಣ ಬೇಕು, ಮಂಡ್ಯ ಜನ ಕುಮಾರಣ್ಣನ್ನ ಕೈ ಹಿಡಿಯುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಮಂಡ್ಯದ ನಾಗಮಂಗಲದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರತಾಪ್ ಸಿಂಹ.. ಇನ್ನೊಬ್ಬರನ್ನ ಹಿಯಾಳಿಸುವ ಗುಣ ಕಾಂಗ್ರೆಸ್ ನಾಯಕರ DNAಯಲ್ಲಿಯೇ ಇದೆ! ಚಾಮರಾಜನಗರ, ಮೈಸೂರಲ್ಲೂ ಕಾಂಗ್ರೆಸ್​ಗೆ ಹೀನಾಯವಾಗಿ ಸೋಲಾಗುತ್ತೆ.

ಮಾಜಿ ಸಿಎಂ ಕುಮಾರಸ್ವಾಮಿ ಮಂಡ್ಯ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದಿದ್ದೇನೆ. ನಾಗಮಂಗಲದಲ್ಲಿ ಪ್ರಚಾರ ಸಭೆ ನಡೆಯುತ್ತಿದೆ. ನಿಶ್ಚಿತವಾಗಿ ಮಂಡ್ಯ ಕ್ಷೇತ್ರದಲ್ಲಿ ಕುಮಾರಣ್ಣ ಗೆದ್ದು ಕೇಂದ್ರದಲ್ಲಿ ಒಳ್ಳೆಯ ಖಾತೆ ಪಡೆದು ಸಚಿವರಾಗುತ್ತಾರೆ. ರಾಜ್ಯಕ್ಕೆ ಹಲವಾರು ವಿಚಾರಗಳಲ್ಲಿ ಕೇಂದ್ರದಿಂದ ಸ್ಪಂದನೆ ಸಿಗುತ್ತದೆ. ಮಂಡ್ಯ ಜನರು ಕೂಡ ಉತ್ಸಕರಾಗಿದ್ದಾರೆ. ಅಂಬರೀಶ್ ಅಣ್ಣನ ನಂತರ ಕೇಂದ್ರ ಸಚಿವ ಸ್ಥಾನ ಮಂಡ್ಯಕ್ಕೆ ಸಿಕ್ಕಿಲ್ಲ. ಈ ಬಾರಿ ನಿಶ್ಚಿತವಾಗಿ ಕೇಂದ್ರ ಸಚಿವ ಸ್ಥಾನ ಸಿಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 28 ಲೋಕಸಭಾ ಕ್ಷೇತ್ರದ ಕಾಂಗ್ರೆಸ್, BJP-JDS ಅಭ್ಯರ್ಥಿಗಳು ಯಾರು? ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ!

ಮಂಡ್ಯ ಜನ ಕುಮಾರಣ್ಣ ಅವರನ್ನ ಕೈ ಹಿಡಿಯುತ್ತಾರೆ ವಿಶ್ವಾಸ ಇದೆ. ದೇಶಕ್ಕೆ ಒಂದು ಒಳ್ಳೆಯ ನಾಯಕತ್ವ ಕೊಡುವ ಚುನಾವಣೆ. 2004 ನಂತರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ ಜನರು ಕೊಟ್ಟಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. 28ಕ್ಕೆ 28 ಸ್ಥಾನ ಗೆಲ್ಲುವ ಗುರಿ ಇಟ್ಟಿಕೊಂಡಿದ್ದೇವೆ. ಕುಮಾರಸ್ವಾಮಿ ಕೇಂದ್ರಕ್ಕೆ ಹೋಗಿ ಒಳ್ಳೆಯ ಖಾತೆ ಪಡೆದು ಕರ್ನಾಟಕಕ್ಕೆ ನ್ಯಾಯ ಕೊಡಬೇಕು. ಕೇಂದ್ರಕ್ಕೆ ಒಳ್ಳೆಯ ನಾಯಕತ್ವ ಬೇಕು. ಕುಮಾರಣ್ಣ ಕೇಂದ್ರಕ್ಕೆ ಹೋಗಬೇಕು ಅಷ್ಟೇ. ಕುಮಾರಣ್ಣ ಜನರ ಮೇಲೆ ಕಾಳಜಿ ಇಟ್ಟುಕೊಂಡು ಬಂದಿದ್ದಾರೆ. ಕುಮಾರಣ್ಣ ಹೊರಗಿನವರಲ್ಲ, ದೇವೇಗೌಡ್ರು ಹೊರಗಿನವರಲ್ಲ. ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ನ್ಯಾಯ ಕೊಟ್ಟಿದ್ದು ದೇವೇಗೌಡ್ರು. ನಾನು ಬಿಜೆಪಿಗನಾಗಿ ಈ ವಿಷಯ ಹೇಳ್ತೇನೆ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More