Advertisment

ಬೆಳಗ್ಗೆ ಪುಳಿಯೋಗರೆ.. ಟಿವಿ ಇಲ್ಲ.. ಜೈಲಿನಲ್ಲಿ ರೇವಣ್ಣಗೆ ಏನೆಲ್ಲ ವ್ಯವಸ್ಥೆ ಇದೆ..?

author-image
Ganesh
Updated On
ವಿಚಾರಣಾಧೀನ ಕೈದಿ ನಂಬರ್​ 4567; ನಿನ್ನೆ ರಾತ್ರಿ ರೇವಣ್ಣರ ಜೈಲಿನ ದಿನಚರಿ ಹೇಗಿತ್ತು..?
Advertisment
  • ವಿಚಾರಣಾಧೀನ ಕೈದಿ ನಂಬರ್​ 4567 ನೀಡಲಾಗಿದೆ
  • ರೇವಣ್ಣ ಅವರ ಜೈಲಿನ ದಿನಚರಿ ಹೇಗಿದೆ ಗೊತ್ತಾ?
  • ಮಹಿಳೆ ಅಪಹರಣ ಕೇಸ್​ನಲ್ಲಿ ಜೈಲು ಶಾಸಕ ಪಾಲು

ಹಾಸನ ಅಶ್ಲೀಲ ವಿಡಿಯೋ ಪ್ರಕರಣದ ಸಂತ್ರಸ್ತೆಯನ್ನ ಕಿಡ್ನಾಪ್ ಮಾಡಿದ ಆರೋಪ ಪ್ರಕರಣದಲ್ಲಿ ಹೆಚ್‌.ಡಿ. ರೇವಣ್ಣ ಸೆರೆವಾಸಕ್ಕೆ ಗುರಿಯಾಗಿದ್ದಾರೆ. 7 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದ ಹಿನ್ನೆಲೆ ಜೈಲುವಾಸಕ್ಕೆ ಹೋಗಿದ್ದಾರೆ.

Advertisment

ಪರಪ್ಪನ ಅಗ್ರಹಾರ ಜೈಲಿನಲ್ಲಿ ರೇವಣ್ಣಗೆ ‘4567’ ಎಂಬ ಕೈದಿ ನಂಬರ್​ ನೀಡಲಾಗಿದೆ. ಯುಟಿಪಿ ನಂಬರ್ ‘4567’ ಅನ್ನು ಜೈಲು ಅಧಿಕಾರಿಗಳು ನೀಡಿದ್ದಾರೆ.. ಕ್ವಾರೆಂಟೈನ್ ಜೈಲಿನ ಪ್ರತ್ಯೇಕ ಕೊಠಡಿಯಲ್ಲಿ ರೇವಣ್ಣ ನಿನ್ನೆ ರಾತ್ರಿಯನ್ನ ಕಳೆದಿದ್ದಾರೆ. ಮನೆಯವರು ತಂದು ಕೊಟ್ಟ ಬಟ್ಟೆಯನ್ನ ಪಡೆದಿರೋ ರೇವಣ್ಣ ಅದನ್ನೇ ಧರಿಸಿ ರಾತ್ರಿ ಕಳೆದಿದ್ದಾರೆ.. ಜೈಲಿನಲ್ಲಿ ರೇವಣ್ಣಗೆ ಜೈಲೂಟವನ್ನೇ ಕೊಡಲಾಗಿತ್ತು. ಜೈಲಿನ ಮೆನುವಿನಂತೆ ಮುದ್ದೆ, ಚಪಾತಿ, ರೈಸ್ ಸಾಂಬಾರ್ ನೀಡಲಾಗಿತ್ತು.. ಆದ್ರೆ, ಊಟ ನೀಡಿದ ಮೇಲೆ ಊಟವನ್ನ ಮಾಡದೇ ರೇವಣ್ಣ ಸೈಲೆಂಟ್ ಆಗಿದ್ರಂತೆ. ಕೈದಿಗಳಿಗೆ ನೀಡುವ ಊಟವನ್ನೇ ನೀಡಿದ್ದಕ್ಕೆ ಬೇಸರಗೊಂಡಿದ್ರು ಅಂತ ತಿಳಿದುಬಂದಿದೆ. ರಾಜಕಾರಣಿಯಾಗಿ ರೇವಣ್ಣ ಐಷಾರಾಮಿ ಜೀವನ ನಡೆಸಿದವರು. ಆದ್ರೀಗ ಕಿಡ್ನ್ಯಾಪ್​ ಪ್ರಕರಣದಲ್ಲಿ ರಾತ್ರಿ ಕಳೆಯಬೇಕಾದ ಪರಿಸ್ಥಿತಿ ಎದುರಾಯ್ತಲ್ಲ ಅಂತ ಬೇಸರಗೊಂಡಿದ್ರಂತೆ. ಇನ್ನೂ ಇವತ್ತು ರೇವಣ್ಣಗೆ ಜೈಲಿನ ಮೆನುವಿನಂತೆ ಪುಳಿಯೊಗರೆ ಮತ್ತು ಕಾಫಿ ಬ್ರೇಕ್‌ ಫಾಸ್ಟ್‌ ಆಗಿ ಫಿಕ್ಸ್​ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ವಿಚಾರಣಾಧೀನ ಕೈದಿ ನಂಬರ್​ 4567; ನಿನ್ನೆ ರಾತ್ರಿ ರೇವಣ್ಣರ ಜೈಲಿನ ದಿನಚರಿ ಹೇಗಿತ್ತು..?

publive-image

ಬೆಳಗ್ಗೆ ಏನೆಲ್ಲ ಮಾಡಿದ್ರು..?
ಬೆಳಿಗ್ಗೆ 5.30 ಕ್ಕೆ ನಿದ್ರೆಯಿಂದ ರೇವಣ್ಣ ಎದ್ದಿದ್ದಾರೆ. ಬಳಿಕ ಜೈಲು ಸಿಬ್ಬಂದಿ ರೇವಣ್ಣಗೆ ಕಾಫಿ ನೀಡಿದ್ದಾರೆ. ಜೈಲಿನಲ್ಲಿ ಬಂಧಿಯಾಗಿರುವವರಿಗೆ ಟಿವಿ ವ್ಯವಸ್ಥೆ ಇರುವುದಿಲ್ಲ. ಹೊರಗಿನ ವಿದ್ಯಮಾನಗಳನ್ನ ತಿಳಿದುಕೊಳ್ಳಲು ಜೈಲಿನಲ್ಲಿ ನ್ಯೂಸ್ ಪೇಪರ್ ವ್ಯವಸ್ಥೆ ಮಾಡಲಾಗಿದೆ. ರೇವಣ್ಣಗೆ ಓದಲು ಕನ್ನಡ-ಇಂಗ್ಲೀಷ್ ಪೇಪರ್ ನೀಡಲಾಗಿತ್ತು. ಪೇಪರ್ ಕಡೆ ಕಣ್ಣಾಡಿಸಿ ನಿನ್ನೇ ನಡೆದ ವಿದ್ಯಮಾನಗಳನ್ನ ಓದಿ ತಿಳಿದುಕೊಂಡಿದ್ದಾರೆ. ಇನ್ನೂ ಕೆಲ ಹೊತ್ತಿನಲ್ಲಿ ಜೈಲಿನ ಮೆನುವಿನಂತೆ ರೇವಣ್ಣಗೆ ಪುಳಿಯೋಗರೆ ನೀಡಲಿದ್ದಾರೆ.

Advertisment

ಇದನ್ನೂ ಓದಿ:ಮುಸ್ಲಿಂ ಯುವತಿಯನ್ನ ಪ್ರೀತಿಸಿ ಮದ್ವೆ, ಹೈಡ್ರಾಮಾ.. ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸ್ ಲಾಠಿ ಚಾರ್ಜ್..!

publive-image

ಮಾಜಿ ಸಚಿವ ಹೆಚ್​.ಡಿ.ರೇವಣ್ಣ ವಿರುದ್ಧ ಅಪಹರಣದ ಕೇಸ್ ದಾಖಲಾಗಿತ್ತು. ಹೊಳೆನರಸೀಪುರದಲ್ಲಿ ದಾಖಲಾಗಿರೋ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಹೆಚ್​.ಡಿ.ರೇವಣ್ಣ ಮೊದಲೇ ಆರೋಪಿಯಾಗಿದ್ದಾರೆ. ಇನ್ನು ಕೆ.ಆರ್​.ನಗರ ಠಾಣೆಯಲ್ಲಿ ಮಹಿಳೆಯ ಅಪಹರಣ ಪ್ರಕರಣ ದಾಖಲಾಗಿದ್ದು ಮೊದಲನೇ ಆರೋಪಿಯಾಗಿದ್ದಾರೆ. ಕಳೆದ ಮೇ 4ರಂದು ಜನಪ್ರತಿನಿಧಿಗಳ ಕೋರ್ಟ್ ರೇವಣ್ಣ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಎಸ್​ಐಟಿ ಕಸ್ಟಡಿಗೆ ವಹಿಸಿತ್ತು. ಈ ನಡುವೆ ಕಿಡ್ನಾಪ್ ಕೇಸ್​​ ವಿಚಾರಣೆ ನಡೆಸಿದ 17ನೇ ಎಸಿಎಂಎಂ ನ್ಯಾಯಾಲಯ​​​ ಮೇ 14ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ. ಬೆನ್ನಲ್ಲೇ ಹೆಚ್‌.ಡಿ. ರೇವಣ್ಣರನ್ನ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ.

ಇದನ್ನೂ ಓದಿ:KL ರಾಹುಲ್​​ಗೆ ಭಾರೀ ಅವಮಾನ.. ಸಾರ್ವಜನಿಕವಾಗಿ ನಿಂದಿಸಿದ ಎಲ್​ಎಸ್​ಜಿ ಮಾಲೀಕ..! ವಿಡಿಯೋ

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment