newsfirstkannada.com

ಕೇಸರಿ ಶಾಲು ಹಾಕಿದ್ದ ಕುಮಾರಸ್ವಾಮಿ ವಿರುದ್ಧ ದೇವೇಗೌಡ್ರ ಆಕ್ರೋಶ; ಈ ಬಗ್ಗೆ ಏನಂದ್ರು..?

Share :

Published February 2, 2024 at 3:44pm

    ಕೆರಗೋಡು ಗ್ರಾಮದಲ್ಲಿ ಇನ್ನೂ ಆರದ ಹನುಮ ಧ್ವಜ ಕಿಚ್ಚು

    ಕೇಸರು ಶಾಲು ಹಾಕಿದ್ದ ಮಾಜಿ ಸಿಎಂ ಹೆಚ್​​ಡಿಕೆ ವಿರುದ್ಧ ಆಕ್ರೋಶ

    ಭಾರೀ ಆಕ್ರೋಶ ಹೊರಹಾಕಿದ ಮಾಜಿ ಪ್ರಧಾನಿ HD ದೇವೇಗೌಡ

ಮಂಡ್ಯ: ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ಕಿಚ್ಚು ಇನ್ನೂ ಆರಿಲ್ಲ. ಈಗಲೂ ಕೆರಗೋಡು ಗ್ರಾಮದಲ್ಲಿ ಅಘೋಷಿತ ಬಂದ್​​ ವಾತಾವರಣ ನಿರ್ಮಾಣವಾಗಿದೆ. ಕಳೆದ 1 ವಾರದಿಂದ ಕೆರಗೋಡು ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಈ ಮಧ್ಯೆ ಮಾಜಿ ಸಿಎಂ ಹೆಚ್​​.ಡಿ ಕುಮಾರಸ್ವಾಮಿ ಕೇಸರಿ ಶಾಲು ಹಾಕಿದ್ದರ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಕೆರಗೋಡು ಗ್ರಾಮದಲ್ಲಿ ಬಿಜೆಪಿ, ಜೆಡಿಎಸ್​ ಜಂಟಿಯಾಗಿ ಕಾಂಗ್ರೆಸ್​ ಸರ್ಕಾರದ ವಿರುದ್ಧ ಹೋರಾಟ ಮಾಡಿದ್ದವು. ಅಂದು ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಮಾಜಿ ಸಿಎಂ ಹೆಚ್​​​.ಡಿ ಕುಮಾರಸ್ವಾಮಿ ಅವರು ಬಿಜೆಪಿ ನಾಯಕರೊಂದಿಗೆ ಭಾಗಿಯಾಗಿದ್ದರು. ಕೇಸರಿ ಶಾಲು ಧರಿಸಿ ಹೆಚ್​​ಡಿಕೆ ಭಾಷಣ ಮಾಡಿದ್ದರು. ಈ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ.

ಇನ್ನು, ಹೆಚ್​.ಡಿ ಕುಮಾರಸ್ವಾಮಿ ಕೇಸರಿ ಶಾಲು ಹಾಕಬಾರ್ದಿತ್ತು. ಬಿಜೆಪಿ ಜೊತೆ ಹೋದ್ರೂ ನಮ್ಮ ಶಾಲನ್ನೇ ಹಾಕಬೇಕಿತ್ತು. ಅವರು ಅವರ ಶಾಲು ಹಾಕ್ತಾರೆ, ನಾವು ನಮ್ದು ಹಾಕ್ತೀವಿ ಎಂದು ಹೆಚ್​ಡಿಕೆ ಕೇಸರಿ ಶಾಲು ಹಾಕಿದ್ದಕ್ಕೆ ದೇವೇಗೌಡರು ಅಸಮಾಧಾನ ಹೊರಹಾಕಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕೇಸರಿ ಶಾಲು ಹಾಕಿದ್ದ ಕುಮಾರಸ್ವಾಮಿ ವಿರುದ್ಧ ದೇವೇಗೌಡ್ರ ಆಕ್ರೋಶ; ಈ ಬಗ್ಗೆ ಏನಂದ್ರು..?

https://newsfirstlive.com/wp-content/uploads/2024/02/HDD_HDK.jpg

    ಕೆರಗೋಡು ಗ್ರಾಮದಲ್ಲಿ ಇನ್ನೂ ಆರದ ಹನುಮ ಧ್ವಜ ಕಿಚ್ಚು

    ಕೇಸರು ಶಾಲು ಹಾಕಿದ್ದ ಮಾಜಿ ಸಿಎಂ ಹೆಚ್​​ಡಿಕೆ ವಿರುದ್ಧ ಆಕ್ರೋಶ

    ಭಾರೀ ಆಕ್ರೋಶ ಹೊರಹಾಕಿದ ಮಾಜಿ ಪ್ರಧಾನಿ HD ದೇವೇಗೌಡ

ಮಂಡ್ಯ: ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ಕಿಚ್ಚು ಇನ್ನೂ ಆರಿಲ್ಲ. ಈಗಲೂ ಕೆರಗೋಡು ಗ್ರಾಮದಲ್ಲಿ ಅಘೋಷಿತ ಬಂದ್​​ ವಾತಾವರಣ ನಿರ್ಮಾಣವಾಗಿದೆ. ಕಳೆದ 1 ವಾರದಿಂದ ಕೆರಗೋಡು ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಈ ಮಧ್ಯೆ ಮಾಜಿ ಸಿಎಂ ಹೆಚ್​​.ಡಿ ಕುಮಾರಸ್ವಾಮಿ ಕೇಸರಿ ಶಾಲು ಹಾಕಿದ್ದರ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಕೆರಗೋಡು ಗ್ರಾಮದಲ್ಲಿ ಬಿಜೆಪಿ, ಜೆಡಿಎಸ್​ ಜಂಟಿಯಾಗಿ ಕಾಂಗ್ರೆಸ್​ ಸರ್ಕಾರದ ವಿರುದ್ಧ ಹೋರಾಟ ಮಾಡಿದ್ದವು. ಅಂದು ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಮಾಜಿ ಸಿಎಂ ಹೆಚ್​​​.ಡಿ ಕುಮಾರಸ್ವಾಮಿ ಅವರು ಬಿಜೆಪಿ ನಾಯಕರೊಂದಿಗೆ ಭಾಗಿಯಾಗಿದ್ದರು. ಕೇಸರಿ ಶಾಲು ಧರಿಸಿ ಹೆಚ್​​ಡಿಕೆ ಭಾಷಣ ಮಾಡಿದ್ದರು. ಈ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ.

ಇನ್ನು, ಹೆಚ್​.ಡಿ ಕುಮಾರಸ್ವಾಮಿ ಕೇಸರಿ ಶಾಲು ಹಾಕಬಾರ್ದಿತ್ತು. ಬಿಜೆಪಿ ಜೊತೆ ಹೋದ್ರೂ ನಮ್ಮ ಶಾಲನ್ನೇ ಹಾಕಬೇಕಿತ್ತು. ಅವರು ಅವರ ಶಾಲು ಹಾಕ್ತಾರೆ, ನಾವು ನಮ್ದು ಹಾಕ್ತೀವಿ ಎಂದು ಹೆಚ್​ಡಿಕೆ ಕೇಸರಿ ಶಾಲು ಹಾಕಿದ್ದಕ್ಕೆ ದೇವೇಗೌಡರು ಅಸಮಾಧಾನ ಹೊರಹಾಕಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More