/newsfirstlive-kannada/media/post_attachments/wp-content/uploads/2025/01/MAHARATRA-MAN.jpg)
ಕೆಲವೊಮ್ಮೆ ನಮ್ಮ ಸುತ್ತಮುತ್ತ ವೈದ್ಯಲೋಕವನ್ನೂ ಮೀರಿದ ಪವಾಡಗಳು ಸಂಭವಿಸುತ್ತವೆ. ಅಂತೆಯೇ ಪ್ರಾಣ ಕಳೆದುಕೊಂಡಿದ್ದಾನೆ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಬರ್ತಿದ್ದಾಗ ಎದ್ದು ಕೂತ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಆಗಿದ್ದೇನು..?
ವ್ಯಕ್ತಿಯ ಹೆಸರು ಪಾಂಡುರಂಗ್ ಉಲ್ಪೆ. ವಯಸ್ಸು 65. ಕೊಲ್ಲಾಪುರ ಜಿಲ್ಲೆಯ ಕಸಾಬ-ಬವಾಡದವರು. ಇವರಿಗೆ ಡಿಸೆಂಬರ್ 16 ರಂದು ಮುಂಜಾನೆ ಹೃದಯಾಘಾತ ಸಂಭವಿಸಿತ್ತು. ಕುಟುಂಬಸ್ಥರು ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದರು. ತಪಾಸಣೆ ನಡೆಸಿದ ವೈದ್ಯರು ವ್ಯಕ್ತಿಯ ಜೀವ ಹೋಗಿದೆ. ಯಾವುದೇ ಪ್ರಯೋಜನ ಇಲ್ಲ. ವಾಪಸ್ ತೆಗೆದುಕೊಂಡು ಹೋಗಿ ಎಂದಿದ್ದಾರೆ.
ಇದನ್ನೂ ಓದಿ:ಬೆಂಗಳೂರಿಗೆ ಮತ್ತೊಂದು ಕೋರಮಂಗಲ.. ಬಾಡಿಗೆ, ಸೈಟ್ಗಳ ಬೆಲೆಯಲ್ಲಿ ಭಾರೀ ಏರಿಕೆ; ಏನಿದರ ವಿಶೇಷ?
ಬೇಸರಗೊಂಡ ಕುಟುಂಬಸ್ಥರು ಮೃತದೇಹವನ್ನು ಆ್ಯಂಬುಲೆನ್ಸ್ ಮೂಲಕ ವಾಪಸ್ ತೆಗೆದುಕೊಂಡು ಹೋಗಲು ಮುಂದಾಗಿದ್ದಾರೆ. ಅಂತೆಯೇ ಆ್ಯಂಬುಲೆನ್ಸ್ ಉಲ್ಪೆ ನಿವಾಸದ ಕಡೆಗೆ ಹೊರಟಿತ್ತು. ಈ ಮಧ್ಯೆ ರಸ್ತೆಯಲ್ಲಿದ್ದ ಸ್ಪೀಡ್ ಬ್ರೇಕರ್ ಕ್ರಾಸ್ ಮಾಡುವಾಗ ಆ್ಯಂಬುಲೆನ್ಸ್ ಮೇಲೆತ್ತರಕ್ಕೆ ಜಿಗಿದಿದೆ. ಆಗ ಉಸಿರು ನಿಲ್ಲಿಸಿ ಮಲಗಿದ್ದ ವ್ಯಕ್ತಿಯ ದೇಹದಲ್ಲಿ ರಕ್ತ ಚಲನೆ ಉಂಟಾಗಿದೆ. ಅಲ್ಲದೇ ಕಣ್ಣು ಬಿಟ್ಟಿದ್ದಾನೆ. ಇದನ್ನು ಗಮನಿಸಿದ ಸಂಬಂಧಿಕರು ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಚೇತರಿಸಿಕೊಂಡಿರುವ ಉಲ್ಪೆ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ವಾಪಸ್ ಆಗಿದ್ದಾರೆ.
ಇದನ್ನೂ ಓದಿ:ಧಾರವಾಡಕ್ಕೆ ಗುಡ್ನ್ಯೂಸ್; ಪಟಾಕಿ ಸಿಡಿಸಿ, ಫೇಮಸ್ ಪೇಡ ತಿನ್ನಿಸಿ.. ಈ ಸಂಭ್ರಮಾಚರಣೆ ಯಾಕೆ ಗೊತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ