/newsfirstlive-kannada/media/post_attachments/wp-content/uploads/2024/11/Bmtc-bus-Driver-And-conductor-5.jpg)
ಬೆಂಗಳೂರು: ಸಾವು ಅದ್ಯಾವಾಗ ಹೇಗೆ ಬರುತ್ತೆ ಅಂತ ಯಾರು ಊಹಿಸೋದಕ್ಕೆ ಸಾಧ್ಯನೇ ಇಲ್ಲ. ಚಲಿಸುತ್ತಿದ್ದ ಬಸ್ನಲ್ಲೇ.. ಅದು ಕೂಡ ಬಸ್ನ ಚಾಲಕನದ್ದೇ ನಡೆದ ಈ ದುರಂತದ ದೃಶ್ಯ ನಿಜಕ್ಕೂ ಬೆಚ್ಚಿ ಬೀಳಿಸುತ್ತೆ. ಇದರ ಮಧ್ಯೆ ಬಸ್ನಲ್ಲಿದ್ದ 50ಕ್ಕೂ ಹೆಚ್ಚು ಮಂದಿಯ ಪ್ರಾಣಕ್ಕೆ ಶ್ರೀರಕ್ಷೆಯಾದ ಕಂಡಕ್ಟರ್ ಸಾಹಸವಂತೂ ನಿಜಕ್ಕೂ ಮೈಜುಮ್ಮೆನ್ನಿಸುತ್ತೆ.
ಬಿಎಂಟಿಸಿ ಬಸ್ ಚಲಾಯಿಸುತ್ತಿರುವಾಗಲೇ ಡ್ರೈವರ್ ಕಿರಣ್ ಅವರಿಗೆ ಹೃದಯಾಘಾತವಾಗಿದೆ. ತಕ್ಷಣವೇ ಬಸ್ ಕಂಡಕ್ಟರ್ ಓಬ್ಳೇಶ್ ಸಂಚರಿಸುತ್ತಿದ್ದ ಬಸ್ ಅನ್ನು ನಿಲ್ಲಿಸಿ, 50ಕ್ಕೂ ಹೆಚ್ಚು ಪ್ರಯಾಣಿಕರನ್ನು ರಕ್ಷಿಸಿ ಸಮಯಪ್ರಜ್ಞೆ ಮೆರೆದಿದ್ದಾರೆ.@RLR_BTM@BMTC_BENGALURU#BMTCBusIncident#Bengaluru#BusConductor#BusDriver… pic.twitter.com/RGFQNaUA50
— NewsFirst Kannada (@NewsFirstKan)
ಬಿಎಂಟಿಸಿ ಬಸ್ ಚಲಾಯಿಸುತ್ತಿರುವಾಗಲೇ ಡ್ರೈವರ್ ಕಿರಣ್ ಅವರಿಗೆ ಹೃದಯಾಘಾತವಾಗಿದೆ. ತಕ್ಷಣವೇ ಬಸ್ ಕಂಡಕ್ಟರ್ ಓಬ್ಳೇಶ್ ಸಂಚರಿಸುತ್ತಿದ್ದ ಬಸ್ ಅನ್ನು ನಿಲ್ಲಿಸಿ, 50ಕ್ಕೂ ಹೆಚ್ಚು ಪ್ರಯಾಣಿಕರನ್ನು ರಕ್ಷಿಸಿ ಸಮಯಪ್ರಜ್ಞೆ ಮೆರೆದಿದ್ದಾರೆ.@RLR_BTM@BMTC_BENGALURU#BMTCBusIncident#Bengaluru#BusConductor#BusDriver… pic.twitter.com/RGFQNaUA50
— NewsFirst Kannada (@NewsFirstKan) November 6, 2024
">November 6, 2024
ಅಬ್ಬಾ.. ಈ ದೃಶ್ಯವನ್ನ ನೋಡಿದ್ರೆ ಎಂತ ದುರಂತ ಸಂಭವಿಸುವುದರಲ್ಲಿತ್ತು ಅನ್ನೋದು ಗೊತ್ತಾಗುತ್ತೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಯಶವಂತಪುರ ಬಳಿ ನಡೆದ ಆಘಾತಕಾರಿ ಘಟನೆಯಿದು. ಡ್ರೈವಿಂಗ್ ವೇಳೆಯೇ ಹೃದಯಾಘಾತದಿಂದ ಬಿಎಂಟಿಸಿ ಡಿಪೋ 40 ರಲ್ಲಿ ಕಾರ್ಯನಿರ್ವಹಿಸುತ್ತಿದ್ದ 39 ವರ್ಷದ ಚಾಲಕ ಕಿರಣ್ ಸಾವನ್ನಪ್ಪಿದ್ದಾರೆ. ನೆಲಮಂಗಲದಿಂದ ಯಶವಂತಪುರ ಕಡೆ ಬರುವಾಗ ಏಕಾಏಕಿ ಎದೆನೋವು ಕಾಣಿಸಿಕೊಂಡ ಪರಿಣಾಮ, ಬಸ್ನಲ್ಲಿಯೇ ಕುಸಿದು ಬಿದ್ದಿದ್ದಾರೆ.
ಬಸ್ ರನ್ನಿಂಗ್ನಲ್ಲಿರುವಾಗಲೇ ಡ್ರೈವರ್ ಕಿರಣ್ ಸಾವಾಗಿದೆ. ಈ ಬಸ್ನಲ್ಲಿ 50ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಾ ಇದ್ದರು. ಅವರ ಪಾಲಿಗೆ ರಕ್ಷಕನಾಗಿದ್ದು ಅದೇ ಬಸ್ನಲ್ಲಿದ್ದ ಕಂಡಕ್ಟರ್. ಸಾಮಾನ್ಯವಾಗಿ ಇಂತಹ ಘಟನೆ ನಡೆದಾಗ ಎಂತವರಾದ್ರೂ ವಿಚಲಿತರಾಗ್ತಾರೆ. ಆದರೆ ಡ್ರೈವರ್ ಕಿರಣ್ ಕುಸಿದು ಬೀಳುತ್ತಿದ್ದಂತೆಯೇ ಅಲರ್ಟ್ ಆದ ಬಸ್ ಕಂಡಕ್ಟರ್ ಓಬಳೇಶ್ ಒಂದು ಸೆಕೆಂಡ್ ಕೂಡ ವೇಸ್ಟ್ ಮಾಡದೆ ಡ್ರೈವರ್ ಸೀಟ್ಗೆ ಜಂಪ್ ಮಾಡಿ, ಬಸ್ನ ನಿಯಂತ್ರಣಕ್ಕೆ ತಂದು ನಿಲ್ಲಿಸಿದ್ದಾರೆ. ಬಳಿಕ ಚಾಲಕನನ್ನ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.
ಇದನ್ನೂ ಓದಿ: Justice For Sandhya: ಸಂಧ್ಯಾ ಸಾವಿಗೆ ಕನಿಕರ ತೋರಲಿಲ್ಲವೇ ಪೊಲೀಸರು? ಕೋರ್ಟ್ ಮೆಟ್ಟಿಲೇರಿದ ಪತಿ ಶಿವಕುಮಾರ್!
[caption id="attachment_95684" align="aligncenter" width="800"] ಡ್ರೈವರ್ ಕಿರಣ್ ಹಾಗೂ ಕಂಡಕ್ಟರ್ ಓಬಳೇಶ್[/caption]
ಈ ಘಟನೆಗೆ ಸಂಬಂಧಪಟ್ಟಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದು, ನ್ಯೂಸ್ಫಸ್ಟ್ ಮೂಲಕ ಸಮಯಪ್ರಜ್ಞೆ ಮೆರೆದ ನಿರ್ವಾಹಕ ಓಬಳೇಶ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕರ್ತವ್ಯದಲ್ಲಿದ್ದಾಗಲೇ ನರಳಾಡಿ ಸಾವನ್ನಪ್ಪುವ ಬಿಎಂಟಿಸಿ ಬಸ್ ಡ್ರೈವರ್ ಸಾವು ಒಂದು ದುರಂತವಾದ್ರೆ, ಬಸ್ನಲ್ಲಿದ್ದ 50ಕ್ಕೂ ಹೆಚ್ಚು ಜನರ ಪ್ರಾಣ ಉಳಿಸಿದ ಕಂಡಕ್ಟರ್ ಸಮಯಪ್ರಜ್ಞೆಗೆ ನಿಜಕ್ಕೂ ಹ್ಯಾಟ್ಸ್ ಆಫ್ ಹೇಳಲೇಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ