Advertisment

ಮಲೆನಾಡಿನ ಜನರಿಗೆ ಮತ್ತೆ ಗುಡ್​ನ್ಯೂಸ್; ಶಿವಮೊಗ್ಗದಲ್ಲಿ ಧಾರಾಕಾರ ಮಳೆ

author-image
Veena Gangani
Updated On
ಕೊನೆಗೂ ಬಂದ ಮಳೆರಾಯ.. ವರ್ಷಧಾರೆ ಕಂಡು ನಿಟ್ಟುಸಿರು ಬಿಟ್ಟ ಜನ
Advertisment
  • ಬಿರು ಬಿಸಿಲಿನ ಬೇಗೆಗೆ ಹೈರಾಣಾಗಿದ್ದ ಜನತೆಗೆ ತಂಪೆರೆದ ಮಳೆರಾಯ
  • ವರ್ಷದ ಮೊದಲ ಮಳೆಯ ಆಗಮನಕ್ಕೆ ಫುಲ್ ಖುಷ್ ಆದ ಜನರು
  • ಮುಂಗಾರು ಆರಂಭಕ್ಕೆ ಮುನ್ನವೇ ರಾಜ್ಯದ ಹಲವು ಕಡೆ ಮಳೆ ಆರಂಭ

ಶಿವಮೊಗ್ಗ: ಬಿರು ಬಿಸಿಲಿನ ಬೇಗೆಗೆ ಹೈರಾಣಾಗಿದ್ದ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ಇಂದು ಜಿಲ್ಲೆಯ ವಿವಿಧೆಡೆ ಗಾಳಿ ಸಮೇತ ಭಾರಿ ಮಳೆಯಾಗಿದೆ.

Advertisment

ಇದನ್ನೂ ಓದಿ:ಬಹುಭಾಷಾ ನಟ ಸಯ್ಯಾಜಿ ಶಿಂಧೆ ದಿಢೀರ್​​ ಆಸ್ಪತ್ರೆಗೆ ದಾಖಲು; ಆರೋಗ್ಯಕ್ಕೆ ಏನಾಯ್ತು?

ಏಪ್ರಿಲ್‌ 12ರಿಂದ 14ರವರಗೆ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಅದರಂತೆ ದಾವಣಗೆರೆ, ಶಿವಮೊಗ್ಗದ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ಇನ್ನು ಈ ಬಗ್ಗೆ ಡಿಪಿ ಸತೀಶ್ ಎಂಬುವವರು ಮಳೆಯ ಬಗ್ಗೆ ಟ್ವಿಟರ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Advertisment


">April 13, 2024

ಶಿವಮೊಗ್ಗದ ಸುತ್ತಮುತ್ತ ಭಾಗದಲ್ಲಿ ಗುಡುಗು ಸಿಡಿಲಿನೊಂದಿಗೆ ಧಾರಾಕಾರ ವರ್ಷಧಾರೆ ಸುರಿದಿದೆ. ಬಿರು ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಜನರು ಸುಮಾರು ಎರಡು ಗಂಟೆಗಳ ಕಾಲ ಸುರಿದ ವರುಣನ ಅಬ್ಬರದಿಂದ ಸಂತಸಗೊಂಡಿದ್ದಾರೆ. ಹೀಗಾಗಿ ವರ್ಷದ ಮೊದಲ ಮಳೆಯ ಆಗಮನಕ್ಕೆ ಜನರು ಫುಲ್ ಖುಷ್ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment