ಸ್ಟಾರ್​ ಆಟಗಾರರಿಗೆ ಕೊಕ್​​ ಕೊಟ್ಟ IPL​ ತಂಡಗಳು; ಹರಾಜಿಗೆ ಬರೋ ಕನ್ನಡಿಗರು ಇವರೇ!

author-image
Ganesh Nachikethu
Updated On
ಸ್ಟಾರ್​ ಆಟಗಾರರಿಗೆ ಕೊಕ್​​ ಕೊಟ್ಟ IPL​ ತಂಡಗಳು; ಹರಾಜಿಗೆ ಬರೋ ಕನ್ನಡಿಗರು ಇವರೇ!
Advertisment
  • ಬಹುನಿರೀಕ್ಷಿತ 2025ರ ಇಂಡಿಯನ್​​ ಪ್ರೀಮಿಯರ್​ ಲೀಗ್
  • ಹರಾಜಿಗೆ ಮುನ್ನ ಎಲ್ಲಾ ತಂಡಗಳಲ್ಲೂ ಕನ್ನಡಿಗರಿಗೆ ಕೊಕ್​​!
  • ಸ್ಟಾರ್​​​ ಕನ್ನಡಿಗರೇ ಯಾವುದೇ ತಂಡದ ರೀಟೈನ್​​ ಲಿಸ್ಟ್​ನಲ್ಲಿಲ್ಲ

ಬಹುನಿರೀಕ್ಷಿತ 2025ರ ಇಂಡಿಯನ್​​ ಪ್ರೀಮಿಯರ್​ ಲೀಗ್​​ಗೆ ಈಗಿನಿಂದಲೇ ಭರ್ಜರಿ ತಯಾರಿ ನಡೆಯುತ್ತಿದೆ. ಮೆಗಾ ಹರಾಜಿಗೆ ಮುನ್ನವೇ ಎಲ್ಲಾ ಐಪಿಎಲ್​​ ತಂಡಗಳು ತಮ್ಮ ರೀಟೈನ್​ ಲಿಸ್ಟ್​​ ಅನ್ನು ಬಿಸಿಸಿಐಗೆ ಸಲ್ಲಿಸಿವೆ. ಆದರೆ, ಹಲವು ವರ್ಷಗಳಿಂದ ಐಪಿಎಲ್​​ನಲ್ಲಿ ಅಮೋಘ ಪ್ರದರ್ಶನ ನೀಡಿರೋ ಸ್ಟಾರ್​​​ ಕನ್ನಡಿಗರೇ ಯಾವುದೇ ತಂಡದ ರೀಟೈನ್​​ ಲಿಸ್ಟ್​ನಲ್ಲಿ ಇಲ್ಲದಿರುವುದು ಅಚ್ಚರಿ ಮೂಡಿಸಿದೆ.

ಲಕ್ನೋ ತಂಡವು ಕ್ಯಾಪ್ಟನ್​​ ಕೆ.ಎಲ್​ ರಾಹುಲ್​ ಅವರನ್ನೇ ಕೈ ಬಿಟ್ಟಿದ್ದು, ಇವರು ಮೆಗಾ ಹರಾಜಿಗೆ ಬರೋದು ಪಕ್ಕಾ ಆಗಿದೆ. ಆರ್‌ಸಿಬಿ ತಂಡದ ಪರ ಅದ್ಭುತ ಪ್ರದರ್ಶನ ನೀಡಿ ಸೈ ಎನಿಸಿಕೊಂಡ ವಿಜಯ್‌ ಕುಮಾರ್ ವೈಶಾಖ್, ಮನೋಜ್ ಭಂಡಾರೆ ಅವರನ್ನು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಕೈ ಬಿಟ್ಟಿದೆ. ಇಷ್ಟೇ ಅಲ್ಲ ಹಲವು ತಂಡಗಳು ಕನ್ನಡಿಗರಿಗೆ ಕೊಕ್​​ ನೀಡಲಾಗಿದೆ.

ಲಕ್ನೋ ತಂಡದಿಂದ ರಾಹುಲ್‌ ಕೈ ಬಿಡಲು ಕಾರಣವೇನು?

ಲಕ್ನೋ ಸೂಪರ್ ಜೈಂಟ್ಸ್‌ ತಂಡದ ನಾಯಕರಾಗಿದ್ದವರು ಕೆಎಲ್ ರಾಹುಲ್ ಅವರು. ತಂಡದ ನಾಯಕನನ್ನೇ ಕೈ ಬಿಟ್ಟು ಲಕ್ನೋ ಟೀಮ್​​ ಭಾರೀ ಅಚ್ಚರಿ ಮೂಡಿಸಿದೆ. ಕಳೆದ ಸೀಸನ್​​ನಲ್ಲಿ ಕೆ.ಎಲ್​ ರಾಹುಲ್​ ಅವರು ತಾನು ಆಡಿದ 14 ಪಂದ್ಯಗಳಲ್ಲಿ 37.14ರ ಆವರೇಜ್​​ನಲ್ಲಿ ಬರೋಬ್ಬರಿ 520 ರನ್​ ಚಚ್ಚಿದ್ರು. ಈ ಪೈಕಿ 4 ಅರ್ಧಶತಕಗಳು ಸೇರಿವೆ. ರಾಹುಲ್​​ ವಿಕೆಟ್‌ ಕೀಪಿಂಗ್ ಹಾಗೂ ಟಾಪ್‌ ಆರ್ಡರ್‌ ಬ್ಯಾಟರ್​ ಆಗಿದ್ರು.

publive-image

ರಾಜಸ್ಥಾನ್​​ ರಾಯಲ್ಸ್​ ತಂಡದಿಂದ ಪಡಿಕ್ಕಲ್​ಗೆ ಕೊಕ್​

ಕನ್ನಡಿಗ ದೇವದತ್​​ ಪಡಿಕ್ಕಲ್​ ರಾಜಸ್ಥಾನ್​ ರಾಯಲ್ಸ್​ ತಂಡದ ಭಾಗವಾಗಿದ್ದರು. ಇವರು ಕಳೆದ ಸೀಸನ್​ನಲ್ಲಿ ರನ್​ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಹಾಗಾಗಿ ದೇವದತ್​​ ಪಡಿಕ್ಕಲ್​ ಅವರನ್ನು ಕೈ ಬಿಟ್ಟಿದೆ.

ವೈಶಾಖ್‌ಗೆ ಆರ್‌ಸಿಬಿಯಲ್ಲಿ ಇಲ್ಲ ಸ್ಥಾನ

ಕಳೆದ ಸೀಸನ್​​ನಲ್ಲಿ ಆರ್​​ಸಿಬಿ ತಂಡದಲ್ಲಿ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡವರು ವಿಜಯ್​​​ಕುಮಾರ್​​​ ವೈಶಾಖ್​​. ಇವರು ಆಡಿದ 4 ಪಂದ್ಯಗಳಲ್ಲಿ 4 ವಿಕೆಟ್‌ ಕಬಳಿಸಿದ್ದರು. ಆರ್​​ಸಿಬಿ ತಂಡದಿಂದ ವಿಜಯ್​ಕುಮಾರ್​​ ಅವರನ್ನು ಕೈ ಬಿಡಲಾಗಿದೆ.

ಮಯಾಂಕ್‌ಗೆ ಗೇಟ್ ಪಾಸ್

ಸನ್​ರೈಸರ್ಸ್​ ಹೈದರಾಬಾದ್​​ ತಂಡವು ಕನ್ನಡಿಗ ಮಯಾಂಕ್​​ ಅಗರ್ವಾಲ್​​​ ಅವರನ್ನು ಕೈ ಬಿಡಲಾಗಿದೆ. ಇವರು ಕಳೆದ ಸೀಸನ್​​ನಲ್ಲಿ ಆಡಿದ 4 ಪಂದ್ಯದಲ್ಲಿ 37 ರನ್​​​ ಕಲೆ ಹಾಕಿದ್ರು. ಇನ್ನು ಪಂಜಾಬ್‌ ಪರ ಒಂದೇ ಒಂದು ಪಂದ್ಯ ಆಡಿದ್ದ ವಿದ್ವತ್ ಕಾವೇರಪ್ಪ ಸಹ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮುಂಬೈನಿಂದ ಶ್ರೇಯಸ್​ಗೆ ಕೊಕ್​​

ಮುಂಬೈ ಇಂಡಿಯನ್ಸ್‌ ತಂಡದ ಪರ ಶ್ರೇಯಸ್ ಗೋಪಾಲ್‌ ಅವರು ಅಮೋಘ ಪ್ರದರ್ಶನ ನೀಡಿದ್ರು. ತಾನು ಆಡಿದ 3 ಪಂದ್ಯದಲ್ಲಿ 3 ವಿಕೆಟ್​​ ಪಡೆದಿದ್ರು. ಇವರನ್ನು ಮುಂಬೈ ಇಂಡಿಯನ್ಸ್​​ ಕೈ ಬಿಟ್ಟಿದ್ದು, ಮೆಗಾ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. ಚಾಂಪಿಯನ್‌ ಕೆಕೆಆರ್ ತಂಡದ ಸದಸ್ಯರಾಗಿದ್ದ ಮನೀಷ್ ಪಾಂಡೆ ಅವರನ್ನು ಕೈ ಬಿಡಲಾಗಿದೆ. ಗುಜರಾತ್ ಟೈಟನ್ಸ್ ತಂಡದ ಪರ ಭರವಸೆಯ ಅಭಿನವ್‌ ಮನೋಹರ್ ಅವರನ್ನು ತಂಡ ಕೈ ಬಿಟ್ಟಿದೆ. ಇವರು ಎಲ್ಲರೂ ಮೆಗಾ ಹರಾಜಿನಲ್ಲಿ ಭಾಗಿಯಾಗಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment