ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ದಿನ, ನವದಂಪತಿಗೆ ಶುಭ ಸುದ್ದಿ; ಇಲ್ಲಿದೆ ಇಂದಿನ ರಾಶಿ ಭವಿಷ್ಯ!

author-image
Veena Gangani
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಪಿತ್ರಾರ್ಜಿತ ಆಸ್ತಿ ವಿಚಾರಕ್ಕೆ ವಿವಾದ ಅಂತ್ಯವಾಗಬಹುದು
  • ನಿಮ್ಮ ಸ್ನೇಹಿತರಿಂದ ಸಹಾಯ, ಅನುಕೂಲ ಸಿಗಬಹುದು
  • ಹೊಸ ಸಂಬಂಧದಲ್ಲಿ ಕಿರಿಕಿರಿ ಉಂಟಾಗುವ ಸಾಧ್ಯತೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಅನೂರಾಧ ನಕ್ಷತ್ರ ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

ಮೇಷ ರಾಶಿ

publive-image

  • ನಿಮ್ಮ ಸ್ನೇಹಿತರಿಂದ ಸಹಾಯ, ಅನುಕೂಲ ಸಿಗಬಹುದು
  • ಮಹಿಳಾ ಉದ್ಯೋಗಿಗಳಿಗೆ ಬಡ್ತಿ ಸಿಗಬಹುದು
  • ವಿಶೇಷ ಸ್ಥಾನಮಾನ ಲಭ್ಯ
  • ಬೇರೆಯವರ ನಾಟಕೀಯ ಮಾತಿಗೆ ಮರುಳಾಗಬೇಡಿ
  • ವ್ಯಾಪಾರದಲ್ಲಿ ಅನುಕೂಲವಿದೆ
  • ಹಿರಿಯರ ಮಾತಿಗೆ ಗೌರವ ನೀಡಿ
  • ಇಷ್ಟ ದೇವತಾ ಆರಾಧನೆ ಮಾಡಿ

ವೃಷಭ

publive-image

  • ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ
  • ವಿವಾಹ ವಿಚಾರದ ಬಗ್ಗೆ ಚರ್ಚೆ ನಡೆಯಬಹುದು
  • ದಾನ ಧರ್ಮ ವಿಚಾರದಲ್ಲಿ ಆಸಕ್ತಿ
  • ಇಂದು ವಕೀಲರಿಗೆ ಶುಭದಿನ
  • ಸಂಶೋಧಕರಿಗೆ ವಿಶೇಷ ಗೌರವ ಸಿಗಬಹುದು
  • ಬದಲಾವಣೆಯ ಆಲೋಚನೆ ಮಾಡಬಹುದು
  • ಕುಲದೇವತಾ ಆರಾಧನೆ ಮಾಡಿ

ಮಿಥುನ

publive-image

  • ವಿದ್ಯಾರ್ಥಿಗಳಿಗೆ ಶುಭದಿನ
  • ಹಿತ ಶತ್ರುಗಳಿಂದ ತೊಂದರೆಯ ಸಂಭವ
  • ಅನಿರೀಕ್ಷಿತ ಪ್ರಯಾಣ ಮಾಡಬಹುದು
  • ಮಹಿಳೆಯರಿಗೆ ವಂಚನೆ ಸಾಧ್ಯತೆ ಇದೆ
  • ಪಿತ್ರಾರ್ಜಿತ ಆಸ್ತಿ ವಿಚಾರಕ್ಕೆ ವಿವಾದ ಅಂತ್ಯವಾಗಬಹುದು
  • ತಾಯಿಯವರ ಆರೋಗ್ಯ ಗಮನಿಸಿ
  • ಮೃತ್ಯುಂಜಯ ಜಪ ಪೂಜೆ ಮಾಡಿ

ಕಟಕ

publive-image

  • ಅನಾವಶ್ಯಕ ದ್ವೇಷ ಸಾಧನೆ ಮಾಡುತ್ತೀರಿ
  • ಮಿತ್ರರಲ್ಲಿ ಕಲಹ, ಮನಸ್ತಾಪ ಉಂಟಾಗಬಹುದು
  • ಉದ್ಯೋಗದಲ್ಲಿ ಕಿರಿಕಿರಿ ಉಂಟಾಗಬಹುದು
  • ಇಂದು ಕೃಷಿಕರಿಗೆ ಲಾಭವಿದೆ
  • ಮಕ್ಕಳಿಂದ ನೋವು, ಬೇಸರವಾಗಬಹುದು
  • ಹೊಸ ಕಾರ್ಯಗಳು ನಿಧಾನವಾಗಿ ಬೇಸರವಾಗಬಹುದು
  • ದುರ್ಗಾದೇವಿ ಆರಾಧನೆ ಮಾಡಿ

ಸಿಂಹ

publive-image

  • ಯತ್ನ ಕಾರ್ಯದಲ್ಲಿ ಜಯವಾಗಬಹುದು
  • ಇಂದು ಅತಿಯಾದ ಒತ್ತಡ ಇರುತ್ತದೆ
  • ಅಪಮಾನಕ್ಕೆ ಅವಕಾಶ ಕೊಡಬೇಡಿ
  • ಸರಿ ತಪ್ಪುಗಳ ಬಗ್ಗೆ ಯೋಚಿಸಿ ನಿರ್ಧಾರ ಮಾಡಿ
  • ಕಠಿಣ ನಿರ್ಧಾರಗಳಿಂದ ಉತ್ತಮ ಫಲ ಇಲ್ಲ
  • ನಿರ್ಲಕ್ಷ್ಯದಿಂದ ಅನಾರೋಗ್ಯ ಸಮಸ್ಯೆ ಕೊಡಬಹುದು
  • ಶರಭೇಶ್ವರನನ್ನ ಆರಾಧನೆ ಮಾಡಿ

ಕನ್ಯಾ

publive-image

  • ಮನೆಯಲ್ಲಿ ಶುಭಕಾರ್ಯದ ಚರ್ಚೆ
  • ಪರಿಶ್ರಮಕ್ಕೆ ತಕ್ಕ ಪ್ರತಿಫಲದ ದಿನ
  • ಆರ್ಥಿಕವಾಗಿ ತೊಂದರೆ ಇಲ್ಲ
  • ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನ ಹರಿಸಿ
  • ಹೊಸ ಸಂಬಂಧದಲ್ಲಿ ಕಿರಿಕಿರಿ ಉಂಟಾಗಬಹುದು
  • ಮಾನಸಿಕ ದುರಾಲೋಚನೆಯಿಂದ ಹೊರ ಬರಬೇಕು
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ತುಲಾ

publive-image

  • ಪ್ರೀತಿ ಪಾತ್ರರ, ಗೆಳೆಯರ ಭೇಟಿಯಾಗಬಹುದು
  • ಬುದ್ಧಿವಂತಿಕೆಯಿಂದ ಕೆಲಸ ನಿರ್ವಹಿಸುವಿರಿ
  • ಮನಶಾಂತಿ, ನೆಮ್ಮದಿಯ ವಾತಾವರಣ ಇರುತ್ತದೆ
  • ಆದಾಯದಷ್ಟೇ ಖರ್ಚು ಕೂಡ ಇರುತ್ತದೆ
  • ದೊಡ್ಡವರ ಸಲಹೆ ಮುಖ್ಯವಾಗುತ್ತದೆ
  • ಧನ್ವಂತರಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

publive-image

  • ಅತಿಯಾದ ಮಾನಸಿಕ ಒತ್ತಡ
  • ವಿರೋಧಿಗಳಿಂದ ತೊಂದರೆ ಇದೆ
  • ಅಕಾಲ ಭೋಜನ ಆಲಸ್ಯ ಉಂಟಾಗಬಹುದು
  • ಹೊಸ ವಿಷಯಗಳು ಅನುಭವಕ್ಕೆ ಬರುತ್ತದೆ
  • ಅಪರಿಚಿತರಿಂದ ಮೋಸದ ಸಾಧ್ಯತೆ ಇದೆ
  • ಜೀವನ ಶೈಲಿ ಬದಲಾಗುವ ದಿನ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

publive-image

  • ಹಣಕಾಸಿನ ಸಮಸ್ಯೆ ಕಾಡಬಹುದು
  • ಕ್ಷೇತ್ರ ದರ್ಶನದ ಬಗ್ಗೆ ಚಿಂತನೆ ನಡೆಸಬಹುದು
  • ಅವಿವಾಹಿತರಿಗೆ ಮದುವೆ ವಿಚಾರ ಬರಬಹುದು
  • ಮಾನಸಿಕ ದೌರ್ಬಲ್ಯದಿಂದ ಕೊರಗಬೇಡಿ
  • ಮಕ್ಕಳಿಂದ ಸ್ವಲ್ಪ ಸಮಾಧಾನ ಸಿಗಬಹುದು
  • ನಿಮ್ಮನ್ನ ನೀವೇ ಹೊಗಳಿಕೊಳ್ಳಬೇಡಿ, ಆತ್ಮ ಪ್ರಶಂಸೆ ಬೇಡ
  • ವಿಘ್ನೇಶ್ವರನ ಮಂತ್ರ ಪಠಣೆ ಮಾಡಿ

ಮಕರ

publive-image

  • ಸ್ಥಳ ಬದಲಾವಣೆ ಆಗಬಹುದು
  • ಸಾಲ ವಿಚಾರದಲ್ಲಿ ಬೇಸರ
  • ವಿವಾದಗಳಿಗೆ ಆಸ್ಪದ ಕೊಡಬೇಡಿ
  • ಸಹನೆ ಅಥವಾ ತಾಳ್ಮೆ ಕಳೆದುಕೊಳ್ಳಬೇಡಿ
  • ಕೈ ಹಾಕಿದ ಕೆಲಸಗಳಿಗೆ ಸಣ್ಣಪುಟ್ಟ ಸಮಸ್ಯೆಗಳು ಎದುರಾಗಬಹುದು
  • ಮಾನಸಿಕ ಸ್ಥಿರತೆ ಇರಲಿ
  • ಗುರು ದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ

ಕುಂಭ

publive-image

  • ಅನಗತ್ಯ ಖರ್ಚಿಗೆ ನೂರಾರು ದಾರಿ
  • ಅಪರಿಚಿತರಿಗೆ ಸಹಾಯ ಮಾಡಿ
  • ವಿದ್ಯಾರ್ಥಿಗಳಿಗೆ ಅನುಕೂಲವಿದೆ
  • ದೂರ ಪ್ರಯಾಣದ ಸಂಭವ ಇದೆ
  • ಉದ್ಯೋಗದಲ್ಲಿ ಅತಂತ್ರ ಸ್ಥಿತಿ ಕಾಡಬಹುದು
  • ವಿಲಾಸಿ ಜೀವನಕ್ಕೆ ದುಂದುವೆಚ್ಚ ಮಾಡಬಹುದು
  • ಲಕ್ಷ್ಮೀದೇವಿಯನ್ನು ಪ್ರಾರ್ಥನೆ ಮಾಡಿ

ಮೀನ

publive-image

  • ಹಣ ಬಂದರೂ ಉಳಿಯುವುದಿಲ್ಲ ಎಂಬ ಕೊರಗು ಕಾಡಬಹುದು
  • ನೌಕರಿಯಲ್ಲಿ ಹೆಚ್ಚಿನ ಜವಾಬ್ದಾರಿ ಇರುತ್ತದೆ
  • ಸಹೋದರ ಬಗ್ಗೆ ವಿಶ್ವಾಸ ಇರಲಿ
  • ದೊಡ್ಡ ಯೋಜನೆಗಳಿಗೆ ಅಡ್ಡಿ ಉಂಟಾಗಬಹುದು
  • ಸಂಬಂಧದಲ್ಲಿ ಬಿರುಕು ಮಾತು
  • ಮಾನಸಿಕವಾದ ನೋವು ಕಾಡಬಹುದು
  • ಕುಬೇರಲಕ್ಷ್ಮಿ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment