/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಅನೂರಾಧ ನಕ್ಷತ್ರ ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.
ಮೇಷ ರಾಶಿ
- ನಿಮ್ಮ ನಿಮ್ಮ ಕಾರ್ಯಕ್ಷೇತ್ರದ ಮೇಲೆ ಮಾತ್ರ ಗಮನಿಸಿ
- ಬೇರೆಯವರ ಕೆಲಸಕ್ಕೆ, ವಿಷಯಕ್ಕೆ ಆಸಕ್ತಿವಹಿಸಿ ಹಿನ್ನಡೆಯನ್ನು ಅನುಭವಿಸಬಹುದು
- ನಿಮ್ಮ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳಬೇಕು
- ತಾಯಿಯ ಸಲಹೆಗಳನ್ನು ಪಾಲಿಸಿ
- ತಕ್ಷಣಕ್ಕೆ ಬಂದ ಖರ್ಚುಗಳಿಂದ ನಿಮ್ಮ ಯೋಜನೆ ಬದಲಾಗಬಹುದು
- ಸ್ನೇಹಿತರು, ಸಹೋದ್ಯೋಗಿಗಳಿಂದ ಹಳೆಯ ಭಿನ್ನಾಭಿಪ್ರಾಯ ಮತ್ತೆ ಕಾಣಬಹುದು
- ಗಣಪತಿಯನ್ನು ಪ್ರಾರ್ಥನೆ ಮಾಡಿ
ವೃಷಭ
- ನೌಕರಿ ಹುಡುಕುತ್ತಿರುವವರಿಗೆ ಯಾವುದೇ ಪ್ರಯೋಜನ ಕಾಣುತ್ತಿಲ್ಲ
- ವಿವಾಹಿತರಿಗೆ ಉದ್ಯೋಗ ಮತ್ತು ಆರ್ಥಿಕ ಸಮಸ್ಯೆ ಕಾಡಬಹುದು
- ಹಿಂದೆ ಮಾಡಿದ ಸಾಲ ಭಾದೆ ಕಾಡಬಹುದು
- ನಿಮಗಿರುವ ಧೈರ್ಯ ಮತ್ತು ಪ್ರಾಮಾಣಿಕತೆ ನಿಮ್ಮನ್ನ ಕಾಪಾಡಬಹುದು
- ನಿಮ್ಮ ಪ್ರಯತ್ನ ನಿರಂತರವಾಗಿರಲಿ ಹತಾಶರಾಗಬಾರದು
- ಹಿರಿಯರಿಗೆ ಆರೋಗ್ಯದಲ್ಲಿ ಚೇತರಿಕೆ, ಮನಸ್ಸಿಗೆ ಸಮಾಧಾನ
- ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮಿಥುನ
- ಆರ್ಥಿಕವಾಗಿ ಈ ದಿನ ಸ್ವಲ್ಪ ನಿರಾಳ ಎಂದು ಹೇಳಬಹುದು
- ಬೇರೆ ಬೇರೆ ಉದ್ಯೋಗಗಳು ನಿಮ್ಮನ್ನು ಹುಡುಕಿಕೊಂಡು ಬರಬಹುದು
- ಪತ್ರಿಕಾ ರಂಗದಲ್ಲಿರುವವರಿಗೆ ಸ್ವಲ್ಪ ಹಿನ್ನಡೆ
- ಸರ್ಕಾರಿ ಉದ್ಯೋಗಿಗಳಿಗೆ ಇದ್ದ ಸಮಸ್ಯೆ ನಿವಾರಣೆಯಾಗಬಹುದು
- ಮಹಿಳೆಯರಿಗೆ ಅನಾರೋಗ್ಯ ಕಾಡಬಹುದು
- ಸಹೋದ್ಯೋಗಿಗಳ ಸಹಕಾರ, ಸುಖಾಂತ್ಯವಾಗುವ ದಿನ
- ಕುಲದೇವತಾ ಪ್ರಾರ್ಥನೆ ಮಾಡಿ
ಕಟಕ
- ಎಷ್ಟೇ ಪ್ರಯತ್ನ ಪಟ್ಟರು ಮನೆಯಲ್ಲಿನ ಖರ್ಚುಗಳನ್ನು ನಿಯಂತ್ರಿಸಲಾಗುವುದಿಲ್ಲ
- ಆತ್ಮವಿಶ್ವಾಸ ಇದ್ದರೂ ಕೆಲವು ಸಂದರ್ಭಗಳು ಧೈರ್ಯಗೆಡಿಸುತ್ತವೆ
- ಲೇಖಕರಿಗೆ ಸ್ಥಾನಮಾನ ಸಿಗುವ ಸಾಧ್ಯತೆಗಳಿವೆ
- ರಾಜಕಾರಣಿಗಳಿಂದ ಅವಮಾನ ಅಥವಾ ಭಯ ಕಾಡಬಹುದು
- ಎದುರಾಳಿಗಳ ದರ್ಶನ - ಜೊತೆಗಿರುವಿಕೆ ಮುಜುಗರ ತರುತ್ತದೆ
- ಸಹೋದರ ಸಲಹೆ ಪಡೆಯಬೇಕಾಗಬಹುದು
- ಇಷ್ಟದೇವತಾ ಪ್ರಾರ್ಥನೆ ಮಾಡಿ
ಸಿಂಹ
- ದಿನಪೂರ್ತಿ ಕಲ್ಪನೆಯಲ್ಲಿಯೇ ಮುಳುಗಿ ಹೋಗುತ್ತೀರಿ
- ಕಾರ್ಯದ ಗುಣಮಟ್ಟದ ಬಗ್ಗೆ ಸ್ವಲ್ಪ ಆಲೋಚಿಸಬೇಕಾಗುತ್ತದೆ
- ವ್ಯಾವಹಾರಿಕವಾಗಿ ನಷ್ಟ ಉಂಟಾಗಬಹುದು
- ಆತುರದ ನಿರ್ಧಾರದಿಂದ ಗುರಿ ಮುಟ್ಟಲಾಗದ ನೋವು ಕಾಡಬಹುದು
- ಮಾನಸಿಕ ಚಡಪಡಿಕೆ ಇರುತ್ತದೆ
- ಕುಟುಂಬದ ಒತ್ತಡ, ಆಗಬೇಕಾದ ಅಗತ್ಯ ಕೆಲಸವನ್ನು ಮುಂದೂಡಬಹುದು
- ಶ್ರೀ ಲಕ್ಷ್ಮಿವೆಂಕಟರಮಣನನ್ನು ಪ್ರಾರ್ಥನೆ ಮಾಡಿ
ಕನ್ಯಾ
- ಬಹಳ ದಿನಗಳಿಂದ ಆಲೋಚಿಸುತ್ತಿದ್ದ ಉತ್ತಮ ಕೆಲಸಕ್ಕೆ ಇಂದು ಶುಭ
- ನೀವು ತಾಳ್ಮೆ ಮತ್ತು ಸಮಯೋಚಿತ ಬುದ್ಧಿಯನ್ನ ಪ್ರಶಂಸಿಸಲಾಗುತ್ತದೆ
- ನೀವು ತೆಗೆದುಕೊಂಡ ನಿರ್ಧಾರ ಸರಿಯಾಗಿದೆ ಎಂದು ಸಾಬೀತಾಗುತ್ತದೆ
- ವೈವಾಹಿಕ ಜೀವನ ಸಾಮರಸ್ಯದಿಂದ ಕೂಡಿರುತ್ತದೆ
- ಅನಿರೀಕ್ಷಿತವಾಗಿ ಯಾವುದಾದರು ಸಮಾರಂಭದಲ್ಲಿ ಪಾಲ್ಗೊಳ್ಳಬಹುದು
- ಮನಸ್ಸಿಗೆ ಏನೋ ಒಂದು ರೀತಿಯ ಆತಂಕ, ಅದಕ್ಕೆ ಕೂಡ ಉತ್ತರ ಸಿಗುವುದಿಲ್ಲ
- ನವಗ್ರಹರ ಪ್ರಾರ್ಥನೆ ಮಾಡಿ ವಿಶೇಷವಾಗಿ ಚಂದ್ರಗ್ರಹ ಆರಾಧನೆ ಮಾಡಿ
ತುಲಾ
- ನಿಮ್ಮ ಅಭಿಪ್ರಾಯ ಭಾವನೆಗಳನ್ನ ವ್ಯಕ್ತಪಡಿಸಲು ಅವಕಾಶ ಇರುತ್ತದೆ
- ನಿಮ್ಮ ಬೇಕು ಬೇಡಗಳನ್ನು ಮನೆಯಲ್ಲಿ ಹಾಗೂ ಹೊರಗೆ ಕೇಳುವವರಿರುವುದಿಲ್ಲ
- ನಿಮಗಿಷ್ಟವಿಲ್ಲದಿದ್ದರೂ ಕೆಲವು ವಿಚಾರಕ್ಕೆ ಹೌದು ಎಂದು ಒಪ್ಪ ಬೇಕಾಗಬಹುದು
- ಪ್ರೇಮಿಗಳಿಗೆ ಹಿನ್ನಡೆ, ತಮ್ಮ ತಪ್ಪಿನಿಂದ ತೊಂದರೆಯೂ ಆಗಬಹುದು
- ನಿಮಗಿಂತ ದೊಡ್ಡವರ ಎದುರು ವಾದಕ್ಕೆ ಹೋಗಬೇಡಿ
- ನಿಮಗೆ ಗೊತ್ತಿಲ್ಲದೇ ಮಾತು ಹಗುರವಾಗುತ್ತಾ ನಿಮ್ಮ ಬೆಲೆ ಕಡಿಮೆಯಾಗಬಹುದು
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
- ನಿಮ್ಮ ಕಾರ್ಯದ ಮೇಲಿನ ಶಿಸ್ತನ್ನು ಕಡಿಮೆ ಮಾಡಿಕೊಳ್ಳಬಾರದು
- ವಿದ್ಯಾರ್ಥಿಗಳಿಗೆ ಅನಾನುಕೂಲ ಕಾಡಬಹುದು
- ಯಾರಿಂದಲೋ ಸಹಾಯದ ಮಾತು ಆದರೆ ಪ್ರಯೋಜನವಿಲ್ಲ
- ರೇಷ್ಮೆ ವ್ಯಾಪಾರಸ್ಥರಿಗೆ ಅನುಕೂಲ ಲಾಭಗಳಿವೆ
- ವಾಹನ ಚಾಲಕರು ತುಂಬಾ ಎಚ್ಚರಿಕೆಯಿಂದ ಇರಬೇಕು
- ದಿನದ ಕೊನೆಯ ಹೊತ್ತಿಗೆ ಬೇಸರ, ಕೋಪಗಳು ಹೆಚ್ಚಾಗಬಹುದು
- ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ
ಧನುಸ್ಸು
- ನಿಮ್ಮ ಅಪೇಕ್ಷೆಗಳಿಗೆ ಅಡ್ಡಿಯಾಗುವ ದಿನ
- ಯಾವುದೇ ಕೆಲಸಕ್ಕೆ ಮುಂದಾದರು ನಿಮಗೆ ತೊಂದರೆಯಾಗಲು ನಿಗಧಿಯಾದಂತಿರುತ್ತದೆ
- ಹೃದಯ ಸಂಬಂಧಿ ರೋಗಿಗಳು ಒತ್ತಡದಿಂದ ದೂರವಿರಬೇಕು
- ಸಾಲ ಪಡೆಯಲು ಪ್ರಯತ್ನಿಸಬಹುದು ಆದರೆ ಕೆಲಸವಾಗುವುದಿಲ್ಲ
- ಇಂದು ಶಾಂತರಾಗಿರುವುದು ಒಳ್ಳೆಯದು
- ಇಂದು ಸ್ವಯಂ ಮೌಲ್ಯ ಮಾಪನ ಮಾಡಿಕೊಳ್ಳಿ
- ಗಣಪತಿಯನ್ನು ಪ್ರಾರ್ಥನೆ ಮಾಡಿ
ಮಕರ
- ಕೈಯಲ್ಲಿ ಹಣವಿದ್ದರೇ ಯಾರು ನಿಮ್ಮನ್ನು ಮಾತನಾಡಿಸಲು ಸಾಧ್ಯವಿಲ್ಲ
- ಇಂದು ಮಕ್ಕಳ, ಕುಟುಂಬದ ಸಮಸ್ಯೆ ನಿಮಗೆ ಕಾಣುವುದೇ ಇಲ್ಲ
- ನಿಮ್ಮ ಕೆಲಸ ಕಾರ್ಯ ಸ್ವಭಾವಗಳಲ್ಲಿ ಗಣನೀಯ ಬದಲಾವಣೆಯ ದಿನ
- ಈ ದಿನ ಬರೀ ಖರ್ಚು ಅದರಲ್ಲಿಯೇ ಸಂತೋಷ
- ಹಲವರು ನಿಮ್ಮಿಂದ ಉಪಯೋಗ ಪಡೆಯುತ್ತಾರೆ
- ನಿಮ್ಮ ವರ್ತನೆಗೆ ಬಂಧುಗಳು, ಸ್ನೇಹಿತರು ವಿಷಾದ ವ್ಯಕ್ತಪಡಿಸಬಹುದು
- ಈಶ್ವರನನ್ನು ಪ್ರಾರ್ಥನೆ ಮಾಡಿ
ಕುಂಭ
- ವೈದ್ಯಕೀಯ ಕ್ಷೇತ್ರದಲ್ಲಿರುವವರಿಗೆ ಒಳ್ಳೆಯ ದಿನ
- ವೃತ್ತಿ ಧರ್ಮದಿಂದ, ಕರ್ತವ್ಯದಿಂದ ಬಿಡುವಿಲ್ಲದ ಕೆಲಸ
- ಆದಾಯ ಚೆನ್ನಾಗಿರುತ್ತದೆ ಆದರೆ ಸಂತೋಷದಿಂದ ಕಾಲ ಕಳೆಯಲು ಅವಕಾಶವಿಲ್ಲ
- ಇಂದು ಕೆಲಸದ ಒತ್ತಡ ತೃಪ್ತಿ ಇರುತ್ತದೆ
- ಬೇರೆಯವರ ಸಹಾಯಕ್ಕೆ ಮುಂದಾಗುತ್ತೀರಿ
- ನಿಮ್ಮ ಉದಾರತೆ ಕಂಡು ಜನರು ಶ್ಲಾಘಿಸುತ್ತಾರೆ
- ನಿಮಗೆ, ಕುಟುಂಬಕ್ಕೆ ಗೌರವ ಹೆಚ್ಚಾಗುವ ದಿನ
- ಕುಲದೇವತಾ ಆರಾಧನೆ ಮಾಡಿ
ಮೀನ
- ತುಂಬಾ ದೊಡ್ಡದಾಗಿ ತತ್ವ ಚಿಂತನೆ ನಡೆಸಬಹುದು
- ರಾಜ್ಯ ರಾಷ್ಟ್ರಮಟ್ಟದ ರಾಜಕಾರಣದ ವಿಷಯ ಪ್ರಸ್ತಾಪ ಮಾಡುತ್ತೀರಿ
- ನಿಮಗೆ ಸಂಬಂಧವಿಲ್ಲದ ವಿಚಾರದಿಂದ ಮನಸ್ಸು ಕೆಡಿಸಿಕೊಳ್ಳುತ್ತೀರಿ
- ಷೇರು ಮಾರುಕಟ್ಟೆಯಿಂದ ಲಾಭ ನಿಮ್ಮದಾಗುತ್ತದೆ
- ನಿಮ್ಮ ಪ್ರಭಾವವೇ ನಿಮಗೆ ಸಮಸ್ಯೆ ಆಗಬಹುದು ಎಚ್ಚರಿಕೆ
- ಭೌತಿಕವಾಗಿ ಹಲವಾರು ದೃಷ್ಟಿಕೋನಗಳಿಂದ ವಿಷಯ ಚರ್ಚಿಸಿ
- ನಿಮ್ಮದೇ ಆದ ನಿಲುವು ಹೆಚ್ಚಿನದಾಗಿ ಕೆಲಸಕ್ಕೆ ಬರುವುದಿಲ್ಲ
- ಮಹಾವಿಷ್ಣು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ