Health Tips: ಬೆಳಗ್ಗೆ ಎದ್ದು ಈ ಕೆಲಸ ಮಾಡಿದ್ರೆ ಸಕ್ಕರೆ ಕಾಯಿಲೆ ಮಾಯ; ಈ ಸ್ಟೋರಿ ತಪ್ಪದೆ ಓದಿ!

author-image
Ganesh Nachikethu
Updated On
Health Tips: ಬೆಳಗ್ಗೆ ಎದ್ದು ಈ ಕೆಲಸ ಮಾಡಿದ್ರೆ ಸಕ್ಕರೆ ಕಾಯಿಲೆ ಮಾಯ; ಈ ಸ್ಟೋರಿ ತಪ್ಪದೆ ಓದಿ!
Advertisment
  • ಸಕ್ಕರೆ ಕಾಯಿಲೆ ಸಾಮಾನ್ಯವಾಗಿ ಬಹುತೇಕರಿಗೆ ಬಂದೇ ಬರುತ್ತದೆ!
  • ಇದು ಜೀವನದಲ್ಲೇ ಬರುವಂತಹ ಅತೀದೊಡ್ಡ ಭಯಾನಕ ಕಾಯಿಲೆ
  • ಸಕ್ಕರೆ ಕಾಯಿಲೆ ಬಂದರೆ ಯಾವುದೇ ಕಾರಣಕ್ಕೂ ಸಿಹಿ ಸೇವಿಸಬಾರದು

ಇತ್ತೀಚೆಗೆ ಸಕ್ಕರೆ ಕಾಯಿಲೆ ಸಾಮಾನ್ಯವಾಗಿ ಬಹುತೇಕರಿಗೆ ಬಂದೇ ಬರುತ್ತದೆ. ಇದು ನಮ್ಮ ಜೀವನ ಶೈಲಿಯಲ್ಲಿ ಬರುವಂತಹ ಅತೀದೊಡ್ಡ ಭಯಾನಕ ಕಾಯಿಲೆ. ಒಮ್ಮೆ ಬಂದರೆ ಹೋಗುವುದು ಬಹಳ ಕಷ್ಟ. ಬದುಕಿದ್ದು ಸತ್ತ ಹಾಗೇ ಮಾಡುವುದು ಇದರ ಮೂಲ ಗುಣ. ಸಕ್ಕರೆ ಕಾಯಿಲೆ ಬಂದರೆ ಯಾವುದೇ ಕಾರಣಕ್ಕೂ ಸಿಹಿ ಸೇವಿಸಬಾರದು. ಇದಕ್ಕೆ ಕಾರಣ ಬ್ಲಡ್ ಶುಗರ್ ಲೆವೆಲ್ ಏರಿಕೆ ಆಗುತ್ತದೆ ಅನ್ನೋ ವಿಚಾರ.

ಶುಗರ್ ತಡೆಯುವುದು ಹೇಗೆ? ಇದಕ್ಕೆ ಟಿಪ್ಸ್​ ಏನು?

ಶುಗರ್​​ ಕಡಿಮೆ ಮಾಡುವುದು ಬಹಳ ಸುಲಭ. ಯಾರಿಗೆ ಶುಗರ್​ ಇದೆಯೋ ಅವರು ಆಹಾರ ಪದ್ಧತಿ ಬದಲಿಸಿಕೊಳ್ಳಬೇಕು. ವ್ಯಾಯಾಮ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು. ಹಣ್ಣು, ತರಕಾರಿ ಸಹಿತ ಕಾಳು ಕಡಿ ಸೇವಿಸಬೇಕು. ದಿನಕ್ಕೆ ಅರ್ಧ ಗಂಟೆ ವ್ಯಾಯಾಮ ಕಡ್ಡಾಯ. ತೂಕ ನಿರ್ವಹಣೆ ಮಾಡಿಕೊಳ್ಳುವುದು.

publive-image

ಇಷ್ಟೇ ಅಲ್ಲ ನಿದ್ರೆ ಸಮರ್ಪಕವಾಗಿ ಮಾಡಬೇಕು. ಮಾನಸಿಕ ಒತ್ತಡ ಕಂಟ್ರೋಲ್ ಮಾಡಿಕೊಳ್ಳಬೇಕು. ಇದರ ಜೊತೆಗೆ ಸಕ್ಕರೆ ಕಾಯಿಲೆ ಕಂಟ್ರೋಲ್ ಮಾಡಿಕೊಳ್ಳಲು ಬಾಜ್ರಾ ನೀರು ಕುಡಿಯುವುದು. ನೈಸರ್ಗಿಕ ಸ್ವರೂಪದಲ್ಲಿ ಕುಡಿಯುವ ಈ ಬಾಜ್ರಾ ನೀರು ರಕ್ತದಲ್ಲಿ ಬ್ಲಡ್ ಶುಗರ್ ಲೆವೆಲ್ ಉತ್ತಮವಾಗಿ ಇರುವಂತೆ ನೋಡಿಕೊಳ್ಳುತ್ತದೆ. ಪ್ರತಿದಿನ ಉತ್ತಮ ಪ್ರಮಾಣದಲ್ಲಿ ಈ ನೀರು ರಕ್ತದಲ್ಲಿನ ಸಕ್ಕರೆ ಪ್ರಮಾಣ ಏರಿಕೆ ಆಗುವುದನ್ನು ತಡೆಯುತ್ತದೆ.

ಜರ್ನಲ್ ಆಫ್ ಕ್ಲೀನಿಕಲ್ ನ್ಯೂಟ್ರಿಷನ್ ತನ್ನ ಅಧ್ಯಯನ ವರದಿಯಲ್ಲಿ 12 ವಾರಗಳವರೆಗೆ ಬಾಜ್ರಾ ನೀರು ಕುಡಿದು ಬ್ಲಡ್ ಶುಗರ್ ಲೆವೆಲ್ ಕಡಿಮೆ ಮಾಡಿಕೊಂಡ ಬಗ್ಗೆ ಉದಾಹರಣೆ ಇದೆ. ಇನ್ಸುಲಿನ್ ಸೂಕ್ಷ್ಮತೆಯನ್ನು ನಿರ್ವಹಣೆ ಮಾಡಿಕೊಳ್ಳಲು ಇದು ಹೆಚ್ಚು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಅಯ್ಯಯ್ಯೋ! ಭೀಕರ ಮನೆ ಕುಸಿತ; ಮೂವರು ದುರ್ಮರಣ; ಹಲವರು ಸಾವು ಬದುಕಿನ ಮಧ್ಯೆ ಹೋರಾಟ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment