Advertisment

ಇಂದು ಬಡವರಿಗೆ ದಾನ ಮಾಡಿ, ಕ್ರೀಡಾಪಟುಗಳಿಗೆ ಶುಭ ದಿನ; ಇಲ್ಲಿದೆ ಇಂದಿನ ಭವಿಷ್ಯ

author-image
Veena Gangani
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ವಿದ್ಯುತ್ ಉಪಕರಣ ಮಾರಾಟ ಮಾಡುವವರಿಗೆ ಶುಭಸೂಚನೆ ಇದೆ
  • ಹಲವು ದಿನದ ಸಮಸ್ಯೆಗಳಿಗೆ ಇಂದು ಪರಿಹಾರ ಮಾರ್ಗ ಸಿಗಬಹುದು
  • ಕೆಲಸ ಮಾತು ಯಾವುದರಲ್ಲೂ ಸ್ವಾತಂತ್ರ್ಯವಿರದೆ ಹಿಂಸೆ ಪಡಬೇಕಾಗತ್ತೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

Advertisment

ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಅನೂರಾಧ ನಕ್ಷತ್ರ ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

publive-image

  • ಅನಾರೋಗ್ಯ ಪೀಡಿತರಿಗೆ ತೊಂದರೆಯಾಗಬಹುದು ಜಾಗ್ರತೆವಹಿಸಿ
  • ಮಧುಮೇಹಿಗಳಿಗೆ ಶುಗರ್​ ಲೆವೆಲ್​ ಕಡಿಮೆಯಾಗಿ ತೊಂದರೆಯಾಗಬಹುದು ಎಚ್ಚರಿಕೆವಹಿಸಿ
  • ಸ್ನೇಹಿತರ, ಕುಟುಂಬಸ್ಥರ ಸಲಹೆಗಳನ್ನ ನಿರ್ಲಕ್ಷ್ಯ ಮಾಡಬೇಡಿ, ಗಂಭೀರವಾಗಿ ಪರಿಗಣಿಸಿ
  • ಮಕ್ಕಳಿಗಾಗಿ ವಸ್ತ್ರಗಳನ್ನು, ಉಡುಗೊರೆಗಳನ್ನು ಖರೀದಿಸಬಹುದು
  • ನಿಮ್ಮ ಕೆಲಸದ ಶೈಲಿಯಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡಿಕೊಂಡರೆ ಒಳ್ಳೆಯದು
  • ಧನ್ವಂತರಿಯನ್ನು ಆರಾಧನೆ ಮಾಡಿ

ವೃಷಭ

publive-image

  • ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಿರುವ ದಿನ
  • ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿ ಒಳ್ಳೆಯ ತೀರ್ಮಾನಗಳನ್ನು ಕೈಗೊಳ್ಳಬಹುದು
  • ಕಠಿಣ ಪರಿಶ್ರಮದಿಂದ, ಬುದ್ಧಿವಂತಿಕೆಯಿಂದ ಕಷ್ಟಕರವಾದ ಕೆಲಸಗಳನ್ನು ಸುಲಭವಾಗಿ ನಿಭಾಯಿಸುತ್ತೀರಿ
  • ಕ್ರೀಡಾಪಟುಗಳಿಗೆ ಶುಭ ದಿನ, ಜೂಜಾಡುವವರಿಗೆ ತುಂಬಾ ಹಿನ್ನಡೆಯ ದಿನ
  • ಲಕ್ಷ್ಮಿದೇವಿಯನ್ನು ಪ್ರಾರ್ಥಿಸಿ
Advertisment

ಮಿಥುನ

publive-image

  • ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳದವರಿಂದ ನಿಮಗೆ ಅವಮಾನ ಸಾಧ್ಯತೆ
  • ತುಂಬಾ ಮುಖ್ಯವಾದ ವಿಷಯ ಅಥವಾ ವಸ್ತುವನ್ನು ಮರೆತುಬಿಡಬಹುದು ಗಮನವಿರಲಿ
  • ನಿಮ್ಮ ಕೈಕೆಳಗೆ ಕೆಲಸ ಮಾಡುವವರನ್ನ ಚೆನ್ನಾಗಿ ನೋಡಿಕೊಳ್ಳಿ, ಇಲ್ಲದಿದ್ದರೆ ನಿಂದನೆಗೆ ಒಳಗಾಗಬಹುದು
  • ಶ್ರೀರಾಮನನ್ನು ಆರಾಧಿಸಿ

ಕಟಕ

publive-image

  • ದಲ್ಲಾಳಿಗಳು ಮತ್ತು ನಿತ್ಯ ಬಡ್ಡಿ ವ್ಯವಹಾರ ಮಾಡುವವರಿಗೆ ಹಿನ್ನಡೆ ಸಾಧ್ಯತೆ
  • ನಿಮ್ಮ ಹಣಕ್ಕಾಗಿ ನೀವೆ ಕಾಯಬೇಕಾಗಬಹುದು
  • ಈ ದಿನ ಕುಟುಂಬದಲ್ಲಿ ಸಾಮರಸ್ಯವಿರುತ್ತದೆ
  • ನಿಮ್ಮ ವ್ಯವಹಾರದಿಂದ ಮನೆಯ ವಾತಾವರಣ ಹದಗೆಡಬಹುದು ಎಚ್ಚರ
  • ಈ ದಿನ ನಿಮಗೆ ಸ್ನೇಹಿತರ ಸಹಾಯ ಬೇಕಾಗಬಹುದು
  • ಮನಸ್ಸಿನಲ್ಲಿದ್ದ ಪ್ರೀತಿ-ಪ್ರೇಮ ವಿಚಾರ ತಿಳಿಸಲು ಶುಭವಾದ ದಿನ
  • ಚಂಡಿಕಾ ಪರಮೇಶ್ವರಿಯನ್ನು ಆರಾಧಿಸಿ

ಸಿಂಹ

publive-image

  • ಹಣ ಖರ್ಚು ಮಾಡುವುದಕ್ಕೆ ಸರಿಯಾದ ಯೋಜನೆ ಮಾಡಿಕೊಳ್ಳಿ
  • ನಿಮ್ಮ ನಿರೀಕ್ಷೆಗಿಂತ ಅಧಿಕ ಹಣವ್ಯಯವಾಗಬಹುದು
  • ರಹಸ್ಯ ಶತ್ರುಗಳು ಸಮಸ್ಯೆ ಉಂಟು ಮಾಡಬಹುದು ಗಮನವಿರಲಿ
  • ಮಕ್ಕಳ ಚಟುವಟಿಕೆ, ಅವರ ವಿದ್ಯಾಭ್ಯಾಸದ ಕಡೆ ಸ್ವಲ್ಪ ಗಮನ ಹರಿಸಿದರೆ ಒಳ್ಳೆಯದು
  • ಸ್ನೇಹಿತರ ಜೊತೆಯ ಭಿನ್ನಾಭಿಪ್ರಾಯಗಳು ಇಂದು ಶತ್ರುತ್ವಕ್ಕೆ ತಿರುಗಬಹುದು ಜಾಗ್ರತೆ
  • ತಾಪಸಮನ್ಯುವನ್ನು ಪ್ರಾರ್ಥಿಸಿ
Advertisment

ಕನ್ಯಾ

publive-image

  • ಬೇರೆಯವರನ್ನು ಟೀಕಿಸಲು ಹೋಗಿ ನಿಮ್ಮ ವೈಯಕ್ತಿಕ ವಿಚಾರದಲ್ಲಿ ಅವಮಾನ ಸಾಧ್ಯತೆ
  • ಪ್ರೇಮಿಗಳ ನಡುವೆ ಜಗಳ, ಮಾನಸಿಕ ಹಿಂಸೆ ಸಾಧ್ಯತೆ ಎಚ್ಚರಿಕೆ ಇರಲಿ
  • ಕುಟುಂಬದವರು ನಿಮ್ಮ ಪರವಾಗಿ ಮಾತನಾಡಿ ನಿಮ್ಮನ್ನು ಸಮರ್ಥಿಸಿಕೊಳ್ಳುತ್ತಾರೆ
  • ಪ್ರೇಮ ವಿಚಾರವನ್ನು ಕುಟುಂಬದಲ್ಲಿ ತಿಳಿಸಿದರೆ ಒಳ್ಳೆಯದು
  • ಲಕ್ಷ್ಮೀನಾರಾಯಣನನ್ನು ಪ್ರಾರ್ಥಿಸಿ

ತುಲಾ

publive-image

  • ನಿಮ್ಮ ಈ ದಿನದ ಎಲ್ಲಾ ಕೆಲಸ ಕಾರ್ಯಗಳಿಗೆ ಅಡಚಣೆ ಅಥವಾ ವಿಘ್ನ ಸಾಧ್ಯತೆ
  • ಪ್ರಯಾಣಕ್ಕೆ ಈ ದಿನ ಶುಭವಾಗಿಲ್ಲ, ಪ್ರಯಾಣ ಮುಂದೂಡಿದರೆ ಒಳ್ಳೆಯದು
  • ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ
  • ಹೊಟ್ಟೆಗೆ ಸಂಬಂಧಿಸಿದ ತೊಂದರೆ ಹೆಚ್ಚಾಗಿ ಕಾಡಬಹುದು ಜಾಗ್ರತೆಯಿರಲಿ
  • ಗಣಪತಿ ಆರಾಧನೆ ಮಾಡಿ

ವೃಶ್ಚಿಕ

publive-image

  • ಕುಟುಂಬ ವಾತಾವರಣವು ಇಂದು ಮನಸ್ಸಿಗೆ ಸಮಾಧಾನ ನೀಡಬಹುದು
  • ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಶುಭ ದಿನ
  • ನೌಕರಿ ದೃಷ್ಟಿಯಿಂದ ವಿದೇಶ ಪ್ರಯಾಣಕ್ಕೆ ಶುಭ ದಿನ
  • ವಿದೇಶದಲ್ಲಿರುವವರು ಇಲ್ಲಿಗೆ ಬರಲು ಅನುಕೂಲಕರವಾದ ದಿನ
  • ಕುಟುಂಬದಲ್ಲಿ ಸಾಮರಸ್ಯ ಕಾಪಾಡಿಕೊಳ್ಳಿ
  • ಮನೆಯವರೆಲ್ಲಾ ಒಟ್ಟು ಸೇರಿ ಕುಲದೇವರನ್ನು ಪೂಜಿಸಿ
Advertisment

ಧನುಸ್ಸು

publive-image

  • ಪಿತ್ರಾರ್ಜಿತ ಆಸ್ತಿ ಲಭಿಸುವ ಸಾಧ್ಯತೆ ಇದೆ
  • ನಿಮ್ಮ ಸಾಮಾಜಿಕ ವಲಯವು ವಿಸ್ತಾರವಾಗಬಹುದು
  • ನಿಮ್ಮ ವೈಯಕ್ತಿಕ ಸೌಲಭ್ಯಗಳಿಗಾಗಿ ತುಂಬಾ ಹಣವ್ಯಯವಾಗಬಹುದು
  • ಪಿತ್ರಾರ್ಜಿತ ಆಸ್ತಿ ಲಭಿಸಿದರೆ ಲಾಭ-ನಷ್ಟದ ಲೆಕ್ಕ ಹಾಕದೆ ಹಿರಿಯರ ಆರ್ಶೀವಾದ ಎಂದು ಸ್ವೀಕರಿಸಿ
  • ನಿಮ್ಮ ಮಾತು ಸ್ಪಷ್ಟವಾಗಿ ಮಿತವಾಗಿರಲಿ
  • ಗ್ರಾಮದೇವತೆಯನ್ನು ಪ್ರಾರ್ಥಿಸಿ

ಮಕರ

publive-image

  • ಬೆಳಗಿನಿಂದ ಮಧ್ಯಾಹ್ನದವರೆಗೆ ಕೆಲಸಗಳಲ್ಲಿ ಕಿರಿಕಿರಿ ಸಾಧ್ಯತೆ
  • ನೀವು ತಲೆ ನೋವಿನಿಂದ ತೊಂದರೆ ಪಡಬಹುದು
  • ಮಧ್ಯಾಹ್ನದ ನಂತರ ನಿಮ್ಮ ಕೆಲಸಗಳು ಚುರುಕುಗೊಳ್ಳಬಹುದು
  • ಈ ದಿನ ಬೇರೆಯವರಿಗೆ ಸಲಹೆ, ಸೂಚನೆ ಕೊಡಬೇಡಿ
  • ಮನೆಯಲ್ಲಿಯೇ ಉಳಿಯುವುದರಿಂದ ಕೆಲಸದ ಒತ್ತಡ ಹೆಚ್ಚಾಗಬಹುದು
  • ಸಂಬಂಧಿಕರು ಮನೆಗೆ ಬರುವುದರಿಂದ ನಿಮಗೆ ಕಿರಿಕಿರಿಯಾಗಬಹುದು
  • ಸಾಯಿಬಾಬಾರನ್ನು ಪ್ರಾರ್ಥಿಸಿ

ಕುಂಭ

publive-image

  • ಆರೋಗ್ಯದ ದೃಷ್ಟಿಯಿಂದ ಉಷ್ಣದ ಸಮಸ್ಯೆ ಕಾಡಬಹುದು ಜಾಗ್ರತೆವಹಿಸಿ
  • ಖಾಸಗಿ ಉದ್ಯೋಗಿಗಳಿಗೆ ಕೆಲಸದಲ್ಲಿ ಕಿರಿಕಿರಿ ಸಾಧ್ಯತೆ
  • ಯುವಕರು ತಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡುವುದಿಲ್ಲ
  • ಅಗತ್ಯಬಿದ್ದರೆ ಕೆಲಸವನ್ನು ಬಿಡುತ್ತೇನೆಂಬ ಮಾತು ಬರಬಹುದು
  • ಯುವಕರು ತಮ್ಮ ಕೆಲಸದ ವಿಚಾರದಲ್ಲಿ ತಾಳ್ಮೆವಹಿಸಿ ಇಲ್ಲದಿದ್ದರೆ ಭವಿಷ್ಯದಲ್ಲಿ ತೊಂದರೆಯಾಗಬಹುದು
  • ಪಾರ್ವತಿಯನ್ನು ಆರಾಧಿಸಿ
Advertisment

ಮೀನ

publive-image

  • ಅತಿಯಾದ ಕೋಪದಿಂದ ಸಂಬಂಧಿಕರು ದೂರವಾಗುವ ಸಾಧ್ಯತೆ
  • ನಿಮ್ಮ ವೈಯಕ್ತಿಕ ವಿಚಾರಗಳಿಗೆ ಹೆಚ್ಚು ಹಣ ಖರ್ಚು ಸಾಧ್ಯತೆ
  • ವಿಶೇಷವಾದ ವ್ಯಕ್ತಿಯನ್ನು ಭೇಟಿಯಾಗುವ ಸಾಧ್ಯತೆ
  • ಚಿಕ್ಕಮಕ್ಕಳ ಜೊತೆ ಯಾವುದೇ ಗೌಪ್ಯ ವಿಚಾರಗಳನ್ನು ಮಾತನಾಡಬೇಡಿ, ಅವಮಾನ ಸಾಧ್ಯತೆ
  • ರುದ್ರಮನ್ಯುವನ್ನು ಪ್ರಾರ್ಥಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment