/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಕೃತಿಕಾ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.
ಮೇಷ ರಾಶಿ
- ಸಮಾಜದಲ್ಲಿ ಉನ್ನತವಾದ ಸ್ಥಾನಮಾನ ಸಿಗಬಹುದು
- ಬೇರೆಯವರ ಹಣ ಅಥವಾ ದ್ರವ್ಯದ ನಿರೀಕ್ಷೆಯಲ್ಲಿದ್ದರೆ ಅನುಕೂಲವಿದೆ
- ಗುರುಹಿರಿಯರ ಆಶೀರ್ವಾದ ಪಡೆಯಿರಿ
- ನಿಮ್ಮ ಸ್ನೇಹಿತರ ಕಷ್ಟಕ್ಕೆ ಸಹಾಯ ಮಾಡುತ್ತೀರಿ
- ಯಾವುದೇ ರೀತಿಯ ವಿವಾದಕ್ಕೆ ಅವಕಾಶ ಬೇಡ
- ಬೇರೆಯವರ ಮನಸ್ಸನ್ನು ಕೆರಳಿಸುವ ಮಾತುಗಳು ಬೇಡ
- ಗಣಪತಿಯನ್ನು ಪ್ರಾರ್ಥನೆ ಮಾಡಿ
ವೃಷಭ
- ನೌಕರಿಯಲ್ಲಿ ಭಡ್ತಿ ಸಿಗಬಹುದು
- ಬಂಧುಗಳಲ್ಲಿ ಮನಸ್ತಾಪ ಉಂಟಾಗಬಹುದು
- ಮಾನಸಿಕವಾಗಿ ಬೇಸರ ಆಗಬಹುದು
- ಯಾರಿಗೆ ಒಳ್ಳೆಯದನ್ನು ಮಾಡಿದರು ಪ್ರಯೋಜನವಿಲ್ಲ
- ಸುಮ್ಮನಿರುವುದೇ ಮನಸ್ಸಿಗೆ ಶಾಂತಿ
- ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮಿಥುನ
- ಸಿಕ್ಕ ಅವಕಾಶಗಳು ಸದುಪಯೋಗವಾಗಲಿ
- ಹೂಡಿಕೆ ಹಣದಿಂದ ಉತ್ತಮ ಆದಾಯ ಬರಬಹುದು
- ಚಂಚಲ ಮನಸ್ಥಿತಿ ನಷ್ಟದ ಸಾಧ್ಯತೆ
- ಬಂಧುಗಳಲ್ಲಿ ವಿರೋಧವನ್ನು ಮಾಡಿಕೊಳ್ಳಬೇಡಿ ತೊಂದರೆಯಿದೆ
- ಆಸ್ತಿ ವಿಚಾರದಲ್ಲಿ ತಾಳ್ಮೆಯಿರಲಿ
- ಬರಬೇಕಾದನ್ನು ಜಾಣ್ಮೆಯಿಂದ ಪಡೆಯುವುದು ಬುದ್ಧಿವಂತಿಕೆ
- ಭೂವರಾಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕಟಕ
- ಮೇಲಾಧಿಕಾರಿಗಳಿಂದ ಅನುಕೂಲಕರ ದಿನ
- ಮೇಲಾಧಿಕಾರಿಗಳಿಂದ ಅನುಕೂಲವಾಗಬಹುದು
- ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು
- ಮನಸ್ಸಿಗೆ ಸಂಕಷ್ಟ ಆಗಲಿದೆ
- ಬಂಧುಗಳ ಮಾತಿನಿಂದ ಕೋಪ ಬರಲಿದೆ
- ವ್ಯಾವಹಾರಿಕವಾಗಿ ಅಸಮಾಧಾನ
- ಇಂದು ಬೇಸರದ ದಿನ
- ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ಸಿಂಹ
- ತುಂಬಾ ತಾಳ್ಮೆಯಿಂದ ಎಲ್ಲಾ ಕೆಲಸವನ್ನು ನಿಭಾಯಿಸಬೇಕಾಗಲಿದೆ
- ಹೊಸ ವ್ಯಕ್ತಿಗಳ ಪರಿಚಯವಾಗಬಹುದು
- ಕೆಲಸ ಕಾರ್ಯಗಳಲ್ಲಿ ನಿಧಾನಗತಿ
- ಬುದ್ಧಿವಂತಿಕೆಯಿಂದ ಕೆಲಸ ಮಾಡಿ ಅನುಕೂಲವಿದೆ
- ಯಶಸ್ಸಿನ ಬಾಗಿಲು ತೆರೆದಿದೆ ಗಮನಿಸಿ
- ಹಣಕಾಸಿನ ವಿಚಾರದಲ್ಲಿ ಪುಣ್ಯವಂತರು
- ಈಶ್ವರನ ಆರಾಧನೆ ಮಾಡಿ
ಕನ್ಯಾ
- ರಿಯಲ್ ಎಸ್ಟೇಟ್ ಏಜೆಂಟ್ಸ್ ಗಳಿಗೆ ಅನುಕೂಲಕರ ದಿನ
- ಮನಸ್ತಾಪಕ್ಕೆ ಹಲವಾರು ಮಾರ್ಗಗಳಿವೆ
- ಆಸ್ತಿಯ ವಿಚಾರದಲ್ಲಿ ಕಲಹ ಉಂಟಾಗಬಹುದು
- ಸಹೋದರ ವರ್ಗದ ಅಸಹಕಾರ
- ಮನೆಯಲ್ಲಿ ಆಕಸ್ಮಿಕ ಅಗ್ನಿ ದುರಂತ ಸಂಭವಿಸಬಹುದು
- ಸಾಂಸಾರಿಕವಾಗಿ ಅನ್ಯೋನ್ಯತೆ ಅಗತ್ಯವಿದೆ
- ಲಕ್ಷ್ಮೀನಾರಾಯಣ ಹೃದಯ ಸ್ತೋತ್ರ ಶ್ರವಣ ಮಾಡಿ
ತುಲಾ
- ನಿಮ್ಮ ಜವಾಬ್ದಾರಿಯುತವಾದ ಹೇಳಿಕೆ ಬಹಳ ಮುಖ್ಯವಾಗಲಿದೆ
- ವ್ಯಾವಹಾರಿಕವಾಗಿ ಸಾಲದ ಚಿಂತನೆ ಮಾಡುತ್ತೀರಿ ಯಶಸ್ಸು ಸಿಗಲಿದೆ
- ವಾಹನ ಖರೀದಿಗೆ ಚಿಂತನೆ ಲಾಭವಿದೆ
- ಅಂದುಕೊಂಡ ಕೆಲಸ ಪೂರೈಸುವಲ್ಲಿ ಜಯಶೀಲರಾಗುತ್ತೀರಿ
- ಮನೆಯವರ ಸಂಪೂರ್ಣ ಸಹಕಾರವಿರುತ್ತದೆ
- ಶಿವರಾಧನೆ ಮಾಡಿ
ವೃಶ್ಚಿಕ
- ಸುಖಕ್ಕೆ ಧಕ್ಕೆ ಉಂಟಾಗಬಹುದು
- ಮಿತ್ರರಿಂದ ಸಹಾಯ ಆಗಬಹುದು
- ಮೇಲಾಧಿಕಾರಿಗಳಿಂದ ಕಿರುಕುಳ ಆಗಬಹುದು
- ವಿವಾಹ ವಿಚಾರಕ್ಕೆ ಅಡ್ಡಿ ಉಂಟಾಗಬಹುದು
- ಮನೆಯಲ್ಲಿ ಹೊಂದಾಣಿಕೆ ಇರುವುದಿಲ್ಲ
- ನೌಕರಿ ಹುಡುಕುತ್ತಿರುವವರಿಗೆ ಅಸಮಾಧಾನ
- ದುರ್ಗಾಪೂಜೆಯನ್ನು ಮಾಡಿ
ಧನಸ್ಸು
- ಮಾತಿನ ಮೇಲೆ ನಿಗಾ ಇರಲಿ ಇಲ್ಲದಿದ್ದರೆ ತೊಂದರೆ ಆಗಬಹುದು
- ಅಕಾಲ ಭೋಜನ ಆರೋಗ್ಯದಲ್ಲಿ ಏರುಪೇರಾಗಬಹುದು
- ಮಂಗಳಕಾರ್ಯಕ್ಕೆ ಅಡಚಣೆ ಉಂಟಾಗಬಹುದು
- ಸಾಲ ಮಾಡುವ ಪರಿಸ್ಥಿತಿ ಬರಬಹುದು
- ಮನೆಯಲ್ಲಿ ಹೊಂದಾಣಿಕೆಯಿರಲಿ
- ಹಣದ ವಿಚಾರಕ್ಕೆ ಜಗಳವಾಗಬಹುದು
- ಋಣಮೋಚನ ಮಂಗಳ ಸ್ತೋತ್ರ ಪಠಣೆ ಮಾಡಿ
ಮಕರ
- ಸ್ವಯಂಕೃತ ಅಪರಾಧದಿಂದ ಅಭಿವೃದ್ಧಿ ಕುಂಠಿತವಾಗಬಹುದು
- ಆಪ್ತರಿಂದ ಅಸಹಕಾರ
- ಮನೆಯಲ್ಲಿ ವಿವಾದಗಳು ತಾರಕಕ್ಕೇರಬಹುದು
- ಹಿರಿಯರ ಅವಕೃಪೆಗೆ ಒಳಗಾಗುತ್ತೀರಿ
- ಅತಿಯಾದ ಪ್ರಯಾಣ ಸಮಸ್ಯೆ ಉಂಟು ಮಾಡಬಹುದು
- ಸಮಾಜದಲ್ಲಿ ಟೀಕೆಗೆ ಅಥವಾ ಅಪಹಾಸ್ಯಕ್ಕೆ ಒಳಗಾಗುತ್ತೀರಿ
- ಶಕ್ತಿ ದೇವತಾ ಪ್ರಾರ್ಥನೆ ಮಾಡಿ
ಕುಂಭ
- ಅನಗತ್ಯವಾದ ಖರ್ಚಿಗೆ ನೂರು ದಾರಿ
- ವಿರೋಧಿಗಳಿಂದ ಕಿರುಕುಳ ಹೆಚ್ಚಾಗಬಹುದು
- ಅಧಿಕ ಕೋಪದಿಂದ ಕೆಲಸ ಹಾಳಾಗಬಹುದು
- ಮನೆಯಲ್ಲಿ ಸಣ್ಣ ಪುಟ್ಟ ವಿಚಾರಕ್ಕೆ ಜಗಳವಾಗಬಹುದು
- ಸ್ನೇಹಿತರ ಸಲಹೆ ಮಾರಕವಾಗುಬಹುದು
- ವ್ಯಾವಹಾರಿಕವಾಗಿ ಬದಲಾವಣೆ ಕಾಣಬಹುದು
- ಮನ್ಯುಸೂಕ್ತ ಮಂತ್ರ ಶ್ರವಣ ಮಾಡಿ
ಮೀನ
- ತುಂಬಾ ಪರಿಶ್ರಮದಿಂದ ಕಾರ್ಯದ ಯಶಸ್ಸು
- ನಿಮ್ಮ ಬುದ್ಧಿವಂತಿಕೆಗೆ ಬೆಲೆ ಇಲ್ಲ
- ಇಂದು ಅಧಿಕವಾದ ತಿರುಗಾಟ
- ಈ ದಿನ ನಂಬಿಕಸ್ಥರಿಂದ ಅಶಾಂತಿ
- ಅನಾವಶ್ಯಕ ವಿಚಾರಗಳಿಂದ ದೂರವಿರಬೇಕು
- ಇಂದು ತಾಳ್ಮೆಯಿರಲಿ ಯಶಸ್ಸಿದೆ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ