ವಿದ್ಯಾರ್ಥಿಗಳಿಗೆ ಶುಭ ದಿನ, ಈ ರಾಶಿಯ ಮನೆಗೆ ಹೊಸ ಅತಿಥಿ ಆಗಮನ; ಇಲ್ಲಿದೆ ಇಂದಿನ ಭವಿಷ್ಯ

author-image
Veena Gangani
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಇಂದು ಸಮಾಜದ ಗಣ್ಯರ ಪ್ರೋತ್ಸಾಹ ಮಾರ್ಗದರ್ಶನ ದೊರಕುತ್ತದೆ
  • ನಿಮ್ಮ ವಿರೋಧಿಗಳು ನಿಮಗೆ ತೊಂದರೆ ಕೊಡಬಹುದು, ಎಚ್ಚರಿಕೆ ಇರಲಿ
  • ಇಂದು ನಿಮ್ಮ ಕೋಪವನ್ನು ನಿಯಂತ್ರಿಸಿ, ದಾರಿಯಲ್ಲಿ ಜಗಳವಾಗುವ ಸಾಧ್ಯತೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಕೃತಿಕಾ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ ರಾಶಿ

publive-image

  • ಇವತ್ತಿನ ದಿನ ಬಹಳ ಉತ್ತಮವಾಗಿರುತ್ತದೆ
  • ಹಲವಾರು ದಿನಗಳಿಂದ ಬಾಕಿ ಉಳಿದಿದ್ದ ಕೆಲಸಕ್ಕೆ ಹೊಸ ರೂಪ ಬರುತ್ತದೆ
  • ಅಗತ್ಯವಿರುವವರಿಗೆ ಬಂಧುಗಳಿಂದ ಸಾಹಯ ಸಿಗುತ್ತದೆ
  • ಸಾಮಾಜಿಕ ವಲಯದಲ್ಲಿ ಹೆಸರು ಮಾಡುವ ಯೋಗವಿದೆ
  • ನಿಮ್ಮ ವಿರೋಧಿಗಳು ನಿಮಗೆ ತೊಂದರೆ ಕೊಡಬಹುದು ಎಚ್ಚರಿಕೆ ಇರಲಿ
  • ವಿರೋಧಿಗಳಿಂದ ಮಾನಸಿಕ ತಳಮಳ ಉಂಟಾಗಬಹುದು
  • ದುರ್ಗಾದೇವಿಯ 32 ನಾಮಾವಳಿ ಪಠಿಸಿ

ವೃಷಭ

publive-image

  • ಕುಟುಂಬದವರ ಜೊತೆ ಹೆಚ್ಚು ಸಮಯ ಕಳೆಯುವ ಅವಕಾಶವಿದೆ
  • ಕುಟುಂಬ ಸದಸ್ಯರ ಜೊತೆ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಬಹುದು
  • ಇಂದು ನಿಮ್ಮ ಕೋಪವನ್ನು ನಿಯಂತ್ರಿಸಿ, ದಾರಿಯಲ್ಲಿ ಜಗಳವಾಗುವ ಸಾಧ್ಯತೆ ಇದೆ
  • ನಿಮ್ಮ ಮನಸ್ಸಿನಲ್ಲಿ ಋಣಾತ್ಮಕ ಆಲೋಚನೆಗಳು ಬರಬಹುದು
  • ಇಂದು ಅಂದುಕೊಂಡ ಕೆಲಸ ಆಗಬೇಕಾದರೆ ಕಷ್ಟವಿದೆ
  • ಭದ್ರಕಾಳಿಯ ಆರಾಧನೆ ಮಾಡಿ

ಮಿಥುನ

publive-image

  • ಇಂದು ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ
  • ಗಂಭೀರ ಚಿಂತನೆ ಹಾಗೂ ತಾಳ್ಮೆಯಿಂದ ಮಾಡಿದ ಕೆಲಸಗಳು ಪರಿಪೂರ್ಣವಾಗುವ ಯೋಗ
  • ಸ್ನೇಹಿತರು, ಬಂಧುಗಳು, ಗಣ್ಯರು ನಿಮಗೆ ಅನುಕೂಲ ಮಾಡಲು ಚಿಂತನೆ ಮಾಡ್ತಾರೆ
  • ಇಂದು ನಿಮ್ಮನ್ನು ನೀವು ಹೆಚ್ಚು ಸಮರ್ಥನೆ ಮಾಡಿಕೊಳ್ಳುವುದು ಒಳ್ಳೆಯದಲ್ಲ
  • ಗಣಪತಿ ಆರಾಧನೆ ಮಾಡಿ

ಕಟಕ

publive-image

  • ಇಂದು ಕಷ್ಟಕರವಾದ ಕೆಲಸಗಳು ಸ್ನೇಹಿತರ ಸಹಾಯದಿಂದ ಸುಗಮವಾಗಿ ನೆರವೇರುತ್ತವೆ
  • ಇಂದು ಆದಾಯಕ್ಕಿಂತ ಖರ್ಚು ಹೆಚ್ಚು
  • ವಿಶೇಷ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುವ ಯೋಗವಿದೆ
  • ಹಣ ಖರ್ಚು ಮಾಡಲು ಮನಸ್ಸಿರುವುದಿಲ್ಲ, ಆದರೂ ಹಣ ಖರ್ಚಾಗುತ್ತದೆ
  • ದೇವಿಯ ಆರಾಧನೆ ಮಾಡಿ ಮೊಸರನ್ನವನ್ನ ಅರ್ಪಿಸಿ

ಸಿಂಹ

publive-image

  • ಇಂದು ಮಿಶ್ರಫಲ ಕೊಡುವ ದಿನ
  • ನಿಮ್ಮ ಎಲ್ಲಾ ಕಾರ್ಯಗಳನ್ನು ಧೈರ್ಯ, ದಕ್ಷತೆ ಮತ್ತು ಪ್ರಾಮಾಣಿಕತೆಗಳಿಂದ ಮಾಡಿ
  • ಚಿತ್ತಚಾಂಚಲ್ಯ ಬಿಟ್ಟು ನಿಮ್ಮ ಕೆಲಸಗಳ ಕಡೆಗೆ ಗಮನ ಕೊಡಿ
  • ಹಣದ ವಿಚಾರ ಬಂದಾಗ ಸ್ವಲ್ಪ ಕಿರಿಕಿರಿ ಉಂಟಾಗುವ ಸಾಧ್ಯತೆ
  • ಇಂದು ಯಾವುದೇ ರೀತಿಯ ಸಾಲ ಮಾಡುವುದು ಬೇಡ
  • ದುರ್ಗಾ ಸಪ್ತಶತಿ ಪಾರಾಯಣ ಮಾಡಿ

ಕನ್ಯಾ

publive-image

  • ಇಂದು ಸಮಾಜದ ಗಣ್ಯರ ಪ್ರೋತ್ಸಾಹ ಮಾರ್ಗದರ್ಶನ ದೊರಕುತ್ತದೆ
  • ಸಾಮಾಜಿಕವಾಗಿ ನಿಮ್ಮ ಆಸೆಗಳು ಈಡೇರುತ್ತವೆ
  • ಕಚೇರಿಯ ಕೆಲಸಗಳಿದ್ದರೆ ಮಧ್ಯಾಹ್ನದ ಒಳಗೆ ಪೂರೈಸಿಕೊಳ್ಳಿ
  • ವಿವಾದಾತ್ಮಕ ಹೇಳಿಕೆಗಳಿಂದ ಅವಮಾನಿತರಾಗುತ್ತೀರಿ
  • ಶ್ರೀಲಕ್ಷ್ಮೀ ಆರಾಧನೆ ಮಾಡಿ, ಜೇನಿನ ಅಭಿಷೇಕ ಮಾಡಿಸಿ

ತುಲಾ

publive-image

  • ಇವತ್ತು ದಿನದ ಆರಂಭ ಚೆನ್ನಾಗಿರುತ್ತದೆ
  • ನಂತರ ಬೇಸರ ಉಂಟಾಗುವ ಸಾಧ್ಯತೆ ಇದೆ
  • ಸಹೋದ್ಯೋಗಿಗಳೊಂದಿಗೆ ಮನಸ್ತಾಪ ಏರ್ಪಡುವ ಸಾಧ್ಯತೆ ಇದೆ
  • ನಿಮ್ಮ ಮತ್ತು ಸ್ನೇಹಿತರ ಮಧ್ಯೆ ಭಿನ್ನಾಭಿಪ್ರಾಯ ಸಾಧ್ಯತೆ ಇದೆ
  • ಧರ್ಮ ಪರವಾಗಿರುವ ಒಂದು ಕಥೆಯನ್ನು ಪಠಣೆ ಮಾಡಿ

ವೃಶ್ಚಿಕ

publive-image

  • ಕುಟುಂಬದ ಸದಸ್ಯರೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುವ ಸಾಧ್ಯತೆ
  • ಇಂದು ಕುಟುಂಬ ಮತ್ತು ಸ್ನೇಹಿತರಿಗಾಗಿ ಹಣ ಖರ್ಚಾಗುತ್ತದೆ
  • ನೆರೆಹೊರೆಯವರೊಂದಿಗೆ ಸಣ್ಣ ಕಾರಣಗಳಿಗೆ ಜಗಳ ಸಾಧ್ಯತೆ
  • ಅದರಲ್ಲೂ ವಾಹನ ವಿಚಾರಕ್ಕೆ ಮನಸ್ತಾಪ, ಜಗಳವಾಗಬಹುದು
  • ಇಂದು ಎಲ್ಲರೊಂದಿಗೆ ಬಹಳ ತಾಳ್ಮೆಯಿಂದ ಮಾತನಾಡಿ
  • ದೇವಿಯ ಆರಾಧನೆ ಮಾಡಿ, ಕೆಂಪು ಪುಷ್ಪವನ್ನು ಸಮರ್ಪಿಸಿ

ಧನಸ್ಸು

publive-image

  • ಇಂದು ಮಕ್ಕಳು - ಮೊಮ್ಮಕ್ಕಳಿಗಾಗಿ ಹೆಚ್ಚು ಹಣ ಖರ್ಚಾಗುವ ಸಾಧ್ಯತೆ
  • ಮನೆಯಿಂದ ಹೊರಗೆ ಆನಂದದ ಸಮಯವನ್ನು ಕಳೆಯುತ್ತೀರಿ
  • ಇಂದು ರಸ್ತೆ ಬದಿಯ ಆಹಾರ ಸೇವನೆ ಮಾಡಬೇಡಿ
  • ಅನಾರೋಗ್ಯ ಕಾಣಿಸಿಕೊಂಡರೆ ನಿರ್ಲಕ್ಷಿಸದೆ ವೈದ್ಯರನ್ನು ಭೇಟಿ ಮಾಡಿ
  • ಇಂದು ವನದುರ್ಗಾದೇವಿ ಆರಾಧನೆ ಹಾಗು
  • ದೇವಿಗೆ ಸಿಹಿ ಪೊಂಗಲ್ ನೈವೇದ್ಯ ಮಾಡಿ

ಮಕರ

publive-image

  • ನಿಮ್ಮಿಂದ ಸಾಲ ಪಡೆದಿದ್ದವರು ಈ ದಿವಸ ಹಣವನ್ನು ಹಿಂದಿರುಗಿಸುವ ಸಾಧ್ಯತೆ
  • ಇಂಜಿನಿಯರಿಂಗ್ ಹಾಗೂ ಸಿ.ಎ. ವಿದ್ಯಾರ್ಥಿಗಳಿಗೆ ಶುಭ ದಿನ
  • ಓದಿನ ಕೊನೆಯ ಹಂತಕ್ಕೆ ಬಂದಿರುವವರಿಗೆ ಉದ್ಯೋಗದ ಅವಕಾಶ ಸಿಗುತ್ತದೆ
  • ಸರಸ್ವತಿ ಆರಾಧನೆ ಮಾಡಿ, ಪಾರಿಜಾತ ಹೂ ಅರ್ಪಿಸಿ

ಕುಂಭ

publive-image

  • ಇಂದು ನಿಮ್ಮದೇ ಲೋಕದಲ್ಲಿ ವಿಹರಿಸುತ್ತೀರಿ
  • ಯಾವುದನ್ನೂ ಸರಿಯಾದ ಸಮಯಕ್ಕೆ ಮಾಡುವುದಕ್ಕೆ ಮನಸ್ಸಿರುವುದಿಲ್ಲ
  • ಸಂಜೆ ಸಮಯಕ್ಕೆ ದಿಢೀರ್ ಎಂದು ಸ್ನೇಹಿತ, ಅತಿಥಿಗಳು ಮನೆಗೆ ಬರಬಹುದು
  • ಅವರ ಉಪಚಾರದಲ್ಲಿ ಕಾಲ ಹೋಗುತ್ತದೆ
  • ಮಧ್ಯರಾತ್ರಿವರೆಗೂ ಮಾತುಕತೆ ಸಂತೋಷವನ್ನು ಹಂಚಿಕೊಳ್ಳುತ್ತೀರಿ
  • ಅನ್ನಪೂರ್ಣೇಶ್ವರೀ ಆರಾಧನೆ ಮಾಡಿ, ವಿಕಲ ಚೇತನರಿಗೆ ಸಹಾಯ ಮಾಡಿ

ಮೀನ 

publive-image

  • ತುಂಬಾ ಪರಿಶ್ರಮದಿಂದ ಕಟ್ಟಿಕೊಂಡ ಆಸೆಗಳು ನುಚ್ಚು ನೂರಾಗುತ್ತವೆ
  • ಇಂದು ಮನಸ್ಸು ನಿಮ್ಮ ಮಾತನ್ನು ಕೇಳುವುದಿಲ್ಲ
  • ಹಾಗೇ ನೀವು ಯಾರ ಮಾತನ್ನು ಕೇಳುವುದಿಲ್ಲ
  • ಒಟ್ಟಾರೆ ಒಬ್ಬಂಟಿಯಾಗಿ ಕುಳಿತು ತೀರಾ ಸಂಕಟ ಪಡುತ್ತೀರಿ
  • ಸಾಂತ್ವನ ಹೇಳುವವರೂ ಇರುವುದಿಲ್ಲ
  • ವೆಂಕಟರಮಣನನ್ನು ಆರಾಧನೆ ಮಾಡಿ, ವಿಷ್ಣು ಸಹಸ್ರನಾಮ ಶ್ರವಣ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ  

Advertisment