ನಿಮ್ಮ ವೈಯಕ್ತಿಕ ವಿಚಾರದಲ್ಲಿ ಬೇರೆಯವರ ಹಸ್ತಕ್ಷೇಪ
ಬರಬೇಕಿದ್ದ ಬಾಕಿ ನಿಮ್ಮ ಕೈ ಸೇರಿ ಸಂತೋಷವಾಗಲಿದೆ
ಕುಟುಂಬದ ಸದಸ್ಯರ ಜೊತೆ ಭಿನ್ನಾಭಿಪ್ರಾಯ ಬೇಡ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಶ್ರವಣ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.
ಮೇಷ ರಾಶಿ
![](https://newsfirstlive.com/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಸಾಧಾರಣವಾದ ದಿನ ಯಾವುದೇ ಆತಂಕ ಬೇಡ
- ಜನ ತಮ್ಮ ಸ್ವಾರ್ಥಕ್ಕಾಗಿ ನಿಮ್ಮನ್ನು ಆಶ್ರಯಿಸಬಹುದು
- ಕುಟುಂಬದ ಸದಸ್ಯರ ಜೊತೆ ಭಿನ್ನಾಭಿಪ್ರಾಯ ಬೇಡ
- ಹಣದ ಚಿಂತೆ ಕಾಡಬಹುದು
- ಮನೆಯ ವಾತಾವರಣ ಗೌಪ್ಯವಾಗಿರುತ್ತದೆ
- ಹಿರಿಯರ ಆಶೀರ್ವಾದ ಪಡೆಯಿರಿ
ವೃಷಭ
![](https://newsfirstlive.com/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ವೃತ್ತಿ ಅಥವಾ ನೌಕರಿಯಲ್ಲಿ ತಕ್ಷಣ ಬದಲಾವಣೆಯಾಗಬಹುದು
- ಸಂಬಂಧಿಕರಲ್ಲಿ ಬಾಂಧವ್ಯ ಗಟ್ಟಿಯಾಗಲಿದೆ
- ಬರಬೇಕಿದ್ದ ಬಾಕಿ ನಿಮ್ಮ ಕೈ ಸೇರಿ ಸಂತೋಷವಾಗಲಿದೆ
- ಕಾರ್ಯಕ್ಷೇತ್ರದಲ್ಲಿ ಗೌರವ ಮನ್ನಣೆ ಸಿಗಲಿದೆ
- ಅನಗತ್ಯ ವಿವಾದ ಸೃಷ್ಟಿಯಾಗುವುದರಿಂದ ಬೇಸರವಾಗಬಹುದು
- ಇಂದು ದೂರ ಪ್ರಯಾಣ ಬೇಡ ರದ್ದಾಗುವ ಸಾಧ್ಯತೆ ಇದೆ
- ದುರ್ಗಾದೇವಿಯನ್ನು ಪ್ರಾರ್ಥನೆ ಮಾಡಿ
ಮಿಥುನ
![](https://newsfirstlive.com/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ವ್ಯಾವಹಾರಿಕ ಆಥವಾ ವೃತ್ತಿ ಅಥವಾ ವಿದ್ಯಾಕ್ಷೇತ್ರದಲ್ಲಿ ಉತ್ತಮ ಫಲಿತಾಂಶವಿದೆ
- ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶುಭಫಲ
- ಹೊಸ ಸಂಪರ್ಕಗಳಿಂದ ಅನುಕೂಲವಿದೆ
- ಹಳೆಯ ಸ್ನೇಹಿತರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೀರಿ
- ಖಾಸಗಿ ನೌಕರರಿಗೆ ಪ್ರಯಾಣದ ಅವಕಾಶವಿದೆ
- ಮಕ್ಕಳ ಜೊತೆಯಲ್ಲಿ ಆನಂದದ ಸಮಯ ಕಳೆಯಬಹುದು
- ಇಷ್ಟ ದೇವತಾ ಪ್ರಾರ್ಥನೆ ಮಾಡಿ
ಕಟಕ
![](https://newsfirstlive.com/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ನೌಕರಿಯ ವಿಚಾರದಲ್ಲಿ ಮನಸ್ಸಿಗೆ ಸಮಾಧಾನವಿರುವುದಿಲ್ಲ
- ನಿಮ್ಮ ವೈಯಕ್ತಿಕ ವಿಚಾರದಲ್ಲಿ ಬೇರೆಯರ ಹಸ್ತಕ್ಷೇಪ ಬೇಡ
- ಪತಿ-ಪತ್ನಿಯರ ಮಧ್ಯೆ ಸಾಮರಸ್ಯವಿರಲಿ
- ಸಣ್ಣ ಉದ್ಯಮಿಗಳಿಗೆ ಉತ್ತಮವಾದ ದಿನ
- ಅಣ್ಣ ತಮ್ಮಂದಿರಲ್ಲಿ ಕಲಹ ಉಂಟಾಗಬಹುದು
- ತಾಯಿಯ ಆರೋಗ್ಯದ ಬಗ್ಗೆ ಎಚ್ಚರಿಕೆವಹಿಸಿ
- ಅಯ್ಯಪ್ಪ ಸ್ವಾಮಿಯನ್ನು ವಿಭೂತಿಯಿಂದ ಚರ್ಚಿಸಿ
ಸಿಂಹ
![](https://newsfirstlive.com/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಭರವಸೆ ನೀಡಬಾರದೆಂದು ಹೇಳಬೇಕಾದ ದಿನ
- ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಅವಕಾಶವಿದೆ
- ಕುಟುಂಬದಲ್ಲಿ ಪ್ರವಾಸದ ಬಗ್ಗೆ ಚಿಂತಿಸಬಹುದು
- ಉದ್ಯೋಗಸ್ಥರಿಗೆ ಬಡ್ತಿಯ ಸೂಚನೆ ಇದೆ
- ಒಡಹುಟ್ಟಿದವರೊಡನೆ ಘರ್ಷಣೆ ಅಶಾಂತಿ ಇರಲಿದೆ
- ಈ ದಿನ ಪ್ರೇಮಿಗಳಿಗೆ ಶುಭವಿದೆ
- ಉಗ್ರ ನರಸಿಂಹನನ್ನು ಪ್ರಾರ್ಥನೆ ಮಾಡಿ
ಕನ್ಯಾ
![](https://newsfirstlive.com/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಸ್ವಭಾವದಿಂದ ಬೇರೆಯವರನ್ನು ಆಕರ್ಷಿಸುತ್ತೀರಿ
- ಇಂದು ಮಾತಿನಿಂದ ಅವಮಾನವಾಗಬಹುದು
- ವಿದ್ಯಾರ್ಥಿಗಳಿಗೆ ತುಂಬಾ ಕಷ್ಟದ ದಿನ
- ಮಕ್ಕಳ ಚಟುವಟಿಕೆ ಅಥವಾ ಸ್ವಭಾವ ಬೇಸರ ತರಬಹುದು
- ಅವಿವಾಹಿತರ ಸಮಸ್ಯೆ ತಾರಕಕ್ಕೇರಬಹುದು
- ದೇವಿ ಉಪಾಸನೆ ಮಾಡಿ
ತುಲಾ
![](https://newsfirstlive.com/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಆರೋಗ್ಯದಲ್ಲಿ ವ್ಯತ್ಯಯ ಕಾಣಬಹುದು
- ಗಂಟಲಿನ ಸಮಸ್ಯೆ ಅಧಿಕವಾಗಿ ಕಾಡಬಹುದು
- ನವ ವಿವಾಹಿತರಿಗೆ ಶುಭ ಸುದ್ದಿ
- ಪ್ರಜ್ಞಾವಂತರ ಸಹವಾಸದಿಂದ ಲಾಭವಿದೆ
- ಸ್ನೇಹಿತರೊಂದಿಗೆ ಉತ್ತಮ ಬಾಂದವ್ಯವಿರಲಿದೆ
- ಕೆಲಸಕ್ಕಾಗಿ ಜನರ ಹುಡುಕಾಟ ವಿಫಲವಾಗಲಿದೆ
- ಸಾಲಿಗ್ರಾಮ ವಿಷ್ಣುವನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
![](https://newsfirstlive.com/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಬಂಧುಗಳಲ್ಲಿ ಅಥವಾ ಸ್ನೇಹಿತರ ಮಧ್ಯದಲ್ಲಿ ಅನುಚಿತ ವರ್ತನೆ ಬೇಡ
- ನಕಾರಾತ್ಮಕ ಆಲೋಚನೆಯಿಂದ ದೂರವಿರಿ
- ನಿಮ್ಮ ಕಾರ್ಯ ವೈಖರಿಯಿಂದ ಟೀಕೆಗೆ ಗುರಿಯಾಗಬಹುದು
- ಆತುರದ ಕೆಲಸ ಅಥವಾ ನಿರ್ಧಾರಗಳಿಂದ ಹಾನಿಯಾಗಬಹುದು
- ವಾಹನ ಚಾಲನೆಯಿಂದ ತೊಂದರೆಯಾಗಬಹುದು ಎಚ್ಚರಿಕೆವಹಿಸಿ
- ಪ್ರಾಣಿಗಳಿಗೆ ಆಹಾರ ನೀಡಿ
ಧನುಸ್ಸು
![](https://newsfirstlive.com/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಸಿಹಿ ಸುದ್ದಿ ಕೇಳುತ್ತೀರಿ ಆದರೂ ಸಮಾಧಾನವಿಲ್ಲ
- ಮನಸ್ಥಿತಿ ಬದಲಾಯಿಸಿಕೊಳ್ಳಬೇಕು
- ನಂಬಿದವರಿಂದ ವಂಚನೆಯಾಗುವ ಸೂಚನೆಯಿದೆ
- ವೈವಾಹಿಕ ಜೀವನದಲ್ಲಿ ಬದುಕು ಕಾಣಬಹುದು
- ನಿಮ್ಮ ಕರ್ತವ್ಯಕ್ಕೆ ಆದ್ಯತೆ ನೀಡಿ
- ಈ ದಿನ ಪ್ರಾಮಾಣಿಕ ಪ್ರಯತ್ನಕ್ಕೆ ಮಾತ್ರ ಗೌರವವಿದೆ
- ಧ್ಯಾನಕ್ಕೆ ಶರಣು ಹೋಗಿ
ಮಕರ
![](https://newsfirstlive.com/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಈ ದಿನ ಹಣ ಹೂಡಿಕೆ ಬೇಡ
- ಆಸೆ ಅಥವಾ ತೃಪ್ತಿ ಅಥವಾ ಸಮಾಧಾನ ಇವೆಲ್ಲಾ ವಿರುದ್ಧವಾಗುವ ದಿನ
- ಮನೆಗೆ ಬಂದ ಅತಿಥಿಗಳೊಂದಿಗೆ ವ್ಯವಹಾರ ಮಾಡುತ್ತೀರಿ
- ಪಾಲುದಾರಿಕೆ ಅಥವಾ ಬಡ್ಡಿ ವ್ಯವಹಾರದಲ್ಲಿ ಲಾಭವಿದೆ
- ವೃತ್ತಿ ಜೀವನದಲ್ಲಿ ಸಮಸ್ಯೆ ಕಾಡಬಹುದು
- ಸಮಾಜದಲ್ಲಿ ಪರೋಕ್ಷವಾಗಿ ಅಪಖ್ಯಾತಿಗೆ ಒಳಗಾಗುತ್ತೀರಿ
- ಶ್ರೀರಾಮನನ್ನು ಪ್ರಾರ್ಥನೆ ಮಾಡಿ
ಕುಂಭ
![](https://newsfirstlive.com/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ವಿದೇಶದಿಂದ ಸಿಹಿ ಸುದ್ದಿ ಬರಬಹುದು
- ಅಪರಿಚಿತರಿಂದ ದ್ರೋಹ ಸಾಧ್ಯತೆ
- ಯೋಚಿಸಿದ ಕಾರ್ಯಗಳು ಪೂರ್ಣವಾಗದೆ ಬೇಸರವಾಗಬಹುದು
- ಬೇರೆಯವರನ್ನು ಸಂಪೂರ್ಣ ಅವಲಂಬಿಸಬೇಡಿ
- ನಿಮ್ಮ ಸಲಹೆ ಬೇರೆಯವರಿಗೆ ಅನುಕೂಲವಿದೆ
- ಕೃಷಿ ಕೆಲಸ ಅಥವಾ ಜಮೀನು ಸಂಬಂಧೀ ಕೆಲಸಗಳಲ್ಲಿ ನಷ್ಟವಾಗಬಹುದು
ಮೀನ
![](https://newsfirstlive.com/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ವೈಯಕ್ತಿಕ ಜೀವನದಲ್ಲಿ ಬೇಸರ ಅಶಾಂತಿ ಕೋಪ ಉಂಟಾಗಬಹುದು
- ಹೊಟ್ಟೆ ನೋವಿಗೆ ಸಂಬಂಧಿಸಿದಂತೆ ತೊಂದರೆಯಾಗಬಹುದು
- ಸಾಮಾಜಿಕ ಜೀವನದಲ್ಲಿ ತುಂಬಾ ಎಚ್ಚರಿಕೆಯಿಂದಿರಿ
- ಸಾಲ ಪಡೆದ ವ್ಯಕ್ತಿಗಳು ತಿರುಗಿ ಬೀಳಬಹುದು ನಷ್ಟದ ಸೂಚನೆ
- ಕಾನೂನು ಕ್ರಮ ಕೆಲಸಕ್ಕೆ ಬಾರದೆ ಬೇಸರವಾಗಬಹುದು
- ಭಾವನಾತ್ಮಕ ನಿರ್ಧಾರಗಳಿಂದ ವ್ಯಥೆಯಾಗಬಹುದು
- ವಿಷ್ಣುವಿಗೆ ಜೇನುತುಪ್ಪದ ಅಭಿಷೇಕ ಮಾಡಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ