ಸ್ನೇಹಿತರ - ಬಂಧುಗಳ ಮಾತಿಗೆ ಗುರಿಯಾಗಬಹುದು
ಹೆಚ್ಚು ಗಳಿಸುವ ಭರದಲ್ಲಿ ಎಲ್ಲಾ ಮರೆಯುವ ಸಾಧ್ಯತೆ
ಸಂಬಂಧಿಕರಲ್ಲಿ ವಿವಾಹವಾದವರಿಗೆ ಸಮಸ್ಯೆಯ ದಿನ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಶ್ರವಣ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.
ಮೇಷ ರಾಶಿ
![](https://newsfirstlive.com/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಕುಟುಂಬ ರಕ್ಷಣೆ ಒಂದು ಸವಾಲಾಗಿ ಪರಿಣಮಿಸುತ್ತದೆ
- ಮಕ್ಕಳ ಬಗ್ಗೆ ಕಾಳಜಿ ಇರಲಿ
- ಧಾರ್ಮಿಕ, ಆಧ್ಯಾತ್ಮಿಕ ವಿಚಾರಗಳಲ್ಲಿ ಅಪನಂಬಿಕೆ ಕಾಣಬಹುದು
- ಶರೀರದಲ್ಲಿ ನೋವು ಕಾಣಿಸಿಕೊಳ್ಳಬಹುದು
- ಸಂಬಂಧಿಕರಲ್ಲಿ ವಿವಾಹವಾದವರಿಗೆ ಸಮಸ್ಯೆಯ ದಿನ
- ಸಾಯಂಕಾಲದ ಹೊತ್ತಿಗೆ ಅಪಶಕುನ ಬೇಸರವಾಗಬಹುದು
- ಧ್ಯಾನ ಮಾಡಿ
ವೃಷಭ
![](https://newsfirstlive.com/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ವ್ಯವಹಾರದಲ್ಲಿ ಸ್ನೇಹಿತರ ಬೆಂಬಲ
- ಹೆಚ್ಚು ಹೆಚ್ಚು ಗಳಿಸುವ ಭರದಲ್ಲಿ ಎಲ್ಲಾ ಮರೆಯುವ ಸಾಧ್ಯತೆ
- ದಿನಚರಿಯಲ್ಲಿ ಸ್ವಲ್ಪ ಬದಲಾವಣೆ
- ಮಹಿಳೆಯರು ಹಲವಾರು ಜನಕ್ಕೆ ಸಹಾಯ ಮಾಡುವ ಸೂಚನೆ ಇದೆ
- ಹಲವು ಕೆಲಸಗಳಲ್ಲಿ ಯಶಸ್ಸು
- ವಿದ್ಯಾರ್ಥಿಗಳಿಗೆ ತಮ್ಮ ಕ್ಷೇತ್ರದಲ್ಲಿ ಅನುಕೂಲ
- ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ಮಿಥುನ
![](https://newsfirstlive.com/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ಖರ್ಚುಗಳಿಂದ ಕುಟುಂಬದಲ್ಲಿ ಕಲಹ
- ನಾನು ಎಂಬುದರಿಂದ ಎಲ್ಲಕ್ಕೂ ತೊಂದರೆ
- ಹಣ ಹೂಡಿಕೆಯಲ್ಲಿ ಜಾಗರೂಕರಾಗಿರಬೇಕು
- ಪ್ರೇಮಿಗಳಿಗೆ ತೊಂದರೆಯಿದೆ – ಜಗಳ ಬೇಡ
- ಬೇರೆಯವರೊಂದಿಗೆ ವರ್ತಿಸಬೇಕಾದರೆ ವ್ಯಂಗ್ಯ ಬೇಡ
- ಹೊಸ ಕೆಲಸಗಳ ಹುಡುಕಾಟದಲ್ಲಿ ಆಲೋಚನೆ ಒಳ್ಳೆಯದಿರಲಿ
- ಪುಣ್ಯಕಥಾ ಶ್ರವಣ ಮಾಡಿ
ಕಟಕ
![](https://newsfirstlive.com/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಹಳೆಯ ಕೆಲಸಗಳಿಗೆ ಮತ್ತೆ ದಾಸರಾಗಬಹುದು ಬೇರೆ ದಾರಿಯಿಲ್ಲ
- ಯಂತ್ರೋಪಕರಣಗಳ ಖರೀದಿಯಲ್ಲಿ ಮೋಸ
- ಮನಸ್ಸಿಗೆ ತೋಚಿದ್ದನ್ನು ಮಾಡಬೇಡಿ
- ಇಂದು ಸರಿಯಾದ ಸಲಹೆ ಅಗತ್ಯ
- ವಿದ್ಯಾರ್ಥಿಗಳು ತಮ್ಮ ಕರ್ತವ್ಯ ಲೋಪ ಮಾಡಬಾರದು
- ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುವ ಕೆಲಸ ಬೇಡ
- ಇಂದಿನ ಜಾಗ್ರತೆ ಮುಂದಿನ ನೈಜತೆ ಎಂದು ತಿಳಿಯಬೇಕಾದ ದಿನ
- ಸುದರ್ಶನನನ್ನು ಪೂಜಿಸಿ
ಸಿಂಹ
![](https://newsfirstlive.com/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಸೋದರ ಮಾವ ಅಥವಾ ಸೋದರತ್ತೆಯ ಸಂಬಂಧದಿಂದ ಸಿಹಿ ಸುದ್ದಿ
- ಕುಟುಂಬದ ಒಳಗೇ ಮದುವೆ ವಿಚಾರ ಬರಬಹುದು
- ಕಾರಣಾಂತರಗಳಿಂದ ಮನೆಯಲ್ಲಿ ಕಿರಿಕಿರಿ
- ಚರ್ಮಕ್ಕೆ ಸಂಬಂಧಿಸಿದ ತೊಂದರೆ ಕಾಣಬಹುದು ಎಚ್ಚರಿಕೆ
- ಸ್ಥಿರ ಮನಸಿದ್ದರೆ ಎಲ್ಲವನ್ನು ಸಾಧಿಸಬಹುದು
- ಹಿರಿಯರ ಮಾರ್ಗದರ್ಶನಕ್ಕೆ ಬೆಲೆ ಕೊಡಬೇಕಾಗುತ್ತದೆ
- ಸೂರ್ಯ ದೇವಾಲಯಕ್ಕೆ ಕೆಂಪು ಬಟ್ಟೆ ಕೊಡಿ
ಕನ್ಯಾ
![](https://newsfirstlive.com/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಯುವ ಪೀಳಿಗೆಗೆ ವೃತ್ತಿ ಜೀವನದ ಸಿಹಿ ಅನುಭವ
- ಅದೃಷ್ಟದ ಬೆಂಬಲವಿದೆ – ಮನಸ್ಸು ಶುದ್ದವಾಗಿರಲಿ ಅನುಮಾನ ಬೇಡ
- ಬೇರೆಯವರ ಮಾತಿಗೆ ಮರುಳಾಗದಿರಿ
- ವ್ಯವಹಾರದಲ್ಲಿ ನೈಜತೆ ಇರಲಿ
- ಅಧಿಕಾರಿಗಳಿಂದ ಪ್ರಶಂಸೆ ಇರುತ್ತದೆ ಹಾಗೇ ಕಾಪಾಡಿಕೊಳ್ಳಬೇಕು
- ಮಕ್ಕಳ ವಿಚಾರದಲ್ಲಿ ಸಂತೋಷ ಸಮಾಧಾನ
- ರಾಧಾಕೃಷ್ಣರನ್ನ ಪೂಜಿಸಿ
ತುಲಾ
![](https://newsfirstlive.com/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ವೃತ್ತಿ, ನೌಕರಿಯಲ್ಲಿ ಗೌರವ ಹೆಚ್ಚುವ ದಿನ
- ಕೆಲಸಗಳ ಒತ್ತಡ – ಆತಂಕಗಳು ಕಾಡಬಹುದು
- ಸ್ನೇಹಿತರ – ಬಂಧುಗಳ ಮಾತಿಗೆ ಗುರಿಯಾಗಬಹುದು
- ಅಗತ್ಯವಿದ್ದ ಕೆಲಸಕ್ಕೆ ಗೈರಾಗಿ ಬೇಸರ ಪಡಬಹುದು
- ಆರೋಗ್ಯದ ಬಗ್ಗೆ ನಿರ್ಲಕ್ಷ ಬೇಡ
- ಸಣ್ಣ ತಪ್ಪಿನಿಂದ ಮೌನಕ್ಕೆ ಶರಣು ಹೋಗಬಹುದು
- ಧ್ಯಾನಾಸಕ್ತ ಶಿವನನ್ನು ಬಿಲ್ವಪತ್ರೆಯಿಂದ ಅರ್ಚಿಸಿ
ವೃಶ್ಚಿಕ
![](https://newsfirstlive.com/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಕುಟುಂಬದ ಹಿಂದಿನ ಶಾಪ ನಿಮ್ಮ ಮೇಲೆ ಪರಿಣಾಮ ಬೀರಬಹುದು
- ಎಲ್ಲ ಇದ್ದರೂ ಮಾನಸಿಕ ನೆಮ್ಮದಿ ಇಲ್ಲ ಎನ್ನುವಂತ ಸ್ಥಿತಿ
- ವೈರಾಗ್ಯದ ಮಾತುಗಳು – ಬೇರೆಯವರನ್ನ ನಿಂದಿಸಬಹುದು
- ಹಲವಾರು ಕೊರತೆಗಳು ಜೀವನದಲ್ಲಿ ಕಾಡುವ ಸೂಚನೆ
- ಸಾಧಿಸಬೇಕಾದ್ದು ತುಂಬಾ ಇದೆ ಎಂದು ತಿಳಿಯಬೇಕು
- ದ್ವೇಷ- ಅಸುಯೆಗಳ ಸಂಕೋಲೆಗಳಿಂದ ಹೊರಬರಬೇಕಾದ ದಿನ
- ಬೂದಗುಂಬಳಕಾಯಿಯಿಂದ ದೃಷ್ಟಿ ತೆಗೆದು ಒಡೆಯಿರಿ
ಧನುಸ್ಸು
![](https://newsfirstlive.com/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿತ ಲಾಭ ಕಡಿಮೆ
- ದೈಹಿಕವಾಗಿ ಆರಾಮ ಇರುವುದಿಲ್ಲ – ಆಲಸ್ಯ
- ವಿರೋಧಿಗಳು ನಿಮ್ಮ ಕೆಲಸವನ್ನು ಹಾಳು ಮಾಡಬಹುದು
- ಕುಟುಂಬದಲ್ಲಿ ಸಾಮರಸ್ಯವಿರಲಿ ಕೋಪ ಬೇಡ
- ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಹೆದರುವುದು ಬೇಡ, ಆದರೆ ಹೆದರಿಕೆ ಇರುತ್ತದೆ
- ಭಯದಿಂದ ಹೊರಬಂದು ಇಲ್ಲವನ್ನು ಸಾಧಿಸಬೇಕಾದ ದಿನ
- ಮೂಲ ದೇವರನ್ನ ಪ್ರಾರ್ಥನೆ ಮಾಡಿ
ಮಕರ
![](https://newsfirstlive.com/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಆತ್ಮವಿಶ್ವಾಸ ಹೆಚ್ಚಾಗಿದೆ ಎಂದು ವಿರುದ್ಧ ತೀರ್ಮಾನಗಳು ಬೇಡ
- ಆಸ್ತಿ ವಿಚಾರದಲ್ಲಿ ಕುಟುಂಬ ಕಲಹ
- ಸ್ನೇಹಿತರು ಅನುಕೂಲ ಪಡೆಯಬಹುದು
- ನಿಮ್ಮ ವಿರೋಧಿಗಳ ಮುಂದೆ ನಿಮ್ಮ ಮಾತಿಗೆ ಬೆಲೆ ಇಲ್ಲ
- ಭಯದಿಂದಲೇ ಎಲ್ಲಾ ಕೆಲಸಗಳಿಗೆ ಮುಂದಾಗಬಹುದು
- ನಿಮ್ಮ ಗೌಪ್ಯ ಬುದ್ಧಿ ನಿಮಗೆ ಮಾರಕವಾಗಬಹುದು
- ಆಂಜನೇಯನ ದೇವಾಲಯಕ್ಕೆ ವೀಳ್ಯದೆಲೆ ಕೊಡಿ
ಕುಂಭ
![](https://newsfirstlive.com/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ಯುವ ಪ್ರೇಮಿಗಳಿಗೆ ಸಂಕಷ್ಟ
- ಕುಟುಂಬದವರೊಂದಿಗೆ ಬೆರೆಯಲು ಮನಸ್ಸಿಲ್ಲ
- ಪೋಷಕರಿಗೆ ದುಃಖದಾಯಕರು – ಬದಲಿಸಿಕೊಳ್ಳಿ
- ಆರೋಗ್ಯ ಸುಧಾರಣೆಯೇ ಈ ದಿನದ ಸಂತೋಷ
- ನಿಮ್ಮ ಕ್ಷೇತ್ರದಲ್ಲಿ ಸಿಹಿ ಸುದ್ದಿ ಕೇಳಿದರೂ ನಿಮಗೆ ಸಿಗದು
- ಸಾಲದ ವಿಚಾರದಲ್ಲಿ ಜಾಗ್ರತೆ ನಷ್ಟದ ಸೂಚನೆ ಇದೆ
- ಗಾಯತ್ರಿ ಮಂತ್ರ ಜಪಿಸಿ ಅಥವಾ ಶ್ರವಣ ಮಾಡಿ
ಮೀನ
![](https://newsfirstlive.com/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಯಾವುದೇ ತೊಂದರೆಗೂ ಜಗ್ಗದ, ಬಗ್ಗದ ನಿಮಗೆ ಭಯದ ವಾತಾವರಣ ಇರುತ್ತದೆ
- ಮನಸ್ಸಿನಲ್ಲಿ ಕಳವಳ ಜೀವ ಭಯ ಕಾಡಬಹುದು
- ಹಣವಿದೆ ಸೌಲಭ್ಯವಿದೆ ಆದರೆ ಅನುಭವಿಸುವ ಯೋಗ ಕಡಿಮೆ
- ನಿಮ್ಮದೇ ಆದ ನಿರ್ಧಾರಗಳಿಗೆ ಅಂಟಿಕೊಂಡು ವ್ಯಸನ ಪಡಬಹುದು
- ಬೇರೆಯವರಿಗೆ ಬಲವಂತವಾಗಿಯಾದರೂ ಸಹಾಯ ಮಾಡಿ
- ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಲು ಪ್ರಯತ್ನಿಸಿ
- ದುರ್ಗಾಪರಮೇಶ್ವರಿಯನ್ನ ಆರಾಧಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ