ವೃತ್ತಿ ಅಥವಾ ನೌಕರಿಯಲ್ಲಿ ನಿಮ್ಮನ್ನ ದ್ವೇಷಿಸುವವರು ಹೆಚ್ಚು
ಹಿರಿಯ ಅಧಿಕಾರಿಗಳೊಂದಿಗೆ ಉತ್ತಮ ಸಂಪರ್ಕ ಇರಲಿ
ಪಿತ್ರಾರ್ಜಿತ ಆಸ್ತಿಯಿಂದ ಲಾಭ ಅಥವಾ ಹಣ ಲಾಭವಿದೆ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಶ್ರವಣ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.
ಮೇಷ ರಾಶಿ
![](https://newsfirstlive.com/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ನೌಕರಿ ಅಥವಾ ವೃತ್ತಿಯಲ್ಲಿ ಭರವಸೆಯ ಭಾವನೆಗಳು ಚಿಗುರುತ್ತವೆ
- ನಿಮ್ಮ ಸುತ್ತಮುತ್ತಲಿನ ವಾತಾವರಣ ಚೆನ್ನಾಗಿರುತ್ತದೆ
- ಯಶಸ್ಸು ಹಾಗೂ ತೃಪ್ತಿ ಇರುವ ದಿನ
- ವ್ಯಾಪಾರ ಅಥವಾ ವ್ಯವಹಾರ ದೃಷ್ಟಿಯಿಂದ ಪ್ರವಾಸ ಕೈಗೊಳ್ಳಬಹುದು
- ಆರ್ಥಿಕ ಅನುಕೂಲತೆಗಳಿರುವ ದಿನ
- ಚಿಕ್ಕಮಕ್ಕಳ ಆರೋಗ್ಯದ ಬಗ್ಗೆ ಜಾಗ್ರತೆವಹಿಸಿ
- ಮೃತ್ಯುಂಜಯನ ಪ್ರಾರ್ಥನೆ ಮಾಡಿ
ವೃಷಭ
![](https://newsfirstlive.com/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ಯಶಸ್ಸು ಸಿಗುವ ದಿನ
- ವ್ಯಾಪಾರಸ್ಥರಿಗೆ ಶುಭ ಲಾಭವಿದೆ
- ಪಿತ್ರಾರ್ಜೀತ ಆಸ್ತಿಯಿಂದ ಲಾಭ ಅಥವಾ ಹಣ ಲಾಭವಿದೆ
- ಮಾನಸಿಕ ತೃಪ್ತಿರುವ ದಿನ
- ಇಂದು ಜವಾಬ್ದಾರಿ ನಿಷ್ಠರಾಗಿ ಕೆಲಸ ಮಾಡುವುದಕ್ಕೆ ಅವಕಾಶವಿದೆ
- ಹಳೆಯ ಗೊಂದಲಗಳಿಗೆ ಎಂದು ತೆರೆ ಬೀಳಬಹುದು
- ಕುಲದೇವತ ಆರಾಧನೆ ಮಾಡಿ
ಮಿಥುನ
![](https://newsfirstlive.com/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಯಮಿತ ಆದಾಯದ ಬಗ್ಗೆ ಗಮನಿಸಿ
- ಇಂದು ಅಧಿಕಾರ, ಹಕ್ಕನ್ನು ಸರಿಯಾಗಿ ಉಪಯೋಗಿಸಿಕೊಳ್ಳಲಾಗುವುದಿಲ್ಲ
- ಹಿರಿಯ ಅಧಿಕಾರಿಗಳೊಂದಿಗೆ ಉತ್ತಮ ಸಂಪರ್ಕ ಇರಲಿ
- ಸಣ್ಣ ಆರೋಗ್ಯ ಸಮಸ್ಯೆ ಕಾಡಬಹುದು
- ರಾಜಕೀಯ ವಿಚಾರದಲ್ಲಿ ಹಿನ್ನಡೆ ಉಂಟಾಗಬಹುದು
- ಇಂದು ರಾಜಕಾರಣಿಗಳಿಗೆ ಅಪಯಶಸ್ಸು
- ಆಂಜನೇಯನ ಅನುಗ್ರಹ ಪಡೆಯಿರಿ
ಕಟಕ
![](https://newsfirstlive.com/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ಕೋಪ ಕಡಿಮೆ ಮಾಡಿಕೊಳ್ಳಿ
- ಇಂದು ನಿಮ್ಮ ತಾಳ್ಮೆಯ ಪರೀಕ್ಷೆಯ ದಿನ
- ಮಕ್ಕಳು ಅನುಚಿತವಾಗಿ ವರ್ತಿಸಬಹುದು
- ನಿಮ್ಮ ಹಿತೈಷಿಗಳಿಂದ ಯಾವುದೇ ಅನುಕೂಲವಿಲ್ಲ
- ನಿಮ್ಮ ಕೆಲಸಗಳಲ್ಲಿ ತಪ್ಪನ್ನ ಹುಡುಕುವ ದಿನ
- ಕಾರ್ಯ ಅಥವಾ ವೃತ್ತಿಯ ಮೇಲೆ ಹೆಚ್ಚು ಗಮನಹರಿಸಿ
- ತಾಪಸ ಮನ್ಯುವಿನ ಪ್ರಾರ್ಥನೆ ಮಾಡಿ
ಸಿಂಹ
![](https://newsfirstlive.com/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ವ್ಯವಹಾರಿಕವಾಗಿ ಗಾಂಭೀರ್ಯದಿಂದ ಇರುತ್ತೀರಿ
- ಯೋಜನೆಯಂತೆ ಎಲ್ಲ ಕೆಲಸಗಳು ನಡೆಯುತ್ತವೆ
- ನಿಮ್ಮ ಸಹಾಯಕರು ತುಂಬಾ ಪ್ರಾಮಾಣಿಕವಾಗಿರುತ್ತಾರೆ
- ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ತೋರಬೇಕು
- ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ಮಾಡಬಹುದು
- ದಾಂಪತ್ಯದಲ್ಲಿ ಸಾಮರಸ್ಯ ಶುಭವಿದೆ
- ಇಷ್ಟದೇವತಾ ಆರಾಧನೆ ಮಾಡಿ
ಕನ್ಯಾ
![](https://newsfirstlive.com/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಕುಟುಂಬದಲ್ಲಿ ನಿಮ್ಮ ಪ್ರತಿಷ್ಠೆ, ಗೌರವ ಹೆಚ್ಚಾಗಬಹುದು
- ಮಾನಸಿಕ ತೊಂದರೆ ದೂರವಾಗಬಹುದು
- ನಿಮ್ಮ ಯೋಜನೆಗಳನ್ನು ಸರಿಯಾಗಿ ಕಾರ್ಯಗತಗೊಳಿಸಿ
- ಬೇರೆಯವರಿಗೆ ಸಹಾಯ ಮಾಡಿ ಪುಣ್ಯ ಸಂಪಾದಿಸಿ
- ನಿಮ್ಮ ಶಕ್ತಿ ಸಾಮರ್ಥ್ಯ ಪ್ರದರ್ಶಿಸಲು ವಿಫಲರಾಗುತ್ತೀರಿ
- ಅನಗತ್ಯ ಮಾತು ಬೇಡ, ಉತ್ತಮವಾದ ಕೆಲಸ ಮಾಡಿ
- ಮಾರುತಿಯನ್ನ ಪ್ರಾರ್ತನೆ ಮಾಡಿ
ತುಲಾ
![](https://newsfirstlive.com/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ವೃತ್ತಿ ಅಥವಾ ನೌಕರಿಯಲ್ಲಿ ನಿಮ್ಮನ್ನ ದ್ವೇಷಿಸುವವರು ಹೆಚ್ಚು
- ಜನರಿಗೆ ವಿರುದ್ಧವಾದ ಕೆಲಸ ಬೇಡ
- ಆರೋಗ್ಯದ ಬಗ್ಗೆ ಕಾಳಜಿ ಇರಲಿ
- ಅಧಿಕಾರ, ಸ್ಥಾನದ ದುರುಪಯೋಗ ಬೇಡ
- ಸಂಜೆ ಸ್ನೇಹಿತರ ಜೊತೆ ಉತ್ತಮ ಚರ್ಚೆ ನಡೆಸಬಹುದು
- ಹಣದ ತೊಂದರೆ ಇಲ್ಲ ಶುಭವಿದೆ
- ಗುರು ದತ್ತಾತ್ರೇಯರ ಪ್ರಾರ್ಥನೆ ಮಾಡಿ
ವೃಶ್ಚಿಕ
![](https://newsfirstlive.com/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಅನಗತ್ಯ ಯಾವ ಬದಲಾವಣೆಯು ಬೇಡ
- ನಿಮ್ಮ ಸಹಾಯ ವಿನಾಕಾರಣ ವ್ಯಕ್ತವಾಗಬಹುದು
- ನಿಮ್ಮ ಅಕ್ಕಪಕ್ಕದವರೊಂದಿಗೆ ಸೌಹಾರ್ದಯುತವಾಗಿರಿ
- ಕೌಟುಂಬಿಕ ಜಗಳ ಅಥವಾ ಮನಸ್ತಾಪವಾಗಬಹುದು
- ವ್ಯಾಪಾರದಲ್ಲಿ ಗೊಂದಲ ಬಗೆಹರಿಸಿಕೊಳ್ಳಿ
- ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲಕರ ದಿನ
- ಶ್ರೀರಾಮನನ್ನ ಪ್ರಾರ್ಥನೆ ಮಾಡಿ
ಧನುಸ್ಸು
![](https://newsfirstlive.com/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಉದ್ಯೋಗದಲ್ಲಿ ಬದಲಾವಣೆ ಇದೆ
- ಯೋಗ್ಯ ವ್ಯಕ್ತಿಗಳ ಮಾರ್ಗದರ್ಶನದಿಂದ ಪ್ರಯೋಜನವಾಗಬಹುದು
- ದಿನದ ಹೆಚ್ಚಿನ ಭಾಗ ನಿಮಗೆ ಅನುಕೂಲಕರವಾಗಿದೆ
- ಪ್ರೇಮಿಗಳಿಗೆ ಉತ್ತಮ ದಿನ
- ನಿಮ್ಮ ಸರಿಯಾದ ವ್ಯಕ್ತಿತ್ವದಿಂದ ಜನರು ಪ್ರಭಾವಿತರಾಗುತ್ತಾರೆ
- ವಿದ್ಯಾರ್ಥಿಗಳಿಗೆ ಸಹಾಯ ದೊರಕಬಹುದು
- ಶ್ರೀ ಕೃಷ್ಣನನ್ನು ಪ್ರಾರ್ಥನೆ ಮಾಡಿ
ಮಕರ
![](https://newsfirstlive.com/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ನಿಮ್ಮ ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ
- ಕುಟುಂಬದಲ್ಲಿ ಅಹಿತಕರ ಘಟನೆಗಳು ನಡೆಯಬಹುದು
- ಭಾವನಾತ್ಮಕವಾಗಿ ಯಾವುದೇ ನಿರ್ಧಾರ ಬೇಡ
- ಹಳೆಯ ತಪ್ಪಿನ ಅರಿವಾಗುತ್ತದೆ
- ಸ್ವಯಂ ಪ್ರೇರಣೆಯಿಂದ ಮನಸ್ಸನ್ನು ಕೇಂದ್ರೀಕರಿಸಬೇಕು
- ಸ್ನೇಹಿತರಿಂದ ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯ ಉಂಟಾಗಬಹುದು
- ದುರ್ಗಾದೇವಿ ಆರಾಧನೆ ಮಾಡಿ
ಕುಂಭ
![](https://newsfirstlive.com/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ದಾಂಪತ್ಯದಲ್ಲಿ ಪ್ರಯತ್ನಪೂರ್ವಕವಾಗಿಯಾದರೂ ಅನ್ಯೋನ್ಯತೆ ಕಾಪಾಡಿಕೊಳ್ಳಿ
- ಆರಾಮದಿಂದ ದಿನ ಕಳೆಯಲು ಯತ್ನಿಸಬಹುದು
- ಕುಟುಂಬದವರ ಸಹಕಾರ ಇರುತ್ತದೆ
- ಪೂರ್ಣ ಉತ್ಸಾಹದಿಂದ ಜವಾಬ್ದಾರಿಗಳನ್ನು ಪೂರೈಸಬಹುದು
- ಆರೋಗ್ಯವಾಗಿ ತೊಂದರೆ ಇಲ್ಲ
- ಹಣದ ವಿಚಾರವಾಗಿ ಗೊಂದಲ ಮನಸ್ತಾಪಗಳಾಗುತ್ತವೆ
- ಪಾರ್ವತಿ ದೇವಿಯನ್ನು ಪ್ರಾರ್ಥನೆ ಮಾಡಿ
ಮೀನ
![](https://newsfirstlive.com/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಕೆಲಸ ನಿಮಗೆ ತೃಪ್ತಿ ಕೊಡುವುದಿಲ್ಲ
- ಕೆಲವು ಕೆಲಸಗಳು ನಿಧಾನವಾಗಿ ಪೂರ್ಣವಾಗಬಹುದು
- ಹಳೆಯ ತಪ್ಪಿನಿಂದ ಬೇಸರ
- ನಿಮ್ಮ ಜವಾಬ್ದಾರಿಗಳ ಬಗ್ಗೆ ಚಿಂತಿಸಿ
- ನಿಮ್ಮ ಆರೋಗ್ಯ ಗಮನಿಸಿ ತಾತ್ಸಾರ ಮಾಡಬೇಡಿ
- ವ್ಯವಹಾರ ಅಥವಾ ಹಣಕಾಸು ಮಾಮೂಲಿನಂತೆ ನಡೆಯುತ್ತದೆ
- ಅಮೃತ ಮೃತ್ಯುಂಜಯನನ್ನ ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ