ಕಲಾ ಕ್ಷೇತ್ರಕ್ಕೆ ಸಂಬಂಧಿಸಿದವರಿಗೆ ಉನ್ನತ ಸ್ಥಾನಮಾನ
ವೈಯಕ್ತಿಕ ಆರೋಗ್ಯ ಸಮಸ್ಯೆಗೆ ಪರಿಹಾರ ದೊರಕಬಹುದು
ಶತ್ರುಗಳ ಆಕ್ರಮಣದ ಸೂಚನೆ ಇದೆ ತಾಳ್ಮೆಯಿಂದ ಇರಿ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಶ್ರವಣ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.
ಮೇಷ ರಾಶಿ
- ಮನೆಯಲ್ಲಿ ಸಂತೃಪ್ತಿಯ ವಾತಾವರಣವಿರುತ್ತದೆ
- ಆತ್ಮವಿಶ್ವಾಸ ಹೆಚ್ಚಿಸುವ ದಿನವಾಗಿರುತ್ತದೆ
- ಇಂದು ಮತ್ತು ಮುಂದಿನ ಯೋಚನೆಗಳ ಫಲ ನಿಮಗೆ ಯಶಸ್ಸಿನ ಗುಟ್ಟು ತಿಳಿಯುವಂತ ದಿವಸ
- ಅಂದುಕೊಂಡ ಕಾರ್ಯವನ್ನು ಮೇಲ್ದರ್ಜೆಗೆ ಏರಿಸಿ ಆದ್ಯತೆ ಕೊಡುತ್ತೀರಿ
- ಆಕಸ್ಮಿಕವಾಗಿ ವಾಹನಕ್ಕೆ ಹಾನಿಯಾಗುವ ಸಾಧ್ಯತೆಗಳಿವೆ ಎಚ್ಚರವಿರಲಿ
- ಕುಲದೇವತಾ ಆರಾಧನೆ ಮಾಡಿ
ವೃಷಭ
- ನೌಕರಿಯ ದೃಷ್ಟಿಯಿಂದ ದೂರ ಪ್ರಯಾಣದ ಸೂಚನೆಗಳಿವೆ
- ವ್ಯಾಪಾರ-ವ್ಯವಹಾರವನ್ನು ವಿಸ್ತರಿಸಲು ಸಾಲದ ಅವಶ್ಯಕತೆ ಬೀಳಬಹುದು
- ಉನ್ನತ ಅಧಿಕಾರಿಗಳೊಂದಿಗೆ ಸಂಬಂಧವು ಉತ್ತಮವಾಗಿರಲಿ
- ಇಂದು ಒತ್ತಡ ಹಾಗೂ ಮಾನಸಿಕ ಕಿರಿಕಿರಿಯಾಗಬಹುದು
- ಮನಸ್ಸು ತುಂಬಾ ಘಾಸಿಗೊಳ್ಳುವ ಸಾಧ್ಯತೆಗಳೇ ಹೆಚ್ಚಾಗಿ ಕಾಣುತ್ತದೆ
- ತುಂಬಾ ಆಲೋಚನೆಗಳನ್ನು ಮಾಡುವ ದಿನ
- ಸಾಲಿಗ್ರಾಮ ಮಹಾ ವಿಷ್ಣುವನ್ನು ಧ್ಯಾನಿಸಿ
ಮಿಥುನ
- ಮನೆಯಲ್ಲಿ ನೆಮ್ಮದಿಯ ವಾತಾವರಣವಿರಲಿದೆ
- ನಿಮ್ಮ ಬಗ್ಗೆ ಅಪಪ್ರಚಾರ ನಡೆಯಬಹುದು
- ಮನೆಯ ಹೊರಗೆ- ನೌಕರಿಯ ಸ್ಥಳದಲ್ಲಿ ಊಹಾಪೋಹಗಳಿರಬಹುದು
- ಮನೆಯಲ್ಲಿ ಎಲ್ಲರ ನಂಬಿಕೆ ವಿಶ್ವಾಸಗಳಿಗೆ ಪಾತ್ರರಾಗುತ್ತೀರಿ
- ಕೆಲವೇ ಕೆಲವರು ನಿಮ್ಮಿಂದ ಸ್ಫೂರ್ತಿ ಪಡೆಯಬಹುದು
- ವಿದ್ಯಾರ್ಥಿಗಳು ದುಂದುವೆಚ್ಚ ಮಾಡಬಹುದು ಕಾಲಾಹರಣವೂ ಆಗುತ್ತದೆ
- ಕುಲದೇವರನ್ನು ಪ್ರಾರ್ಥಿಸಿ
ಕಟಕ
- ಹೊಸದಾದ ಯಾವುದೇ ಕೆಲಸಗಳನ್ನು ಆರಂಭಿಸಲು ಶುಭವಲ್ಲ
- ವ್ಯಾಪಾರ-ವ್ಯವಹಾರದಲ್ಲಿ ಸ್ವಲ್ಪ ನಷ್ಟದ ಸಾಧ್ಯತೆಗಳಿವೆ
- ನಿಮ್ಮ ವ್ಯವಹಾರಾದಿಗಳಲ್ಲಿ ವೃತ್ತಿಯಲ್ಲಿ ಸಭ್ಯರಾಗಿರಿ
- ಹಣದ ಚಿಂತೆ ಕಾಡಬಹುದು ಅದರೆ ತೊಂದರೆಯಾಗದೆ ಹಣ ಸಿಗುತ್ತದೆ
- ಹಳೆಯ ಕಹಿ ನೆನಪುಗಳು ನೆನಪಿಗೆ ಬರಲಿದೆ
- ಇಷ್ಟ ದೇವತಾ ಧ್ಯಾನ ಮಾಡಿ
ಸಿಂಹ
- ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಹೊಂದಬಹುದು
- ಕಾನೂನು ವಿದ್ಯಾರ್ಥಿಗಳು ತಮ್ಮ ಅಭ್ಯಾಸ ಸಹಾಯಕ್ಕಾಗಿ ಹಿರಿಯ ವಿದ್ಯಾರ್ಥಿಗಳೊಂದಿಗೆ ಚರ್ಚಿಸಲು ಅವಕಾಶವಿದೆ
- ನ್ಯಾಯವಾದಿಗಳು, ವಕೀಲರಿಗೆ ಶುಭದಿನ ಲಾಭದ ದಿನ
- ಕಬ್ಬಿಣ ಮಾರಾಟ ಮಾಡುವವರಿಗೆ ಲಾಭವಿದ್ದರೂ ದಂಡ ಕಟ್ಟ ಬೇಕಾಗಬಹುದು
- ಹಣ ಹೂಡಿಕೆಯ ಮತ್ತು ಹೆಚ್ಚು ಹಣ ಖರ್ಚಾಗುವ ಯಾವುದೇ ಕೆಲಸವನ್ನು ಆರಂಭಿಸುವುದಕ್ಕೆ ಶುಭವಾಗಿರುವುದಿಲ್ಲ
- ಶನೈಶ್ಚರನನ್ನು ಪ್ರಾರ್ಥನೆ ಮಾಡಿ, ಎಳ್ಳೆಣ್ಣೆ ಅರ್ಪಿಸಿ
ಕನ್ಯಾ
- ಮನೆಯಲ್ಲಿ ಏನೋ ಸಂತಸದ ವಾತಾವರಣ ಎಲ್ಲಾ ಕೆಲಸದಲ್ಲಿ ಉತ್ಸಾಹ ತೋರಬಹುದು
- ಕಮಿಷನ್ ಏಜೆಂಟ್ಸ್ಗಳಿಗೆ ಶುಭ ಮತ್ತು ಲಾಭದಾಯಕವಾಗಿರುತ್ತದೆ
- ಕುಟುಂಬ ಮತ್ತು ವ್ಯವಹಾರದಲ್ಲಿ ಸಮತೋಲನ ಕಾಯ್ದುಕೊಳ್ಳಬೇಕಾದ ಜವಾಬ್ದಾರಿ ಹೆಚ್ಚು
- ಉನ್ನತ ವಿದ್ಯಾಭ್ಯಾಸಕ್ಕಾಗಿ ನಗರಕ್ಕೆ ಹೋಗಬೇಕೆನ್ನುವರಿಗೆ ಅನುಕೂಲವಿದೆ
- ನಿವೃತ್ತ ಸರ್ಕಾರಿ ನೌಕರರಿಗೆ ಸ್ವಲ್ಪ ಕಿರಿಕಿರಿ ಕಾಡಬಹುದು
- ವಿಘ್ನೇಶ್ವರನನ್ನು ಪ್ರಾರ್ಥನೆ ಮಾಡಿ
ತುಲಾ
- ಕಲಾ ಕ್ಷೇತ್ರಕ್ಕೆ ಸಂಬಂಧಿಸಿದವರಿಗೆ ಉನ್ನತ ಸ್ಥಾನಮಾನಗಳು ದೊರೆಯಲಿದೆ
- ಹಿಂದೆ ಹೂಡಿಕೆ ಮಾಡಿದ್ದ ಹಣದಿಂದ ಲಾಭ ನೋಡುವ ದಿನವಾಗಿದೆ
- ವಾಹನ ಖರೀದಿಯ ಆಲೋಚನೆ ಬರಬಹುದು
- ಸಣ್ಣ ಆಸ್ತಿಯ ವಿಚಾರಕ್ಕೆ ಮನಸ್ತಾಪ ಏರ್ಪಡುತ್ತದೆ
- ಮನೆಯಲ್ಲಿದ್ದ ಶಾಂತಿಯ ವಾತಾವರಣ ಕದಡಿ ಬೇಸರವಾಗಬಹುದು
- ಸುಖವಿದ್ದರೂ ಅನುಭವಿಸಲು ಯೋಗವಿಲ್ಲ ಎಂದು ಹೇಳಬೇಕಾದ ದಿನ
- ಅಶಕ್ತರಿಗೆ, ರೋಗಿಗಳಿಗೆ ಹಣ್ಣುಗಳನ್ನು ಕೊಡಿ
ವೃಶ್ಚಿಕ
- ಭಾವನಾತ್ಮಕ ಸಂಬಂಧ ಹೊಂದಿರುವವರಿಗೆ ಆಘಾತವಾಗಬಹುದು
- ಪ್ರಯಾಣವು ತುಂಬಾ ಆಯಾಸ ಉಂಟು ಮಾಡುತ್ತದೆ
- ಶತ್ರುಗಳ ಆಕ್ರಮಣದ ಸೂಚನೆ ಇದೆ ತಾಳ್ಮೆಯಿರಲಿ
- ಮಾತು ನಿಮಗೆ ತೊಂದರೆಯನ್ನು ಮಾಡಬಹುದು
- ಹಿರಿಯರ, ಸಂಗಾತಿಯ ಮಾತಿಗೆ ಬೆಲೆ ಕೊಡಿ ಪರಿಹಾರ ಮಾರ್ಗ ದೊರೆಯಬಹುದು
- ದೂರದಿಂದ ಅಶುಭವಾರ್ತೆ ಮನಸ್ಸಿಗೆ ನೋವು ಉಂಟಾಗಬಹುದು
- ದೇವರನ್ನು ದೂಷಿಸುವ ಸ್ಥಿತಿಗೆ ನಿಮ್ಮ ನೋವು ಕಾಡಬಹುದು
ಧನುಸ್ಸು
- ಕುಟುಂಬದಲ್ಲಿ ಹಲವು ದಿನಗಳಿಂದ ನೆರವೇರದ ಕೆಲಸ ಇಂದು ಪೂರ್ಣವಾಗಬಹುದು
- ಪ್ರೇಮಿಗಳಿಗೆ ಸುದಿನ ದುರುಪಯೋಗ ಮಾಡಿಕೊಳ್ಳಬಾರದು
- ಹಣ, ವಸ್ತ್ರಗಳು ಮನಸ್ಸಿಗೆ ಸಂತೋಷ ಕೊಡಬಹುದು
- ಸ್ನೇಹಿತರ ಕೆಲಸವನ್ನು ನೀವು ಮಾಡಿಕೊಡದೆ ಅವರಿಗೆ ಬೇಸರ ಉಂಟಾಗಬಹುದು
- ನಿಮ್ಮ ಒತ್ತಡಗಳಿದ್ದರು ಮುಖ್ಯವಾಗಿ ಆಗಬೇಕಾದ ಕೆಲಸಕ್ಕೆ ಗಮನಹರಿಸಬೇಕಾಗುತ್ತದೆ
- ಅಮೂಲ್ಯವಾದ ಗ್ರಂಥ ಸಂಪಾದನೆಗೆ, ಓದಿನ ಕಡೆಗೆ ನೀವು ಆಕರ್ಷಿತರಾಗಬಹುದು
- ಸಮುದ್ರ ತೀರದಲ್ಲಿ ಈಶ್ವರನ ಆರಾಧನೆ ಮಾಡಿ
ಮಕರ
- ಫಲ ನೀಡದ ಕೆಲಸಗಳನ್ನ ಸದ್ಯಕ್ಕೆ ಮುಂದೂಡುವುದು ಒಳ್ಳೆಯದು
- ವೈಯಕ್ತಿಕ ಆರೋಗ್ಯ ಸಮಸ್ಯೆಗೆ ಪರಿಹಾರ ದೊರಕಬಹುದು
- ಮಧುಮೇಹಿಗಳು ಸ್ವಲ್ಪ ಎಚ್ಚರಿಕೆವಹಿಸಿ ರೋಗ ಉಲ್ಬಣವಾಗಬಹುದು
- ರಾಜಕೀಯ ವ್ಯಕ್ತಿಗಳು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾದ ಸಂದರ್ಭ
- ಕೃಷಿಕರಿಗೆ, ಕಾರ್ಮಿಕರಿಗೆ ಆದಾಯ ಹೆಚ್ಚಳವಾಗಬಹುದು
- ಇಂದು ಹೊಸ ಯೋಜನೆಗಳು ಬೇಡ
- ಶ್ರೀನಿವಾಸನನ್ನು ಪ್ರಾರ್ಥನೆ ಮಾಡಿ
ಕುಂಭ
- ಅಪಘಾತ ಸಂಭವಿಸುವ ಸೂಚನೆ ಇದೆ ಎಚ್ಚರಿಕೆಯಿರಲಿ
- ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಹಿನ್ನಡೆಯಾಗಬಹುದು
- ಅಪರಾಧ ಭಾವ ಕಾಡಬಹುದು, ಅಧಿಕಾರಿಗಳ ವಿಚಾರಣೆಗೆ ಒಳಪಡಬಹುದು
- ಧನಬಲ ಕೆಲಸ ಮಾಡುವುದಿಲ್ಲ
- ಹಳೆಯ ವಿಚಾರಗಳು ಪ್ರಸ್ತಾಪವಾಗಿ ತೊಂದರೆ ಅನುಭವಿಸ ಬೇಕಾಗಬಹುದು
- ತಾಳ್ಮೆಯಿರಲಿ, ನಾಟಕಿಯ ಜೀವನ ಬೇಡ
- ದುರ್ಗಾದೇವಿಯನ್ನು ಆರಾಧಿಸಿ, ದುರ್ಗಾ ಹೋಮ ಮಾಡಿಸಿ
ಮೀನ
- ಮಾನಸಿಕ ಸ್ಥಿರತೆಯಿಂದ ನಿಮ್ಮ ಉದ್ಯೋಗ ವೃತ್ತಿಯಲ್ಲಿ ಸಾಧನೆ ಮಾಡುತ್ತೀರಿ
- ನಿಮಗೆ ವಿನಮ್ರ ಭಾವನೆ ನಿಮಗೆ ಯಶಸ್ಸು ಕೊಡುತ್ತದೆ
- ಸ್ನೇಹಿತರು ಬಂಧುಗಳು ನಿಮಗೆ ಸಹಾಯ ಮಾಡಬಹುದು
- ದುಡ್ಡಿನ ಬಗ್ಗೆ ಹೆಚ್ಚು ಆಸಕ್ತಿಯಿರುವುದಿಲ್ಲ, ಇಷ್ಟ ಮಿತ್ರರ ಮಾತು ಹಿತವೆನಿಸುತ್ತದೆ
- ವಿದ್ಯಾರ್ಥಿಗಳಿಗೆ ಮೆಚ್ಚುಗೆ ವ್ಯಕ್ತವಾಗಿ ಸಂತೋಷವಾಗುತ್ತದೆ
- ಈ ರಾಶಿಯ ಸ್ತ್ರೀಯರು ಸ್ವಉದ್ಯೋಗ ಪ್ರಾರಂಭಿಸಲು ಚಿಂತಿಸಬಹುದು
- ಲಲಿತಾ ಸಹಸ್ರನಾಮ ಶ್ರವಣ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ