ಭಾರತ ತಂಡಕ್ಕೆ ಕೆ.ಎಲ್​​ ರಾಹುಲ್​ ಸ್ಟ್ರಾಂಗ್​ ಕಮ್​ಬ್ಯಾಕ್​​.. ಲಂಕಾ ವಿರುದ್ಧ ಸ್ಟಾರ್​ ಆಟಗಾರರಿಗೆ ಕೊಕ್​!

author-image
Ganesh Nachikethu
Updated On
ರೋಹಿತ್​ಗೆ ಬೇಕಿತ್ತು ಪಂತ್.. ರಾಹುಲ್​ಗೆ ಚಾನ್ಸ್​ ಸಿಕ್ಕಿರುವ ಹಿಂದಿದೆ ಓರ್ವ ಸೂತ್ರಧಾರನ ಕೈವಾಡ..!
Advertisment
  • ಇಂದಿನಿಂದ ಶ್ರೀಲಂಕಾ, ಭಾರತದ ಮಧ್ಯೆ 3 ಪಂದ್ಯಗಳ ಏಕದಿನ ಸರಣಿ ಶುರು
  • ಮೊದಲ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಬಲಿಷ್ಠ ಭಾರತ ತಂಡ ಕಣಕ್ಕೆ
  • ಹಲವು ದಿನಗಳ ಬಳಿಕ ಟೀಮ್​ ಇಂಡಿಯಾಗೆ ರಾಹುಲ್​ ಭರ್ಜರಿ​ ಕಮ್​ಬ್ಯಾಕ್

ಇಂದು ಕೊಲಂಬೋದಾ ಆರ್​​. ಪ್ರೇಮದಾಸ್​​ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಟೀಮ್​ ಇಂಡಿಯಾ, ಶ್ರೀಲಂಕಾ ತಂಡದ ನಡುವಿನ ಏಕದಿನ ಪಂದ್ಯ ಶುರುವಾಗಿದೆ. ಟಾಸ್​ ಗೆದ್ದ ಶ್ರೀಲಂಕಾ ಕ್ಯಾಪ್ಟನ್​​ ಚರಿತ್​ ಅಸಲಂಕ ಅವರು ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಟೀಮ್​ ಇಂಡಿಯಾ ಬೌಲಿಂಗ್​ ಮಾಡುತ್ತಿದೆ.

ಇದಕ್ಕೂ ಮುನ್ನ ನಡೆದ 3 ಪಂದ್ಯಗಳ ಟಿ20 ಸರಣಿಯನ್ನು ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡ ಕ್ಲೀನ್​​ ಸ್ವೀಪ್​ ಮಾಡಿತ್ತು. ಈಗ ಏಕದಿನ ತಂಡವನ್ನು ಅನುಭವಿ ಕ್ರಿಕೆಟರ್​ ರೋಹಿತ್ ಶರ್ಮಾ ಮುನ್ನಡೆಸುತ್ತಿದ್ದಾರೆ.

2023ರ ಏಕದಿನ ವಿಶ್ವಕಪ್ ನಂತರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಜೋಡಿ 50 ಓವರ್​ಗಳ ಫಾರ್ಮೇಟ್​ಗೆ ಕಮ್​ಬ್ಯಾಕ್​ ಮಾಡಿದ್ದಾರೆ. ಅಷ್ಟೇ ಅಲ್ಲದೆ ಪಂತ್​ ಅವರನ್ನು ಬೆಂಚ್​​ ಕಾಯಿಸಿದ್ದು, ಸ್ಟಾರ್​ ವಿಕೆಟ್ ಕೀಪರ್​​ ಕೆ.ಎಲ್​ ರಾಹುಲ್​​ ಕೂಡ ತಂಡಕ್ಕೆ ಕಮ್​ಬ್ಯಾಕ್​ ಮಾಡಿದ್ದಾರೆ.

ಶುಭ್ಮನ್ ಗಿಲ್ ಉಪನಾಯಕ ಆಗಿದ್ದು, ರೋಹಿತ್ ಶರ್ಮಾ ಜತೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಕೊಹ್ಲಿ 3ನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿಯಲಿದ್ದು, 4ನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಆಡಲಿದ್ದಾರೆ. ಹಾಗೆಯೇ 5ನೇ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಕ್ರೀಸ್‌ಗೆ ಬರಲಿದ್ದಾರೆ.

ಶ್ರೀಲಂಕಾ ವಿರುದ್ಧ ಭಾರತದ ಏಕದಿನ ತಂಡ ಹೀಗಿದೆ..!

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶಿವಂ ದುಬೆ, ವಾಷಿಂಗ್ಟನ್​ ಸುಂದರ್​, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಅರ್ಶ್‌ದೀಪ್ ಸಿಂಗ್, ಮೊಹಮ್ಮದ್ ಸಿರಾಜ್.

ಇದನ್ನೂ ಓದಿ:ಈ ಸ್ಟೇಡಿಯಂನಲ್ಲಿ ಕೊಹ್ಲಿ​ ಬ್ಯಾಟಿಂಗ್ ಇತಿಹಾಸ ಏನ್ ಹೇಳುತ್ತೆ.. ಕನ್ನಡಿಗ ರಾಹುಲ್​ಗೆ ಚಾನ್ಸ್​ ಕೊಡ್ತಾರಾ ಗಂಭೀರ್?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment