/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಹಿಮವಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ದ್ವಿತೀಯ ತಿಥಿ, ಪುಷ್ಯಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ನಾಹ್ನ 12.00 ರಿಂದ 1.30 ರವರೆಗೆ
ಮೇಷ ರಾಶಿ
- ಮಾನಸಿಕ ಕಿರಿಕಿರಿ ಉಂಟಾಗಬಹುದು
- ಇಂದು ಕೆಲಸದಲ್ಲಿ ಹಿನ್ನಡೆಯಾಗಬಹುದು
- ತಂದೆಯವರಿಗೆ ಅಪಘಾತ ಆಗುವ ಸಂಭವವಿದೆ
- ವಾಹನದಿಂದ ತೊಂದರೆಯಾಗಬಹುದು
- ಹಣಕ್ಕೆ ಅಡಚಣೆ ಆಗಬಹುದು
- ಔಷಧಿಗಾಗಿ ಹೆಚ್ಚು ಖರ್ಚು ಮಾಡುವುದರಿಂದ ಬೇಸರ ಆಗಲಿದೆ
- ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವೃಷಭ
- ಮನಸ್ಸಿಗೆ ಸಮಾಧಾನವಿದೆ ಆದರೆ ಜಾಣ್ಮೆಯಿಂದ ಎಲ್ಲಾ ಕೆಲಸಗಳನ್ನು ಮಾಡಿ
- ಯಾವುದೇ ಕಠಿಣವಾದ ನಿರ್ಧಾರಗಳು ಬೇಡ
- ಪ್ರಯಾಣ ಅಥವಾ ಪ್ರವಾಸಕ್ಕೆ ಆದ್ಯತೆಯನ್ನು ನೀಡಿ
- ನಿಮ್ಮ ಮನಸ್ಸಿಗೆ ಸಮಾಧಾನ ಆಗುವ ಕೆಲಸಕ್ಕೆ ಆದ್ಯತೆ ನೀಡಿ
- ವಾಹನ ವಿಚಾರದಲ್ಲಿ ಸ್ವಲ್ಪ ಸಂತೋಷ ಆಗಲಿದೆ
- ಮಕ್ಕಳ ವಿಚಾರದಲ್ಲಿ ತೃಪ್ತಿ ಹೊಂದುತ್ತೀರಿ
- ಗಣಪತಿಯನ್ನು ಪ್ರಾರ್ಥನೆ ಮಾಡಿ
ಮಿಥುನ
- ಈ ದಿನ ಯಾವುದೇ ರೀತಿಯ ಅಹಿತವಾದ ಮಾತು ಬೇಡ
- ನಿಮ್ಮ ವ್ಯವಹಾರದ ಬಗ್ಗೆ ಗಮನವಿರಲಿ
- ಸ್ನೇಹಿತರ ಸಲಹೆ ಉಪಯೋಗಕ್ಕೆ ಬರುವುದಿಲ್ಲ
- ತಂದೆಯವರ ಜೊತೆ ಜಗಳ ಆಗುವ ಸಂಭವವಿದೆ
- ಹಣಕಾಸಿನ ವಿಚಾರದಲ್ಲಿ ಸರಿಯಾದ ದಾಖಲಾತಿಗಳಿರಲಿ
- ವ್ಯಾವಹಾರಿಕವಾಗಿ ಸ್ವಲ್ಪ ಗೊಂದಲಗಳು ಸವಾಲುಗಳಾಗಿರುತ್ತದೆ
- ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕಟಕ
- ನೀವು ಅಂದುಕೊಂಡ ಕೆಲಸ ಸಾಧಿಸುವಲ್ಲಿ ಪ್ರಯತ್ನಿಸುತ್ತೀರಿ ಆದರೆ ಅಪಯಶಸ್ಸು
- ನಂಬಿದವರಿಂದಲೇ ಮೋಸ ಆಗುವ ಸಾಧ್ಯತೆ
- ಮನೆಯಲ್ಲಿ ಅಶಾಂತಿಯ ವಾತಾವರಣ ಇರಲಿದೆ
- ನಿಮ್ಮ ಚಿಂತನೆ ಬೇರೆ ಕೆಲಸ ಆಗುವುದೇ ಬೇರೆ
- ಮಕ್ಕಳ ಬಗ್ಗೆ ಸ್ವಲ್ಪ ಚಿಂತೆ ಆರಂಭ ಆಗಲಿದೆ
- ಕುಟುಂಬದ ಸಮಸ್ಯೆ ಉಂಟಾಗಲಿದೆ
- ಅಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಸಿಂಹ
- ಪ್ರವಾಸದ ವಿಚಾರ ಮನಸ್ಸಿಗೆ ಖುಷಿ ಕೊಡಲಿದೆ
- ಅದೃಷ್ಟದ ಬೆಂಬಲ ನಿಮಗೆ ಸಿಗಬಹುದಾದ ದಿನ
- ಬೇರೆಯವರನ್ನು ಟೀಕೆ ಮಾಡಬಾರದು
- ತಪ್ಪುಗಳನ್ನು ಗಮನಿಸಿ ಆದರೆ ಸುಮ್ಮನಿರುವುದು ಒಳಿತು
- ವೈವಾಹಿಕ ಜೀವನದಲ್ಲಿ ಅಹಂನಿಂದ ಸಮಸ್ಯೆಯಾಗಬಹುದು
- ಉದ್ಯೋಗಿಗಳಿಗೆ ಸ್ವಲ್ಪ ಸಮಸ್ಯೆಯ ಸೂಚನೆ ಕಾಣಲಿದೆ
- ದುರ್ಗಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ
- ಸಾಂಸಾರಿಕ ಸಾಮರಸ್ಯವನ್ನು ಕಾಪಾಡಿಕೊಳ್ಳಿ
- ಸರ್ಕಾರಿ ಸೇವೆಗೆ ಸಂಬಂಧಿಸಿದಂತೆ ಅನುಕೂಲವಿದೆ
- ಬೇರೆಯವರ ಸಲಹೆಗಿಂತ ನಿಮ್ಮ ಆಲೋಚನೆ ಬಹಳ ಮುಖ್ಯ
- ಇಂದು ನೀವು ಪ್ರಿಯರಾದವರನ್ನು ಭೇಟಿಯಾಗಬಹುದು
- ವ್ಯಾವಹಾರಿಕವಾದ ಅನುಕೂಲತೆಗಳು ನಿಮ್ಮ ಪರವಾಗಿದೆ
- ಮಾನಸಿಕವಾದ ಹಿಡಿತವಿರಲಿ ಅದರಿಂದ ತೃಪ್ತಿ ಇದೆ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ತುಲಾ
- ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಗಮನವಿರಲಿ
- ಗುರಿ ಸಾಧಿಸಿ ನಿಟ್ಟುಸಿರು ಬಿಡುತ್ತೀರಿ
- ತಮಾಷೆ ಅಥವಾ ನಗುವಿನಿಂದ ದಿನ ಕಳೆಯುತ್ತೀರಿ
- ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಗಮನಕೊಡಿ
- ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಇದೆ
- ಹೊಸ ಆಸ್ತಿ ಖರೀದಿ ಮಾಡುವ ಚಿಂತನೆ ಮನಸ್ಸಿಗೆ ಬರಲಿದೆ
- ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
- ವ್ಯಾವಹಾರಿಕವಾಗಿ ಅದೃಷ್ಟವಶಾತ್ ನೀವು ಅಪಾಯದಿಂದ ಪಾರಾಗುತ್ತೀರಿ
- ಉದ್ಯೋಗದಲ್ಲಿ ಒತ್ತಡವನ್ನು ತಪ್ಪಿಸಿಕೊಳ್ಳಬೇಕು
- ಸಾಮಾಜಿಕ ಕಾರ್ಯಗಳಿಗೆ ನಿಮ್ಮ ಕೊಡುಗೆ ಅಗತ್ಯ
- ಚಿಕ್ಕ ಪುಟ್ಟ ಸಮಸ್ಯೆಗಳನ್ನು ಮೊದಲು ದೂರ ಮಾಡಿಕೊಳ್ಳಿ
- ಹೊರಗಿನ ಜನ ನಿಮ್ಮ ಕಡೆ ಆಕರ್ಷಿತರಾಗಬಹುದು
- ಮನೆಯಲ್ಲಿ ಉತ್ತಮ ವಾತಾವರಣ ಇರುವುದಿಲ್ಲ
- ಗುರು ದತ್ತಾತ್ರೇಯನನ್ನು ಪ್ರಾರ್ಥನೆ ಮಾಡಿ
ಧನಸ್ಸು
- ಪ್ರಯಾಣದಿಂದ ತೊಂದರೆಯಾಗುವ ಸೂಚನೆ ಇದೆ
- ಮಧ್ಯಾಹ್ನದ ನಂತರ ದಿನ ಚೆನ್ನಾಗಿದೆ
- ಮಾತನಾಡುವಾಗ ಹೆಚ್ಚು ಗಮನವಿರಲಿ
- ಸ್ನೇಹಿತರ ಜೊತೆ ಸಂಬಂಧ ಚೆನ್ನಾಗಿರುವುದಿಲ್ಲ
- ಅತಿಯಾದ ಆಸೆಯನ್ನು ನಿಯಂತ್ರಿಸಿ
- ಸ್ವಾರ್ಥವನ್ನು ಬಿಟ್ಟು ಚಿಂತಿಸಿ ಶುಭವಿದೆ
- ದೇವಿಯನ್ನು ಪ್ರಾರ್ಥನೆ ಮಾಡಿ
ಮಕರ
- ಹಿರಿಯರ ಮಾತಿಗೆ ಬೆಲೆ ಇರಲಿ
- ಬೇರೆಯವರನ್ನು ದುರುಪಯೋಗ ಮಾಡಿಕೊಳ್ಳಬೇಡಿ
- ಸಾಮಾಜಿಕ ಕ್ಷೇತ್ರದಲ್ಲಿ ಭಯದಿಂದಲೇ ಕಾರ್ಯ ನಿರ್ವಹಿಸಬೇಕಾಗಲಿದೆ
- ವೃತ್ತಿ ಬಗ್ಗೆ ಗೌರವವಿರಲಿ ಯಶಸ್ಸನ್ನು ಹೊಂದುತ್ತೀರಿ
- ಮನೆಗೆ ಹೊಸ ವಸ್ತು ಖರೀದಿಸುವುದರಿಂದ ಸಂತಸ ಆಗಲಿದೆ
- ಮಕ್ಕಳ ಪ್ರಗತಿಯ ಬಗ್ಗೆ ಚಿಂತನೆ ಮಾಡಿ
- ಗೋ ಸೇವೆಯನ್ನು ಮಾಡಿ
ಕುಂಭ
- ಉದ್ಯೋಗಿಗಳಿಗೆ ಹಣದ ವಿಚಾರದಲ್ಲಿ ಸಮಸ್ಯೆಯಾಗಬಹುದು
- ಹಣ ಹೂಡಿಕೆಗೆ ಸಮಯ ಒಳ್ಳೆಯದಾಗಿದೆ
- ಭವಿಷ್ಯದ ಯೋಚನೆಯನ್ನಿಟ್ಟುಕೊಂಡು ಕೆಲಸ ಮಾಡಿದರೆ ಒಳ್ಳೆಯದು
- ಶಿಸ್ತು ಪಾಲನೆ ಇರಲಿ
- ಇಂದು ಶಾಂತಿಯಿಂದ ವರ್ತಿಸಬೇಕು ಶುಭವಿದೆ
- ಆತುರದ ಅಥವಾ ಅತಿಯಾದ ಆಸೆಯನ್ನಿಟ್ಟುಕೊಂಡು ಯೋಚನೆ ಮಾಡೋದು ಬೇಡ
- ಕುಲದೇವತಾ ಪ್ರಾರ್ಥನೆ ಮಾಡಿ
ಮೀನ
- ಕೆಲಸದ ಒತ್ತಡಗಳಿಂದ ಹೊರ ಬರುತ್ತೀರಿ
- ನಿಮ್ಮ ಜೀವನದ ಮುಖ್ಯವಾದ ಮೌಲ್ಯಗಳನ್ನು ತಿಳಿಯಿರಿ
- ನಿಮ್ಮ ಕೆಲಸದ ರೀತಿಯಿಂದ ನಿಮಗೆ ಅನುಮಾನ ಬರಲಿದೆ
- ಸ್ವಾರ್ಥ ಅಥವಾ ಕೋಪ ನಿಮ್ಮಿಂದ ದೂರ ಆದರೆ ಮಾತ್ರ ಶುಭವಿದೆ
- ವ್ಯಾವಹಾರಿಕವಾಗಿ ಸೋತು ಹೋಗಲು ನೀವೇ ಕಾರಣ
- ಸಾಯಂಕಾಲದ ಹೊತ್ತಿಗೆ ಸ್ವಲ್ಪ ಸಮಾಧಾನ ಸಿಗಬಹುದು
- ನವಗ್ರಹರ ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ