/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಹಿಮವಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿ, ಶತಭಿಷಾ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ
ಮೇಷ ರಾಶಿ
/newsfirstlive-kannada/media/post_attachments/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ವಿದ್ಯಾರ್ಥಿಗಳು ನಿಮ್ಮ ಮಹತ್ತರ ಯೋಜನೆಗಳನ್ನು ರೂಪಿಸಿಕೊಳ್ಳಿ
- ಸ್ನೇಹಿತರ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಲು ಅವಕಾಶವಿದೆ
- ಇಂದು ಅರ್ಥಪೂರ್ಣ ಚರ್ಚೆಗಳಿಗೆ ಅವಕಾಶವಿದೆ
- ನಿಮ್ಮ ಆರ್ಥಿಕ ಸಂಕಷ್ಟ ನಿವಾರಣೆಯಾಗಬಹುದು
- ವೃತ್ತಿ ಅಥವಾ ಉದ್ಯೋಗದಲ್ಲಿ ಸಮಾಧಾನಕರ ವಾತಾವರಣವಿದೆ
- ಪ್ರಮುಖ ವಿಚಾರಗಳಲ್ಲಿ ತೊಡಗಿಸಿಕೊಳ್ಳುವವರಿಗೆ ಯಶಸ್ಸಿದೆ
- ಕುಲದೇವತಾ ಆರಾಧನೆ ಮಾಡಿ
ವೃಷಭ
/newsfirstlive-kannada/media/post_attachments/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಸಂಬಂಧಿಕರಿಂದ ಉತ್ತಮ ಪ್ರತಿಸ್ಪಂದನೆ ದೊರಕಬಹುದು
- ಇಂದು ನಂಬಿಕಸ್ಥರಿಂದ ಕೆಲವು ಸಮಸ್ಯೆಗಳು ಉಂಟಾಗಬಹುದು
- ಬೇರೆಯವರಿಗೆ ಅನುಕೂಲ ಮಾಡುವಾಗ ಸ್ವಲ್ಪ ಚಿಂತನೆಯಿರಲಿ
- ಇಂದು ಹಣದ ಒತ್ತಡ ಕಾಡಿದರೂ ಬಗೆಹರಿಯುತ್ತದೆ
- ಇಂದು ಸಹೋದ್ಯೋಗಿಗಳಿಗೆ ಸಲಹೆ ಕೊಡಬೇಡಿ
- ಆದಷ್ಟು ಎಲ್ಲಾ ವಿಚಾರದಲ್ಲಿ ಮೌನವಾಗಿದ್ದರೆ ಒಳ್ಳೆಯದು
- ನವಗ್ರಹರ ಆರಾಧನೆ ಮಾಡಿ
ಮಿಥುನ
/newsfirstlive-kannada/media/post_attachments/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ಹಿಂದೆ ಮಾಡಿದ ಕೆಲವು ನಿರ್ಧಾರಗಳು ಇಂದು ಪರೀಕ್ಷೆಗೆ ಒಳಪಡಬಹುದು
- ಇಂದು ದೂರದ ಪ್ರಯಾಣ ವಿಫಲವಾಗಬಹುದು
- ನಿಮ್ಮ ಹವ್ಯಾಸಕ್ಕೆ ಹಣ ಖರ್ಚು ಮಾಡಬಹುದು ಆದರೆ ನಿರಾಸೆಯಾಗುತ್ತದೆ
- ಆರ್ಥಿಕ ಸುಧಾರಣೆಗೆ ಚಿಂತನೆ ಮಾಡಬಹುದು
- ನಿಮ್ಮ ಕೆಲಸ ಕಾರ್ಯಗಳಲ್ಲಿ ಹಿನ್ನಡೆಯಾಗಬಹುದು
- ವ್ಯಾವಹಾರಿಕವಾಗಿ ಹೊಸ ಒಪ್ಪಂದಗಳು ಬರುವ ಸಾಧ್ಯತೆಯಿದೆ ಆಲೋಚನೆ ಮಾಡಿ
- ದೇವಿ ಆರಾಧನೆ ಮಾಡಿ
ಕಟಕ
/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಸ್ನೇಹಿತರಿಂದ ಉತ್ತಮವಾದ ಲಾಭಕ್ಕೆ ಅವಕಾಶವಿದೆ
- ಇಂದು ದಾಂಪತ್ಯದಲ್ಲಿ ಸಾಮರಸ್ಯ ಕಾಪಾಡಿಕೊಳ್ಳಿ
- ಮನೆಯ ವಾತಾವರಣ ಸ್ವಲ್ಪ ಬದಲಾಗುವ ಸಾಧ್ಯತೆಯಿದೆ
- ಇಂದು ನಿಮ್ಮ ಮಾನಸಿಕ ಸ್ಥಿತಿಯನ್ನ ದೃಢಪಡಿಸಿಕೊಳ್ಳಿ
- ಹೊಸ ಉದ್ಯೋಗಕ್ಕೆ ಅವಕಾಶವಿದೆ
- ಬಂಧುಗಳಿಂದ ಕೆಲ ಮಾಹಿತಿ ಸಿಗಬಹುದು ಅದರಿಂದ ಸಮಾಧಾನ
- ಗಣಪತಿಯನ್ನು ಪ್ರಾರ್ಥನೆ ಮಾಡಿ
ಸಿಂಹ
/newsfirstlive-kannada/media/post_attachments/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ಕನಸು ನನಸಾಗುವ ದಿನ
- ಇಂದು ತುಂಬಾ ಒತ್ತಡಯಿರುವ ದಿನ
- ಹಿರಿಯ ಅಧಿಕಾರಿಗಳ ನೆರವು ಸಿಗಬಹುದು
- ಆಸ್ತಿ ಖರೀದಿಯ ವಿಚಾರದಲ್ಲಿ ಜಯವಿದೆ
- ಹಲವಾರು ರೀತಿಯ ಯಶಸ್ಸಿಗೆ ದಾರಿಯಾಗುವ ದಿನ
- ವಿದ್ಯಾರ್ಥಿಗಳಿಗೆ ಕೆಲವು ಸವಾಲುಗಳಿವೆ ಎದುರಿಸಬೇಕಾಗಬಹುದು
- ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ
/newsfirstlive-kannada/media/post_attachments/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ತಾಳ್ಮೆಯನ್ನು ಪರೀಕ್ಷೆ ಮಾಡುವ ದಿನ ನೀವು ಅದರಲ್ಲಿ ಗೆಲ್ಲಲೇಬೇಕು
- ಉದ್ಯೋಗ ಅಥವಾ ವ್ಯವಹಾರದಲ್ಲಿ ಸಮಸ್ಯೆ ಉಂಟಾಗಬಹುದು
- ಆರೋಗ್ಯದ ವಿಚಾರದಲ್ಲಿ ಬೇಸರ ಉಂಟಾಗಬಹುದು
- ಒಳ್ಳೆಯ ವಿಚಾರಗಳು ಕೆಟ್ಟದಾಗಿ ಪರಿಣಾಮ ಬೀರಬಹುದು
- ಯಾವುದೇ ಸಾಧನೆ ಇಲ್ಲದೆ ಹತಾಶರಾಗಬಹುದು
- ಸಾಮಾಜಿಕ ಮನ್ನಣೆಯಿಲ್ಲದೇ ಬೇಸರವಾಗಬಹುದು
- ಇಷ್ಟದೇವತಾ ಪ್ರಾರ್ಥನೆ ಮಾಡಿ
ತುಲಾ
/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ಯಾರನ್ನು ಕೂಡ ಅಂಧವಾಗಿ ನಂಬಬೇಡಿ
- ಕಳೆದುಕೊಂಡದ್ದನ್ನ ಪುನಃ ಪಡೆಯುವ ಅವಕಾಶವಿದೆ
- ಧಾರ್ಮಿಕ ಪ್ರವೃತ್ತಿಯ ಜನರೊಂದಿಗೆ ಸಂಪರ್ಕವಾಗಬಹುದು
- ಮನಸ್ಸಿನಲ್ಲಿ ನಕಾರಾತ್ಮಕ ಯೋಚನೆಗಳು ಬರಬಹುದು
- ಇಂದು ಉದ್ಯೋಗಿಗಳಿಗೆ ಅನುಕೂಲವಿದೆ
- ಹಳೆಯ ನೆನಪುಗಳು ಸಂತಸ ತರಬಹುದು
- ಗಣಪತಿಯನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
/newsfirstlive-kannada/media/post_attachments/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ಕುಟುಂಬ ಜೀವನ ಚೆನ್ನಾಗಿರುತ್ತದೆ
- ಹೊಸ ಕೆಲಸದ ಆರಂಭಕ್ಕೆ ಅವಕಾಶವಿದೆ
- ನಿಧಾನವಾಗಿ ಮಾಡಿದ್ದ ಕೆಲಸದಿಂದ ಅನುಕೂಲವಿದೆ
- ಇಂದು ನಿಮ್ಮ ಆಯ್ಕೆಯಲ್ಲಿ ವ್ಯತ್ಯಾಸವಾಗುತ್ತದೆ
- ಇಂದು ಹಲವಾರು ನಿರ್ಧಾರಗಳು ನಿಮಗೆ ಮಾರಕವಾಗಬಹುದು ಎಚ್ಚರ
- ಹಣದ ವಿಚಾರದಲ್ಲಿ ಗೊಂದಲ ಉಂಟಾಗಬಹುದು
- ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ಧನಸ್ಸು
/newsfirstlive-kannada/media/post_attachments/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ನಿಮ್ಮ ಅಲ್ಪ ತಿಳುವಳಿಕೆಯಿಂದ ಸಮಸ್ಯೆ ಉಂಟಾಗಬಹುದು
- ವಿದ್ಯಾರ್ಥಿಗಳು ಸಾಧಿಸುವ ಛಲವನ್ನ ಬೆಳೆಸಿಕೊಳ್ಳಬೇಕು
- ಇಂದು ಜವಾಬ್ದಾರಿಯಿಂದ ವರ್ತಿಸಬೇಕು
- ಬಂಧುಗಳ ಭೇಟಿಯಿಂದ ಮನೋವಿಕಾರ ಸಾಧ್ಯತೆಯಿದೆ
- ಅತಿಯಾದ ಯೋಚನೆ ತೊಂದರೆ ಉಂಟುಮಾಡಬಹುದು
- ಇಂದು ಆರೋಗ್ಯ ಕೈ ಕೊಡುವ ಸಾಧ್ಯತೆಯಿದೆ
- ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮಕರ
/newsfirstlive-kannada/media/post_attachments/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಅನುಪಯುಕ್ತ ಕೆಲಸಗಳಲ್ಲಿ ಸಮಯ ವ್ಯರ್ಥವಾಗಬಹುದು
- ಆರೋಗ್ಯದಲ್ಲಿ ಏರುಪೇರಾಗಬಹುದು
- ಸಾಧಕರ ಭೇಟಿಯಿಂದ ಮಾರ್ಗದರ್ಶನ ಸಿಗಬಹುದು
- ನಿಮ್ಮ ಮಾತಿಗೆ ಪ್ರಾಮುಖ್ಯತೆ ಇರುವುದಿಲ್ಲ
- ಇಂದು ವ್ಯವಹಾರದಲ್ಲಿ ನಷ್ಟ ಅನುಭವಿಸಬಹುದು
- ಮಕ್ಕಳಿಂದ ದೊಡ್ಡ ಯೋಚನೆ ಪ್ರಾರಂಭವಾಗಬಹುದು
- ಶರಭೇಶ್ವರನನ್ನು ಪ್ರಾರ್ಥನೆ ಮಾಡಿ
ಕುಂಭ
/newsfirstlive-kannada/media/post_attachments/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ಇಂದು ಕುಟುಂಬ ಸದಸ್ಯರು ನಿಮ್ಮ ಜೊತೆಗೆ ಚೆನ್ನಾಗಿರುತ್ತಾರೆ
- ಮನಸ್ಸಿಗೆ ಅನಿಸಿದ ಕಾರ್ಯ ಮಾಡಬೇಡಿ ತೊಂದರೆಯಾಗಬಹುದು
- ಖುಷಿಯ ಹಿಂದೆ ದುಃಖವೂ ಇದೇ ಎಂದು ಮರೆಯಬೇಡಿ
- ಇಂದು ವಿರೋಧಿಗಳಿಂದ ಹುಷಾರಾಗಿರಿ ತೊಂದರೆಯಾಗಬಹುದು
- ಇಂದು ಒಂದೇ ಕೆಲಸ ಮತ್ತೆ ಮತ್ತೆ ಮಾಡಬೇಕಾಗುತ್ತದೆ
- ಮನೆಯ ವಾತಾವರಣದಲ್ಲಿ ಅಶಾಂತಿ ಬೇಡ
- ಶಿವರಾಧನೆ ಮಾಡಿ
ಮೀನ
/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಮಾನಸಿಕವಾದ ಸಮಾಧಾನ ಇರುವುದಿಲ್ಲ
- ಇಂದು ವ್ಯಾವಹಾರಿಕವಾಗಿ ಹಲವು ಸುಧಾರಣೆಗಳಾಗುತ್ತವೆ
- ಸ್ಥಗಿತಗೊಂಡ ಕಾಮಗಾರಿಗಳು ಪುನರಾರಂಭಗೊಳ್ಳವ ಯೋಗವಿದೆ
- ಹಣದ ವಿಚಾರದಲ್ಲಿ ಜಗಳವಾಗಬಹುದು
- ವ್ಯಾವಹಾರಿಕವಾಗಿ ಬದಲಾವಣೆ ಅದರಿಂದ ಸಮಾಧಾನವಾಗಬಹುದು
- ಮಹಿಳೆಯರಿಗೆ ಸ್ವಲ್ಪ ಸಮಸ್ಯೆ ಕಾಡಬಹುದು ಗಮನಹರಿಸಿ
- ಗುರುಗಳನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us