Advertisment

ಇಂದು ಕನಸು ನನಸಾಗುವ ದಿನ.. ವಿರೋಧಿಗಳಿಂದ ಹುಷಾರಾಗಿರಿ; ಇಲ್ಲಿದೆ ನಿಮ್ಮ ಭವಿಷ್ಯ!

author-image
admin
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಉದ್ಯೋಗ ಅಥವಾ ವ್ಯವಹಾರದಲ್ಲಿ ಸಮಸ್ಯೆ ಉಂಟಾಗಬಹುದು
  • ಮನೆಯ ವಾತಾವರಣ ಸ್ವಲ್ಪ ಬದಲಾಗುವ ಸಾಧ್ಯತೆಯಿದೆ
  • ಬೇರೆಯವರಿಗೆ ಅನುಕೂಲ ಮಾಡುವಾಗ ಸ್ವಲ್ಪ ಚಿಂತನೆಯಿರಲಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

Advertisment

ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಹಿಮವಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿ, ಶತಭಿಷಾ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ

ಮೇಷ ರಾಶಿ

publive-image

  • ವಿದ್ಯಾರ್ಥಿಗಳು ನಿಮ್ಮ ಮಹತ್ತರ ಯೋಜನೆಗಳನ್ನು ರೂಪಿಸಿಕೊಳ್ಳಿ
  • ಸ್ನೇಹಿತರ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಲು ಅವಕಾಶವಿದೆ
  • ಇಂದು ಅರ್ಥಪೂರ್ಣ ಚರ್ಚೆಗಳಿಗೆ ಅವಕಾಶವಿದೆ
  • ನಿಮ್ಮ ಆರ್ಥಿಕ ಸಂಕಷ್ಟ ನಿವಾರಣೆಯಾಗಬಹುದು
  • ವೃತ್ತಿ ಅಥವಾ ಉದ್ಯೋಗದಲ್ಲಿ ಸಮಾಧಾನಕರ ವಾತಾವರಣವಿದೆ
  • ಪ್ರಮುಖ ವಿಚಾರಗಳಲ್ಲಿ ತೊಡಗಿಸಿಕೊಳ್ಳುವವರಿಗೆ ಯಶಸ್ಸಿದೆ
  • ಕುಲದೇವತಾ ಆರಾಧನೆ ಮಾಡಿ

ವೃಷಭ

publive-image

  • ಸಂಬಂಧಿಕರಿಂದ ಉತ್ತಮ ಪ್ರತಿಸ್ಪಂದನೆ ದೊರಕಬಹುದು
  • ಇಂದು ನಂಬಿಕಸ್ಥರಿಂದ ಕೆಲವು ಸಮಸ್ಯೆಗಳು ಉಂಟಾಗಬಹುದು
  • ಬೇರೆಯವರಿಗೆ ಅನುಕೂಲ ಮಾಡುವಾಗ ಸ್ವಲ್ಪ ಚಿಂತನೆಯಿರಲಿ
  • ಇಂದು ಹಣದ ಒತ್ತಡ ಕಾಡಿದರೂ ಬಗೆಹರಿಯುತ್ತದೆ
  • ಇಂದು ಸಹೋದ್ಯೋಗಿಗಳಿಗೆ ಸಲಹೆ ಕೊಡಬೇಡಿ
  • ಆದಷ್ಟು ಎಲ್ಲಾ ವಿಚಾರದಲ್ಲಿ ಮೌನವಾಗಿದ್ದರೆ ಒಳ್ಳೆಯದು
  • ನವಗ್ರಹರ ಆರಾಧನೆ ಮಾಡಿ
Advertisment

ಮಿಥುನ

publive-image

  • ಹಿಂದೆ ಮಾಡಿದ ಕೆಲವು ನಿರ್ಧಾರಗಳು ಇಂದು ಪರೀಕ್ಷೆಗೆ ಒಳಪಡಬಹುದು
  • ಇಂದು ದೂರದ ಪ್ರಯಾಣ ವಿಫಲವಾಗಬಹುದು
  • ನಿಮ್ಮ ಹವ್ಯಾಸಕ್ಕೆ ಹಣ ಖರ್ಚು ಮಾಡಬಹುದು ಆದರೆ ನಿರಾಸೆಯಾಗುತ್ತದೆ
  • ಆರ್ಥಿಕ ಸುಧಾರಣೆಗೆ ಚಿಂತನೆ ಮಾಡಬಹುದು
  • ನಿಮ್ಮ ಕೆಲಸ ಕಾರ್ಯಗಳಲ್ಲಿ ಹಿನ್ನಡೆಯಾಗಬಹುದು
  • ವ್ಯಾವಹಾರಿಕವಾಗಿ ಹೊಸ ಒಪ್ಪಂದಗಳು ಬರುವ ಸಾಧ್ಯತೆಯಿದೆ ಆಲೋಚನೆ ಮಾಡಿ
  • ದೇವಿ ಆರಾಧನೆ ಮಾಡಿ

ಕಟಕ

publive-image

  • ಸ್ನೇಹಿತರಿಂದ ಉತ್ತಮವಾದ ಲಾಭಕ್ಕೆ ಅವಕಾಶವಿದೆ
  • ಇಂದು ದಾಂಪತ್ಯದಲ್ಲಿ ಸಾಮರಸ್ಯ ಕಾಪಾಡಿಕೊಳ್ಳಿ
  • ಮನೆಯ ವಾತಾವರಣ ಸ್ವಲ್ಪ ಬದಲಾಗುವ ಸಾಧ್ಯತೆಯಿದೆ
  • ಇಂದು ನಿಮ್ಮ ಮಾನಸಿಕ ಸ್ಥಿತಿಯನ್ನ ದೃಢಪಡಿಸಿಕೊಳ್ಳಿ
  • ಹೊಸ ಉದ್ಯೋಗಕ್ಕೆ ಅವಕಾಶವಿದೆ
  • ಬಂಧುಗಳಿಂದ ಕೆಲ ಮಾಹಿತಿ ಸಿಗಬಹುದು ಅದರಿಂದ ಸಮಾಧಾನ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಸಿಂಹ

publive-image

  • ಇಂದು ಕನಸು ನನಸಾಗುವ ದಿನ
  • ಇಂದು ತುಂಬಾ ಒತ್ತಡಯಿರುವ ದಿನ
  • ಹಿರಿಯ ಅಧಿಕಾರಿಗಳ ನೆರವು ಸಿಗಬಹುದು
  • ಆಸ್ತಿ ಖರೀದಿಯ ವಿಚಾರದಲ್ಲಿ ಜಯವಿದೆ
  • ಹಲವಾರು ರೀತಿಯ ಯಶಸ್ಸಿಗೆ ದಾರಿಯಾಗುವ ದಿನ
  • ವಿದ್ಯಾರ್ಥಿಗಳಿಗೆ ಕೆಲವು ಸವಾಲುಗಳಿವೆ ಎದುರಿಸಬೇಕಾಗಬಹುದು
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
Advertisment

ಕನ್ಯಾ

publive-image

  • ತಾಳ್ಮೆಯನ್ನು ಪರೀಕ್ಷೆ ಮಾಡುವ ದಿನ ನೀವು ಅದರಲ್ಲಿ ಗೆಲ್ಲಲೇಬೇಕು
  • ಉದ್ಯೋಗ ಅಥವಾ ವ್ಯವಹಾರದಲ್ಲಿ ಸಮಸ್ಯೆ ಉಂಟಾಗಬಹುದು
  • ಆರೋಗ್ಯದ ವಿಚಾರದಲ್ಲಿ ಬೇಸರ ಉಂಟಾಗಬಹುದು
  • ಒಳ್ಳೆಯ ವಿಚಾರಗಳು ಕೆಟ್ಟದಾಗಿ ಪರಿಣಾಮ ಬೀರಬಹುದು
  • ಯಾವುದೇ ಸಾಧನೆ ಇಲ್ಲದೆ ಹತಾಶರಾಗಬಹುದು
  • ಸಾಮಾಜಿಕ ಮನ್ನಣೆಯಿಲ್ಲದೇ ಬೇಸರವಾಗಬಹುದು
  • ಇಷ್ಟದೇವತಾ ಪ್ರಾರ್ಥನೆ ಮಾಡಿ

ತುಲಾ

publive-image

  • ಇಂದು ಯಾರನ್ನು ಕೂಡ ಅಂಧವಾಗಿ ನಂಬಬೇಡಿ
  • ಕಳೆದುಕೊಂಡದ್ದನ್ನ ಪುನಃ ಪಡೆಯುವ ಅವಕಾಶವಿದೆ
  • ಧಾರ್ಮಿಕ ಪ್ರವೃತ್ತಿಯ ಜನರೊಂದಿಗೆ ಸಂಪರ್ಕವಾಗಬಹುದು
  • ಮನಸ್ಸಿನಲ್ಲಿ ನಕಾರಾತ್ಮಕ ಯೋಚನೆಗಳು ಬರಬಹುದು
  • ಇಂದು ಉದ್ಯೋಗಿಗಳಿಗೆ ಅನುಕೂಲವಿದೆ
  • ಹಳೆಯ ನೆನಪುಗಳು ಸಂತಸ ತರಬಹುದು
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

publive-image

  • ಇಂದು ಕುಟುಂಬ ಜೀವನ ಚೆನ್ನಾಗಿರುತ್ತದೆ
  • ಹೊಸ ಕೆಲಸದ ಆರಂಭಕ್ಕೆ ಅವಕಾಶವಿದೆ
  • ನಿಧಾನವಾಗಿ ಮಾಡಿದ್ದ ಕೆಲಸದಿಂದ ಅನುಕೂಲವಿದೆ
  • ಇಂದು ನಿಮ್ಮ ಆಯ್ಕೆಯಲ್ಲಿ ವ್ಯತ್ಯಾಸವಾಗುತ್ತದೆ
  • ಇಂದು ಹಲವಾರು ನಿರ್ಧಾರಗಳು ನಿಮಗೆ ಮಾರಕವಾಗಬಹುದು ಎಚ್ಚರ
  • ಹಣದ ವಿಚಾರದಲ್ಲಿ ಗೊಂದಲ ಉಂಟಾಗಬಹುದು
  • ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
Advertisment

ಧನಸ್ಸು

publive-image

  • ನಿಮ್ಮ ಅಲ್ಪ ತಿಳುವಳಿಕೆಯಿಂದ ಸಮಸ್ಯೆ ಉಂಟಾಗಬಹುದು
  • ವಿದ್ಯಾರ್ಥಿಗಳು ಸಾಧಿಸುವ ಛಲವನ್ನ ಬೆಳೆಸಿಕೊಳ್ಳಬೇಕು
  • ಇಂದು ಜವಾಬ್ದಾರಿಯಿಂದ ವರ್ತಿಸಬೇಕು
  • ಬಂಧುಗಳ ಭೇಟಿಯಿಂದ ಮನೋವಿಕಾರ ಸಾಧ್ಯತೆಯಿದೆ
  • ಅತಿಯಾದ ಯೋಚನೆ ತೊಂದರೆ ಉಂಟುಮಾಡಬಹುದು
  • ಇಂದು ಆರೋಗ್ಯ ಕೈ ಕೊಡುವ ಸಾಧ್ಯತೆಯಿದೆ
  • ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಕರ

publive-image

  • ಅನುಪಯುಕ್ತ ಕೆಲಸಗಳಲ್ಲಿ ಸಮಯ ವ್ಯರ್ಥವಾಗಬಹುದು
  • ಆರೋಗ್ಯದಲ್ಲಿ ಏರುಪೇರಾಗಬಹುದು
  • ಸಾಧಕರ ಭೇಟಿಯಿಂದ ಮಾರ್ಗದರ್ಶನ ಸಿಗಬಹುದು
  • ನಿಮ್ಮ ಮಾತಿಗೆ ಪ್ರಾಮುಖ್ಯತೆ ಇರುವುದಿಲ್ಲ
  • ಇಂದು ವ್ಯವಹಾರದಲ್ಲಿ ನಷ್ಟ ಅನುಭವಿಸಬಹುದು
  • ಮಕ್ಕಳಿಂದ ದೊಡ್ಡ ಯೋಚನೆ ಪ್ರಾರಂಭವಾಗಬಹುದು
  • ಶರಭೇಶ್ವರನನ್ನು ಪ್ರಾರ್ಥನೆ ಮಾಡಿ

ಕುಂಭ

publive-image

  • ಇಂದು ಕುಟುಂಬ ಸದಸ್ಯರು ನಿಮ್ಮ ಜೊತೆಗೆ ಚೆನ್ನಾಗಿರುತ್ತಾರೆ
  • ಮನಸ್ಸಿಗೆ ಅನಿಸಿದ ಕಾರ್ಯ ಮಾಡಬೇಡಿ ತೊಂದರೆಯಾಗಬಹುದು
  • ಖುಷಿಯ ಹಿಂದೆ ದುಃಖವೂ ಇದೇ ಎಂದು ಮರೆಯಬೇಡಿ
  • ಇಂದು ವಿರೋಧಿಗಳಿಂದ ಹುಷಾರಾಗಿರಿ ತೊಂದರೆಯಾಗಬಹುದು
  • ಇಂದು ಒಂದೇ ಕೆಲಸ ಮತ್ತೆ ಮತ್ತೆ ಮಾಡಬೇಕಾಗುತ್ತದೆ
  • ಮನೆಯ ವಾತಾವರಣದಲ್ಲಿ ಅಶಾಂತಿ ಬೇಡ
  • ಶಿವರಾಧನೆ ಮಾಡಿ
Advertisment

ಮೀನ

publive-image

  • ಮಾನಸಿಕವಾದ ಸಮಾಧಾನ ಇರುವುದಿಲ್ಲ
  • ಇಂದು ವ್ಯಾವಹಾರಿಕವಾಗಿ ಹಲವು ಸುಧಾರಣೆಗಳಾಗುತ್ತವೆ
  • ಸ್ಥಗಿತಗೊಂಡ ಕಾಮಗಾರಿಗಳು ಪುನರಾರಂಭಗೊಳ್ಳವ ಯೋಗವಿದೆ
  • ಹಣದ ವಿಚಾರದಲ್ಲಿ ಜಗಳವಾಗಬಹುದು
  • ವ್ಯಾವಹಾರಿಕವಾಗಿ ಬದಲಾವಣೆ ಅದರಿಂದ ಸಮಾಧಾನವಾಗಬಹುದು
  • ಮಹಿಳೆಯರಿಗೆ ಸ್ವಲ್ಪ ಸಮಸ್ಯೆ ಕಾಡಬಹುದು ಗಮನಹರಿಸಿ
  • ಗುರುಗಳನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment