/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಅನೂರಾಧ ನಕ್ಷತ್ರ ರಾಹುಕಾಲ ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.
ಮೇಷ ರಾಶಿ
/newsfirstlive-kannada/media/post_attachments/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ನೌಕರಿಯ ದೃಷ್ಟಿಯಿಂದ ದೂರ ಪ್ರಯಾಣದ ಸೂಚನೆಗಳಿವೆ
 - ವ್ಯಾಪಾರ-ವ್ಯವಹಾರವನ್ನು ವಿಸ್ತರಿಸಲು ಸಾಲದ ಅವಶ್ಯಕತೆ ಬರಬಹುದು
 - ಉನ್ನತವಾದ ಅಧಿಕಾರಿಗಳ ಸಂಬಂಧ ಈ ಸಂದರ್ಭದಲ್ಲಿ ಏರ್ಪಾಟಾಗುತ್ತದೆ
 - ಮಾನಸಿಕವಾಗಿ ತುಂಬಾ ಒತ್ತಡ ಹಾಗೂ ಕಿರಿಕಿರಿ ಇರುವ ದಿನ
 - ಮನಸ್ಸು ತುಂಬಾ ಗಾಸಿಗೊಳ್ಳುವ ಸಾಧ್ಯತೆ ಇದೆ
 - ತುಂಬಾ ಆಲೋಚನೆಗಳನ್ನು ಮಾಡುವ ದಿನವಾಗಿರುತ್ತದೆ
 - ಸಾಲಿಗ್ರಾಮ ಮಹಾವಿಷ್ಣುವನ್ನು ಧ್ಯಾನಿಸಿ
 
ವೃಷಭ
/newsfirstlive-kannada/media/post_attachments/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಮನೆಯಲ್ಲಿ ಉತ್ತಮವಾದ ವಾತಾವರಣ
 - ನೀವು ಕೆಲಸ ಮಾಡುವ ಸ್ಥಳದಲ್ಲಿ ನಿಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಾರೆ
 - ಇದರಿಂದ ಮನಸ್ಸಿಗೆ ಬೇಸರ ಹಾಗೂ ನೋವಾಗುವ ಸಾಧ್ಯತೆ ಹೆಚ್ಚು
 - ಮನೆಯ ಹೊರಗೆ ಹಾಗೂ ನೌಕರಿಯ ಸ್ಥಳದಲ್ಲಿ ಉಹಾಪೋಹಗಳಿರಬಹುದು
 - ಮನೆಯಲ್ಲಿ ಎಲ್ಲರ ವಿಶ್ವಾಸ,ಪ್ರೀತಿ,ನಂಬಿಕೆಗಳಿಗೆ ಬದ್ಧರಾಗಿರುತ್ತೀರಿ
 - ಕೆಲವೇ ಕೆಲವರು ಮಾತ್ರ ನಿಮ್ಮಿಂದ ಸ್ಫೂರ್ತಿ ಪಡೆಯಬಹುದು
 - ವಿದ್ಯಾರ್ಥಿಗಳು ದುಂದುವೆಚ್ಚ,ಕಾಲಾಹರಣವನ್ನು ಮಾಡಬಹುದು
 - ಕುಲದೇವರನ್ನು ಪ್ರಾರ್ಥಿಸಿ
 
ಮಿಥುನ
/newsfirstlive-kannada/media/post_attachments/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ಹೊಸದಾಗಿ ಯಾವುದೇ ರೀತಿಯ ವ್ಯವಹಾರ ಮಾಡಲು ಇಂದು ಶುಭದಿನವಲ್ಲ
 - ವ್ಯಾಪಾರ-ವ್ಯವಹಾರದಲ್ಲಿ ಜಾಗ್ರತೆಯಿಂದ ಹಣವನ್ನು ಹೂಡಿಕೆ ಮಾಡಿ
 - ನಿಮ್ಮ ವ್ಯವಹಾರ,ವ್ಯಾಪಾರ,ವೃತ್ತಿಯಲ್ಲಿ ಸಭ್ಯರಾಗಿರಬೇಕು
 - ಅಸಭ್ಯವಾಗಿ ವರ್ತನೆ ಮಾಡಿದರೆ ಅವಮಾನ ಅಥವಾ ಶಿಕ್ಷೆಗೆ ಒಳಗಾಗುತ್ತೀರಿ
 - ಹಣದ ಚಿಂತೆ ಕಾಡಬಹುದು ಆದರೆ ತೊಂದರೆಯಾಗದೆ ಹಣ ಸಿಗಲಿದೆ
 - ಹಳೆಯ ಕಹಿ ನೆನಪುಗಳು ನಿಮ್ಮನ್ನು ಕಾಡಬಹುದು
 - ತಾವು ಜೀವನದಲ್ಲಿ ನಡೆದು ಬಂದ ಹಾದಿ ನೆನಪಿಗೆ ಬರುತ್ತದೆ
 - ಇಷ್ಟ ದೇವತಾ ಧ್ಯಾನ ಮಾಡಿ
 
ಕಟಕ
/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಹೊಂದಬಹುದು
 - ಕಾನೂನು ವಿದ್ಯಾರ್ಥಿಗಳು ತಮ್ಮ ಹಿರಿಯ ವಿದ್ಯಾರ್ಥಿಗಳಿಂದ ಅನುಕೂಲವಾಗುವಂತಹ ವಿಚಾರಗಳನ್ನು ಚರ್ಚಿಸಿ ವಿಷಯ ಸಂಪಾದಿಸಲು ಅವಕಾಶವಿದೆ
 - ಹಿರಿಯರು ಕೂಡ ಮಾರ್ಗದರ್ಶನ ಮಾಡುವ ಸಾಧ್ಯತೆ
 - ವಕೀಲರಿಗೆ ಶುಭದಿನ, ಲಾಭವೂ ದೊರೆಯುವ ದಿನ
 - ಕಬ್ಬಿಣ ವ್ಯಾಪಾರ ಮಾಡುವವರಿಗೆ ಲಾಭವಿದ್ರೂ ಕೂಡ ದಂಡ ಕಟ್ಟಬೇಕಾಗಬಹುದು
 - ಹಣ ಹೂಡಿಕೆ ಮತ್ತು ಹೆಚ್ಚು ಹಣ ಖರ್ಚಾಗುವ ಕೆಲಸವನ್ನು ಆರಂಭಿಸಲು ಶುಭದಿನವಲ್ಲ
 - ಶನೈಶ್ವರನನ್ನು ದರ್ಶನ ಮಾಡಿ, ಎಳ್ಳೆಣ್ಣೆ ದಾನ ಮಾಡಿ
 
ಸಿಂಹ
/newsfirstlive-kannada/media/post_attachments/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಮನೆಯಲ್ಲಿ ಏನೋ ಸಂತಸದ ವಾತಾವರಣವಿರುತ್ತದೆ
 - ಮನೆಯಲ್ಲಿ ಎಲ್ಲರೂ ಉತ್ಸಾಹ ಭರಿತರಾಗಿರುತ್ತಾರೆ
 - ಕಮಿಷನ್​ ಏಜೆಂಟ್ಸ್​ಗಳಿಗೆ ಶುಭ ಮತ್ತು ಲಾಭದಾಯಕವಾಗುವ ದಿನ
 - ಕುಟುಂಬ ಮತ್ತು ವ್ಯವಹಾರದಲ್ಲಿ ಸಮತೋಲನ ಕಾಯ್ದುಕೊಳ್ಳಬೇಕು
 - ಉನ್ನತ ವಿದ್ಯಾಭ್ಯಾಸಕ್ಕಾಗಿ ನಗರಗಳಿಗೆ ಅಥವಾ ವಿದೇಶಗಳಿಗೆ ಹೋಗುವವರಿಗೆ ಅನುಕೂಲದ ದಿನ
 - ನಿವೃತ್ತರಾದ ಸರ್ಕಾರಿ ನೌಕರರಿಗೆ ಸ್ವಲ್ಪ ಕಿರಿಕಿರಿ ಉಂಟಾಗುತ್ತದೆ
 - ಬೆನ್ನು ನೋವಿನ ಸಮಸ್ಯೆಯಿಂದ ನೀವು ಬಳಲಬಹುದು
 - ವಿಘ್ನೇಶ್ವರನನ್ನು ಪ್ರಾರ್ಥಿಸಿ
 
ಕನ್ಯಾ
/newsfirstlive-kannada/media/post_attachments/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಕಲಾಕ್ಷೇತ್ರಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗೆ ಉತ್ತಮ ಸ್ಥಾನಮಾನಗಳು ದೊರೆಯಲಿದೆ
 - ಹಿಂದೆ ಹೂಡಿಕೆ ಮಾಡಿದ್ದ ಹಣ ಈ ದಿನ ಲಾಭವನ್ನು ನೀಡುವ ಸೂಚನೆಯಿದೆ
 - ವಾಹನ ಖರೀದಿಯ ಆಲೋಚನೆ ಬರಬಹುದು
 - ವಾಹನವನ್ನು ಖರೀದಿಸಬಹುದು
 - ಸಣ್ಣ ಪುಟ್ಟ ಆಸ್ತಿಯ ವಿಚಾರಕ್ಕೆ ಮನಸ್ತಾಪ ಉಂಟಾಗುವ ಸಾಧ್ಯತೆ
 - ಮಾನಸಿಕ ಕಿರಿಕಿರಿ, ಹಣದ ತೊಂದರೆ, ಬೇಸರ, ಸಂಬಂಧದಲ್ಲಿ ಒಡಕು ಉಂಟಾಗಬಹುದು
 - ಆದ್ದರಿಂದ ಈ ಸಮಸ್ಯೆಯನ್ನು ಮಾತಿನಲ್ಲಿ ಬಗೆಹರಿಸಿದರೆ ಒಳ್ಳೆಯದು
 - ಮನೆಯಲ್ಲಿ ಶಾಂತಿಯ ವಾತಾವರಣ ಕದಡಿ ಹೋಗಿ ಆತಂಕ ಉಂಟಾಗುತ್ತದೆ
 - ಸುಖವಿದ್ದರೂ ಅನುಭವಿಸಲು ಯೋಗವಿಲ್ಲ ಎಂದು ಹೇಳಬೇಕಾದ ದಿನ
 - ಅಶಕ್ತರಿಗೆ, ರೋಗಿಗಳಿಗೆ ಹಣ್ಣುಗಳನ್ನು ಕೊಡಿ
 
ತುಲಾ
/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಭಾವನಾತ್ಮಕ ಸಂಬಂಧ ಹೊಂದಿರುವವರಿಗೆ ಆಘಾತವಾಗಬಹುದು
 - ಪ್ರಯಾಣವು ತುಂಬಾ ಆಯಾಸವನ್ನುಂಟು ಮಾಡುತ್ತದೆ
 - ಶತ್ರುಗಳ ಆಕ್ರಮಣದ ಸೂಚನೆಯಿದೆ ತಾಳ್ಮೆಯಿರಲಿ
 - ನೀವು ಆಡುವ ಮಾತು ನಿಮಗೆ ತೊಂದರೆಯನ್ನು ಮಾಡಬಹುದು
 - ಹಿರಿಯರ ಮತ್ತು ಸಂಗಾತಿಯ ಮಾತಿಗೆ ಬೆಲೆ ಕೊಡಬೇಕಾಗುತ್ತದೆ
 - ಉದ್ಧಟತನದಿಂದ ಮಾತನ್ನು ತಿರಸ್ಕಾರ ಮಾಡಿದರೆ ತೊಂದರೆಯಾಗಬಹುದು
 - ಇದೇ ಮಾತು ನಿಮಗೆ ಪರಿಹಾರ ಮಾರ್ಗ ಕೂಡ ಆಗಬಹುದು
 - ಅಶುಭ ವಾರ್ತೆಯಿಂದ ಮನಸ್ಸಿಗೆ ನೋವುಂಟಾಗಬಹುದು
 - ದೇವರನ್ನು ದೂಷಿಸುವ ಸ್ಥಿತಿಗೆ ನಿಮ್ಮ ನೋವು ಕಾಡಬಹುದು
 
ವೃಶ್ಚಿಕ
/newsfirstlive-kannada/media/post_attachments/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಕುಟುಂಬದಲ್ಲಿ ಹಲವಾರು ದಿನಗಳಿಂದ ನೆರವೇರದ ಕೆಲಸ ಇಂದು ಪೂರ್ಣವಾಗುತ್ತದೆ
 - ಪ್ರೇಮಿಗಳಿಗೆ ಸುದಿನ ಆದರೆ ದುರುಪಯೋಗ ಮಾಡಿಕೊಳ್ಳಬಾರದು
 - ಹಣ,ವಸ್ತ್ರ ಮನಸ್ಸಿಗೆ ಸಮಾಧಾನ ಕೊಡುವ ಸಂದರ್ಭ
 - ಸ್ನೇಹಿತರ ಕೆಲಸವನ್ನು ನೀವು ಮಾಡಿಕೊಡುವುದರಿಂದ ಅವರಿಗೆ ಬೇಸರ ಉಂಟಾಗಬಹುದು
 - ನಿಮ್ಮ ಒತ್ತಡಗಳು ಇದ್ದರೂ ಕೂಡ ಮುಖ್ಯವಾಗಿ ಆಗಬೇಕಾದ ಕೆಲಸಕ್ಕೆ ಗಮನಹರಿಸಿ
 - ಅಮೂಲ್ಯವಾದ ಗ್ರಂಥ ಸಂಪಾದನೆ ಅಥವಾ ಓದಿನ ಕಡೆಗೆ ಹೆಚ್ಚು ಗಮನಕೊಡಿ
 - ಸಮುದ್ರ ತೀರದಲ್ಲಿ ಈಶ್ವರ ಆರಾಧನೆ ಮಾಡಿ
 - ಗೋಕರ್ಣ,ಮುರುಡೇಶ್ವರ,ರಾಮೇಶ್ವರನ ಆರಾಧನೆ ಮಾಡಿ
 
ಧನುಸ್ಸು
/newsfirstlive-kannada/media/post_attachments/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಫಲ ನೀಡದ ಕೆಲಸಗಳನ್ನು ಸದ್ಯಕ್ಕೆ ಮುಂದೂಡುವುದು ಒಳಿತು
 - ವೈಯಕ್ತಿಕವಾದ ಆರೋಗ್ಯದ ಸಮಸ್ಯೆಗೆ ಪರಿಹಾರ ದೊರಕಬಹುದು
 - ಮಧುಮೇಹಿಗಳು ಸ್ವಲ್ಪ ಎಚ್ಚರಿಕೆ ವಹಿಸಿ ಕಾಯಿಲೆ ಉಲ್ಬಣವಾಗಬಹುದು
 - ರಾಜಕೀಯ ವ್ಯಕ್ತಿಗಳು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾದ ಸಂದರ್ಭ
 - ಕೃಷಿ ಕಾರ್ಮಿಕರಿಗೆ ಆದಾಯ ಹೆಚ್ಚಳವಾಗಬಹುದು
 - ಹೊಸ ಯೋಜನೆಗಳನ್ನು ಮಾಡಬೇಡಿ ಅಂತ ಹೇಳಬೇಕಾಗುತ್ತದೆ
 - ಹರೇ ಶ್ರೀನಿವಾಸ ಎಂದು ಪ್ರಾರ್ಥಿಸಿ
 
ಮಕರ
/newsfirstlive-kannada/media/post_attachments/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ದಿನದ ಎಲ್ಲಾ ಕೆಲಸಗಳು ನೆರವೇರುವ ಆತ್ಮ ವಿಶ್ವಾಸ ನಿಮ್ಮದಾಗಿರುತ್ತದೆ
 - ಪ್ರೇಮಿಗಳು ಮಾತ್ರ ಸುಳ್ಳು ಹೇಳಬಾರದು
 - ತಪ್ಪುಗಳನ್ನು ಮುಚ್ಚಿಡಬೇಡಿ ಒಪ್ಪಿಕೊಳ್ಳಿ
 - ಬೇರೆಯವರಿಂದ ನಿಮ್ಮ ತಪ್ಪು ತಿಳಿದಾಗ ನಿಮ್ಮ ಮೇಲಿರುವ ನಂಬಿಕೆ ಉಳಿಯುವುದಿಲ್ಲ
 - ಆತ್ಮ ಪ್ರಶಂಸೆ ಹಲವರಿಗೆ ಆಶ್ಚರ್ಯವನ್ನುಂಟು ಮಾಡಬಹುದು
 - ವೃತ್ತಿ ಜೀವನದ ಬಗ್ಗೆ ಸಮಾಧಾನವಿರುತ್ತದೆ
 - ಮಕ್ಕಳ ಆರೋಗ್ಯ, ವಿದ್ಯಾಭ್ಯಾಸ ಮನಸ್ಸಿಗೆ ಬೇಸರ ಉಂಟು ಮಾಡಬಹುದು
 - ಇಷ್ಟದೇವತಾ ಪ್ರಾರ್ಥನೆ ಮಾಡಿ
 
ಕುಂಭ
/newsfirstlive-kannada/media/post_attachments/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ಅಪಘಾತ ಸಂಭವಿಸುವ ಸೂಚನೆ ಇದೆ ಎಚ್ಚರಿಕೆ ಇರಲಿ
 - ರಿಯಲ್​ ಎಸ್ಟೇಟ್​ ಉದ್ಯಮಿಗಳಿಗೆ ಹಿನ್ನಡೆಯಾಗಬಹುದು
 - ಅಪರಾಧ ಭಾವ ನಿಮ್ಮನ್ನ ಹೆಚ್ಚಾಗಿ ಕಾಡಬಹುದು
 - ಅಧಿಕಾರಿಗಳ ವಿಚಾರಣೆಗೆ ಒಳಪಡಬಹುದು
 - ಧನಬಲ ನಿಮಗೆ ಕೆಲಸ ಮಾಡುವುದಿಲ್ಲವೆಂದು ಗೊತ್ತಾಗುತ್ತದೆ
 - ಹಳೆಯ ವಿಚಾರಗಳು ಪ್ರಸ್ತಾಪವಾಗಿ ನಿಮಗೆ ತೊಂದರೆ ಉಂಟಾಗಬಹುದು
 - ತಾಳ್ಮೆಯಿರಲಿ, ನಾಟಕೀಯ ಜೀವನ ಬೇಡವೆಂದೇ ಹೇಳಬೇಕಾಗುತ್ತದೆ
 - ದುರ್ಗಾದೇವಿಯನ್ನು ಆರಾಧಿಸಿ ಅಥವಾ ದುರ್ಗಾಹೋಮ ಮಾಡಿಸಿ
 
ಮೀನ
/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಮಾನಸಿಕ ಸ್ಥಿರತೆಯಿಂದ ನಿಮ್ಮ ಉದ್ಯೋಗ, ವೃತ್ತಿಯಲ್ಲಿ ಸಾಧನೆ ಮಾಡುತ್ತೀರಿ
 - ನಿಮ್ಮ ವಿನಮ್ರ ಭಾವನೆ ನಿಮಗೆ ಯಶಸ್ಸು ಕೊಡುತ್ತದೆ
 - ಸ್ನೇಹಿತರು, ಬಂಧುಗಳು ನಿಮಗೆ ಸಹಾಯ ಮಾಡುತ್ತಾರೆ
 - ದುಡ್ಡಿನ ಬಗ್ಗೆ ಹೆಚ್ಚಿನ ಆಸಕ್ತಿಯಿರುವುದಿಲ್ಲ
 - ಇಷ್ಟವಾದ ಮಿತ್ರರ ಮಾತು ಬಹಳ ಹಿತವೆನಿಸುತ್ತದೆ
 - ವಿದ್ಯಾರ್ಥಿಗಳಿಗೆ ಹೊರಗಿನಿಂದ ಮೆಚ್ಚುಗೆಯ ಮಾತು ಬರುತ್ತದೆ
 - ಈ ರಾಶಿಯ ಸ್ತ್ರೀಯರು ಸ್ವಉದ್ಯೋಗ ಪ್ರಾರಂಭಿಸಲು ಶುಭದಿನ
 - ಲಲಿತಾ ಸಹಸ್ರನಾಮ ಶ್ರವಣ ಮಾಡಿ
 
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us