/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಅನೂರಾಧ ನಕ್ಷತ್ರ ರಾಹುಕಾಲ ರಾಹುಕಾಲ ಸೋಮವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.
ಮೇಷ ರಾಶಿ
- ಉತ್ತಮವಾದ ಭೋಜನ, ತಿಂಡಿ-ತಿನಿಸುಗಳ ರುಚಿ ಸವಿಯುವ ಯೋಗವಿದೆ
- ಇಂದು ಮೇಲಾಧಿಕಾರಿಗಳು, ಹಿರಿಯರು ನಿಮ್ಮನ್ನು ಹೊಗಳುತ್ತಾರೆ
- ಮನಸ್ಸಿನಲ್ಲಿ ಯಾವುದೇ ರೀತಿಯ ಪೂರ್ವಾಗ್ರಹವನ್ನು ಇಟ್ಟುಕೊಳ್ಳಬೇಡಿ
- ಇಂದು ಮಾಡುವ ಪ್ರಯಾಣ ಲಾಭದಾಯಕವಾಗಿರುತ್ತದೆ
- ಅನಗತ್ಯ ವಿಚಾರಗಳಿಗೆ ಗಮನ ಕೊಡದಿರುವುದು ಒಳ್ಳೆಯದು
- ಕೆಲವು ಸವಾಲುಗಳನ್ನು ಎದುರಿಸಬೇಕಾದ ದಿನವಾಗಬಹುದು
- ಇಷ್ಟ ದೇವತಾ ಪ್ರಾರ್ಥನೆ ಮಾಡಿ
ವೃಷಭ
- ಸಹೋದ್ಯೋಗಿಗಳು ಹಾಗೂ ಸಹೋದರರ ಜೊತೆ ವ್ಯವಹಾರಿಕ ವಿಚಾರಕ್ಕೆ ಸಣ್ಣಪುಟ್ಟ ಕಲಹ ಸಾಧ್ಯತೆ
- ಅನಗತ್ಯ ವಿಚಾರಗಳಲ್ಲಿ ಸಮಯ ವ್ಯರ್ಥವಾಗಬಹುದು ಜಾಗ್ರತೆವಹಿಸಿ
- ನಿಮ್ಮ ಸ್ವಭಾವ ಮನೆಯವರಿಗೆ ಆತಂಕ ತರಬಹುದು ಸ್ವಭಾವ ಸರಿಪಡಿಸಿಕೊಳ್ಳಿ
- ಉನ್ನತ ವ್ಯಾಸಂಗಕ್ಕೆ ಪ್ರಯತ್ನಪಡುತ್ತಿರುವ ವಿದ್ಯಾರ್ಥಿಗಳಿಗೆ ಶುಭವಿದೆ
- ನಿಮ್ಮ ಕೆಲಸಗಳಲ್ಲಿ ಹೆಚ್ಚು ಮಗ್ನರಾಗಬೇಕು
- ಸಣ್ಣಪುಟ್ಟ ಮೈಗ್ರೇನ್, ತಲೆನೋವು ನಿಮಗೆ ಹಿಂಸೆ ಕೊಡಬಹುದು
- ಪ್ರಯಾಣ ಮಾಡದಿರುವುದು ಒಳ್ಳೆಯದು, ನಿಮ್ಮ ಕಾರ್ಯದಲ್ಲಿ ಮಗ್ನರಾಗಿ
- ತಾಪಸ ಮನ್ಯುವಿಗೆ ಶರಣು ಹೋಗಿ
ಮಿಥುನ
- ಪ್ರಭಾವಿ ವ್ಯಕ್ತಿಗಳ ಸಂಪರ್ಕದಿಂದ ಕೆಲವು ಕೆಲಸಗಳಾಗುವ ಸೂಚನೆಗಳಿವೆ
- ವ್ಯಾಪಾರ, ವ್ಯವಹಾರದಲ್ಲಿನ ಸಮಸ್ಯೆಗಳು ದೂರವಾಗಬಹುದು
- ಮನೆಯಲ್ಲಿ, ಕಛೇರಿಯಲ್ಲಿ ಕೆಲಸದ ಒತ್ತಡ ಹೆಚ್ಚಾಗಿ ಕಾಣಬಹುದು
- ಮಧ್ಯಾಹ್ನದ ಒಳಗೆ ಆದಷ್ಟು ನಿಮ್ಮೆಲ್ಲಾ ಕೆಲಸಗಳನ್ನು ಮುಗಿಸಿಕೊಳ್ಳುವುದು ಒಳಿತು
- ನಿಮ್ಮ ಸ್ನಾಯು - ನರಗಳಲ್ಲಿ ತೊಂದರೆಯಾಗಬಹುದು
- ವಿದ್ಯುತ್ ಉಪಕರಣ ಮಾರಾಟ ಮಾಡುವವರಿಗೆ ಶುಭಫಲವಿದೆ
- ಇಂದು ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ಕಟಕ
- ವೃತ್ತಿ ಜೀವನದ ದೃಷ್ಟಿಯಿಂದ ತುಂಬಾ ಜಾಗರೂಕರಾಗಿರಬೇಕು
- ಕಲೆ ಮತ್ತು ಸಂಗೀತ ಕ್ಷೇತ್ರದವರಿಗೆ ಗೌರವ, ಪುರಸ್ಕಾರಗಳು ಸಿಗಬಹುದು
- ಹೊಸ ಆದಾಯದ ಮೂಲಗಳು ಸಿಗುವ ಸಾಧ್ಯತೆಯಿದೆ
- ಇಂದು ವೃತ್ತಿಯನ್ನು ಬಿಟ್ಟು ಬೇರೆ ವ್ಯವಹಾರದಲ್ಲಿ ಆದಾಯಗಳಿಸಬಹುದು
- ಸಹೋದರರಿಗೆ ಅಪಘಾತವಾಗುವ ಸಾಧ್ಯತೆಗಳಿವೆ ಎಚ್ಚರಿಕೆಯಿಂದಿರಲು ಹೇಳಿ
- ಇಂದು ದುರ್ಗಾರಾಧನೆ ಮಾಡಿ
ಸಿಂಹ
- ನಿಮ್ಮ ಕೆಲಸದ ವಿಚಾರದಲ್ಲಿ ಮನೆಯವರ ಮಾರ್ಗದರ್ಶನ, ಸಲಹೆ ಮುಖ್ಯವಾಗಿರುತ್ತದೆ
- ಸ್ನೇಹಿತರು ಮತ್ತು ಬಂಧುಗಳಲ್ಲಿ ಹೆಚ್ಚು ಪ್ರೀತಿಪಾತ್ರರಾಗಿರುತ್ತೀರಿ
- ಪೂರ್ವ ನಿಯೋಜನೆಯಂತೆ ಕೆಲಸ ನಿರ್ವಹಿಸಿದರೆ ಜಯಶೀಲರಾಗುತ್ತೀರಿ
- ಕೆಲಸದ ಮಧ್ಯೆ ಪ್ರತಿಕೂಲವಿದ್ದರು ಜಯಶೀಲರಾಗುತ್ತೀರಿ
- ಹೆಚ್ಚು ಖರ್ಚಿಗೆ ಅವಕಾಶವಿರುವ ದಿನ ಗಮನವಿರಲಿ
- ವೈದ್ಯಕೀಯ ರಂಗದಲ್ಲಿ ಕೆಲಸ ಮಾಡುವವರಿಗೆ ಕಳಂಕ ಬರಬಹುದು ಜಾಗ್ರತೆಯಿರಲಿ
- ಶ್ರೀಕೃಷ್ಣನನ್ನು ಪ್ರಾರ್ಥಿಸಿ
ಕನ್ಯಾ
- ಕಾರ್ಯಕ್ಷೇತ್ರದಲ್ಲಿ ತುಂಬಾ ಸ್ಪರ್ಧಾತ್ಮಕ ವಾತಾವರಣವಿರುತ್ತದೆ
- ಎಲ್ಲಾ ಕೆಲಸಗಳನ್ನು ತುಂಬಾ ಶ್ರದ್ಧೆಯಿಂದ ನಿರ್ವಹಿಸಿ
- ಇಂದು ದಾಂಪತ್ಯದಲ್ಲಿ ಸಾಮರಸ್ಯವಿರುತ್ತದೆ
- ನಿಮ್ಮ ಸ್ವಭಾವದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು
- ನಿಮ್ಮ ಜೀವನದಲ್ಲಿ ಯಾವುದಾದರು ತಪ್ಪು ನಡೆದಿದ್ದರೆ ಅದನ್ನು ಅಗತ್ಯವಾಗಿ ಇಂದು ಸರಿಪಡಿಸಿಕೊಳ್ಳಿ
- ಮಕ್ಕಳಿಗೆ ಯಶಸ್ಸಿದೆ ಆದರೆ ಶಿಕ್ಷಣ ಕ್ಷೇತ್ರದಲ್ಲಿ ಪರಿಶ್ರಮ ಮುಂದುವರೆಯಲಿ
- ಶ್ರೀ ಮಾತ್ರೆ ನಮಃ ಎಂದು ದೇವಿಯನ್ನು ಆರಾಧಿಸಿ
ತುಲಾ
- ಭಾವನೆಗಳ ಆಧಾರದ ಮೇಲೆ ಕಾರ್ಯಕ್ಷೇತ್ರದಲ್ಲಿ ಯಾವುದೇ ತೀರ್ಮಾನ ಬೇಡ
- ಇಂದು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
- ಧಾರ್ಮಿಕ ಭಾವನೆಗಳಿಂದ ನಿಮ್ಮ ದೊಡ್ಡ ಕಾರ್ಯಗಳಿಗೆ ಸಹಕಾರಿಯಾಗಬಹುದು
- ಭೂಮಿ, ಆಸ್ತಿಗೆ ಸಂಬಂಧಿಸಿದ ಮಾತುಕತೆ ನಡೆಯಬಹುದು
- ಒಡಹುಟ್ಟಿದವರೊಂದಿಗೆ ನಿಮ್ಮ ಭಾಂದವ್ಯ ಚೆನ್ನಾಗಿರುತ್ತೆ ಅದನ್ನ ಹಾಗೆ ಉಳಿಸಿಕೊಳ್ಳಿ
- ನೆರೆಹೊರೆಯವರ ಜೊತೆ ಮಾನಸಿಕ ಸಮಾಧಾನ ಇರುವುದಿಲ್ಲ, ಜಗಳ ಬೇಡ
- ಆಂಜನೇಯ ಸ್ವಾಮಿಗೆ ವೀಳ್ಯದೆಲೆ ಅರ್ಪಣೆ ಮಾಡಿ
ವೃಶ್ಚಿಕ
- ಕಾರ್ಯದೊತ್ತಡದಿಂದ ತುಂಬಾ ಆಯಾಸವಾಗುವ ದಿನ
- ನಿಮ್ಮ ಕೋಪ, ಒತ್ತಡವನ್ನು ಬೇರೆಯವರ ಮೇಲೆ ತೋರಿಸಬಾರದು
- ಮಾನಸಿಕವಾಗಿ ನೀವು ಧೃಡವಾಗಿದ್ದರು, ಒತ್ತಡ ನಿಮ್ಮನ್ನು ಬಲಹೀನರನ್ನಾಗಿ ಮಾಡಬಹುದು
- ಕಠಿಣ ಪರಿಶ್ರಮ ನಿಮ್ಮ ಯಶಸ್ಸಿಗೆ ಕಾರಣೀಭೂತವಾಗಿರುವುದು
- ಸಾಯಂಕಾಲ ನಿಮಗೆ ಶುಭ ಸುದ್ದಿ ಬರುವ ಸಾಧ್ಯತೆಯಿದೆ
- ನಾಳೆಯ ವಿಷಯವನ್ನು ಮರೆತು ಬಹಳ ಆನಂದದಾಯಕರಾಗಿರುತ್ತೀರಿ
- ಶ್ರೀ ರುದ್ರನನ್ನು ಪ್ರಾರ್ಥಿಸಿ
- ನಮೋ ಭಗವತೇ ರುದ್ರಾಯ l ಎಂದು 11 ಬಾರಿ ಹೇಳಿ
ಧನುಸ್ಸು
- ಬೇರೆಯವರ ಭಾವನೆಗಳಿಗೆ ನೀವು ಹೆಚ್ಚು ಸ್ಪಂದಿಸುತ್ತೀರಿ
- ಜನರು ನಿಮ್ಮ ಕಡೆ ಆಕರ್ಷಕರಾಗುತ್ತಾರೆ
- ನಿಮ್ಮದು ಉಚಿತವಾದ ಸಲಹೆ ಆದ್ರೆ ಇದರ ಉಪಯೋಗ ಬೇರೆಯವರು ಪಡೆಯುತ್ತಾರೆ
- ಎಲ್ಲಾ ಇದ್ದರೂ ಕೂಡ ಸುಖ ಪಡುವ ಯೋಗ ನಿಮ್ಮದಾಗಿರುವುದಿಲ್ಲ
- ನೀವು ಯಾರಿಗೆ ಉಪಕಾರ ಮಾಡಿದ್ರು ಜನರು ನಿಮ್ಮನ್ನು ಹಿಂದೆಯಿಂದ ದೂಷಿಸುತ್ತಾರೆ
- ಲಕ್ಷ್ಮೀ ದೇವಿ ಆರಾಧನೆ ಮಾಡಿ
ಮಕರ
- ನಿಮ್ಮ ವಿರೋಧಿಗಳಿಗೆ ಈ ದಿನ ಜಯವಿರುವುದಿಲ್ಲ
- ನಿಮ್ಮ ವಿರೋಧಿಗಳ ಬಗ್ಗೆ ಧೈರ್ಯವಾಗಿ ಕಾರ್ಯ ಯೋಜನೆಗಳನ್ನು ಮಾಡಿ
- ಜಯಶೀಲರಾಗುತ್ತೀರಿ
- ಆರೋಗ್ಯದ ಬಗ್ಗೆ ಸಮಾಧಾನವಿರುತ್ತದೆ
- ಹೊಸ ವ್ಯಾಪಾರ,ವ್ಯವಹಾರ ಮಾಡಲು ಶುಭ ದಿವಸ
- ಹಣ ಉಳಿಸುವ ಬೇರೆ ಬೇರೆ ದಾರಿ ಕಂಡುಕೊಳ್ಳುವಿರಿ
- ಮನೆಯ ಸದಸ್ಯರ ಹಾಗೂ ಮಕ್ಕಳ ಮೇಲೆ ಪ್ರೀತಿ - ವಿಶ್ವಾಸ ತೋರಿಸಬೇಕು
- ಶ್ರೀ ರಾಮ ದೂತ ಮಾರುತಿಯನ್ನು ಪೂಜಿಸಿ
ಕುಂಭ
- ಹೊಸ ಕೆಲಸಗಳಿಗಾಗಿ ಆತುರ ಪಡಬೇಡಿ
- ಹಿಂದಿನ ತಪ್ಪುಗಳನ್ನು ತಿದ್ದಿಕೊಳ್ಳಲು ಇಂದು ಅವಕಾಶ ಸಿಗಲಿದೆ
- ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಸ್ಚಲ್ಪ ಕಿರಿಕಿರಿ ಉಂಟಾಗಬಹುದು
- ನಿಮ್ಮ ನಡವಳಿಕೆಯಿಂದ ಮನೆಯವರಿಗೆ ಕೋಪ ಬರಬಹುದು
- ನೀವು ನೀವಾಗಿರಬೇಕು ಹೊಸತನ್ನು ಪ್ರದರ್ಶಿಸಬೇಡಿ
- ಮಾತು ಸ್ವಭಾವ ಸ್ವಾಭಾವಿಕವಾಗಿದ್ದರೆ ಬೆಲೆ ಹೆಚ್ಚಾಗುತ್ತದೆ
- ವಿಷ್ಣು ಮೂರ್ತಿಯನ್ನು ಆರಾಧಿಸಿ
ಮೀನ
- ನಿಮ್ಮ ಸ್ವಾಭಿಮಾನದ ಬಗ್ಗೆ ಗೌರವವಿರಲಿ ಆದರೆ ಸ್ವಾಭಿಮಾನ ಅಹಂಕಾರವಾಗಬಾರದು
- ಬೇರೆಯವರ ಸಲಹೆ ತೆಗೆದುಕೊಳ್ಳಿ ಆದರೆ ತೀರ್ಮಾನ ನಿಮ್ಮದಾಗಿರಬೇಕು
- ಬೇರೆಯವರ ಪೂರ್ಣ ಅವಲಂಬನೆಯಿಂದ ನಿಮಗೆ ಹಿನ್ನಡೆಯಾಗಬಹುದು
- ಸರ್ಕಾರದ ಕೆಲಸಗಳು ನಿಮಗೆ ಸಂತೋಷ ಉಂಟುಮಾಡಬಹುದು
- ತಾಯಿಯವರ ಆರೋಗ್ಯದಲ್ಲಿ ಏರುಪೇರಾಗಬಹುದು ಜಾಗ್ರತೆ ವಹಿಸಿ
- ಆರ್ಥಿಕ ಸಹಾಯದ ಅಗತ್ಯ ನಿಮಗೆ ಕಾಣುತ್ತದೆ
- ಶ್ರೀನಿವಾಸನನ್ನು ಪ್ರಾರ್ಥಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ