/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಅನೂರಾಧ ನಕ್ಷತ್ರ ರಾಹುಕಾಲ ರಾಹುಕಾಲ ಸೋಮವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.
ಮೇಷ ರಾಶಿ
/newsfirstlive-kannada/media/post_attachments/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಉತ್ತಮವಾದ ಭೋಜನ, ತಿಂಡಿ-ತಿನಿಸುಗಳ ರುಚಿ ಸವಿಯುವ ಯೋಗವಿದೆ
 - ಇಂದು ಮೇಲಾಧಿಕಾರಿಗಳು, ಹಿರಿಯರು ನಿಮ್ಮನ್ನು ಹೊಗಳುತ್ತಾರೆ
 - ಮನಸ್ಸಿನಲ್ಲಿ ಯಾವುದೇ ರೀತಿಯ ಪೂರ್ವಾಗ್ರಹವನ್ನು ಇಟ್ಟುಕೊಳ್ಳಬೇಡಿ
 - ಇಂದು ಮಾಡುವ ಪ್ರಯಾಣ ಲಾಭದಾಯಕವಾಗಿರುತ್ತದೆ
 - ಅನಗತ್ಯ ವಿಚಾರಗಳಿಗೆ ಗಮನ ಕೊಡದಿರುವುದು ಒಳ್ಳೆಯದು
 - ಕೆಲವು ಸವಾಲುಗಳನ್ನು ಎದುರಿಸಬೇಕಾದ ದಿನವಾಗಬಹುದು
 - ಇಷ್ಟ ದೇವತಾ ಪ್ರಾರ್ಥನೆ ಮಾಡಿ
 
ವೃಷಭ
/newsfirstlive-kannada/media/post_attachments/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಸಹೋದ್ಯೋಗಿಗಳು ಹಾಗೂ ಸಹೋದರರ ಜೊತೆ ವ್ಯವಹಾರಿಕ ವಿಚಾರಕ್ಕೆ ಸಣ್ಣಪುಟ್ಟ ಕಲಹ ಸಾಧ್ಯತೆ
 - ಅನಗತ್ಯ ವಿಚಾರಗಳಲ್ಲಿ ಸಮಯ ವ್ಯರ್ಥವಾಗಬಹುದು ಜಾಗ್ರತೆವಹಿಸಿ
 - ನಿಮ್ಮ ಸ್ವಭಾವ ಮನೆಯವರಿಗೆ ಆತಂಕ ತರಬಹುದು ಸ್ವಭಾವ ಸರಿಪಡಿಸಿಕೊಳ್ಳಿ
 - ಉನ್ನತ ವ್ಯಾಸಂಗಕ್ಕೆ ಪ್ರಯತ್ನಪಡುತ್ತಿರುವ ವಿದ್ಯಾರ್ಥಿಗಳಿಗೆ ಶುಭವಿದೆ
 - ನಿಮ್ಮ ಕೆಲಸಗಳಲ್ಲಿ ಹೆಚ್ಚು ಮಗ್ನರಾಗಬೇಕು
 - ಸಣ್ಣಪುಟ್ಟ ಮೈಗ್ರೇನ್​, ತಲೆನೋವು ನಿಮಗೆ ಹಿಂಸೆ ಕೊಡಬಹುದು
 - ಪ್ರಯಾಣ ಮಾಡದಿರುವುದು ಒಳ್ಳೆಯದು, ನಿಮ್ಮ ಕಾರ್ಯದಲ್ಲಿ ಮಗ್ನರಾಗಿ
 - ತಾಪಸ ಮನ್ಯುವಿಗೆ ಶರಣು ಹೋಗಿ
 
ಮಿಥುನ
/newsfirstlive-kannada/media/post_attachments/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ಪ್ರಭಾವಿ ವ್ಯಕ್ತಿಗಳ ಸಂಪರ್ಕದಿಂದ ಕೆಲವು ಕೆಲಸಗಳಾಗುವ ಸೂಚನೆಗಳಿವೆ
 - ವ್ಯಾಪಾರ, ವ್ಯವಹಾರದಲ್ಲಿನ ಸಮಸ್ಯೆಗಳು ದೂರವಾಗಬಹುದು
 - ಮನೆಯಲ್ಲಿ, ಕಛೇರಿಯಲ್ಲಿ ಕೆಲಸದ ಒತ್ತಡ ಹೆಚ್ಚಾಗಿ ಕಾಣಬಹುದು
 - ಮಧ್ಯಾಹ್ನದ ಒಳಗೆ ಆದಷ್ಟು ನಿಮ್ಮೆಲ್ಲಾ ಕೆಲಸಗಳನ್ನು ಮುಗಿಸಿಕೊಳ್ಳುವುದು ಒಳಿತು
 - ನಿಮ್ಮ ಸ್ನಾಯು - ನರಗಳಲ್ಲಿ ತೊಂದರೆಯಾಗಬಹುದು
 - ವಿದ್ಯುತ್​ ಉಪಕರಣ ಮಾರಾಟ ಮಾಡುವವರಿಗೆ ಶುಭಫಲವಿದೆ
 - ಇಂದು ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
 
ಕಟಕ
/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ವೃತ್ತಿ ಜೀವನದ ದೃಷ್ಟಿಯಿಂದ ತುಂಬಾ ಜಾಗರೂಕರಾಗಿರಬೇಕು
 - ಕಲೆ ಮತ್ತು ಸಂಗೀತ ಕ್ಷೇತ್ರದವರಿಗೆ ಗೌರವ, ಪುರಸ್ಕಾರಗಳು ಸಿಗಬಹುದು
 - ಹೊಸ ಆದಾಯದ ಮೂಲಗಳು ಸಿಗುವ ಸಾಧ್ಯತೆಯಿದೆ
 - ಇಂದು ವೃತ್ತಿಯನ್ನು ಬಿಟ್ಟು ಬೇರೆ ವ್ಯವಹಾರದಲ್ಲಿ ಆದಾಯಗಳಿಸಬಹುದು
 - ಸಹೋದರರಿಗೆ ಅಪಘಾತವಾಗುವ ಸಾಧ್ಯತೆಗಳಿವೆ ಎಚ್ಚರಿಕೆಯಿಂದಿರಲು ಹೇಳಿ
 - ಇಂದು ದುರ್ಗಾರಾಧನೆ ಮಾಡಿ
 
ಸಿಂಹ
/newsfirstlive-kannada/media/post_attachments/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಕೆಲಸದ ವಿಚಾರದಲ್ಲಿ ಮನೆಯವರ ಮಾರ್ಗದರ್ಶನ, ಸಲಹೆ ಮುಖ್ಯವಾಗಿರುತ್ತದೆ
 - ಸ್ನೇಹಿತರು ಮತ್ತು ಬಂಧುಗಳಲ್ಲಿ ಹೆಚ್ಚು ಪ್ರೀತಿಪಾತ್ರರಾಗಿರುತ್ತೀರಿ
 - ಪೂರ್ವ ನಿಯೋಜನೆಯಂತೆ ಕೆಲಸ ನಿರ್ವಹಿಸಿದರೆ ಜಯಶೀಲರಾಗುತ್ತೀರಿ
 - ಕೆಲಸದ ಮಧ್ಯೆ ಪ್ರತಿಕೂಲವಿದ್ದರು ಜಯಶೀಲರಾಗುತ್ತೀರಿ
 - ಹೆಚ್ಚು ಖರ್ಚಿಗೆ ಅವಕಾಶವಿರುವ ದಿನ ಗಮನವಿರಲಿ
 - ವೈದ್ಯಕೀಯ ರಂಗದಲ್ಲಿ ಕೆಲಸ ಮಾಡುವವರಿಗೆ ಕಳಂಕ ಬರಬಹುದು ಜಾಗ್ರತೆಯಿರಲಿ
 - ಶ್ರೀಕೃಷ್ಣನನ್ನು ಪ್ರಾರ್ಥಿಸಿ
 
ಕನ್ಯಾ
/newsfirstlive-kannada/media/post_attachments/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಕಾರ್ಯಕ್ಷೇತ್ರದಲ್ಲಿ ತುಂಬಾ ಸ್ಪರ್ಧಾತ್ಮಕ ವಾತಾವರಣವಿರುತ್ತದೆ
 - ಎಲ್ಲಾ ಕೆಲಸಗಳನ್ನು ತುಂಬಾ ಶ್ರದ್ಧೆಯಿಂದ ನಿರ್ವಹಿಸಿ
 - ಇಂದು ದಾಂಪತ್ಯದಲ್ಲಿ ಸಾಮರಸ್ಯವಿರುತ್ತದೆ
 - ನಿಮ್ಮ ಸ್ವಭಾವದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು
 - ನಿಮ್ಮ ಜೀವನದಲ್ಲಿ ಯಾವುದಾದರು ತಪ್ಪು ನಡೆದಿದ್ದರೆ ಅದನ್ನು ಅಗತ್ಯವಾಗಿ ಇಂದು ಸರಿಪಡಿಸಿಕೊಳ್ಳಿ
 - ಮಕ್ಕಳಿಗೆ ಯಶಸ್ಸಿದೆ ಆದರೆ ಶಿಕ್ಷಣ ಕ್ಷೇತ್ರದಲ್ಲಿ ಪರಿಶ್ರಮ ಮುಂದುವರೆಯಲಿ
 - ಶ್ರೀ ಮಾತ್ರೆ ನಮಃ ಎಂದು ದೇವಿಯನ್ನು ಆರಾಧಿಸಿ
 
ತುಲಾ
/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಭಾವನೆಗಳ ಆಧಾರದ ಮೇಲೆ ಕಾರ್ಯಕ್ಷೇತ್ರದಲ್ಲಿ ಯಾವುದೇ ತೀರ್ಮಾನ ಬೇಡ
 - ಇಂದು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
 - ಧಾರ್ಮಿಕ ಭಾವನೆಗಳಿಂದ ನಿಮ್ಮ ದೊಡ್ಡ ಕಾರ್ಯಗಳಿಗೆ ಸಹಕಾರಿಯಾಗಬಹುದು
 - ಭೂಮಿ, ಆಸ್ತಿಗೆ ಸಂಬಂಧಿಸಿದ ಮಾತುಕತೆ ನಡೆಯಬಹುದು
 - ಒಡಹುಟ್ಟಿದವರೊಂದಿಗೆ ನಿಮ್ಮ ಭಾಂದವ್ಯ ಚೆನ್ನಾಗಿರುತ್ತೆ ಅದನ್ನ ಹಾಗೆ ಉಳಿಸಿಕೊಳ್ಳಿ
 - ನೆರೆಹೊರೆಯವರ ಜೊತೆ ಮಾನಸಿಕ ಸಮಾಧಾನ ಇರುವುದಿಲ್ಲ, ಜಗಳ ಬೇಡ
 - ಆಂಜನೇಯ ಸ್ವಾಮಿಗೆ ವೀಳ್ಯದೆಲೆ ಅರ್ಪಣೆ ಮಾಡಿ
 
ವೃಶ್ಚಿಕ
/newsfirstlive-kannada/media/post_attachments/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಕಾರ್ಯದೊತ್ತಡದಿಂದ ತುಂಬಾ ಆಯಾಸವಾಗುವ ದಿನ
 - ನಿಮ್ಮ ಕೋಪ, ಒತ್ತಡವನ್ನು ಬೇರೆಯವರ ಮೇಲೆ ತೋರಿಸಬಾರದು
 - ಮಾನಸಿಕವಾಗಿ ನೀವು ಧೃಡವಾಗಿದ್ದರು, ಒತ್ತಡ ನಿಮ್ಮನ್ನು ಬಲಹೀನರನ್ನಾಗಿ ಮಾಡಬಹುದು
 - ಕಠಿಣ ಪರಿಶ್ರಮ ನಿಮ್ಮ ಯಶಸ್ಸಿಗೆ ಕಾರಣೀಭೂತವಾಗಿರುವುದು
 - ಸಾಯಂಕಾಲ ನಿಮಗೆ ಶುಭ ಸುದ್ದಿ ಬರುವ ಸಾಧ್ಯತೆಯಿದೆ
 - ನಾಳೆಯ ವಿಷಯವನ್ನು ಮರೆತು ಬಹಳ ಆನಂದದಾಯಕರಾಗಿರುತ್ತೀರಿ
 - ಶ್ರೀ ರುದ್ರನನ್ನು ಪ್ರಾರ್ಥಿಸಿ
 - ನಮೋ ಭಗವತೇ ರುದ್ರಾಯ l ಎಂದು 11 ಬಾರಿ ಹೇಳಿ
 
ಧನುಸ್ಸು
/newsfirstlive-kannada/media/post_attachments/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಬೇರೆಯವರ ಭಾವನೆಗಳಿಗೆ ನೀವು ಹೆಚ್ಚು ಸ್ಪಂದಿಸುತ್ತೀರಿ
 - ಜನರು ನಿಮ್ಮ ಕಡೆ ಆಕರ್ಷಕರಾಗುತ್ತಾರೆ
 - ನಿಮ್ಮದು ಉಚಿತವಾದ ಸಲಹೆ ಆದ್ರೆ ಇದರ ಉಪಯೋಗ ಬೇರೆಯವರು ಪಡೆಯುತ್ತಾರೆ
 - ಎಲ್ಲಾ ಇದ್ದರೂ ಕೂಡ ಸುಖ ಪಡುವ ಯೋಗ ನಿಮ್ಮದಾಗಿರುವುದಿಲ್ಲ
 - ನೀವು ಯಾರಿಗೆ ಉಪಕಾರ ಮಾಡಿದ್ರು ಜನರು ನಿಮ್ಮನ್ನು ಹಿಂದೆಯಿಂದ ದೂಷಿಸುತ್ತಾರೆ
 - ಲಕ್ಷ್ಮೀ ದೇವಿ ಆರಾಧನೆ ಮಾಡಿ
 
ಮಕರ
/newsfirstlive-kannada/media/post_attachments/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ವಿರೋಧಿಗಳಿಗೆ ಈ ದಿನ ಜಯವಿರುವುದಿಲ್ಲ
 - ನಿಮ್ಮ ವಿರೋಧಿಗಳ ಬಗ್ಗೆ ಧೈರ್ಯವಾಗಿ ಕಾರ್ಯ ಯೋಜನೆಗಳನ್ನು ಮಾಡಿ
 - ಜಯಶೀಲರಾಗುತ್ತೀರಿ
 - ಆರೋಗ್ಯದ ಬಗ್ಗೆ ಸಮಾಧಾನವಿರುತ್ತದೆ
 - ಹೊಸ ವ್ಯಾಪಾರ,ವ್ಯವಹಾರ ಮಾಡಲು ಶುಭ ದಿವಸ
 - ಹಣ ಉಳಿಸುವ ಬೇರೆ ಬೇರೆ ದಾರಿ ಕಂಡುಕೊಳ್ಳುವಿರಿ
 - ಮನೆಯ ಸದಸ್ಯರ ಹಾಗೂ ಮಕ್ಕಳ ಮೇಲೆ ಪ್ರೀತಿ - ವಿಶ್ವಾಸ ತೋರಿಸಬೇಕು
 - ಶ್ರೀ ರಾಮ ದೂತ ಮಾರುತಿಯನ್ನು ಪೂಜಿಸಿ
 
ಕುಂಭ
/newsfirstlive-kannada/media/post_attachments/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ಹೊಸ ಕೆಲಸಗಳಿಗಾಗಿ ಆತುರ ಪಡಬೇಡಿ
 - ಹಿಂದಿನ ತಪ್ಪುಗಳನ್ನು ತಿದ್ದಿಕೊಳ್ಳಲು ಇಂದು ಅವಕಾಶ ಸಿಗಲಿದೆ
 - ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಸ್ಚಲ್ಪ ಕಿರಿಕಿರಿ ಉಂಟಾಗಬಹುದು
 - ನಿಮ್ಮ ನಡವಳಿಕೆಯಿಂದ ಮನೆಯವರಿಗೆ ಕೋಪ ಬರಬಹುದು
 - ನೀವು ನೀವಾಗಿರಬೇಕು ಹೊಸತನ್ನು ಪ್ರದರ್ಶಿಸಬೇಡಿ
 - ಮಾತು ಸ್ವಭಾವ ಸ್ವಾಭಾವಿಕವಾಗಿದ್ದರೆ ಬೆಲೆ ಹೆಚ್ಚಾಗುತ್ತದೆ
 - ವಿಷ್ಣು ಮೂರ್ತಿಯನ್ನು ಆರಾಧಿಸಿ
 
ಮೀನ
/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಸ್ವಾಭಿಮಾನದ ಬಗ್ಗೆ ಗೌರವವಿರಲಿ ಆದರೆ ಸ್ವಾಭಿಮಾನ ಅಹಂಕಾರವಾಗಬಾರದು
 - ಬೇರೆಯವರ ಸಲಹೆ ತೆಗೆದುಕೊಳ್ಳಿ ಆದರೆ ತೀರ್ಮಾನ ನಿಮ್ಮದಾಗಿರಬೇಕು
 - ಬೇರೆಯವರ ಪೂರ್ಣ ಅವಲಂಬನೆಯಿಂದ ನಿಮಗೆ ಹಿನ್ನಡೆಯಾಗಬಹುದು
 - ಸರ್ಕಾರದ ಕೆಲಸಗಳು ನಿಮಗೆ ಸಂತೋಷ ಉಂಟುಮಾಡಬಹುದು
 - ತಾಯಿಯವರ ಆರೋಗ್ಯದಲ್ಲಿ ಏರುಪೇರಾಗಬಹುದು ಜಾಗ್ರತೆ ವಹಿಸಿ
 - ಆರ್ಥಿಕ ಸಹಾಯದ ಅಗತ್ಯ ನಿಮಗೆ ಕಾಣುತ್ತದೆ
 - ಶ್ರೀನಿವಾಸನನ್ನು ಪ್ರಾರ್ಥಿಸಿ
 
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us