/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತಿಕ ಮಾಸ, ಶುಕ್ಲಪಕ್ಷ, ಚತುರ್ಥಿ ತಿಥಿ, ಜ್ಯೇಷ್ಠಾ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ
ಮೇಷ ರಾಶಿ
- ಇಂದು ಸ್ವಾಭಿಮಾನಕ್ಕೆ ಧಕ್ಕೆ ಬರುವ ಸಂದರ್ಭ ಏರ್ಪಡಬಹುದು
- ದೀರ್ಘಕಾಲದ ರೋಗಗಳು ಉಲ್ಬಣವಾಗುವ ಸೂಚನೆಯಿದೆ
- ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಪರಿಣಿತಿ ಇರುವವರಿಗೆ ಪುರಸ್ಕಾರ, ಗೌರವ ಸಿಗಬಹುದು
- ಈ ದಿನ ಮನೆಯಲ್ಲಿರುವುದು ಕಷ್ಟಕರ ಕೆಲಸವಾಗಬಹುದು
- ಕೆಲಸದ ಒತ್ತಡದಿಂದಾಗಿ ಕಚೇರಿಯಲ್ಲಿ ಅನಿವಾರ್ಯವಾಗಿ ಇರಬೇಕಾಗಬಹುದು
- ನಿಮ್ಮ ಸಂಶೋಧನೆ ಮತ್ತು ಸಾಧನೆ ಸಮಾಜದಲ್ಲಿ ಆಕರ್ಷಣೀಯವಾಗಿರುತ್ತದೆ
- ಪರಮೇಶ್ವರಿಯನ್ನು ಆರಾಧಿಸಿ
ವೃಷಭ
- ಅನಗತ್ಯ ವಿಚಾರಗಳಿಗಾಗಿ ಚಿಂತಿಸಿ ಬೇಸರಗೊಳ್ಳುತ್ತೀರಿ
- ನಿಮಗೆ ಸಂಬಂಧ ಪಡದೆಯಿರುವ ವಿಚಾರಗಳಿಂದ ದೂರವಿದ್ದರೆ ಒಳ್ಳೆಯದು
- ವೈದ್ಯಕೀಯ ವಿದ್ಯಾರ್ಥಿಗಳಿಗೆ ಹಿನ್ನಡೆ ಸಾಧ್ಯತೆ, ಮಾನಸಿಕವಾಗಿ ಬೇಸರ ಬೇಡ
- ವೈದ್ಯರಿಗೆ ಬಿಡುವಿಲ್ಲದ ಕೆಲಸ ತುಂಬಾ ಆಯಾಸ ಹೊಂದಬಹುದು
- ಷೇರು ಮಾರುಕಟ್ಟೆಯಲ್ಲಿ ವಹಿವಾಟು ಕುಸಿತ ಸಾಧ್ಯತೆ, ಹೂಡಿಕೆ ಮುಂದೂಡಿದರೆ ಒಳ್ಳೆಯದು
- ಈ ಹಿಂದೆ ಆಪರೇಶನ್ ಆಗಿರುವವರಿಗೆ ಸ್ವಲ್ಪ ಸಮಸ್ಯೆ ಕಾಡಬಹುದು, ಜಾಗ್ರತೆಯಿರಲಿ
- ಅಮೃತ ಮೃತ್ಯುಂಜಯನನ್ನು ಪ್ರಾರ್ಥಿಸಿ
ಮಿಥುನ
- ನಿಮ್ಮ ಅಭಿವೃದ್ಧಿಯನ್ನು, ಬೆಳವಣಿಗೆಯನ್ನ ಸಹಿಸದವರು ನಿಮ್ಮ ವಿರುದ್ಧ ನಿಲ್ಲುತ್ತಾರೆ ಎಚ್ಚರ
- ಪರೀಕ್ಷಾ ಫಲಿತಾಂಶಗಳು ಬರುವುದಿದ್ದರೆ ನಿಮ್ಮ ಪರವಾಗಬಹುದು
- ಕೋರ್ಟ್, ಕಚೇರಿಯ ಹಳೆಯ ಕೇಸ್ಗಳಲ್ಲಿ ಹಿನ್ನಡೆಯಾಗುವ ಸಾಧ್ಯತೆಯಿದೆ
- ಅತಿಯಾದ ನಂಬಿಕೆ ವಿಶ್ವಾಸ ನಿಮಗೆ ತೊಂದರೆಯಾಗಬಹುದು
- ಸಮಾಜದಲ್ಲಿ ಹೆಸರು ಕೆಡುವಂತಹ ಸಂದರ್ಭಗಳೇ ಹೆಚ್ಚಾಗಿವೆ ಜಾಗ್ರತೆಯಿರಲಿ
- ಇಂದು ಶ್ರೀ ರಾಮನನ್ನು ಪ್ರಾರ್ಥನೆ ಮಾಡಿ
ಕಟಕ
- ಪತಿ-ಪತ್ನಿಯರ ಮಧ್ಯೆ ವಿರಸ ದೂರವಾಗಿ ಅನ್ಯೋನ್ಯವಾಗಿರುವ ಸಮಯ
- ಹಣ ಹೂಡಿಕೆಗೆ ಮಾತುಕತೆ ನಡೆಯಬಹುದು
- ಹೊಸ ವಾಹನ ಖರೀದಿ ಮಾಡುವ ಸಾಧ್ಯತೆಯಿದೆ
- ಮಕ್ಕಳು ಬಿದ್ದು ಗಾಯ ಮಾಡಿಕೊಳ್ಳುವ ಸಾಧ್ಯತೆಯಿದೆ ಗಮನವಿರಲಿ
- ಕೆಲಸಗಾರರಿಂದ ತೊಂದರೆಯಾಗಬಹುದು ಆದರೆ ಗಾಬರಿ ಬೇಡ
- ಮನೆಯಲ್ಲಿ ಕಳ್ಳತನದ ಹೆದರಿಕೆ ಕಾಡಬಹುದು ಎಚ್ಚರಿಕೆವಹಿಸಿ
- ಸುಖವಿದ್ದರೂ ಅನುಭವಿಸುವ ಯೋಗವಿರುವುದಿಲ್ಲ
- ಮಾನಸಿಕ ಕಿರಿಕಿರಿಯೊಂದಿಗೆ ದಿನ ಮುಕ್ತಾಯವಾಗುತ್ತದೆ
- ನರಸಿಂಹ ಸ್ವಾಮಿಯನ್ನು ಪ್ರಾರ್ಥಿಸಿ
ಸಿಂಹ
- ವಿದ್ಯಾರ್ಥಿಗಳು ತಮ್ಮ ಗುರಿಯನ್ನು ತಲುಪುವ ವಿಚಾರದಲ್ಲಿ ಹೆಚ್ಚು ಗಮನಹರಿಸಿ
- ಪ್ರಯಾಣ-ಪ್ರವಾಸದ ಬಗ್ಗೆ ಚರ್ಚೆ ನಡೆದು ಕೊನೆಗೆ ಬೇಡವೆಂದು ಬೇಸರವಾಗಬಹುದು
- ರಾಜಕಾರಣಿಗಳು ತಮ್ಮ ಹೇಳಿಕೆಗಳಿಂದ ಸಂಕಷ್ಟಕ್ಕೆ ಸಿಲುಕಬಹುದು ಎಚ್ಚರಿಕೆಯಿರಲಿ
- ಹೆಚ್ಚು ಹೆಚ್ಚು ಖರ್ಚಿನ ಪಟ್ಟಿ ನೋಡಿ ನಿರಾಶೆಯಾಗಬಹುದು
- ಮಕ್ಕಳಿಗೆ ಉಸಿರಾಟದ ಅಥವಾ ಶ್ವಾಸಕೋಶದ ಸಮಸ್ಯೆ ಕಾಣಬಹುದು
- ಅಶ್ವಿನಿ ದೇವತೆಗಳನ್ನು ಆರಾಧಿಸಿ
ಕನ್ಯಾ
- ಅತಿಯಾದ ಉತ್ಸಾಹ, ಆತುರದಿಂದ ಮಾಡಿದ ಕೆಲಸಗಳಿಂದ ನಷ್ಟ ಸಾಧ್ಯತೆ
- ಶಾರೀರಿಕವಾಗಿ ಸುಖವಿರುವುದಿಲ್ಲ, ನರದೌರ್ಬಲ್ಯ ಕಾಡಬಹುದು
- ಪೋಷಕರಿಗೆ ದುಃಖದಾಯಕವಾದ ದಿನ, ದೊಡ್ಡವರ ವಿಚಾರದಲ್ಲಿ ಕಾಳಜಿವಹಿಸಿ
- ಸಂಬಂಧಿಕರಿಂದ ಧನಲಾಭ, ದ್ರವ್ಯಲಾಭ ಯೋಗವಿದೆ
- ವಾಹನ ಚಾಲನೆಯಲ್ಲಿ ತುಂಬಾ ಎಚ್ಚರಿಕೆ ಇರಲಿ
- ನಿಮ್ಮದಲ್ಲದ ತಪ್ಪಿಗೆ ನೀವು ಶಿಕ್ಷೆಗೆ ಗುರಿಯಾಗುವ ಸಾಧ್ಯತೆಯಿದೆ
- ಈಶ್ವರನ ಆರಾಧನೆ ಮಾಡಿ, ಗೋವಿಗೆ ಅಕ್ಕಿಬೆಲ್ಲ ಕೊಡಿ
ತುಲಾ
- ಕೆಲಸದ ಜಾಗದಲ್ಲಿ, ವೃತ್ತಿಯಲ್ಲಿ ಋಣಾತ್ಮಕ ವಾತಾವರಣ ಮಾನಸಿಕ ಬೇಸರ ಸಾಧ್ಯತೆ
- ಕಹಿ ಮಾತುಗಳಿಂದ ಮನಸ್ಸಿನ ಮೇಲೆ ಪರಿಣಾಮ ಸಾಧ್ಯತೆ ಹಗುರವಾಗಿ ತೆಗೆದುಕೊಳ್ಳಿ
- ಹೊಸ ಸಂಬಂಧಗಳಲ್ಲಿ ನಿಮ್ಮ ಗೌರವ ಕಾಪಾಡಿಕೊಳ್ಳಬೇಕು
- ಬಂಧುತ್ವದಲ್ಲಿ ಬಿರುಕು, ವಿನಾಕಾರಣ ಮಾತಿನ ಸುರಿಮಳೆ ಮನಸ್ಸಿಗೆ ಅಸಹ್ಯ ಸಾಧ್ಯತೆ
- ಪ್ರೇಮ ಸಂಬಂಧ ವಿಚಾರದಲ್ಲಿ ಜಗಳ, ವಿರಸ ಸಾಧ್ಯತೆ
- ಮಾತೆ ಸೀತೆಯನ್ನು ಆರಾಧನೆ ಮಾಡಿ
- ''ಶ್ರೀ ಭೂಮಿ ನೀಲಾತ್ಮಿಕಾ ಭದ್ರರೂಪಿಣೀ ಸೋಮ ಸೂರ್ಯಾಗ್ನಿ ರೂಪ ಭವತಿ'' ಎಂದು 8 ಸಲ ಜಪಿಸಿ
ವೃಶ್ಚಿಕ
- ರಾಜಕಾರಣಿಗಳಿಂದ ಭಯ ಏರ್ಪಡಬಹುದು, ಅಗತ್ಯವಾಗಿ ರಾಜಿಮಾಡಿಕೊಳ್ಳುವ ಪರಿಸ್ಥಿತಿ ಬರಬಹುದು
- ನಿಮಗಿಂತ ಬಲಶಾಲಿಗಳೊಂದಿಗೆ ಸ್ಪರ್ಧೆ, ವಾಗ್ವಾದಗಳು ಬೇಡ
- ಆಯಸ್ಸು ಮತ್ತು ಆರೋಗ್ಯದ ಬಗ್ಗೆ ಪ್ರಶ್ನೆ ಮಾಡಬಾರದು
- ಪ್ರಕೃತ ನಿಮ್ಮ ಆರೋಗ್ಯ ಚೆನ್ನಾಗಿದೆ ಹಾಗೆ ಮುಂದುವರಿಸಿಕೊಂಡು ಹೋಗಿ
- ಇಂದು ಮನಸ್ಸು, ಕೋಪ ನಿಮ್ಮ ಹಿಡಿತದಲ್ಲಿರಲಿ
- ಸಿಟ್ಟಿಗೆ ಯಾವುದೇ ಕಾರಣಕ್ಕೂ ಬುದ್ಧಿ ಕೊಡಬಾರದು
- ಅನುಚಿತ ಕರ್ಮಾರಂಭೋ ಸ್ವಜನವಿರೋಧೋ ಬಲೀಯಸೀ ಸ್ಪರ್ಧಾ l
- ಪ್ರಮದಾ ಜನ ವಿಶ್ವಾಸ ಮೃತ್ಯೋರ್ದ್ವಾರಾಣಿ //ಚತ್ವಾರಿ// ll ಎಂಬ ಮಾತಿದೆ
ಧನುಸ್ಸು
- ಪ್ರಯಾಣ ಅಥವಾ ಪ್ರವಾಸದಿಂದ ಪ್ರಯಾಸವಾಗುವ ಸಾಧ್ಯತೆ ಇದೆ
- ಸಾಕು ಪ್ರಾಣಿಗಳು ಅಥವಾ ಕಾಡು ಪ್ರಾಣಿಗಳಿಂದ ದೂರವಿರಿ
- ಮನಸ್ಸಿಗೆ ಬಂದಂತೆ ವರ್ತಿಸಿದ್ರೆ ಅನಾಹುತವಾಗಬಹುದು ಎಚ್ಚರ
- ಮಕ್ಕಳ ಮಾತು ಈ ದಿನ ನಿಮ್ಮ ಶುಭಫಲ ನೀಡಬಹುದು ತಾತ್ಸಾರ ಮಾಡಬೇಡಿ
- ಕುಟುಂಬದವರ ಸಹಮತದಿಂದ ನೀವು ಪಾರಾಗಬಹುದು
- ಚಾಮುಂಡೇಶ್ವರಿಯನ್ನು ಕೆಂಪು ಹೂವಿನಿಂದ ಆರ್ಚಿಸಿ
ಮಕರ
- ಕಟ್ಟಡ ಸಾಮಾಗ್ರಿಗಳನ್ನು ಮಾರುವವರಿಗೆ ಹಾಗೇ ಕಟ್ಟಡ ಕಾರ್ಯನಿರ್ವಹಣೆ ಮಾಡುವವರಿಗೆ ಶುಭ-ಲಾಭವಿದೆ
- ನೀವು ಕೂಡ ಹೊಸ ಆಸ್ತಿ ಖರೀದಿಯ ಚಿಂತನೆ ಮಾಡಬಹುದು
- ವ್ಯಾಪಾರದಲ್ಲಿ ಅತಿ ಬೇಡಿಕೆ, ಅವಕಾಶಗಳು ನಿಮ್ಮದಾಗುವ ಸಾಧ್ಯತೆಯಿದೆ
- ಜಾಹೀರಾತುದಾರರಿಗೆ ಹಿನ್ನಡೆ, ನಷ್ಟ ಆಗುವ ಸಾಧ್ಯತೆಯಿದೆ
- ಸಾಮಾಜಿಕ ಮಾಧ್ಯಮಗಳಲ್ಲಿ ನಿಮ್ಮನ್ನು ಗುರುತಿಸಿಕೊಂಡಿರುವುದು ತೊಂದರೆಯಾಗಬಹುದು
- ಮಹಾದೇವನನ್ನು ಬಿಲ್ವ ಪತ್ರೆಯಿಂದ ಅರ್ಚಿಸಿ
ಕುಂಭ
- ಬಹಳ ಸಂತೋಷವಾಗಿ ಈ ದಿನ ಕಳೆಯಲು ಪ್ಲಾನ್ ಮಾಡಿರುತ್ತೀರಿ
- ಆದರೆ ನಿಮ್ಮ ಮರೆವಿನಿಂದ ನಿಮ್ಮೆಲ್ಲಾ ಕಾರ್ಯಗಳು ಅಸ್ತವ್ಯಸ್ತವಾಗಬಹುದು
- ಪ್ರೀತಿ ಪಾತ್ರರ ಜೊತೆಯಲ್ಲಿ ಕಾಲ ಕಳೆಯಲು ಹೋಗಿ ಅವಮಾನವಾಗಬಹುದು ಜಾಗ್ರತೆ
- ತಾಯಿಗೆ ಹೃದಯ ಸಂಬಂಧಿ ತೊಂದರೆ ಕಾಣಬಹುದು, ತಾತ್ಸಾರ ಮಾಡಬೇಡಿ
- ಆದಾಯದ ಮೂಲಗಳು ನಿಮ್ಮಲಿಗೆ ಹುಡುಕಿಕೊಂಡು ಬರಬಹುದು
- ತ್ರ್ಯಂಬಕರುದ್ರ ಮಂತ್ರ ಜಪ ಮಾಡಿ
ಮೀನ
- ನಿದ್ದೆ ಮತ್ತು ಆಹಾರದಿಂದ ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರಾಗಬಹುದು
- ಮಾನಸಿಕವಾಗಿ ಮತ್ತು ಕೆಲಸದ ಒತ್ತಡಗಳಿಂದ ತೊಂದರೆಯಾಗುವ ಸಾಧ್ಯತೆಯಿದೆ
- ವಿದ್ಯಾರ್ಥಿಗಳಿಗೆ ವಿರಾಮವಿದ್ದರೂ ಮುಂದಿನ ವಿದ್ಯಾಭ್ಯಾಸ ಬಗ್ಗೆ ಹೆಚ್ಚು ಚಿಂತಿಸಿ ಆಯಾಸವಾಗುವ ಸಾಧ್ಯತೆಯಿದೆ
- ಕಣ್ಣು ಮತ್ತು ಕಿವಿಗೆ ಹಾನಿಯಾಗುವ ಸೂಚನೆಗಳಿವೆ ಎಚ್ಚರಿಕೆ
- ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಸಾಯಂಕಾಲ ಸಂಬಂಧಿಕರ ಮನೆಗೆ ಭೇಟಿ ನೀಡಬೇಕಾದ ಅನಿವಾರ್ಯತೆ ಉಂಟಾಗುತ್ತದೆ
- ಇಷ್ಟ ದೇವತೆಯನ್ನು ಸ್ಮರಣೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ