Advertisment

ನಟ ದರ್ಶನ್​ಗೆ​ ಜಾಮೀನು; ಸ್ಯಾಂಡಲ್​ವುಡ್​ ತಾರೆಯರು ಫುಲ್​ ಖುಷ್

author-image
Veena Gangani
Updated On
ನಟ ದರ್ಶನ್​ಗೆ​ ಜಾಮೀನು; ಸ್ಯಾಂಡಲ್​ವುಡ್​ ತಾರೆಯರು ಫುಲ್​ ಖುಷ್
Advertisment
  • ಜಾಮೀನು ಮಂಜೂರು ಮಾಡುತ್ತಿದ್ದಂತೆ ನಟಿಯರು ಫುಲ್ ಹ್ಯಾಪಿ
  • ರೇಣುಕಾಸ್ವಾಮಿ ಹತ್ಯೆ ಆರೋಪದಲ್ಲಿ ಜೈಲು ಸೇರಿದ್ದ ನಟ ದರ್ಶನ್​
  • ನಟ ದರ್ಶನ್​ಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್‌

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲು ಸೇರಿದ್ದ ನಟ ದರ್ಶನ್ ಅವರಿಗೆ ಹೈಕೋರ್ಟ್​ ಜಾಮೀನು ಮಂಜೂರು ಮಾಡಿದೆ. ನಟ ದರ್ಶನ್ ಸೇರಿದಂತೆ ಒಟ್ಟು 7 ಆರೋಪಿಗಳಿಗೆ ಹೈಕೋರ್ಟ್​ ಜಾಮೀನು ಮಂಜೂರು ಮಾಡಿದೆ. ಈ ಪ್ರಕರಣದ ಎ1 ಪವಿತ್ರಾ ಗೌಡ, ಎ2 ದರ್ಶನ್, ಎ4 ಜಗದೀಶ್, ಎ7 ಅನುಕುಮಾರ್ ಅಲಿಯಾಸ್ ಅನು, ಎ 12 ಲಕ್ಷ್ಮಣ್, ಎ 11ನಾಗರಾಜ್, ಎ 14 ಪ್ರದೋಷ್​ಗೆ ಜಾಮಿನು ಸಿಕ್ಕಿದೆ. ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರು ಜಾಮೀನು ಮಂಜೂರು ಮಾಡಿ ಆದೇಶ ನೀಡಿದ್ದಾರೆ.

Advertisment

ಇದನ್ನೂ ಓದಿ: ದರ್ಶನ ಗ್ಯಾಂಗ್​ಗೆ ಜಾಮೀನು; ಬೇಸರದಲ್ಲಿ ರೇಣುಕಾಸ್ವಾಮಿ ತಂದೆ ಹೇಳಿದ್ದೇನು?

publive-image

ಇನ್ನೂ ನಟ ದರ್ಶನ್​ಗೆ ಹೈಕೋರ್ಟ್​ ಜಾಮೀನು ಮಂಜೂರು ಮಾಡಿದ ವಿಚಾರ ಕೇಳಿ ಸ್ಯಾಂಡಲ್​ವುಡ್​ ನಟ ನಟಿಯರು ಫುಲ್ ಖುಷ್ ಆಗಿದ್ದಾರೆ. ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಹಾಗೂ ಸ್ಟೋರಿ ಶೇರ್​ ಮಾಡಿಕೊಳ್ಳುವ ಮೂಲಕ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

publive-image

ಸ್ಯಾಂಡಲ್​ವುಡ್​ ನಟಿ, ನಟ ದರ್ಶನ್​ ಆಪ್ತ ಗೆಳತಿ ರಕ್ಷಿತಾ ಪ್ರೇಮ್​ ಕೂಡ ತಮ್ಮ ಇನ್​​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಫೋಟೋವೊಂದನ್ನು ಶೇರ್​ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ಫೋಟೋದಲ್ಲಿ ಹೂವಿನ ಜೊತೆಗೆ ಹ್ಯಾಪಿ ನ್ಯೂಸ್​, ಹ್ಯಾಪಿ ಡೇ ಅಂತ ಬರೆದುಕೊಂಡಿದ್ದಾರೆ.

Advertisment

publive-image

ನಟ ಧನ್ವೀರ್ ಗೌಡ ದರ್ಶನ್​ ಜೊತೆಗೆ ವೇದಿಕೆ ಮೇಲೆ ನಿಂತುಕೊಂಡಿರೋ ಫೋಟೋದಲ್ಲಿ ಉಸಿರು ಇರುವವರೆಗೂ ಇರುತ್ತೇವೆ ನಿಮ್ಮಿಂದೆ ಅಂತ ಬರೆದುಕೊಂಡಿದ್ದಾರೆ.

publive-image

ಮತ್ತೊಂದು ಕಡೆ ತರುಣ್​ ಸುಧೀರ್ ಹಾಗೂ ಸೋನಲ್ ದಂಪತಿ ಕೂಡ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ತರುಣ್​ ಸುಧೀರ್ ಅವರು ನಾಡಿನ ಸಮಸ್ತ ಜನತೆಗೆ ಶ್ರೀ ಹನುಮ ಜಯಂತಿಯ ಶುಭಾಶಯಗಳು ಅಂತ ದರ್ಶನ್ ಅವರ ಫೋಟೋವನ್ನು ಶೇರ್ ಮಾಡಿಕೊಂದ್ದಾರೆ, ಜೊತೆಗೆ ಸೋನಲ್ ಕಾಟೇರ ಸಿನಿಮಾದ ಸಾಂಗ್​ ಜೊತೆಗೆ ಇಮೋಜಿ ಹಾಕಿಕೊಂಡಿದ್ದಾರೆ.

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment