ಸಿ.ಟಿ ರವಿ ರಿಲೀಸ್​ಗೆ ಹೈಕೋರ್ಟ್​ ಸೂಚನೆ; ಕಾನೂನು ಪಾಲಿಸದ ಪೊಲೀಸರಿಗೆ ಛೀಮಾರಿ

author-image
Ganesh Nachikethu
Updated On
ಸಿ.ಟಿ.ರವಿ ಅಶ್ಲೀಲ ಪದ ಬಳಸಿದ್ದರೆ ನಾನು ಸಮರ್ಥಿಸುವುದಿಲ್ಲ; ಹೆಚ್​.ಡಿ.ಕುಮಾರಸ್ವಾಮಿ ಹೇಳಿದ್ದೇನು?
Advertisment
  • ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಆಕ್ಷೇಪಾರ್ಹ ಪದ ಬಳಕೆ ಆರೋಪ
  • ಬೆಳಗಾವಿ ಪೊಲೀಸರಿಂದ ಕೇಸ್ ಸಂಬಂಧ ಸಿ.ಟಿ ರವಿ ಅರೆಸ್ಟ್​!
  • ಸಿ.ಟಿ ರವಿ ರಿಲೀಸ್​ಗೆ ಆದೇಶ ಹೊರಡಿಸಿದ ಕರ್ನಾಟಕ ಹೈಕೋರ್ಟ್​

ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದ ಕೇಸ್​ನಲ್ಲಿ ಬಿಜೆಪಿ ಎಂಎಲ್‌ಸಿ ಸಿ.ಟಿ ರವಿ ಅವರಿಗೆ ಬಿಗ್​ ರಿಲೀಫ್​ ಸಿಕ್ಕಿದೆ. ಯಾವುದೇ ನೋಟಿಸ್​ ನೀಡದೆ ಬಂಧಿಸಿದ ಕಾರಣ ಸಿ.ಟಿ ರವಿ ಅವರನ್ನು ಕೂಡಲೇ ರಿಲೀಸ್​​ ಮಾಡಿ ಎಂದು ಹೈಕೋರ್ಟ್​​ ಆದೇಶಿಸಿದೆ.

ಷರತ್ತುಬದ್ಧ ರಿಲೀಸ್​​ ಮಾಡಲು ಪೊಲೀಸರಿಗೆ ಹೈಕೋರ್ಟ್​​ ಸೂಚನೆ ನೀಡಿದೆ. ಇದೇ ಸಂದರ್ಭದಲ್ಲಿ ಯಾರಿಗೆ ಆಗಲಿ ನೋಟಿಸ್​ ನೀಡಿ ಬಂಧಿಸಬೇಕು. ಅರೆಸ್ಟ್​ ಮಾಡೋ ಮುನ್ನ ನೋಟಿಸ್​ ನೀಡಬೇಕಿತ್ತು. ಬಂಧನ ಪ್ರಕ್ರಿಯೆಯಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಛೀಮಾರಿ ಹಾಕಲಾಗಿದೆ. ಹಾಗೆಯೇ ಕೂಡಲೇ ರಿಲೀಸ್​ ಮಾಡಿ ಹ್ಯಾಂಡ್​ ನೋಟಿಸ್​ ನೀಡಬೇಕು ಎಂದು ಹೈಕೋರ್ಟ್​​ ಸೂಚನೆ ಕೊಟ್ಟಿದೆ.

ಸದ್ಯ ಸಿ.ಟಿ ರವಿ ಅವರಿಗೆ ಮಧ್ಯಂತರ ರಿಲೀಫ್​ ಸಿಕ್ಕಿದೆ. ಎಫ್​ಐಆರ್​ ರದ್ದು ಕೋರಿ ಸಲ್ಲಿಸಿರೋ ಅರ್ಜಿ ವಿಚಾರಣೆ ಮುಂದೆ ನಡೆಯಲಿದೆ. ಸಿ.ಟಿ ರವಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್​ ನಡೆಗೆ ಹೈಕೋರ್ಟ್​ ಬೇಸರ ವ್ಯಕ್ತಪಡಿಸಿದೆ. ಹಾಗೆಯೇ ಪೊಲೀಸರ ವಿಚಾರಣೆಗೆ ಹಾಜರಾಗಬೇಕು ಎಂದು ಸಿ.ಟಿ ರವಿ ಅವರಿಗೆ ಸೂಚನೆ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment